AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ದೋಣಿ ಮೇಲೆ ಕಾಲಿಟ್ಟ ಕಾರ್ತಿಕ್; ನಮ್ರತಾ, ಸಂಗೀತಾ ಜೊತೆ ಫ್ಲರ್ಟ್

ನಮ್ರತಾ ಬಳಿ ಹೋಗಿ ಡೇಟ್​ಗೆ ಹೋಗೋಣ ಎಂದು ಕರೆದಿದ್ದಾರೆ ಕಾರ್ತಿಕ್. ಇದಕ್ಕೆ ನಮ್ರತಾ ಕೂಡ ಒಪ್ಪಿದ್ದಾರೆ. ಇದನ್ನು ನೋಡಿ ಸ್ನೇಹಿತ್ ಬೇಸರ ಮಾಡಿಕೊಂಡಿದ್ದಾರೆ! ಸ್ನೇಹಿತ್ ಕೂಡ ನಮ್ರತಾಗೆ ಹತ್ತಿರ ಆಗಬೇಕು ಎಂದು ಪ್ರಯತ್ನಿಸಿದ್ದರು.

ಎರಡು ದೋಣಿ ಮೇಲೆ ಕಾಲಿಟ್ಟ ಕಾರ್ತಿಕ್; ನಮ್ರತಾ, ಸಂಗೀತಾ ಜೊತೆ ಫ್ಲರ್ಟ್
ಕಾರ್ತಿಕ್-ಸಂಗೀತಾ-ನಮ್ರತಾ
ರಾಜೇಶ್ ದುಗ್ಗುಮನೆ
|

Updated on: Oct 28, 2023 | 12:06 PM

Share

ಬಿಗ್ ಬಾಸ್ (Bigg Boss) ಮನೆಯ ಒಳಗೆ ಹೋಗುವುದಕ್ಕೂ ಮೊದಲು ಕಾರ್ತಿಕ್ ಮಹೇಶ್ (Kartik Mahesh) ಅವರು ಲವ್ ವಿಚಾರದ ಬಗ್ಗೆ ಮಾತನಾಡಿದ್ದರು. ಅಮ್ಮನಿಗೆ ಒಂದು ಸೊಸೆಯ ತರುವ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ. ಮೊದಲ ದಿನದಿಂದಲೇ ಈ ವಿಚಾರದಲ್ಲಿ ಅವರು ಕಾರ್ಯಪ್ರವೃತ್ತರಾದಂತಿದೆ. ಅಚ್ಚರಿಯ ವಿಚಾರ ಎಂದರೆ ಅವರು ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ. ಸಂಗೀತಾ ಜೊತೆ ಕ್ಲೋಸ್ ಆಗಿರೋ ಅವರು ನಮ್ರತಾ ಜೊತೆಯೂ ಫ್ಲರ್ಟ್ ಶುರುಹಚ್ಚಿಕೊಂಡಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಕ್ಲೋಸ್ ಆದರು. ಇಬ್ಬರೂ ಅಸಮರ್ಥರ ಗುಂಪಿನಲ್ಲಿ ಇರುವುದರಿಂದ ಆಪ್ತತೆ ಹೆಚ್ಚಿತು. ಆದರೆ, ಈ ವಾರ ತಂಡದ ಕ್ಯಾಪ್ಟನ್ ಆಯ್ಕೆಗೆ ಕಾರ್ತಿಕ್ ತಮ್ಮ ಹೆಸರು ತೆಗೆದುಕೊಂಡಿಲ್ಲ ಎಂದು ಸಂಗೀತಾ ಸಿಟ್ಟಾದರು. ಇಬ್ಬರ ಮಧ್ಯೆ ವೈಮನಸ್ಸು ಮೂಡಿತು. ಈ ವಿಚಾರದಲ್ಲಿ ಕಾರ್ತಿಕ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರು ನಮ್ರತಾ ಜೊತೆ ಕ್ಲೋಸ್ ಆಗೋಕೆ ಪ್ರಯತ್ನಿಸುತ್ತಿದ್ದಾರೆ. ಸಂಗೀತಾಗೆ ಜಲಸ್ ಮಾಡಿಸಬೇಕು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ.

ನಮ್ರತಾ ಬಳಿ ಹೋಗಿ ಡೇಟ್​ಗೆ ಹೋಗೋಣ ಎಂದು ಕರೆದಿದ್ದಾರೆ ಕಾರ್ತಿಕ್. ಇದಕ್ಕೆ ನಮ್ರತಾ ಕೂಡ ಒಪ್ಪಿದ್ದಾರೆ. ಇದನ್ನು ನೋಡಿ ಸ್ನೇಹಿತ್ ಬೇಸರ ಮಾಡಿಕೊಂಡಿದ್ದಾರೆ! ಸ್ನೇಹಿತ್ ಕೂಡ ನಮ್ರತಾಗೆ ಹತ್ತಿರ ಆಗಬೇಕು ಎಂದು ಪ್ರಯತ್ನಿಸಿದ್ದರು. ಹೀಗಿರುವಾಗಲೇ ನಮ್ರತಾ ಜೊತೆ ಕಾರ್ತಿಕ್ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದಾರೆ.

ಕಾರ್ತಿಕ್ ಅವರು ಆಟದಲ್ಲಿ ನೂರಕ್ಕೆ ನೂರು ಪರ್ಸಂಟ್ ನೀಡುತ್ತಾರೆ. ಇದರ ಜೊತೆಗೆ ಎಂಟರ್​ಟೇನ್​ಮೆಂಟ್ ಕೂಡ ನೀಡುತ್ತಿದ್ದಾರೆ. ಇವುಗಳ ಮಧ್ಯೆ ಅವರು ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ; ಬದಲಾಗಲಿದೆ ಲೆಕ್ಕಾಚಾರ?

ಇನ್ನು, ಮೈಕೆಲ್ ಅಜಯ್ ಹಾಗೂ ಈಶಾನಿ ಅವರು ಕ್ಲೋಸ್ ಆಗುತ್ತಿದ್ದಾರೆ. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ‘ಈಶಾನಿ ನನ್ನ ಗರ್ಲ್​ಫ್ರೆಂಡ್​’ ಎಂದು ಅವರು ಇತ್ತೀಚೆಗೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಸದ್ಯ ‘ಬಿಗ್ ಬಾಸ್’ ಮನೆಗೆ ವರ್ತೂರು ಸಂತೋಷ್ ಅವರು ಕಂಬ್ಯಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಎಪಿಸೋಡ್​ನಲ್ಲಿ ಈ ವಿಚಾರ ಗೊತ್ತಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!