AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎರಡು ದೋಣಿ ಮೇಲೆ ಕಾಲಿಟ್ಟ ಕಾರ್ತಿಕ್; ನಮ್ರತಾ, ಸಂಗೀತಾ ಜೊತೆ ಫ್ಲರ್ಟ್

ನಮ್ರತಾ ಬಳಿ ಹೋಗಿ ಡೇಟ್​ಗೆ ಹೋಗೋಣ ಎಂದು ಕರೆದಿದ್ದಾರೆ ಕಾರ್ತಿಕ್. ಇದಕ್ಕೆ ನಮ್ರತಾ ಕೂಡ ಒಪ್ಪಿದ್ದಾರೆ. ಇದನ್ನು ನೋಡಿ ಸ್ನೇಹಿತ್ ಬೇಸರ ಮಾಡಿಕೊಂಡಿದ್ದಾರೆ! ಸ್ನೇಹಿತ್ ಕೂಡ ನಮ್ರತಾಗೆ ಹತ್ತಿರ ಆಗಬೇಕು ಎಂದು ಪ್ರಯತ್ನಿಸಿದ್ದರು.

ಎರಡು ದೋಣಿ ಮೇಲೆ ಕಾಲಿಟ್ಟ ಕಾರ್ತಿಕ್; ನಮ್ರತಾ, ಸಂಗೀತಾ ಜೊತೆ ಫ್ಲರ್ಟ್
ಕಾರ್ತಿಕ್-ಸಂಗೀತಾ-ನಮ್ರತಾ
ರಾಜೇಶ್ ದುಗ್ಗುಮನೆ
|

Updated on: Oct 28, 2023 | 12:06 PM

Share

ಬಿಗ್ ಬಾಸ್ (Bigg Boss) ಮನೆಯ ಒಳಗೆ ಹೋಗುವುದಕ್ಕೂ ಮೊದಲು ಕಾರ್ತಿಕ್ ಮಹೇಶ್ (Kartik Mahesh) ಅವರು ಲವ್ ವಿಚಾರದ ಬಗ್ಗೆ ಮಾತನಾಡಿದ್ದರು. ಅಮ್ಮನಿಗೆ ಒಂದು ಸೊಸೆಯ ತರುವ ಉದ್ದೇಶ ಇದೆ ಎಂದು ಅವರು ಹೇಳಿದ್ದಾರೆ. ಮೊದಲ ದಿನದಿಂದಲೇ ಈ ವಿಚಾರದಲ್ಲಿ ಅವರು ಕಾರ್ಯಪ್ರವೃತ್ತರಾದಂತಿದೆ. ಅಚ್ಚರಿಯ ವಿಚಾರ ಎಂದರೆ ಅವರು ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ. ಸಂಗೀತಾ ಜೊತೆ ಕ್ಲೋಸ್ ಆಗಿರೋ ಅವರು ನಮ್ರತಾ ಜೊತೆಯೂ ಫ್ಲರ್ಟ್ ಶುರುಹಚ್ಚಿಕೊಂಡಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಕ್ಲೋಸ್ ಆದರು. ಇಬ್ಬರೂ ಅಸಮರ್ಥರ ಗುಂಪಿನಲ್ಲಿ ಇರುವುದರಿಂದ ಆಪ್ತತೆ ಹೆಚ್ಚಿತು. ಆದರೆ, ಈ ವಾರ ತಂಡದ ಕ್ಯಾಪ್ಟನ್ ಆಯ್ಕೆಗೆ ಕಾರ್ತಿಕ್ ತಮ್ಮ ಹೆಸರು ತೆಗೆದುಕೊಂಡಿಲ್ಲ ಎಂದು ಸಂಗೀತಾ ಸಿಟ್ಟಾದರು. ಇಬ್ಬರ ಮಧ್ಯೆ ವೈಮನಸ್ಸು ಮೂಡಿತು. ಈ ವಿಚಾರದಲ್ಲಿ ಕಾರ್ತಿಕ್ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರು ನಮ್ರತಾ ಜೊತೆ ಕ್ಲೋಸ್ ಆಗೋಕೆ ಪ್ರಯತ್ನಿಸುತ್ತಿದ್ದಾರೆ. ಸಂಗೀತಾಗೆ ಜಲಸ್ ಮಾಡಿಸಬೇಕು ಎನ್ನುವ ಕಾರಣಕ್ಕೆ ಅವರು ಈ ರೀತಿ ಮಾಡುತ್ತಿದ್ದಾರೆ.

ನಮ್ರತಾ ಬಳಿ ಹೋಗಿ ಡೇಟ್​ಗೆ ಹೋಗೋಣ ಎಂದು ಕರೆದಿದ್ದಾರೆ ಕಾರ್ತಿಕ್. ಇದಕ್ಕೆ ನಮ್ರತಾ ಕೂಡ ಒಪ್ಪಿದ್ದಾರೆ. ಇದನ್ನು ನೋಡಿ ಸ್ನೇಹಿತ್ ಬೇಸರ ಮಾಡಿಕೊಂಡಿದ್ದಾರೆ! ಸ್ನೇಹಿತ್ ಕೂಡ ನಮ್ರತಾಗೆ ಹತ್ತಿರ ಆಗಬೇಕು ಎಂದು ಪ್ರಯತ್ನಿಸಿದ್ದರು. ಹೀಗಿರುವಾಗಲೇ ನಮ್ರತಾ ಜೊತೆ ಕಾರ್ತಿಕ್ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದಾರೆ.

ಕಾರ್ತಿಕ್ ಅವರು ಆಟದಲ್ಲಿ ನೂರಕ್ಕೆ ನೂರು ಪರ್ಸಂಟ್ ನೀಡುತ್ತಾರೆ. ಇದರ ಜೊತೆಗೆ ಎಂಟರ್​ಟೇನ್​ಮೆಂಟ್ ಕೂಡ ನೀಡುತ್ತಿದ್ದಾರೆ. ಇವುಗಳ ಮಧ್ಯೆ ಅವರು ಎರಡು ದೋಣಿ ಮೇಲೆ ಕಾಲಿಟ್ಟಿದ್ದಾರೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ವರ್ತೂರು ಸಂತೋಷ್ ರೀ-ಎಂಟ್ರಿ; ಬದಲಾಗಲಿದೆ ಲೆಕ್ಕಾಚಾರ?

ಇನ್ನು, ಮೈಕೆಲ್ ಅಜಯ್ ಹಾಗೂ ಈಶಾನಿ ಅವರು ಕ್ಲೋಸ್ ಆಗುತ್ತಿದ್ದಾರೆ. ಇವರ ಮಧ್ಯೆ ಒಳ್ಳೆಯ ಫ್ರೆಂಡ್​ಶಿಪ್ ಬೆಳೆದಿದೆ. ‘ಈಶಾನಿ ನನ್ನ ಗರ್ಲ್​ಫ್ರೆಂಡ್​’ ಎಂದು ಅವರು ಇತ್ತೀಚೆಗೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು. ಸದ್ಯ ‘ಬಿಗ್ ಬಾಸ್’ ಮನೆಗೆ ವರ್ತೂರು ಸಂತೋಷ್ ಅವರು ಕಂಬ್ಯಾಕ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇಂದಿನ ಎಪಿಸೋಡ್​ನಲ್ಲಿ ಈ ವಿಚಾರ ಗೊತ್ತಾಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ