ಕ್ಯಾಪ್ಟನ್ ಮೇಲೆ ತಂಡದ ಅಸಮಾಧಾನ, ಆಕ್ರೋಶ ಹೊರಹಾಕಿದ ಡ್ರೋನ್ ಪ್ರತಾಪ್

ಬಿಗ್​ಬಾಸ್ ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿರುವ ಡ್ರೋನ್ ಪ್ರತಾಪ್, ಇತ್ತೀಚೆಗೆ ಜೋರಾಗಿ ಮಾತನಾಡಲು ಶುರು ಮಾಡಿದ್ದರು. ಬುಧವಾರದ ಎಪಿಸೋಡ್​ನಲ್ಲಂತೂ ತೀವ್ರ ಸಿಟ್ಟನ್ನು ಪ್ರದರ್ಶಿಸಿದರು.

ಕ್ಯಾಪ್ಟನ್ ಮೇಲೆ ತಂಡದ ಅಸಮಾಧಾನ, ಆಕ್ರೋಶ ಹೊರಹಾಕಿದ ಡ್ರೋನ್ ಪ್ರತಾಪ್
ಡ್ರೋನ್ ಪ್ರತಾಪ್
Follow us
|

Updated on:Nov 09, 2023 | 12:02 AM

ಬಿಗ್​ಬಾಸ್ (Bigg Boss) ಮನೆಯ ಪ್ರಮುಖ ಸ್ಪರ್ಧಿಯಾಗಿ ಮಾರ್ಪಟ್ಟಿರುವ ಡ್ರೋನ್ ಪ್ರತಾಪ್, ಶೋ ಪ್ರಾರಂಭವಾದ ಮೊದಲ ಕೆಲವು ವಾರ ಮೌನವಾಗಿರುತ್ತಿದ್ದರು, ಯಾರಾದರೂ ಏನಾದರೂ ಅಂದರೆ, ವ್ಯಂಗ್ಯ ಮಾಡಿದರೆ ಬಾತ್​ರೂಂಗೆ ಹೋಗಿ ಅಳುತ್ತಿದ್ದರು, ಸುದೀಪ್ ಧೈರ್ಯ ತುಂಬಿದ ಮೇಲೆ ಧೈರ್ಯವಾಗಿ ಮಾತನಾಡಲು ಆರಂಭಿಸಿದ್ದಾರೆ. ಈಗ ತಂಡದ ಕ್ಯಾಪ್ಟನ್ ಸಹ ಆಗಿ ಸತತವಾಗಿ ಎರಡು ಟಾಸ್ಕ್​ ಸಹ ಗೆದ್ದರು. ಆದರೆ ಮೂರನೇ ಟಾಸ್ಕ್​ ವೇಳೆಗೆ ತಂಡದ ಸದಸ್ಯರ ಅಸಮಾಧಾನಕ್ಕೆ ಗುರಿಯಾದರು.

ಬುಧವಾರದ ಎಪಿಸೋಡ್​ನಲ್ಲಿ ಬಿಗ್​ಬಾಸ್ ‘ಬೊಂಬೆಯಾಟವಯ್ಯ’ ಟಾಸ್ಕ್ ನೀಡಿದ್ದರು. ಆ ಟಾಸ್ಕ್​ಗೆ ಎರಡೂ ತಂಡದ ನಾಯಕರು ಉಸ್ತುವಾರಿ ವಹಸಿದ್ದರು. ಒಂದು ತಂಡದವರು ಕಲ್ಲಂತೆ ಕೂತಿದ್ದಾಗ, ಎದುರಾಳಿ ತಂಡದವರು ಅವರನ್ನು ಬಿಗ್​ಬಾಸ್ ಸೂಚನೆಯಂತೆ ಒಮ್ಮೆ ನಗಿಸಿ, ಒಮ್ಮೆ ಅಳಿಸುವ ಒಮ್ಮೆ ಸಿಟ್ಟು ತರಿಸುವಂತೆ ಮಾಡಬೇಕಿತ್ತು. ಕಲ್ಲಂತೆ ಕೂತ ಸ್ಪರ್ಧಿಗಳು ಎಷ್ಟು ಬಾರಿ ಅಲುಗಾಡಿದ್ದಾರೆ ಎಂಬುದನ್ನು ಉಸ್ತುವಾರಿಗಳು ಲೆಕ್ಕ ಹಾಕಬೇಕಿತ್ತು.

ಈ ಟಾಸ್ಕ್​ ನಡೆಯುವ ವೇಳೆ, ಎದುರಾಳಿ ತಂಡದವರು ಪದೇ-ಪದೇ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ ಅದನ್ನು ನೀನು ಗಮನಿಸಿಲ್ಲ, ಅದನ್ನು ನೋಟ್ ಮಾಡಿಕೊಂಡಿಲ್ಲ ಎಂದು ಡ್ರೋನ್ ಪ್ರತಾಪ್ ಮೇಲೆ ವರ್ತೂರು ಸಂತೋಷ್, ತನಿಷಾ, ಮೈಖಲ್ ಅವರುಗಳು ಆರೋಪ ಮಾಡಿದರು. ನಾನು ಪಾಯಿಂಟ್ ಮಾಡಿಕೊಂಡಿದ್ದೀನಿ ಎಂದರೂ ಬಿಡದೆ ಒಟ್ಟಾಗಿ ಡ್ರೋನ್ ಅನ್ನು ಟೀಕಿಸಲು ಆರಂಭಿಸಿದರು. ಆರಂಭದಲ್ಲಿ ಶಾಂತವಾಗಿದ್ದ ಡ್ರೋನ್, ಒಮ್ಮೆಲೆ ಸಿಟ್ಟು ಪ್ರದರ್ಶಿಸಿದರು, ಇದು ಎಲ್ಲರಿಗೂ ಆಶ್ಚರ್ಯವಾಯಿತು.

ಇದನ್ನೂ ಓದಿ:ಡ್ರೋನ್ ಪ್ರತಾಪ್ ಕೆಟ್ಟ ದೃಷ್ಠಿಯಿಂದ ನೋಡುತ್ತಾರೆಯೇ? ಬಿಗ್​ಬಾಸ್ ಮನೆ ಮಹಿಳೆಯರು ಹೇಳಿದ್ದೇನು?

ನಾನು ಪಾಯಿಂಟ್ಸ್ ಹಾಕಿದ್ದೀನಿ, ಎಲ್ಲರೂ ಒಟ್ಟಿಗೆ ಮೈಮೇಲಿ ಬೀಳಬೇಡಿ ಎಂದು ಕೂಗಿದರು. ಡ್ರೋನ್ ಕೂಗಾಟ ನೋಡಿ ಎದುರಾಳಿ ತಂಡದವರೂ ಸಹ ಓಡಿ ಬಂದರು. ಆದರೆ ಅವರನ್ನು ವರ್ತೂರು ಸಂತೋಷ್ ವಾಪಸ್ ಕಳಿಸಿ, ಇದನ್ನು ನಾವು ಬಗೆಹರಿಸಿಕೊಳ್ಳುತ್ತೇವೆ ಎಂದರು. ಆ ಕ್ಷಣದಲ್ಲಿ ಡ್ರೋನ್ ಸಿಟ್ಟಾದರಾದರೂ ಬಳಿಕ ಬಂದು ತಂಡದ ಕ್ಷಮೆ ಕೇಳಿದರು. ಇನ್ನು ಮುಂದೆ ಹೀಗೆ ಸಿಟ್ಟಾಗುವುದಿಲ್ಲ, ಅವರ ತಂಡ ಎಲ್ಲಿ ನಿಯಮ ಉಲ್ಲಂಘಿಸಿದೆ ಎಂದು ನೋಡಿ ಪಾಯಿಂಟ್ಸ್ ಹಾಕಿಕೊಳ್ಳುತ್ತೇನೆ ಎಂದರು.

ತಂಡಕ್ಕೆ ಭರವಸೆ ನೀಡಿದಂತೆಯೇ ಬಜರ್ ಆದ ಮೇಲೆಯೂ ನಿಂತೇ ಇದ್ದ ಮೂರು ಸದಸ್ಯರ ಮೂರು ಪಾಯಿಂಟ್ಸ್​ಗಳನ್ನು ಹಾಕಿಕೊಂಡರು. ಇದರಿಂದಾಗಿಯೇ ಡ್ರೋನ್ ಪ್ರತಾಪ್​ರ ತಂಡವು ಆ ಟಾಸ್ಕ್​ನಲ್ಲಿ ಗೆಲ್ಲುವಂತಾಯ್ತು. ಬಿಗ್​ಬಾಸ್ ಕನ್ನಡ ಸೀಸನ್ 10 ಕಲರ್ಸ್​ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 9:30ಗೆ ಹಾಗೂ ಜಿಯೋ ಸಿನಿಮಾಸ್​ನಲ್ಲಿ ಪ್ರತಿದಿನ 24 ಗಂಟೆ ಲೈವ್ ಪ್ರಸಾರವಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:58 pm, Wed, 8 November 23

ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?
ಹಲವು ದಿನಗಳ ಬಳಿಕ ದರ್ಶನ್ ಮುಖದಲ್ಲಿ ನಗು; ಜಾಮೀನು ಸಿಗುವ ಮುನ್ಸೂಚನೆಯೇ?
ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ತಪ್ಪಿದ ಭಾರೀ ದುರಂತ; ಮಾಲ್ವಾ ಎಕ್ಸ್‌ಪ್ರೆಸ್‌ ಕೋಚ್‌ನಲ್ಲಿ ತುಂಬಿದ ಹೊಗೆ
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಮನೆಯೆದುರು ಮೂತ್ರ ಮಾಡಿದವನಿಗೆ ಮನಬಂದಂತೆ ಥಳಿಸುತ್ತಿರುವ ವಿಡಿಯೋ ವೈರಲ್
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಚದುರಂಗದ ಚತುರರನ್ನ ಭೇಟಿಯಾದ ಪ್ರಧಾನಿ ಮೋದಿ; ವಿಡಿಯೋ ನೋಡಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಕಾಶ್ಮೀರಿ ಪಂಡಿತರಿಗೆ ಬಾಯ್ತಪ್ಪಿ ಪಿಓಕೆ ನಿರಾಶ್ರಿತರು ಎಂದ ರಾಹುಲ್ ಗಾಂಧಿ
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
ಹಾಸನಾಂಬೆ ದರ್ಶನಕ್ಕೆ ಹೊಸ ವ್ಯವಸ್ಥೆ ಮಾಡಿದ ಆಡಳಿತ ಮಂಡಳಿ; ಏನದು?
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
72 ದಿನಗಳ ಬಳಿಕ ನದಿಯಲ್ಲಿ ಅರ್ಜುನ ಪತ್ತೆ: ಗುಡ್ಡ ಕುಸಿತದ ಭೀಕರತೆ ನೋಡಿ..
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಯುವ ದಸರಾನಲ್ಲಿ ಪ್ರೇಕ್ಷಕರಿಂದ ಪ್ರಮಾಣ ಮಾಡಿಸಿಕೊಂಡ ನಟ ಶ್ರೀಮುರಳಿ
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ಹಾಸನಾಂಬೆ ಭಕ್ತರಿಗೆ ಇಸ್ಕಾನ್ ಲಡ್ಡು; ಡಿಸಿ ಸಿ. ಸತ್ಯಭಾಮ ಹೇಳಿದ್ದಿಷ್ಟು
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!
ತನಿಖೆಗೆ ಆದೇಶಿಸಿದ್ದರೂ ಸಿಎಂ ವಿರುದ್ಧ ಮತ್ತೊಂದು ಹೋರಾಟಕ್ಕೆ ಸಜ್ಜು!