Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಲೇಬಿ ವಿಷಯಕ್ಕೆ ಆಯ್ತು ಜಗಳ, ಮತ್ತೆ ಒಡೆಯಿತು ಮನೆ

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಊಟದ ವಿಷಯಕ್ಕೆ ಈ ವರೆಗೆ ಜಗಳ ಆಗಿರಲಿಲ್ಲ. ಆದರೆ ಇದೀಗ ಬಿಗ್​ಬಾಸ್ ಮನೆಯಲ್ಲಿ ಭವ್ಯಾ ಗೌಡ ಅವರ ಜಿಲೇಬಿ ಕಳೆದು ಹೋಗಿತ್ತು. ಜಿಲೇಬಿ ವಿಷಯಕ್ಕೆ ಎರಡು ಬಣಗಳ ನಡುವೆ ಜಗಳ ಆಗಿದೆ.

ಜಿಲೇಬಿ ವಿಷಯಕ್ಕೆ ಆಯ್ತು ಜಗಳ, ಮತ್ತೆ ಒಡೆಯಿತು ಮನೆ
Follow us
ಮಂಜುನಾಥ ಸಿ.
|

Updated on:Nov 30, 2024 | 9:37 PM

ಬಿಗ್​ಬಾಸ್ ಮನೆಯಲ್ಲಿ ಊಟದ ವಿಷಯಕ್ಕೆ ಜಗಳ ತೀರ ಸಾಮಾನ್ಯ. ಬಿಗ್​ಬಾಸ್​ನ ಬಹುತೇಕ ಎಲ್ಲ ಸೀಸನ್​ನಲ್ಲಿಯೂ ಊಟದ ವಿಷಯಕ್ಕೆ ಜಗಳಗಳಾಗಿವೆ. ಒಂದು ಗ್ಲಾಸು ಹಾಲಿಗೆ ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ ಮನೆ ಸದಸ್ಯರು. ಬಿಗ್​ಬಾಸ್ ಕನ್ನಡ ಸೀಸನ್ 11 ರಲ್ಲಿ ಈ ವರೆಗೆ ಊಟದ ವಿಷಯಕ್ಕೆ ಬಹಳ ದೊಡ್ಡ ಜಗಳ ಆಗಿರಲಿಲ್ಲ. ಆದರೆ ಶನಿವಾರದ ಎಪಿಸೋಡ್​ನಲ್ಲಿ ಜಿಲೇಬಿ ವಿಷಯಕ್ಕೆ ಮನೆ ಸದಸ್ಯರ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ.

ಭವ್ಯಾ ಗೌಡ ಅವರ ಪಾಲಿಗೆ ಬಂದಿದ್ದ ಜಿಲೇಬಿಯನ್ನು ಆ ನಂತರ ತಿನ್ನಲೆಂದು ಫ್ರಿಡ್ಜ್​ನಲ್ಲಿ ಇಟ್ಟಿದ್ದರಂತೆ. ಆದರೆ ಅದು ಅಚಾನಕ್ಕಾಗಿ ಕಾಣೆಯಾಗಿದೆ. ಇದು ನೋಡಿ ಭವ್ಯಾ ಗೌಡ ಕೆರಳಿ ಕೆಂಡವಾಗಿದ್ದಾರೆ. ತಮ್ಮ ಜಿಲೇಬಿ ಬೇರೆಯವರ ಪಾಲಾಗಿರುವುದಕ್ಕೆ ಕಣ್ಣೀರು ಹಾಕಿದ್ದಾರೆ ಭವ್ಯಾ. ಆ ನಂತರ ಕ್ಯಾಪ್ಟನ್ ಧನರಾಜ್ ಅನ್ನು ಉದ್ದೇಶಿಸಿ, ‘ನನಗೆ ನನ್ನ ಜಿಲೇಬಿ ಬೇಕು, ಯಾರು ತಿಂದಿದ್ದಾರೋ ಕೇಳಿ, ಯಾರು ತಿಂದಿದ್ದರೂ ಸಹ ಅವರಿಂದ ಕಕ್ಕಿಸಿ, ನನಗೆ ಸಿಗದೇ ಇರದಿರುವುದು ಯಾರಿಗೂ ಸಿಗಬಾರದು, ನಾನು ಸೈಕೋ ಪಾತ್’ ಎಂದರು.

ಪಾಪ ಕ್ಯಾಪ್ಟನ್, ಮೋಕ್ಷಿತಾ, ಶಿಶಿರ್ ಕೂತಿದ್ದ ಕಡೆ ಹೋಗಿ ವಿಚಾರಿಸಿದ್ದಾರೆ ಧನರಾಜ್, ಅದಕ್ಕೆ ಮೋಕ್ಷಾ, ಶಿಶಿರ್ ಫ್ರಿಡ್ಜ್​ನಲ್ಲಿ ಜಿಲೇಬಿ ಇದೆ ಎಂದು ಕೊಟ್ಟರು, ನಾನು ಐಶ್ವರ್ಯಾ ಮತ್ತು ಶಿಶಿರ್ ಒಟ್ಟಿಗೆ ತಿಂದೆವು ಎಂದರು. ಅದನ್ನು ಬಂದು ಭವ್ಯಾ ಬಳಿ ಧನರಾಜ್ ಹೇಳಿದರು. ಅದಕ್ಕೆ ಇನ್ನಷ್ಟು ಕೋಪಗೊಂಡ ಭವ್ಯಾ, ಅಡುಗೆ ಮನೆಯಲ್ಲಿ ಕಾಫಿ ಇಟ್ಟವರು ಯಾರು? ಇನ್ನೂ ಕೆಲವು ಪ್ರಶ್ನೆಗಳನ್ನು ಅವರು ಕೇಳುತ್ತಾರೆ. ಬೇರೆಯವರು ಇಟ್ಟಿರುವ ತಿಂಡಿಗೆ ಕೈ ಹಾಕಬಾರದು ಎಂಬುದು ಗೊತ್ತಾಗುವುದಿಲ್ಲವಾ? ಎಂದು ಭವ್ಯಾ ಕೋಪ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬಿಗ್​ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್

ಕೊನೆಗೆ ಧನರಾಜ್ ಮೋಕ್ಷಿತಾ, ಐಶ್ವರ್ಯಾ, ಶಿಶಿರ್ ಅವರನ್ನು ಕರೆದರು. ಅವರ ಮೇಲೂ ಭವ್ಯಾ ಕೋಪ ವ್ಯಕ್ತಪಡಿಸಿದರು. ಕೊನೆಗೆ ಶಿಶಿರ್, ಐಶ್ವರ್ಯಾ ಹಾಗೂ ಮೋಕ್ಷಿತಾ ಭವ್ಯಾ ಕ್ಷಮೆ ಕೇಳಿದರು. ಆದರೆ ಆ ಚರ್ಚೆ ಅಲ್ಲಿಗೆ ನಿಲ್ಲಲಿಲ್ಲ. ಅದಾದ ಬಳಿಕ ಚೈತ್ರಾ, ಧನರಾಜ್, ಮೋಕ್ಷಿತಾ, ಐಶ್ವರ್ಯಾ, ಶಿಶಿರ್ ಇನ್ನೂ ಕೆಲವರು ಕುಳಿತು ಅದೇ ವಿಷಯ ಮಾತನಾಡುತ್ತಿದ್ದರು. ಐಶ್ವರ್ಯಾ ಅಂತೂ ಇಂಥಹಾ ಸಿಲ್ಲಿ ವಿಷಯ ಕೇಳಲು ನಾಚಿಕೆ ಆಗಲ್ವ ಎಂದು ಕೇಳಿದರು. ಇನ್ನು ಚೈತ್ರಾ ಕುಂದಾಪುರ ‘ಇದೇನು ಜಮೀನು ಬಟವಾರೆನಾ? ಜಿಲೇಬಿ ವಿಷಯಕ್ಕೆ ಸಭೆಗಳು ನಡೆಯಬೇಕಾ?’ ಎಂದು ಪ್ರಶ್ನೆ ಮಾಡಿದರು. ಒಟ್ಟಾರೆ ಜಿಲೇಬಿ ವಿಷಯಕ್ಕೆ ಮನೆಯಲ್ಲಿ ಎರಡು ಬಣವಂತೂ ಆಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:34 pm, Sat, 30 November 24

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ