AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಳಿದ ನಾಲ್ವರಲ್ಲಿ ಯಾರಾಗಲಿದ್ದಾರೆ ಬಿಗ್​ಬಾಸ್ ಮನೆಯ ಮುಂದಿನ ನಾಯಕ?

Bigg Boss 10: ಬಿಗ್​​ಬಾಸ್ ಮನೆಯಲ್ಲಿ ಈ ವಾರ ಟಾಸ್ಕ್​ಗಳು ಜೋರಾಗಿ ನಡೆದಿವೆ. ಹೆಚ್ಚು ಟಾಸ್ಕ್​ಗಳನ್ನು ಗೆದ್ದ ತನಿಷಾರ ತಂಡ ನಾಯಕತ್ವದ ಟಾಸ್ಕ್ ಆಡಲು ಅರ್ಹತೆ ಗಿಟ್ಟಿಸಿಕೊಂಡಿದ್ದು, ಮನೆಯ ಕ್ಯಾಪ್ಟನ್ ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.

ಉಳಿದ ನಾಲ್ವರಲ್ಲಿ ಯಾರಾಗಲಿದ್ದಾರೆ ಬಿಗ್​ಬಾಸ್ ಮನೆಯ ಮುಂದಿನ ನಾಯಕ?
Follow us
ಮಂಜುನಾಥ ಸಿ.
|

Updated on: Oct 26, 2023 | 11:50 PM

ಬಿಗ್​ಬಾಸ್ (Bigg Boss) ಮನೆಯಲ್ಲಿ ಈ ವಾರ ಟಾಸ್ಕ್​ಗಳ ಅಬ್ಬರ ಜೋರಾಗಿತ್ತು. ಹಲವು ಭಿನ್ನ-ಭಿನ್ನ ಟಾಸ್ಕ್​ಗಳನ್ನು ಸ್ಪರ್ಧಿಗಳಿಗೆ ಬಿಗ್​ಬಾಸ್ ನೀಡಿದ್ದರು. ಶಕ್ತಿ, ಯುಕ್ತಿ, ಒಗ್ಗಟ್ಟು, ಚತುರತೆ ಬೇಡುವ ಹಲವು ಟಾಸ್ಕ್​ಗಳಲ್ಲಿ ಎರಡು ಗುಂಪುಗಳಾಗಿ ಮನೆಯ ಸದಸ್ಯರು ಆಡಿದರು. ಯಾರ ತಂಡ ಹೆಚ್ಚು ಟಾಸ್ಕ್​ಗಳಲ್ಲಿ ಗೆದ್ದು ವಿಜಯಿಯಾಗುತ್ತದೆಯೋ ಆ ತಂಡದ ಸದಸ್ಯರು ನಾಯಕತ್ವದ ಟಾಸ್ಕ್​ಗೆ ಆಯ್ಕೆ ಆಗುತ್ತಾರೆ ಹಾಗೂ ಲಕ್ಷುರಿ ಟಾಸ್ಕ್​ಗೂ ಅರ್ಹತೆ ಪಡೆಯುತ್ತಾರೆ ಎಂದಿತ್ತು. ಹಾಗಾಗಿ ಎರಡೂ ತಂಡದ ಸದಸ್ಯರು ಶಕ್ತಿಮೀರಿ ಆಟಗಳನ್ನು ಆಡಿದರು.

ಭಜರಂಗಿ ಹಾಗೂ ಉಗ್ರಂ ಎಂಬ ಎರಡು ತಂಡಗಳನ್ನಾಗಿ ಮಾಡಿ ಅದಕ್ಕೆ ಮಹಿಳೆಯರ ನಾಯಕತ್ವವನ್ನು ವಹಿಸಲಾಗಿತ್ತು. ಎರಡೂ ತಂಡಗಳು ಪ್ರತಿಯೊಂದು ಟಾಸ್ಕ್​ನಲ್ಲಿಯೂ ಜಿದ್ದಾಜಿದ್ದಿನ ಸ್ಪರ್ಧೆಯನ್ನು ನೀಡಿದವು. ಕೆಲವನ್ನು ತನಿಷಾ ತಂಡ ಗೆದ್ದರೆ ಇನ್ನು ಕೆಲವನ್ನು ನಮ್ರತಾ ಗೌಡರ ತಂಡ ಗೆದ್ದು ಕೊಂಡಿತು. ಆದರೆ ಗುರುವಾರ ನಡೆದ ವಾರದ ಕೊನೆಯ ಟಾಸ್ಕ್​ಗಳಲ್ಲಿ ಹೆಚ್ಚಿನ ಪಾಲನ್ನು ಗೆದ್ದಿದ್ದು ತನಿಷಾರ ತಂಡ.

ಮೊದಲಿಗೆ ನಡೆದ ಡ್ರಮ್ ಮೇಲೆ ನಿಂತು ಆಡುವ ಜೂಟಾಟದಲ್ಲಿ ತನಿಷಾ ಹಾಗೂ ನಮ್ರತಾ ಪರಸ್ಪರ ಸ್ಪರ್ಧಿಸಿದರು. ಆ ಆಟದಲ್ಲಿ ತನಿಷಾ ವಿಜಯಿಯಾದರು. ಆ ಬಳಿಕ ನಡೆದ ಬಕೆಟ್​ ನಲ್ಲಿ ಒದ್ದೆ ಚೆಂಡು ಎಸೆಯುವ ಟಾಸ್ಕ್​ನಲ್ಲಿಯೂ ತನಿಷಾ ತಂಡವೇ ಗೆದ್ದಿತು. ಆ ಟಾಸ್ಕ್​ ಬಳಿಕ ತನಿಷಾರ ತಂಡವು ತಮ್ಮ ಅಧಿಕಾರ ಬಳಸಿ ವಿನಯ್ ಅವರನ್ನು ಮುಂದಿನ ವಾರ ಎಲ್ಲ ಟಾಸ್ಕ್​ನಿಂದ ಹೊರಗಿಟ್ಟರು. ಅದರ ಬಳಿಕ ಆಡಲಾದ ಕಾಲಿನಿಂದ ಮರದ ಸಣ್ಣ ಆಕೃತಿಗಳನ್ನು ಜೋಡಿಸುವ ಟಾಸ್ಕ್​ನಲ್ಲಿಯೂ ತನಿಷಾರ ತಂಡವೇ ಗೆದ್ದಿತು. ಮೈಖಲ್ ಅದ್ಭುತವಾಗಿ ಆಡಿ ಕಾರ್ತಿಕ್​ರನ್ನು ಸೋಲಿಸಿದರು.

ಇದನ್ನೂ ಓದಿ:ಬಿಗ್​ಬಾಸ್ ಮನೆಗೆ ಹಬ್ಬ ತಂದ ತಾರಾ, ಅಂತರಂಗ ತೆರೆದಿಟ್ಟ ಡ್ರೋನ್ ಪ್ರತಾಪ್

ಎಲ್ಲ ಟಾಸ್ಕ್ ಗೆದ್ದ ತನಿಷಾರ ತಂಡದ ಸದಸ್ಯರಿಗೆ ನಾಯಕತ್ವದಲ್ಲಿ ಭಾಗಿಯಾಗುವ ಅವಕಾಶ ದೊರೆಯಿತು. ಜೊತೆಗೆ ಲಕ್ಷುರಿ ಟಾಸ್ಕ್​ನಲ್ಲಿ ಭಾಗಿಯಾಗುವ ಅವಕಾಶವೂ ಸಹ ಲಭಿಸಿತು. ಆದರೆ ಇದರಲ್ಲಿ ಸಣ್ಣ ಟ್ವಿಸ್ಟ್ ಕೊಟ್ಟ ಬಿಗ್​ಬಾಸ್, ನಾಯಕನ ಆಯ್ಕೆಯ ಟಾಸ್ಕ್​ಗೆ ನಾಲ್ಕು ಮಂದಿ ಮಾತ್ರವೇ ಬೇಕಿದ್ದು, ನಿಮ್ಮ ತಂಡದಿಂದ ಮೂವರನ್ನು ಟಾಸ್ಕ್​ ನಿಂದ ಹೊರಗಿಡಿ ಎಂದರು. ಆಗ ತನಿಷಾ, ಡ್ರೋನ್ ಪ್ರತಾಪ್, ಇಶಾನಿ ಹಾಗೂ ಮೊದಲ ವಾರ ಕ್ಯಾಪ್ಟನ್ ಆಗಿದ್ದ ಸ್ನೇಹಿತ್​ರನ್ನು ಟಾಸ್ಕ್​ನಿಂದ ಹೊರಗಿಟ್ಟರು. ಇದೀಗ ತನಿಷಾ, ತುಕಾಲಿ ಸಂತು, ನೀತು ಹಾಗೂ ಮೈಖಲ್ ಅವರುಗಳು ನಾಯಕನ ಟಾಸ್ಕ್​ನಲ್ಲಿ ಉಳಿದುಕೊಂಡಿದ್ದಾರೆ. ಇವರಲ್ಲಿ ಯಾರು ಮನೆಯ ಕ್ಯಾಪ್ಟನ್ ಆಗಲಿದ್ದಾರೆ ಎಂಬುದು ಶುಕ್ರವಾರದ ಎಪಿಸೋಡ್​ನಲ್ಲಿ ಗೊತ್ತಾಗಲಿದೆ. ಬಿಗ್​ಬಾಸ್ ಕನ್ನಡ ಸೀಸನ್10 ಕಲರ್ಸ್ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಕ್ಕೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮ ಭೂಷಣ ಪ್ರಶಸ್ತಿ ಪಡೆಯಲು ಬಂದ ಬಾಲಯ್ಯ ಗತ್ತು ಹೇಗಿತ್ತು ನೋಡಿ..
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್