AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ ರಾಮ’ ಧಾರಾವಾಹಿ: ಸಿಹಿಯ ಸಾವು ಹತ್ತಿರ ಬಂದೇ ಬಿಡ್ತು; ವೀಕ್ಷಕರಿಗೆ ಬೇಸರ

ಸೀತಾ ರಾಮ ಧಾರಾವಾಹಿಯಲ್ಲಿ ಸಿಹಿಯ ಪಾತ್ರದ ಅನಿರೀಕ್ಷಿತವಾಗಿ ಕೊನೆ ಆಗುತ್ತಿದೆ. ಕಥಾವಸ್ತುವಿನ ಅನಗತ್ಯ ತಿರುವುಗಳು ಮತ್ತು ಟಿಆರ್​ಪಿಗಾಗಿ ಕಥೆಯನ್ನು ಬದಲಾಯಿಸಿರುವುದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ.

‘ಸೀತಾ ರಾಮ’ ಧಾರಾವಾಹಿ: ಸಿಹಿಯ ಸಾವು ಹತ್ತಿರ ಬಂದೇ ಬಿಡ್ತು; ವೀಕ್ಷಕರಿಗೆ ಬೇಸರ
ಸೀತಾ ರಾಮ
 ಶ್ರೀಲಕ್ಷ್ಮೀ ಎಚ್
| Edited By: |

Updated on: Dec 01, 2024 | 6:26 AM

Share

‘ಸೀತಾ ರಾಮ’ ಧಾರಾವಾಹಿಯಲ್ಲಿ ಪ್ರೇಕ್ಷಕ ಊಹಿಸಿದಂತೆ ಆಗುತ್ತಿಲ್ಲ. ಇದಕ್ಕೆ ವೀಕ್ಷಕರಿಗೆ ಸಖತ್ ಬೇಸರ ಇದೆ. ಟ್ವಿಸ್ಟ್ ಕೊಡೋ ಭರದಲ್ಲಿ ಇಲ್ಲ-ಸಲ್ಲದ್ದನ್ನು ತರುವ ಕೆಲಸ ಆಗುತ್ತಿದೆ ಎಂಬ ಬೇಸರವನ್ನು ವೀಕ್ಷಕರು ಹೊರಹಾಕುತ್ತಿದ್ದಾರೆ. ಇದು ಪ್ರೇಕ್ಷಕರ ಅಸಮಾಧಾನಕ್ಕೆ ಕಾರಣ ಆಗಿದೆ. ಈಗ ಸಿಹಿಯ ಸಾವು ಸಮೀಪಿಸಿದೆ. ಇನ್ನು ಕೆಲವೇ ದಿನಗಳಲ್ಲಿ ಸಿಹಿಯ ಪಾತ್ರ ಕೊನೆ ಆಗೋದು ನಿಶ್ಚಯವಾಗಿದೆ.

‘ಸೀತಾ ರಾಮ’ ಧಾರವಾಹಿಯಲ್ಲಿ ಸೀತಾ ಹಾಗೂ ರಾಮನ ಪಾತ್ರ ಎಷ್ಟು ಮುಖ್ಯವೋ ಸಿಹಿಯ ಪಾತ್ರವೂ ಅಷ್ಟೇ ಮುಖ್ಯ. ಈ ಪಾತ್ರ ಕೂಡ ಪ್ರಮುಖವಾಗಿದೆ. ಆದರೆ, ಈಗ ಈ ಪಾತ್ರ ಕೊನೆ ಆಗೋ ಸೂಚನೆ ಸಿಕ್ಕಿದೆ. ಮುಂದಿನ ವಾರದ ಎಪಿಸೋಡ್​ಗಳು ಮಹತ್ವ ಪಡೆದುಕೊಳ್ಳಲಿದ್ದು, ಈ ಪಾತ್ರ ಕೊನೆಗೊಳ್ಳಲಿದೆ.

ಈಗ ಸೀತಾಳ ಜನ್ಮದಿನ. ಈ ದಿನದಂದೇ ಸಿಹಿಯನ್ನು ದತ್ತು ಪಡೆಯುವ ಪ್ರಕ್ರಿಯೆಗೆ ಸೀತಾ ಹಾಗೂ ರಾಮ ಮುಂದಾಗಿದ್ದಾರೆ. ಈ ದಿನದಂದು ಏಂಜಲ್ ರೀತಿಯ ಬಟ್ಟೆ ತೊಟ್ಟು ಕಾಣಿಸಿಕೊಂಡಿದ್ದಾರೆ ಸಿಹಿ. ಈ ಮೊದಲು ರಿಲೀಸ್ ಆದ ಪ್ರೋಮೋದಲ್ಲಿ ಸಿಹಿಗೆ ಅಪಘಾತ ಆದಂತೆ ಹಾಗೂ ಆಕೆ ಸತ್ತು ಹೋದಂತೆ ತೋರಿಸಲಾಗಿದೆ. ಅದು ಇದೇ ಡ್ರೆಸ್​ನಲ್ಲಿ. ಹೀಗಾಗಿ, ಆಕೆಯ ಪಾತ್ರ ಕೊನೆ ಆಗೋದು ಪಕ್ಕಾ ಎನ್ನಲಾಗುತ್ತಿದೆ.

ಇದಕ್ಕೆ ಭಾರ್ಗವಿ ಮಾಡಿದ ಆಟವೇ ಕಾರಣ. ಸಿಹಿಯನ್ನು ಸಾಯಿಸಲು ಭಾರ್ಗವಿ ಸಂಚು ರೂಪಿಸಿದ್ದಾಳೆ. ಈ ಸಂಚಿಗೆ ಮುಗ್ಧ ಜೀವ ಬಲಿಯಾಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಈಗಾಗಲೇ ಸಿಹಿ ನಿಧನ ಹೊಂದಿದ ಬಳಿಕ ಏನಾಗುತ್ತದೆ ಎಂಬುದನ್ನು ತೋರಿಸಲಾಗಿದೆ.

ಸಿಹಿ ನಿಧನ ಹೊಂದಿದ ಬೆನ್ನಲ್ಲೇ ಸೀತಾ ಹುಚ್ಚಿ ಆದ ಹಾಗೆ ತೋರಿಸಲಾಗಿದೆ. ಇಷ್ಟೇ ಅಲ್ಲ, ಸಿಹಿಗೆ ಸಹೋದರಿ ಇರುವಂತೆಯೂ, ಆ ಸಹೋದರಿ ಸಿಹಿ ರೀತಿಯೇ ಇರುವಂತೆಯೂ ತೋರಿಸಲಾಗಿದೆ. ಈ ಹುಡುಗಿ ನಂತರ ಸೀತಾಳ ಮಗಳಾಗಿ ಬರುವ ರೀತಿಯಲ್ಲಿ ತೋರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಸೀತಾ ರಾಮ’ ಸೀರಿಯಲ್​ಗೆ ಒಳ್ಳೆಯ ಟಿಆರ್​ಪಿ; ಹೊಸ ಧಾರಾವಾಹಿಗಳಿಗೆ ಸಿಗಲಿಲ್ಲ ಭವ್ಯ ಸ್ವಾಗತ

ಸದ್ಯ ‘ಸೀತಾ ರಾಮ’ ಧಾರಾವಾಹಿಯ ಕಥೆ ಹೋಗುತ್ತಿರುವ ರೀತಿಗೆ ಅನೇಕರಿಗೆ ಬೇಸರ ಇದೆ. ಟಿಆರ್​ಪಿಗೋಸ್ಕರ ಈ ರೀತಿ ಮಾಬಾಡಬಾರದಿತ್ತು ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಮಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಕಥೆ ಸಾಗುತ್ತದೆ ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ