AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಡಿ-ಬೇಡಿ ಒಳಗೆ ಬಂದಿದ್ದೀರ, ಪಕ್ಷಪಾತದ ಆರೋಪ ಮಾಡಿದ ಜಾನ್ವಿಗೆ ಸುದೀಪ್ ಚಾಟಿ

Bigg Boss Kannada: ಬಿಗ್​​ಬಾಸ್​​ ಮನೆಯಲ್ಲಿ ಪಕ್ಷಪಾತ ನಡೆಯುತ್ತಿದೆ. ಕಲರ್ಸ್ ವಾಹಿನಿ ತಮಗೆ ಬೇಕಾದವರಿಗೆ ಸಹಾಯ ಮಾಡುತ್ತಿದೆ, ತನ್ನ ವಾಹಿನಿಗೆ ಸಂಬಂಧಿಸಿದವರನ್ನು ಹೊರಗೆ ಹಾಕುತ್ತಿದೆ ಎಂಬ ಗಂಭೀರ ಆರೋಪವನ್ನು ಜಾನ್ವಿ, ಸ್ಪರ್ಧಿಗಳ ಎದುರು ಮಾಡಿದ್ದರು. ಜಾನ್ವಿಯ ಆರೋಪಕ್ಕೆ ತಕ್ಕ ಪ್ರತ್ಯುತ್ತರವನ್ನು ಸುದೀಪ್ ನೀಡಿದ್ದಾರೆ.

ಕಾಡಿ-ಬೇಡಿ ಒಳಗೆ ಬಂದಿದ್ದೀರ, ಪಕ್ಷಪಾತದ ಆರೋಪ ಮಾಡಿದ ಜಾನ್ವಿಗೆ ಸುದೀಪ್ ಚಾಟಿ
Kichcha Sudeep
ಮಂಜುನಾಥ ಸಿ.
|

Updated on: Nov 15, 2025 | 10:55 PM

Share

ಜನ ಯಾರಿಗೆ ಕಡಿಮೆ ಮತ ಹಾಕಿರುತ್ತಾರೊ ಅವರು ಬಿಗ್​​ಬಾಸ್ (Bigg Boss) ಮನೆಯಿಂದ ಹೊರಗೆ ಹೋಗುತ್ತಾರೆ. ಅದು ಸಾಮಾನ್ಯ. ಆದರೆ ಕೆಲ ದಿನಗಳ ಹಿಂದೆ ಜಾನ್ವಿ ಮನೆ ಸದಸ್ಯರೊಟ್ಟಿಗೆ ಸ್ಪಂದನಾ ಬಗ್ಗೆ ಮಾತನಾಡುತ್ತಾ, ಅವರೆಲ್ಲ ವಾಹಿನಿ ಕಡೆಯವರು ಹಾಗಾಗಿ ಅವರನ್ನು ವಾಹಿನಿಯೇ ‘ಎತ್ತುತ್ತದೆ’ ಎಂದಿದ್ದರು. ಅರ್ಥಾತ್, ಕಲರ್ಸ್ ಚಾನೆಲ್​​ನ ಧಾರಾವಾಹಿ, ಬೇರೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುವವರನ್ನು ಬಿಗ್​​ಬಾಸ್​​ ಮನೆಯಿಂದ ಬೇಗ ಹೊರಗೆ ಕಳಿಸಲ್ಲ, ಪಕ್ಷಪಾತ ಮಾಡಲಾಗುತ್ತದೆ ಎಂಬುದು ಅವರ ಮಾತಾಗಿತ್ತು.

ಶನಿವಾರದ ಎಪಿಸೋಡ್​​ನಲ್ಲಿ ಕಿಚ್ಚ ಈ ಬಗ್ಗೆ ಮಾತನಾಡಿದರು. ಎಪಿಸೋಡ್ ಪ್ರಾರಂಭ ಆಗುತ್ತಿದ್ದಂತೆ ಸುದೀಪ್ ಅವರು ‘ವಾಹಿನಿ’ಯಿಂದ ಬಂದವರು ಎಂದು ತಮಾಷೆಯಾಗಿ ಹೇಳಿದರು. ಆಗಲೇ ಜಾನ್ವಿಗೆ ಅವರಿಗೆ ‘ಇಂದು ಕಾದಿದೆ ಹಬ್ಬ’ ಎಂಬ ಸೂಚನೆ ಸಿಕ್ಕಿತು. ಮೊದಲಿಗೆ ಸುದೀಪ್ ಅವರು, ಅಶ್ವಿನಿ ಹಾಗೂ ಜಾನ್ವಿ ಅವರು ಚೇಂಜಿಂಗ್ ರೂಂನಲ್ಲಿ ಮಾಡಿಕೊಂಡ ಒಳ ಒಪ್ಪಂದದ ಬಗ್ಗೆ ಮಾತನಾಡಿದರು.

ಚೇಂಜಿಂಗ್ ರೂಂ ಅನ್ನು ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕಾಗಿ ನೀಡಿರುವ ಜಾಗ ಅಲ್ಲಿ, ಗೇಮ್​​ಗೆ ಸಂಬಂಧಿಸಿದ್ದು ಮಾತನಾಡುವಂತಿಲ್ಲ ಎಂಬ ನಿಯಮ ಇದ್ದರೂ ಮಾತನಾಡಿದ್ದು ಸರಿಯೇ ಎಂದು ಕೇಳಿದರು. ಅದಕ್ಕೆ ಅಶ್ವಿನಿ ಮತ್ತು ಜಾನ್ವಿ ತಪ್ಪೆಂದರು. ಬಳಿಕ ಜಾನ್ವಿಯ ವಿಚಾರಕ್ಕೆ ಬಂದ ಸುದೀಪ್, ‘ನೀವು ಅಷ್ಟೆಲ್ಲ ತಿಳಿದಿರುವವರು, ನಿಮಗೆ ಅಷ್ಟೆಲ್ಲ ಗೊತ್ತಿದೆ ಹಾಗಿದ್ದ ಮೇಲೆ ಈ ಮನೆಯಲ್ಲಿ ಯಾರಿಗೆ ಮತ ಕಡಿಮೆ ಬಂದಿದೆಯೋ ಅವರು ಹೊರಗೆ ಹೋಗುತ್ತಾರೆ, ಇದರಲ್ಲಿ ವಾಹಿನಿಯ ಪಾತ್ರ ಇರುವುದಿಲ್ಲ’ ಎಂಬುದು ತಿಳಿದಿಲ್ಲವೇ ಎಂದರು.

ಜಾನ್ವಿ ವಾಹಿನಿ ಬಗ್ಗೆ ಆಡಿದ ಮಾತುಗಳ ವಿಡಿಯೋ ಪ್ರಸಾರ ಮಾಡಿ, ‘ಚಂದ್ರಪ್ರಭಾ ಕಲರ್ಸ್ ವಾಹಿನಿಯಲ್ಲೇ ಇರುವುದು ಆದರೆ ಅವರೇ ಮೊದಲು ಹೋದರು. ಈ ಶೋ ಅನ್ನು ವಾಹಿನಿಯೊಟ್ಟಿಗೆ ನೇರ ಸಂಬಂಧ ಇಲ್ಲದಿರುವವರೇ ಗೆದ್ದಿರುವುದು ಹೆಚ್ಚು. ಅಷ್ಟೆಲ್ಲ ಯಾಕೆ? ನೀವು ಸಹ ವಾಹಿನಿಗೆ ಸಂಬಂಧಿಸಿದವರೇ. ಹಾಗಿದ್ದರೆ ನಿಮ್ಮನ್ನೂ ವಾಹಿನಿಯವರು ನೀವು ಹೇಳಿದಂತೆ ‘ಎತ್ತುತ್ತಿದ್ದಾರಾ’ ಎಂದು ಪ್ರಶ್ನೆ ಮಾಡಿದರು.

ಆದರೆ ಜಾನ್ವಿ, ಬ್ರೇಕ್​​ನಲ್ಲಿ ಮತ್ತೆ ನಾನು ಹೇಳಿದ್ದು ಸರಿ ಎಂಬಂತೆ ಮಾತನಾಡಿದರು. ಅದು ಸುದೀಪ್ ಅವರಿಗೆ ಮತ್ತಷ್ಟು ಸಿಟ್ಟು ತರಿಸಿತು. ‘ನೀವು ಇದೇ ವಾಹಿನಿಯನ್ನು ಕಾಡಿ-ಬೇಡಿ ಒಳಗೆ ಹೋಗಿರುವುದು ಎಂಬುದನ್ನು ಮರೆಯಬೇಡಿ’ ಎಂದು ಖಾರವಾಗಿಯೇ ಹೇಳಿದರು. ಅಲ್ಲಿಗೆ ಜಾನ್ವಿ ಕ್ಷಮೆ ಕೇಳಿ ಸುಮ್ಮನಾದರು. ಬಳಿಕ ‘ವಾಹಿನಿ ಸಹಾಯ ಮಾಡುತ್ತೆ, ಪಕ್ಷಪಾತ ಮಾಡುತ್ತೆ ಎಂಬುದೆಲ್ಲ ಗಂಭೀರವಾದ ಆರೋಪಗಳು. ಆ ರೀತಿಯ ಯಾವುದೇ ಕಾರ್ಯ ನಡೆಯುವುದಿಲ್ಲ. ಅಂಥಹಾ ಅನುಮಾನಗಳು ಯಾರಿಗೂ ಬೇಡ’ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ