AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಎದುರು ಕೈ ಮುಗಿದು ಬೇಡಿಕೊಂಡ ಸ್ಪರ್ಧಿಗಳು: ಕಾರಣ ಏನು?

Bigg Boss Kannada 12: ಪ್ರತಿ ವಾರದಂತೆ ಈ ವಾರವೂ ಸಹ ಸುದೀಪ್ ಅವರು ಲವ-ಲವಿಕೆಯಿಂದ ಭಾನುವಾರದ ಎಪಿಸೋಡ್ ನಡೆಸಿಕೊಟ್ಟರು. ತಮಾಷೆ, ಹಾಸ್ಯ, ಕಾಲೆಳೆತ ಎಲ್ಲವೂ ಇತ್ತು. ಜೊತೆಗೆ ಒಬ್ಬರನ್ನು ಮನೆಯಿಂದ ಹೊರಗೆ ಸಹ ಕರೆತಂದರು. ಇದೆಲ್ಲದರ ಮಧ್ಯೆ ರಜತ್, ಧನುಶ್ ಸೇರಿದಂತೆ ಇನ್ನೂ ಕೆಲ ಸ್ಪರ್ಧಿಗಳು ಏಕಾಏಕಿ ಎದ್ದು ಕಿವಿ ಹಿಡಿದುಕೊಂಡು, ಕೈ ಮುಗಿದು ಸುದೀಪ್ ಅವರಲ್ಲಿ ಏನೋ ಕೇಳಿಕೊಂಡರು. ಏನದು?

ಸುದೀಪ್ ಎದುರು ಕೈ ಮುಗಿದು ಬೇಡಿಕೊಂಡ ಸ್ಪರ್ಧಿಗಳು: ಕಾರಣ ಏನು?
Bigg Boss Kannada 12
ಮಂಜುನಾಥ ಸಿ.
|

Updated on: Nov 30, 2025 | 10:59 PM

Share

ಬಿಗ್​​ಬಾಸ್​​ ಕನ್ನಡ ಸೀಸನ್ 12 (Bigg Boss Kannada), ವಾರಕ್ಕೆ ಕಾಲಿರಿಸಿದೆ. ಮನೆಯಿಂದ ಕೆಲವಾರು ಮಂದಿ ಎಲಿಮಿನೇಟ್ ಆಗಿ ಮನೆಗೆ ಹೋಗಿದ್ದಾರೆ. ಒಟ್ಟು ಐದು ಮಂದಿ ಹೊಸಬರು ವೈಲ್ಡ್ ಕಾರ್ಡ್ ಮೂಲಕ ಹೊರಗೆ ಬಂದಿದ್ದಾರೆ. ಮೊದಲು ರಘು, ರಿಶಾ ಮತ್ತು ಸೂರಜ್ ಅವರು ಬಂದರು. ಈಗ ಅತಿಥಿಗಳ ಸೋಗಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ರಜತ್ ಮತ್ತು ಚೈತ್ರಾ ಕುಂದಾಪುರ ಅವರು ಬಂದಿದ್ದಾರೆ. ಆದರೆ ರಜತ್ ಅವರು ಬಂದೊಡನೆ ಅವರೊಡನೆ ಇನ್ನೂ ಕೆಲವು ಸ್ಪರ್ಧಿಗಳು ಸೇರಿಕೊಂಡು ಸುದೀಪ್ ಎದುರು ಕೈ ಮುಗಿದು ಬೇಡಿಕೊಂಡಿದ್ದಾರೆ. ಆದರೆ ಕಾರಣವೇನು?

ಸುದೀಪ್ ಅವರು ಪ್ರತಿ ವಾರದಂತೆ ಭಾನುವಾರದ ಶೋ ಅನ್ನು ತಮಾಷೆಯಾಗಿ ನಡೆಸಿ ಕೊಡುತ್ತಿದ್ದರು. ಆರಂಭದಲ್ಲಿ ಫೋನ್ ಕೊಟ್ಟು ಸ್ಪರ್ಧಿಗಳಿಗೆ ಸಹ ಸ್ಪರ್ಧಿಗಳ ಮನೆಗೆ ನಕಲಿ ಕರೆ ಮಾಡುವಂತೆ ಹೇಳಿದರು. ಅದರಂತೆ ರಜತ್, ಗಿಲ್ಲಿ, ಕಾವ್ಯಾ ಇನ್ನೂ ಕೆಲವರು ಕರೆ ಮಾಡಿ ಮಾತನಾಡಿದರು. ಅದೆಲ್ಲ ಆದ ಬಳಿಕ ಇದ್ದಕ್ಕಿದ್ದಂತೆ ರಜತ್, ಮಾಳು, ಧನುಶ್ ಹಾಗೂ ಇನ್ನೂ ಕೆಲವರು ಎದ್ದವರೇ ಕಿವಿ ಹಿಡಿದುಕೊಂಡು ತಪ್ಪಾಯ್ತು ಎಂದು ಕೇಳುತ್ತಾ, ಸುದೀಪ್ ಅವರಿಗೆ ಕೈ ಮುಗಿದರು. ಸುದೀಪ್ ಮೊದಲಿಗೆ ಏಕೆ? ಏನಾಯ್ತು? ಎಂದು ಕೇಳಿದರಾದರೂ ಬಳಿಕ ಅವರಿಗೂ ಸಹ ವಿಷಯ ಅರ್ಥವಾಯ್ತು.

ಅಸಲಿಗೆ ಬಿಗ್​​ಬಾಸ್ ಮನೆಯಲ್ಲಿ ಸ್ಮೋಕಿಂಗ್ ಏರಿಯಾ ಅನ್ನು ಬಂದ್ ಮಾಡಲಾಗಿದೆ. ಸ್ಮೋಕಿಂಗ್ ಏರಿಯಾ ಬಂದ್ ಆಗಲು ಕಾರಣ ಆಗಿರುವುದು ಸುದೀಪ್ ಅವರೇ. ಕೆಲ ವಾರಗಳ ಹಿಂದೆ ಕಾಕ್ರೂಚ್ ಸುಧಿ ಅವರು ಗಿಲ್ಲಿಗೆ ಕಳಪೆ ನೀಡಿದ್ದರು. ಏಕೆ ಎಂದು ಕೇಳಿದಾಗ ಜೈಲಿಗೆ ಹೋದರೆ ಸಿಗರೇಟು ಸೇದಲು ಆಗುವುದಿಲ್ಲ ಹಾಗಾಗಿ ಗಿಲ್ಲಿಗೆ ಕಳಪೆ ಕೊಟ್ಟು ನಾನು ಜೈಲಿಗೆ ಹೋಗುವುದರಿಂದ ತಪ್ಪಿಸಿಕೊಂಡೆ ಎಂದಿದ್ದರು. ಆಗ ಸುದೀಪ್ ಅವರು, ಕಾರಣವಲ್ಲದ ಕಾರಣಕ್ಕೆ ಕಳಪೆ ನೀಡಿದ್ದರಿಂದ ಸುಧಿ ಅವರಿಗೆ ಶಿಕ್ಷೆಯಾಗಿ ಮೂರು ವಾರಗಳ ಕಾಲ ಸ್ಮೋಕಿಂಗ್ ಏರಿಯಾ ಅನ್ನು ಬಂದ್ ಮಾಡಿಸಿದ್ದರು.

ಇದನ್ನೂ ಓದಿ:‘ದಮ್ಮಯ್ಯ ಬಿಟ್ಟುಬಿಡಿ’; ಸುದೀಪ್ ಎದುರು ಬೇಡಿಕೊಂಡ ರಜತ್

ಸುದೀಪ್ ಅವರ ಮಾತಿನಂತೆ ಸ್ಮೋಕಿಂಗ್ ಏರಿಯಾ ಅನ್ನು ಬಂದ್ ಮಾಡಲಾಗಿದ್ದು, ಇದೀಗ ರಜತ್ ಅವರು ಬಿಗ್​​ಬಾಸ್ ಮನೆಗೆ ಬಂದಿದ್ದು ಅವರಿಗೆ ಸ್ಮೋಕಿಂಗ್ ಏರಿಯಾ ಬೇಕಾಗಿದೆ. ಮಾತ್ರವಲ್ಲದೆ ಮಾಳು, ಧನುಶ್ ಇನ್ನೂ ಕೆಲವರೂ ಸ್ಮೋಕಿಂಗ್ ಏರಿಯಾ ಅನ್ನು ಬಳಸುತ್ತಾರೆ. ಅದನ್ನು ಮತ್ತೆ ತೆರೆಯುವಂತೆ ಇದೀಗ ಸುದೀಪ್ ಅವರ ಬಳಿ ಸ್ಪರ್ಧಿಗಳು ಮನವಿ ಮಾಡಿದರು. ಸ್ಪರ್ಧಿಗಳು ಮನವಿ ಮಾಡಿದಾಗ, ಸುದೀಪ್ ಅವರು, ‘ನಮಗೆ ನಿಮ್ಮ ಆರೋಗ್ಯ ಮುಖ್ಯ’ ಎಂದರು. ಬಳಿಕ, ಈ ಎಪಿಸೋಡ್ ಮುಗಿದ ಬಳಿಕ ಮಲಗುವ ಮುಂಚೆ ಎಲ್ಲ ಮಹಿಳಾ ಸ್ಪರ್ಧಿಗಳ ಬಳಿ ಹೋಗಿ ಅವರನ್ನು ಕೇಳಿ ಅವರು ವೋಟ್ ಹಾಕಲಿ ನಿಮ್ಮ ಪರವಾಗಿ ವೋಟ್ ಬಂದರೆ ಮತ್ತೆ ಸ್ಮೋಕಿಂಗ್ ಜೋನ್ ತೆಗೆಯುತ್ತೇವೆ ಎಂದರು. ನೋಡಬೇಕು ಮತ ಯಾರ ಕಡೆಗೆ ಬರುತ್ತದೆ ಎಂದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯಕ್ಕೆ ಮನಸೋತ ರಷ್ಯಾ ಅಧ್ಯಕ್ಷ ಪುಟಿನ್
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಭಾರತಕ್ಕೆ ಬಂದ ಗೆಳೆಯ ಪುಟಿನ್​ಗೆ ಪ್ರಧಾನಿ ಮೋದಿಯ ಅಪ್ಪುಗೆಯ ಸ್ವಾಗತ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ
ಧ್ರುವಂತ್ ಮೇಲೆ ಬುಕ್ ಬರೆಯುತ್ತಾರಂತೆ ಗಿಲ್ಲಿ: ಸೀರಿಯಸ್ ಪ್ರಶ್ನೆಗೆ ಕಾಮಿಡಿ