Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಬಂತು ಕಹಿ ದಿನ; ಕಣ್ಣೀರು ಹಾಕಿದ ಐಶ್ವರ್ಯಾ

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಐಶ್ವರ್ಯಾ ತಮ್ಮ ತಾಯಿಯ ನೆನಪಿನಲ್ಲಿ ಕಣ್ಣೀರು ಹಾಕಿದ್ದಾರೆ. ನಾಲ್ಕು ವರ್ಷಗಳ ಹಿಂದೆ ತಾಯಿಯನ್ನು ಕಳೆದುಕೊಂಡ ನೋವು ಇನ್ನೂ ಅವರನ್ನು ಕಾಡುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲು ಸಹಪ್ರತಿಸ್ಪರ್ಧಿ ಚೈತ್ರಾ ಪ್ರಯತ್ನಿಸಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಬಂತು ಕಹಿ ದಿನ; ಕಣ್ಣೀರು ಹಾಕಿದ ಐಶ್ವರ್ಯಾ
ಐಶ್ವರ್ಯಾ
Follow us
ರಾಜೇಶ್ ದುಗ್ಗುಮನೆ
|

Updated on:Nov 30, 2024 | 9:51 AM

‘ಬಿಗ್ ಬಾಸ್’ ಮನೆಯಲ್ಲಿ ಐಶ್ವರ್ಯಾ ಅವರ ಆಟ ದಿನ ಕಳೆದಂತೆ ಡಲ್ ಆಗುತ್ತಿದೆ. ಅವರಿಗೆ ಉತ್ತಮ ರೀತಿಯಲ್ಲಿ ಆಟ ಆಡಲು ಸಾಧ್ಯವಾಗುತ್ತಿಲ್ಲ. ಶಿಶಿರ್ ಹಾಗೂ ಅವರ ರೊಮ್ಯಾನ್ಸ್ ಜಾಸ್ತಿ ಆಯಿತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಈಗ ಐಶ್ವರ್ಯಾ ಅವರು ಬಿಗ್ ಬಾಸ್ ಮನೆಯಲ್ಲಿರುವಾಗಲೇ ಒಂದು ಕಹಿ ದಿನ ಬಂದಿದೆ. ಅದನ್ನು ನೆನೆದು ಕಣ್ಣೀರು ಹಾಕಿದ್ದಾರೆ. ‘ವರ್ಷ ಕಳೆದಂತೆ ಇನ್ನಷ್ಟು ಕಷ್ಟ ಆಗುತ್ತಿದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಐಶ್ವರ್ಯಾ ತುಂಬಾನೇ ಕಷ್ಟದಲ್ಲಿ ಜೀವನ ನಡೆಸಿದವರು. ಅವರಿಗೆ ತಂದೆ ಹಾಗೂ ತಾಯಿ ಇಬ್ಬರೂ ಇಲ್ಲ. ತಾಯಿ 2020ರ ನವೆಂಬರ್​ನಲ್ಲಿ ನಿಧನ ಹೊಂದಿದ್ದರು. ಅವರು ತಾಯಿ ಅಗಲಿದೆ ದಿನ ದೊಡ್ಮನೆಯಲ್ಲಿದ್ದಾಗಲೇ ಬಂದಿದೆ. ಅವರು ತಾಯಿಯನ್ನು ಕಳೆದುಕೊಂಡು ನಾಲ್ಕು ವರ್ಷಗಳು ಆಗಿದ್ದು, ಇದನ್ನು ನೆನೆದು ಅವರು ಕಣ್ಣೀರು ಹಾಕಿದ್ದಾರೆ. ಅವರಿಗೆ ಆ ಕರಾಳ ದಿನ ನೆನಪಿಸಿಕೊಂಡು ಮತ್ತಷ್ಟು ನೋವಾಗಿದೆ.

ಚೈತ್ರಾ ಬಳಿ ಈ ವಿಚಾರವನ್ನು ಐಶ್ವರ್ಯಾ ಅವರು ಹೇಳಿಕೊಂಡಿದ್ದಾರೆ. ‘ನನ್ನ ತಾಯಿಯ ತಿಥಿ ಇವತ್ತು. ಅಮ್ಮ ಹೋಗಿ ನಾಲ್ಕು ವರ್ಷ ಆಗಿದೆ’ ಎಂದರು ಐಶ್ವರ್ಯಾ. ಆಗ ಚೈತ್ರಾ ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ‘ಅಳಬಾರದು. ಇದು ಜವಾಬ್ದಾರಿ ನಿಭಾಯಿಸುವ ಸಮಯ. ನಿಮ್ಮ ಅಮ್ಮನಿಗೆ ಏನು ಇಷ್ಟವೋ ಅದೇ ಅಡುಗೆ ಮಾಡೋಣ’ ಎಂದರು ಚೈತ್ರಾ.

‘ಅಮ್ಮನಿಗೆ ಒಬ್ಬಟ್ಟು ಎಂದರೆ ಸಖತ್ ಇಷ್ಟ. ಅವರು ನನ್ನ ರೀತಿ ಆಗಿರಲಿಲ್ಲ. ತುಂಬಾನೇ ಸಿಂಪಲ್ ಆಗಿದ್ದರು. ನಾಲ್ಕು ವರ್ಷ ಆಯ್ತು. ವರ್ಷ ಕಳೆದಂತೆ ಮತ್ತಷ್ಟು ಕಷ್ಟವೇ ಆಗುತ್ತಿದೆಯೇ ಹೊರತು ಸುಲಭವಂತೂ ಆಗಲ್ಲ. ತುಂಬಾನೇ ಕಷ್ಟ’ ಎಂದು ಐಶ್ವರ್ಯಾ ಹೇಳಿದ್ದರು.

ಇದನ್ನೂ ಓದಿ: ಐಶ್ವರ್ಯಾ ಜೊತೆ ಕ್ಲೋಸ್ ಆದ ಧರ್ಮ; ದುಷ್ಮನ್ ಆಗಿ ಬದಲಾದ ಅನುಷಾ ರೈ

ಐಶ್ವರ್ಯಾ ಅವರಿಗೆ ಮನೆಯಿಂದ ಊಟ ಬಂದಿರಲಿಲ್ಲ. ಆಗ ಮಂಜು ಅವರು ತಮ್ಮ ಮನೆಯ ಊಟವನ್ನು ಐಶ್ವರ್ಯಾಗೆ ನೀಡಿದ್ದರು. ‘ಇದು ನಿಮ್ಮ ಮನೆಯಿಂದ ಕಳುಹಿಸಿದ ಊಟ’ ಎಂದಿದ್ದರು. ಅದೇ ರೀತಿ ಐಶ್ವರ್ಯಾಗೆ ಸುದೀಪ್ ಅವರು ಪ್ರೀತಿಯಿಂದ ಕೆಲವು ತಿನಿಸುಗಳನ್ನು ಕಳುಹಿಸಿದ್ದರು. ಈ ಮೂಲಕ ಅವರಿಗೆ ಕುಟುಂಬದವರು ಇಲ್ಲ ಎನ್ನುವ ನೋವನ್ನು ಮರೆಸುವ ಕೆಲಸ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Sat, 30 November 24

2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಬಿಜೆಪಿ ಎಲ್ಲ ಭಾಷೆಯನ್ನೂ ಗೌರವಿಸುತ್ತದೆ;WITT ಶೃಂಗಸಭೆಯಲ್ಲಿ ಕಿಶನ್ ರೆಡ್ಡಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ಯತ್ನಾಳ್ ಒಬ್ಬ ಒಳ್ಳೆಯ ನಾಯಕ ಅನ್ನೋದ್ರಲ್ಲಿ ಎರಡು ಮಾತಿಲ್ಲ: ತಂಗಡಿಗಿ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ವಿಶ್ವದ ಶೇಕಡಾ 60 ರಷ್ಟು ಖನಿಜಗಳು ನಮ್ಮ ದೇಶದಲ್ಲಿವೆ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಪಕ್ಷದ ಸಂದೇಶ ಮತ್ತು ಸೂಚನೆಗಷ್ಟೇ ನಾವು ಸೀಮಿತವಾಗಿರಬೇಕು: ಸೋಮಣ್ಣ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ
ಬಾಲಕನನ್ನು ಬಲಿ ಪಡೆದ ಬಿಬಿಎಂಪಿ ಲಾರಿಗೆ ಬೆಂಕಿ