AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಠಾತ್ತನೆ ಬಿಗ್​ಬಾಸ್ ಬಳಿ ಗಂಭೀರ ಮನವಿ ಮಾಡಿದ ಸಂಗೀತಾ

Bigg Boss: ಬಿಗ್​ಬಾಸ್ ಮನೆಯ ಗಟ್ಟಿ ಸ್ಪರ್ಧಿಗಳಲ್ಲಿ ಒಬ್ಬರು ಎಂದು ತಮ್ಮನ್ನು ತಾವು ಬಿಂಬಿಸಿಕೊಂಡಿರುವ ಸಂಗೀತಾ ಹಠಾತ್ತಾಗಿ ಮನೆಗೆ ಕಳಿಸಿಬಿಡುವಂತೆ ಮನವಿ ಮಾಡಿದ್ದಾರೆ. ಬಿಗ್​ಬಾಸ್ ನಿರ್ಣಯ ಏನಾಗಿರುತ್ತದೆ?

ಹಠಾತ್ತನೆ ಬಿಗ್​ಬಾಸ್ ಬಳಿ ಗಂಭೀರ ಮನವಿ ಮಾಡಿದ ಸಂಗೀತಾ
ಸಂಗೀತಾ ಶೃಂಗೇರಿ
Follow us
ಮಂಜುನಾಥ ಸಿ.
|

Updated on: Oct 27, 2023 | 4:10 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಹಲವು ಸ್ಪರ್ಧಿಗಳು ಉತ್ತಮವಾಗಿ ಆಡುತ್ತಿದ್ದಾರೆ. ಕೆಲವರು ಟಾಸ್ಕ್​ನಿಂದ, ಕೆಲವರು ತಮ್ಮ ಮಾತಿನ ಚಾತುರ್ಯರಿಂದ, ಕೆಲವರು ತಮ್ಮ ವ್ಯಕ್ತಿತ್ವದಿಂದ ಹೀಗೆ ಹಲವು ವಿಧಗಳಲ್ಲಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅದರಲ್ಲಿ ಸಂಗೀತಾ ಶೃಂಗೇರಿ ಸಹ ಒಬ್ಬರು. ಸಂಗೀತಾ (Sangeetha Sringeri) ತಮ್ಮ ನೇರ-ನಿಷ್ಠುರ ಮಾತಿನಿಂದ ಬಿಗ್​ಬಾಸ್ ಮನೆಯಲ್ಲಿ ಚರ್ಚೆಯಲ್ಲಿರುವ ಸ್ಪರ್ಧಿಯಾಗಿದ್ದಾರೆ. ಗಟ್ಟಿ ವ್ಯಕ್ತಿತ್ವದ ಹೆಣ್ಣಾಗಿ ಅವರು ಮನೆಯಲ್ಲಿ ತಮ್ಮನ್ನು ತಾವು ಬಿಂಬಿಸಿಕೊಂಡಿದ್ದರು. ಆದರೆ ಈಗ ಯಾಕೋ ವಾಪಸ್ ಹೋಗುವ ಮಾತನಾಡಿದ್ದಾರೆ.

ಕಾರ್ತಿಕ್ ಜೊತೆ ಜಗಳ, ವಿನಯ್ ಜೊತೆ ಜಗಳ ಮಾಡಿಕೊಂಡು ಇದ್ದ ಸಂಗೀತಾ ಆರಾಮವಾಗಿಯೇ ಇದ್ದಂತಿದ್ದರು, ಆದರೆ ಗುರುವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಇದ್ದಕ್ಕಿದ್ದಂತೆ ಬಿಗ್​ಬಾಸ್ ಸೀಕ್ರೆಟ್ ರೂಂಗೆ ಹೋದ ಸಂಗೀತಾ, ತಮ್ಮನ್ನು ಮನೆಗೆ ಕಳಿಸಿಬಿಡುವಂತೆ ಬಿಗ್​ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ. ”ನಾನು ಬಹಳ ಬೋರಿಂಗ್ ವ್ಯಕ್ತಿ, ನನ್ನಿಂದ ಯಾವುದೇ ಮನೊರಂಜನೆ ಸಿಗುವುದಿಲ್ಲ, ನನ್ನನ್ನು ಕಳಿಸಿಬಿಡಿ ಬಿಗ್​ಬಾಸ್” ಎಂದು ಸಂಗೀತಾ ಮನವಿ ಮಾಡಿದ್ದಾರೆ.

ಬಿಗ್​ಬಾಸ್ ಕಡೆಯಿಂದ ಉತ್ತರವನ್ನು ನಿರೀಕ್ಷಿಸಿ ಸಾಕಷ್ಟು ಸಮಯ ಸೀಕ್ರೇಟ್ ರೂಂನಲ್ಲಿಯೇ ಸಂಗೀತಾ ಕೂತಿದ್ದರಾದರೂ ಬಿಗ್​ಬಾಸ್ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ಸಂಗೀತಾಗೆ ನೀಡಲಿಲ್ಲ. ಕೊನೆಗೆ ತಾವಾಗಿಯೇ ಸೀಕ್ರೆಟ್ ರೂಂನಿಂದ ಹೊರಬಂದರು. ಬಳಿಕ ಎಲ್ಲರೊಡನೆ ಮಾಮೂಲಿನಂತೆ ಬೆರೆತರು. ಕಾರ್ತಿಕ್, ವಿನಯ್, ನಮ್ರತಾ ಜೊತೆ ಸೇರಿ ತಮಾಷೆ ಮಾಡುತ್ತಾ ಆರಾಮವಾಗಿಯೇ ಇದ್ದರು.

ಇದನ್ನೂ ಓದಿ:ಬಿಗ್​ಬಾಸ್ 10ರ ಹೀರೋ ಸಂಗೀತಾ ಶೃಂಗೇರಿ ಯಾರು? ಅವರ ಹಿನ್ನೆಲೆ ಏನು?

ಸಂಗೀತಾ, ಕಾರ್ತಿಕ್ ಹಾಗೂ ವಿನಯ್ ನಡುವೆ ನಡೆಯುತ್ತಿರುವ ಸ್ನೇಹ, ಪ್ರೀತಿ, ಜಗಳಗಳು ಆಸಕ್ತಿಕರವಾಗಿವೆ. ಸಂಗೀತಾ ವೈಯಕ್ತಿಕವಾಗಿ ಗೆಲ್ಲುವ ಛಲವುಳ್ಳ ಆಟಗಾರ್ತಿಯೆಂದೇ ಮನೆಯಲ್ಲಿ ಬಿಂಬಿಸಿಕೊಂಡಿದ್ದಾರೆ. ಟಾಸ್ಕ್​ಗಳ ವಿಷಯ ಬಂದಾಗ, ಮನೆಯಲ್ಲಿ ಯಾವುದಾದರೂ ನಿರ್ಣಯಗಳನ್ನು ತೆಗೆದುಕೊಳ್ಳುವ ವಿಷಯ ಬಂದಾಗ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಆದರೆ ಅವರ ಚಂಚಲ ಸ್ವಭಾವದಿಂದಾಗಿ ಈಗ ಬಿಗ್​ಬಾಸ್ ಮನೆಯಿಂದ ಹೊರ ಹೋಗುವ ಮಾತನ್ನಾಡಿದ್ದಾರೆ ಅನ್ನಿಸುತ್ತದೆ.

ಕನ್ನಡ ಬಿಗ್​ಬಾಸ್ ಇತಿಹಾಸದಲ್ಲಿ ಹೀಗೆ, ಮನೆಗೆ ಹೋಗಲು ಬಿಡಿ ಎಂದ ಯಾರನ್ನು ಸುಮ್ಮನೆ ಮನೆಗೆ ಕಳಿಸಿದ್ದಲ್ಲ. ನಿಯಮ ಉಲ್ಲಂಘಿಸಿ ಮನೆಗೆ ಹೋದವರಿದ್ದಾರೆ, ಆರೋಗ್ಯ ಸಮಸ್ಯೆ ಇನ್ನಿತರೆ ಗಂಭೀರ ಸಮಸ್ಯೆಗಳಾದಾಗ ಬಿಗ್​ಬಾಸ್​ ಸ್ಪರ್ಧಿಗಳನ್ನು ಮನೆಗೆ ಕಳಿಸಿದ್ದಿದೆ. ಆದರೆ ಮಾಡಿದ ಮನವಿಗೆ ಓಗೊಟ್ಟು ಮನೆಗೆ ಕಳಿಸಿದ ಉದಾಹರಣೆ ಇಲ್ಲ. ಈ ವಾರಾಂತ್ಯದ ಎಪಿಸೋಡ್​ನಲ್ಲಿ ಸುದೀಪ್ ಬರಲಿದ್ದಾರೆ. ಅವರು ಸಂಗೀತಾಗೆ ಸ್ಪೂರ್ತಿ ತುಂಬುವ ಅಥವಾ ಬುದ್ಧಿ ಹೇಳುವ ಸಾಧ್ಯತೆ ಇದೆ. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್ ವಾಹಿನಿಯಲ್ಲಿ ಪ್ರತಿ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಅಸಹನೆಯಿಂದ ಬಿಸಿನೀರು ಕೊಡುವಂತೆ ಅಂಗರಕ್ಷನಿಗೆ ಹೇಳಿದ ಮಲ್ಲಿಕಾರ್ಜುನ ಖರ್ಗೆ
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಸಿದ್ದರಾಮಯ್ಯ ಅಪ್ರಮಾಣಿಕ ಮುಖ್ಯಮಂತ್ರಿಯಾಗಿ ಉಳಿದುಬಿಡುತ್ತಾರೆ: ವಿಶ್ವನಾಥ್
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು
ಮೂರು-ಪರೀಕ್ಷೆ ನೀತಿಯಿಂದ ಸಹಸ್ರಾರು ವಿದ್ಯಾರ್ಥಿಗಳಿಗೆ ಪ್ರಯೋಜನ: ಮಧು