
ಬಿಗ್ ಬಾಸ್ ಮನೆ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ. ಬಿಗ್ ಬಾಸ್ ಕೊಟ್ಟ ಟಾಸ್ಕ್ ಒಂದರಲ್ಲಿ ಮಂಜು ಹಾಗೂ ಸೌಂದರ್ಯಾ ನಡುವೆ ಕಿತ್ತಾಟ ನಡೆದಿದೆ. ಇಬ್ಬರೂ ಕೈ ಕೈ ಮಿಲಾಯಿಸಿಕೊಳ್ಳುವ ಹಂತ ತಲುಪಿದ್ದಾರೆ. ಸೌಂದರ್ಯಾ ಅವರು ಕೋಪ ತಾಳಲಾರದೆ ಮಂಜುನ ತಳ್ಳಿದ್ದಾರೆ. ಇದರಿಂದ ಸಿಟ್ಟಾದ ಮಂಜು, ‘ಸೌಂದರ್ಯಾ ಅವರು ನನಗೆ ಹೊಡೆದಿದ್ದಾರೆ’ ಎಂಬ ಗಂಭೀರ ಆರೋಪವನ್ನು ಮಾಡಿದ್ದಾರೆ. ಬಿಗ್ ಬಾಸ್ ಈ ವಿಷಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ಇಂದು ತಿಳಿಯಲಿದೆ.
ಬಿಗ್ ಬಾಸ್ನ ಮೂಲ ನಿಯಮ ಎಂದರೆ ಯಾರೊಬ್ಬರೂ ಯಾರ ಮೇಲೆಯೂ ಹಲ್ಲೆ ನಡೆಸುವಂತಿ್ಲ್ಲ. ಹಾಗೆ ಹೊಡೆದರೆ ಅವರನ್ನು ಮನೆಯಿಂದ ಹೊರಕ್ಕೆ ಕಳುಹಿಸಲಾಗುತ್ತದೆ. ಈ ರೀತಿ ಹೊಡೆದು ದೊಡ್ಮನೆಯಿಂದ ಹೊರ ಹೋದವರು ಅನೇಕರಿದ್ದಾರೆ. ಆದರೆ, ಸೌಂದರ್ಯಾ ವಿಷಯದಲ್ಲಿ ಆ ರೀತಿ ಮಾಡುವುದು ಅನುಮಾನ ಎನ್ನಲಾಗುತ್ತಿದೆ. ಅವರಿಗೆ ಸುದೀಪ್ ಅವರು ವೀಕೆಂಡ್ನಲ್ಲಿ ಒಂದು ವಾರ್ನಿಂಗ್ ಕೊಟ್ಟು ಬಿಡಬಹುದು ಎನ್ನಲಾಗುತ್ತಿದೆ.
ಸೌಂದರ್ಯಾ ಅವರನ್ನು ಹೊರಕ್ಕೆ ಕಳುಹಿಸದೇ ಇರಲು ಒಂದು ಕಾರಣವೂ ಇದೆ. ಇಲ್ಲಿ ಸೌಂದರ್ಯಾ ತಳ್ಳಿದ್ದು ಆಟದ ಭರದಲ್ಲಿ. ಹೀಗಾಗಿ, ಇದಕ್ಕೆ ಕ್ಷಮೆ ಇದ್ದೇ ಇದೆ. ಈ ಮೊದಲು ಬಿಗ್ ಬಾಸ್ ಮನೆಯಲ್ಲಿ ಭವ್ಯಾ ಗೌಡ ಕೂಡ ಇದೇ ರೀತಿಯ ತಪ್ಪನ್ನು ಮಾಡಿದ್ದರು. ಅವರಿಗೆ ವಾರ್ನಿಂಗ್ ಕೊಟ್ಟು ಬಿಡಲಾಗಿತ್ತು. ಈಗಲೂ ಸೌಂದರ್ಯಾಗೆ ಹಾಗೆಯೇ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಮತ್ತೆ ಬಿಗ್ ಬಾಸ್ ಮನೆಗೆ ಬರಲ್ಲ ಓಂ ಪ್ರಕಾಶ್ ರಾವ್; ಕಠಿಣ ನಿರ್ಧಾರ ಮಾಡಿದ ನಿರ್ದೇಶಕ
ಬಿಗ್ ಬಾಸ್ ಮನೆಯಲ್ಲಿ ಗೇಮ್ ಒಂದನ್ನು ನೀಡಲಾಗಿತ್ತು. ಕೆಂಪು ಬಣ್ಣದ ವಸ್ತುಗಳನ್ನು ಸೂಚಿಸಿದ ಸ್ಥಳದಿಂದ ತೆಗೆದುಕೊಂಡು ಬರಬೇಕು.ಆ ಬಳಿಕ ಅದನ್ನು ಕಾಯ್ದುಕೊಳ್ಳಬೇಕು. ಈ ರೀತಿ ಕಾಯ್ದುಕೊಳ್ಳುವಾಗ ಮಂಜು ಅವರು ಸೌಂದರ್ಯಾ ಅವರಿಂದ ವಸ್ತುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡಿದರು. ಈ ವೇಳೆ ತಳ್ಳಾಟ ನಡೆದಿದೆ. ಆ ಬಳಿಕ ಮಂಜು ಅವರನ್ನು ಕನ್ಫೆಷನ್ ರೂಂಗೆ ಕರೆಸಿ ಸಮಾಧಾನ ಮಾಡುವ ಕೆಲಸ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.