Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’ ಧಾರಾವಾಹಿ: ಸಿಹಿಯ ಸಾವು ಹತ್ತಿರ ಬಂದೇ ಬಿಡ್ತು; ವೀಕ್ಷಕರಿಗೆ ಬೇಸರ

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಪಾತ್ರದ ಅನಿರೀಕ್ಷಿತವಾಗಿ ಕೊನೆ ಆಗುತ್ತಿದೆ. ಕಥಾವಸ್ತುವಿನ ಅನಗತ್ಯ ತಿರುವುಗಳು ಮತ್ತು ಟಿಆರ್​ಪಿಗಾಗಿ ಕಥೆಯನ್ನು ಬದಲಾಯಿಸಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ.

‘ಸೀತಾ ರಾಮ’ ಧಾರಾವಾಹಿ: ಸಿಹಿಯ ಸಾವು ಹತ್ತಿರ ಬಂದೇ ಬಿಡ್ತು; ವೀಕ್ಷಕರಿಗೆ ಬೇಸರ
ಸೀತಾ ರಾಮ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Dec 01, 2024 | 6:26 AM

‘ಸೀತಾ ರಾಮ’ ಧಾರಾವಾಹಿಯಲ್ಲಿ ಪ್ರೇಕ್ಷಕ ಊಹಿಸಿದಂತೆ ಆಗುತ್ತಿಲ್ಲ. ಇದಕ್ಕೆ ವೀಕ್ಷಕರಿಗೆ ಸಖತ್ ಬೇಸರ ಇದೆ. ಟ್ವಿಸ್ಟ್ ಕೊಡೋ ಭರದಲ್ಲಿ ಇಲ್ಲ-ಸಲ್ಲದ್ದನ್ನು ತರುವ ಕೆಲಸ ಆಗುತ್ತಿದೆ ಎಂಬ ಬೇಸರವನ್ನು ವೀಕ್ಷಕರು ಹೊರಹಾಕುತ್ತಿದ್ದಾರೆ. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ. ಈಗ ಸಿಹಿಯ ಸಾವು ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸಿಹಿಯ ಪಾತ್ರ ಕೊನೆ ಆಗೋದು ನಿಶ್ಚಯವಾಗಿದೆ.

‘ಸೀತಾ ರಾಮ’ ಧಾರವಾಹಿಯಲ್ಲಿ ಸೀತಾ ಹಾಗೂ ರಾಮನ ಪಾತ್ರ ಎಷ್ಟು ಮುಖ್ಯವೋ ಸಿಹಿಯ ಪಾತ್ರವೂ ಅಷ್ಟೇ ಮುಖ್ಯ. ಈ ಪಾತ್ರ ಕೂಡ ಪ್ರಮುಖವಾಗಿದೆ. ಆದರೆ, ಈಗ ಈ ಪಾತ್ರ ಕೊನೆ ಆಗೋ ಸೂಚನೆ ಸಿಕ್ಕಿದೆ. ಮುಂದಿನ ವಾರದ ಎಪಿಸೋಡ್​ಗಳು ಮಹತ್ವ ಪಡೆದುಕೊಳ್ಳಲಿದ್ದು, ಈ ಪಾತ್ರ ಕೊನೆಗೊಳ್ಳಲಿದೆ.

ಈಗ ಸೀತಾಳ ಜನ್ಮದಿನ. ಈ ದಿನದಂದೇ ಸಿಹಿಯನ್ನು ದತ್ತು ಪಡೆಯುವ ಪ್ರಕ್ರಿಯೆಗೆ ಸೀತಾ ಹಾಗೂ ರಾಮ ಮುಂದಾಗಿದ್ದಾರೆ. ಈ ದಿನದಂದು ಏಂಜಲ್ ರೀತಿಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ ಸಿಹಿ. ಈ ಮೊದಲು ರಿಲೀಸ್ ಆದ ಪ್ರೋಮೋದಲ್ಲಿ ಸಿಹಿಗೆ ಅಪಘಾತ ಆದಂತೆ ಹಾಗೂ ಆಕೆ ಸತ್ತು ಹೋದಂತೆ ತೋರಿಸಲಾಗಿದೆ. ಅದು ಇದೇ ಡ್ರೆಸ್​ನಲ್ಲಿ. ಹೀಗಾಗಿ, ಆಕೆಯ ಪಾತ್ರ ಕೊನೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಇದಕ್ಕೆ ಭಾರ್ಗವಿ ಮಾಡಿದ ಆಟವೇ ಕಾರಣ. ಸಿಹಿಯನ್ನು ಸಾಯಿಸಲು ಭಾರ್ಗವಿ ಸಂಚು ರೂಪಿಸಿದ್ದಾಳೆ. ಈ ಸಂಚಿಗೆ ಮುಗ್ಧ ಜೀವ ಬಲಿಯಾಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಈಗಾಗಲೇ ಸಿಹಿ ನಿಧನ ಹೊಂದಿದ ಬಳಿಕ ಏನಾಗುತ್ತದೆ ಎಂಬುದನ್ನು ತೋರಿಸಲಾಗಿದೆ.

ಸಿಹಿ ನಿಧನ ಹೊಂದಿದ ಬೆನ್ನಲ್ಲೇ ಸೀತಾ ಹುಚ್ಚಿ ಆದ ಹಾಗೆ ತೋರಿಸಲಾಗಿದೆ. ಇಷ್ಟೇ ಅಲ್ಲ, ಸಿಹಿಗೆ ಸಹೋದರಿ ಇರುವಂತೆಯೂ, ಆ ಸಹೋದರಿ ಸಿಹಿ ರೀತಿಯೇ ಇರುವಂತೆಯೂ ತೋರಿಸಲಾಗಿದೆ. ಈ ಹುಡುಗಿ ನಂತರ ಸೀತಾಳ ಮಗಳಾಗಿ ಬರುವ ರೀತಿಯಲ್ಲಿ ತೋರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಸೀತಾ ರಾಮ’ ಸೀರಿಯಲ್​ಗೆ ಒಳ್ಳೆಯ ಟಿಆರ್​ಪಿ; ಹೊಸ ಧಾರಾವಾಹಿಗಳಿಗೆ ಸಿಗಲಿಲ್ಲ ಭವ್ಯ ಸ್ವಾಗತ

ಸದ್ಯ ‘ಸೀತಾ ರಾಮ’ ಧಾರಾವಾಹಿಯ ಕಥೆ ಹೋಗುತ್ತಿರುವ ರೀತಿಗೆ ಅನೇಕರಿಗೆ ಬೇಸರ ಇದೆ. ಟಿಆರ್​ಪಿಗೋಸ್ಕರ ಈ ರೀತಿ ಮಾಬಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಮಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಥೆ ಸಾಗುತ್ತದೆ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ನಂದಿನಿ ಹಾಲಿನ ದರ ಹೆಚ್ಚಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸ್ಪಷ್ಟನೆ
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್​ ಬಗ್ಗೆ ಆಯುಕ್ತ ಹೇಳಿದ್ದಿಷ್ಟು!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ