AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಜು-ಮೋಕ್ಷಿತಾ ಸ್ವಾರ್ಥಕ್ಕೆ ರದ್ದಾಯ್ತು ಟಾಸ್ಕ್; ಇಡೀ ಮನೆಗೆ ನಷ್ಟ

ಬಿಗ್ ಬಾಸ್ ಕನ್ನಡದಲ್ಲಿ ಮಂಜು ಮತ್ತು ಮೋಕ್ಷಿತಾ ನಡುವಿನ ಸ್ವಾರ್ಥ ಆಟವು ಟಾಸ್ಕ್ ರದ್ದತಿಗೆ ಕಾರಣವಾಯಿತು. ಆರಂಭದಲ್ಲಿ ಒಳ್ಳೆಯ ಬಾಂಧವ್ಯ ಹೊಂದಿದ್ದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಬಿಗ್ ಬಾಸ್ ಇದರಿಂದ ಬೇಸರಗೊಂಡು ಟಾಸ್ಕ್ ಅನ್ನು ರದ್ದುಗೊಳಿಸಿ, ಸ್ಪರ್ಧಿಗಳಿಗೆ ಶಿಕ್ಷೆ ವಿಧಿಸಿದರು. ಇದು ಮನೆಯ ಮೇಲೆ ದೊಡ್ಡ ಪರಿಣಾಮ ಬೀರಿತು.

ಮಂಜು-ಮೋಕ್ಷಿತಾ ಸ್ವಾರ್ಥಕ್ಕೆ ರದ್ದಾಯ್ತು ಟಾಸ್ಕ್; ಇಡೀ ಮನೆಗೆ ನಷ್ಟ
ಮೋಕ್ಷಿತಾ- ಮಂಜು
ರಾಜೇಶ್ ದುಗ್ಗುಮನೆ
|

Updated on: Nov 29, 2024 | 7:19 AM

Share

‘ಬಿಗ್ ಬಾಸ್​’ನಲ್ಲಿ ಒಂದು ಟಾಸ್ಕ್ ರಚನೆ ಮಾಡಬೇಕು ಎಂದರೆ ಅದಕ್ಕೆ ಸಾಕಷ್ಟು ಜನರ ಶ್ರಮ ಇರುತ್ತದೆ. ಹೀಗಾಗಿ, ಸ್ಪರ್ಧಿಗಳು ಅದನ್ನು ಶ್ರದ್ಧೆಯಿಂದ ಆಡಬೇಕು. ಕೊಟ್ಟ ಟಾಸ್ಕ್​ಗೆ ಗೌರವ ನೀಡಬೇಕು. ಇಲ್ಲವಾದಲ್ಲಿ ಬಿಗ್ ಬಾಸ್​ಗೆ ಕೋಪ ಬರೋದು ಗ್ಯಾರಂಟಿ. ಈಗ ನವೆಂಬರ್ 28ರ ಎಪಿಸೋಡ್​ನಲ್ಲಿ ಹಾಗೆಯೇ ಆಗಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟ ಜೋರಾಗಿದೆ. ಅದರಲ್ಲೂ ಮಂಜು ಹಾಗೂ ಮೋಕ್ಷಿತಾ ಸ್ವಾರ್ಥದ ಆಟ ಆಡಿದ್ದು, ಇದು ಇಡೀ ಮನೆಯ ಮೇಲೆ ಪರಿಣಾಮ ಬೀರಿದೆ.

‘ಬಿಗ್ ಬಾಸ್​​’ನ ಆರಂಭದ ದಿನಗಳಲ್ಲಿ ಮೋಕ್ಷಿತಾ ಹಾಗೂ ಮಂಜು ಒಂದು ದೇಹ ಎರಡು ಮನಸ್ಸು ಎನ್ನುವ ರೀತಿಯಲ್ಲಿ ಇದ್ದರು. ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು. ಮೋಕ್ಷಿತಾ ಪ್ರೀತಿಯಿಂದ ಮಂಜಣ್ಣ ಎಂದು ಕರೆಯುತ್ತಿದ್ದರು. ಆದರೆ, ಬರುಬರುತ್ತಾ ಕಾಲ ಬದಲಾಯಿತು. ಮಂಜು ಆಟಕ್ಕೋಸ್ಕರ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ ಎಂಬ ವಿಚಾರ ತಿಳಿದ ಬಳಿಕ ಮೋಕ್ಷಿತಾ ಅವರು ಮಂಜುವಿನಿಂದ ದೂರ ಆದರು. ಇದು ಈಗ ದೊಡ್ಡ ಮಟ್ಟಕ್ಕೆ ಹೋಗಿದೆ.

ಬಿಗ್ ಬಾಸ್​ನಲ್ಲಿ ಮಂಜು ರಾಜನಾದರೆ, ಮೋಕ್ಷಿತಾ ಯುವರಾಣಿ (ಸಹೋದರಿ) ಆಗಿದ್ದಾರೆ. ಇಬ್ಬರ ಮಧ್ಯೆ ಕಿತ್ತಾಟ ಇತ್ತು ಎಂಬುದು ಬಿಗ್ ಬಾಸ್ ಹೆಣೆದಿರುವ ಕಥೆ. ಆದರೆ, ಇದನ್ನು ವೈಯಕ್ತಿಕವಾಗಿ ತೆಗೆದುಕೊಂಡು ಹೋಗಿ ಆಟವನ್ನೇ ಹಾಳು ಮಾಡಲಾಗಿದೆ. ಇದು ಬಿಗ್ ಬಾಸ್ ಪ್ರಜೆಗಳ ಮೇಲೆ ಪ್ರಭಾವ ಬೀರಿದೆ.

ಮಣ್ಣಿನಿಂದ ಗುರಾಣಿ ಮಾದರಿಗಳನ್ನು ಮಾಡುವ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್​ನಲ್ಲಿ ಮಂಜು ಹಾಗೂ ಯುವರಾಣಿ ಬೇರೆ ಬೇರೆ ತಂಡದಲ್ಲಿದ್ದು, ಉಸ್ತುವಾರಿ ವಹಿಸಿಕೊಂಡಿದ್ದರು. ಆದರೆ, ಸರಿಯಾಗಿ ಉಸ್ತುವಾರಿ ಮಾಡಲಿಲ್ಲ. ಇದರಿಂದ ಬಿಗ್ ಬಾಸ್​ಗೆ ಕೋಪ ಬಂದಿದೆ. ಸ್ವಾರ್ಥ ಮೆರೆದ ಸ್ಪರ್ಧಿಗಳಿಗೆ ಶಿಕ್ಷೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಮನೆ ರಣರಂಗ ಆಗುವಂತಿದೆ ರಜತ್ ಮಾತು; ಹೆಚ್ಚಿದ ಗಲಾಟೆ

‘ನಿಮಗೆ ಆಟದ ಫಲಿತಾಂಶ ಮುಖ್ಯವಲ್ಲ ಎಂಬುದು ಬಿಗ್ ಬಾಸ್​ಗೆ ಅರಿವಾಗಿದೆ. ನಿಮಗೆ ಇದು ಮುಖ್ಯ ಅಲ್ಲದಿದ್ದರೂ ಬಿಗ್ ಬಾಸ್​ಗೆ ಹಾಗೂ ವೀಕ್ಷಕರಿಗೆ ಮುಖ್ಯ. ಹೀಗಾಗಿ, ಈ ಟಾಸ್ಕ್​ನ ಉಸ್ತುವಾರಿಯನ್ನು ಬಿಗ್ ಬಾಸ್ ವಹಿಸಿಕೊಳ್ಳುತ್ತಾರೆ’ ಎಂದು ಹೇಳಿದ ಬಿಗ್ ಬಾಸ್, ಆಟವನ್ನೇ ರದ್ದು ಮಾಡಿದರು. ಇದನ್ನು ಕೇಳಿ ಇಡೀ ಮನೆಗೆ ಶಾಕ್ ಆಯಿತು. ಇದರಿಂದ ಮನೆಗೆ ನಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?