AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆನೆ ಹೊಡೆಯಲು ಹುರುಪು ತುಂಬಿದ ಸುದೀಪ್: ಬದಲಾಗ್ತಾರಾ ಬಿಗ್​ಬಾಸ್ ಮನೆ ಮಂದಿ

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ವಿನಯ್​ ಇತರೆ ಕೆಲವು ಸ್ಪರ್ಧಿಗಳ ಮೇಲೆ ತಮ್ಮ ದಾರ್ಷ್ಟ್ಯ ಪ್ರದರ್ಶಿಸುತ್ತಿದ್ದಾರೆ. ಸುದೀಪ್ ವಾರಾಂತ್ಯದ ಪಂಚಾಯಿತಿಯಲ್ಲಿ ವಿನಯ್​ರನ್ನು ಹೊಗಳುತ್ತಲೇ ಅವರನ್ನು ಎದುರಿಸುವ ಧೈರ್ಯವನ್ನು ಮನೆ ಮಂದಿಯಲ್ಲಿ ತುಂಬುವ ಕಾರ್ಯ ಮಾಡಿದರು.

ಆನೆ ಹೊಡೆಯಲು ಹುರುಪು ತುಂಬಿದ ಸುದೀಪ್: ಬದಲಾಗ್ತಾರಾ ಬಿಗ್​ಬಾಸ್ ಮನೆ ಮಂದಿ
ಬಿಗ್​ಬಾಸ್ ಸುದೀಪ್
ಮಂಜುನಾಥ ಸಿ.
|

Updated on: Oct 28, 2023 | 11:42 PM

Share

ಬಿಗ್​ಬಾಸ್ (Bigg Boss Kannada) ಮನೆಯಲ್ಲಿ ಈ ವಾರ ಹೆಚ್ಚು ಅಬ್ಬರ ಕೇಳಿದ್ದೆಂದರೆ ಅದು ವಿನಯ್​ ಅವರದ್ದು. ಬಂದ ಮೊದಲ ವಾರ ಜಂಟಲ್​ಮ್ಯಾನ್ ರೀತಿ ವರ್ತಿಸಿದ್ದ, ಬಿಗ್​ಬಾಸ್ ನಿಯಮಗಳ ಬಗ್ಗೆ, ಮೌಲ್ಯಗಳ ಬಗ್ಗೆ ಮಾತನಾಡುತ್ತಾ ಎಲ್ಲರ ಗಮನ ಸೆಳೆದಿದ್ದ ವಿನಯ್ ಬರ ಬರುತ್ತಾ ತಮ್ಮ ದಾರ್ಷ್ಟ್ಯ ಗುಣ ಪ್ರದರ್ಶಿಸುತ್ತಿದ್ದಾರೆ. ತಮ್ಮ ತಪ್ಪು ತೋರಿಸಿದವರ ಬಾಯನ್ನು ರೌಡಿತನ ಬಳಸಿ ಮುಚ್ಚಿಸುತ್ತಿದ್ದಾರೆ. ಗೆದ್ದಾಗ ಎದುರಾಳಿಗಳನ್ನು ಹೀಗಳೆಯುವುದು. ಡ್ರೋನ್ ಪ್ರತಾಪ್, ತನಿಷಾ ಇನ್ನಿತರರ ಮೇಲೆ ದರ್ಪ್ ಪ್ರದರ್ಶನಗಳೆಲ್ಲವನ್ನೂ ಮಾಡಿದ್ದಾರೆ.

ಇಂದು ವಾರಾಂತ್ಯದ ಪಂಚಾಯಿತಿಯಲ್ಲಿ ಸುದೀಪ್, ವಿನಯ್​ರನ್ನು ಹೊಗಳುತ್ತಲೇ, ಮನೆಯ ಇತರೆ ಸದಸ್ಯರಿಗೆ ಅವರ ವಿರುದ್ಧ ನಿಲ್ಲುವ ಧೈರ್ಯ ತುಂಬುವ ಪ್ರಯತ್ನ ಮಾಡಿದರು. ವಿನಯ್​ರನ್ನು ಆನೆಗೆ ಹೋಲಿಸಿದ ಸುದೀಪ್, ಮನೆಯಲ್ಲಿ ಸಿಂಹ, ಹುಲಿಗಳು ಸಹ ಇದ್ದಾರೆ ಎಂದರು. ಆದರೆ ಆ ಹುಲಿ, ಸಿಂಹಗಳು ತಮ್ಮ ತನ ಮರೆತಿವೆ ಎಂದರು.

ಇದನ್ನೂ ಓದಿ:ಬಿಗ್​ಬಾಸ್ ಮನೆ ಸದಸ್ಯರಿಗೆ ಉಡುಗೊರೆ ಕೊಟ್ಟು ಉಪದೇಶ ಮಾಡಿದ ಸುದೀಪ್

ಕಾರ್ತಿಕ್, ತನಿಷಾ, ಸಂಗೀತಾ ಅವರುಗಳು ಹೇಗೆ ವಿನಯ್ ಎದುರು ಮಂಕಾಗಿದ್ದಾರೆ ಎಂದು ಸನ್ನಿವೇಶಗಳನ್ನು ಉದಾಹರಣೆಗಳನ್ನಾಗಿ ನೀಡಿ ಹೇಳಿದ ಸುದೀಪ್, ಬಿಗ್​ಬಾಸ್ ಮನೆಯ ಸದಸ್ಯರೇ ಒಬ್ಬ ಫೈನಲಿಸ್ಟ್​ ಅನ್ನು ನೀವೇ ಆಯ್ದು ಕೊಡುತ್ತಿದ್ದೀರಾ ಇದು ಸರಿಯಾದ ಕ್ರಮವಲ್ಲ ಎಂದರು. ವಿನಯ್​ರದ್ದು ತಪ್ಪಿದ್ದಾಗಲೂ ಅದನ್ನು ಗಟ್ಟಿಯಾಗಿ ಹೇಳುವ ಧೈರ್ಯ ನೀವು ತೋರುತ್ತಿಲ್ಲ. ಬಾಯಿ ಬಿಟ್ಟು ಹೇಳಲು ನೀವೆಲ್ಲ ಹಿಂಜರಿಯುತ್ತಿದ್ದೀರಿ ಆದರೆ ನಿಮಗೆಲ್ಲರಿಗೂ ವಿನಯ್ ಎಂದರೆ ಭಯ ಎಂದರು ಸುದೀಪ್. ಅದಕ್ಕೆ ತಕ್ಕಂತೆ ವಿನಯ್​ ಸಹ ನನಗೆ ಈ ಮನೆಯಲ್ಲಿ ಯಾರೂ ಸಹ ಸ್ಪರ್ಧಿಗಳೇ ಅಲ್ಲ ಎಂದು ಸಹ ಹೇಳಿದರು. ಇದು ಸ್ಪರ್ಧಿಗಳಿಗೆ ಇನ್ನಷ್ಟು ಅವಮಾನ ಉಂಟು ಮಾಡಿತು.

ಸುದೀಪ್​ರ ಮಾತುಗಳು ಹಲವರಿಗೆ ನಾಟಿದಂತಿದೆ. ಮುಂದಿನ ವಾರದಿಂದ ಆದರೂ ತನಿಷಾ, ಡ್ರೋನ್ ಪ್ರತಾಪ್, ಕಾರ್ತಿಕ್, ಸಂಗೀತಾ ಇನ್ನಿತರರು ವಿನಯ್​ ಮಾತುಗಳಿಗೆ ಹೆದರದೆ ಅವರನ್ನು ಧೈರ್ಯವಾಗಿ ಎದುರಿಸುತ್ತಾರಾ ಕಾದು ನೋಡಬೇಕಿದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿ ದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು