ಶುರುವಾಯ್ತು ಮರಾಠಿ ಬಿಗ್​ಬಾಸ್ 5, ಸುದೀಪ್ ಆಪ್ತ ನಿರೂಪಕ

Bigg Boss Marathi: ಮರಾಠಿ ಬಿಗ್​ಬಾಸ್ ಸೀಸನ್ 5 ಪ್ರಾರಂಭವಾಗುತ್ತಿದೆ. ಕಿಚ್ಚ ಸುದೀಪ್​ರ ಆಪ್ತ ಗೆಳೆಯ ರಿತೇಶ್ ಈ ಬಾರಿ ಶೋ ನಿರೂಪಣೆ ಮಾಡಲಿದ್ದಾರೆ. ಬಿಗ್​ಬಾಸ್ ಮರಾಠಿ ಶೋಗೆ ಈ ಬಾರಿ ತುಸು ಗ್ಲಾಮರ್ ತುಂಬಲಾಗಿದೆ.

ಶುರುವಾಯ್ತು ಮರಾಠಿ ಬಿಗ್​ಬಾಸ್ 5, ಸುದೀಪ್ ಆಪ್ತ ನಿರೂಪಕ
Follow us
|

Updated on: Jul 28, 2024 | 7:42 AM

ಮತ್ತೆ ಬಿಗ್​ಬಾಸ್​ ಋತು ಪ್ರಾರಂಭವಾಗುತ್ತಿದೆ. ಈಗಾಗಲೇ ಹಿಂದಿಯಲ್ಲಿ ಬಿಗ್​ಬಾಸ್ ಒಟಿಟಿ ಪ್ರಾರಂಭವಾಗಿದೆ. ಇನ್ನು ಕೆಲವು ಭಾಷೆಗಳಲ್ಲಿ ಬಿಗ್​ಬಾಸ್ ಟಿವಿ ಸೀಸನ್ ಪ್ರಾರಂಭವಾಗುತ್ತಿದೆ. ತೆಲುಗು ಬಿಗ್​ಬಾಸ್ ಇನ್ನೇನು ಕೆಲವು ದಿನಗಳಲ್ಲಿ ಆರಂಭವಾಗಲಿದೆ. ಹಿಂದಿ ಬಿಗ್​ಬಾಸ್​ಗೆ ಸಿದ್ಧತೆ ನಡೆಯುತ್ತಿದೆ. ಕನ್ನಡದಲ್ಲಿಯೂ ಸಿದ್ಧತೆ ಆರಂಭವಾಗಿದೆ. ಇದರ ನಡುವೆ ಮರಾಠಿ ಬಿಗ್​ಬಾಸ್​ ಇಂದಿನಿಂದ ಆರಂಭವಾಗುತ್ತಿದೆ.

ಮರಾಠಿ ಬಿಗ್​ಬಾಸ್ ಸೀಸನ್ 5 ಇಂದು (ಜುಲೈ 28) ಆರಂಭವಾಗುತ್ತಿದ್ದು, ಕಾರ್ಯಕ್ರಮದ ಪ್ರೋಮೋಗಳು, ಸ್ಪರ್ಧಿಗಳ ಪಟ್ಟಿ ಈಗಾಗಲೇ ವೈರಲ್ ಆಗುತ್ತಿದೆ. ವಿಶೇಷವೆಂದರೆ ಮರಾಠಿ ಬಿಗ್​ಬಾಸ್ ಆರಂಭವಾದಾಗಿನಿಂದಲೂ ಇದೇ ಮೊದಲ ಬಾರಿಗೆ ಶೋನ ನಿರೂಪಕರು ಬದಲಾಗಿದ್ದು, ಕಿಚ್ಚ ಸುದೀಪ್​ರ ಆಪ್ತ ಗೆಳೆಯ ರಿತೇಶ್ ದೇಶ್​ಮುಖ್​ ಈ ಬಾರಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

ಹಿಂದಿ, ಕನ್ನಡ, ತೆಲುಗು, ತಮಿಳಿಗೆ ಹೋಲಿಸಿದರೆ ಮರಾಠಿ ಬಿಗ್​ಬಾಸ್ ಹೆಚ್ಚು ಯಶಸ್ಸು ಕಂಡಿರಲಿಲ್ಲ. ಆದರೆ ಕಳೆದೆರಡು ಸೀಸನ್​ಗಳಿಂದ ತುಸು ಚೇತರಿಕೆ ಕಂಡಿದೆ. ಅದೇ ಕಾರಣಕ್ಕೆ ಈ ಬಾರಿ ನಿರೂಪಕರನ್ನು ಬದಲಾಯಿಸಿದ್ದು, ಶೋಗೆ ಇನ್ನಷ್ಟು ಮಾದಕತೆ, ಗ್ಲಾಮರ್ ತುಂಬುವ ಪ್ರಯತ್ನ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ರಿತೇಶ್ ದೇಶ್​ಮುಖ್ ಅವರನ್ನು ನಿರೂಪಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಗ್ಲಾಮರಸ್ ಬ್ಯೂಟಿ ನಿಕ್ಕಿ ತಾಂಬೋಲಿ ಸೇರಿದಂತೆ ಇನ್ನೂ ಕೆಲವು ಯುವ ನಟ-ನಟಿಯರನ್ನು ಸ್ಪರ್ಧಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ಮರಾಠಿ ಬಿಗ್​ಬಾಸ್ ಶೋ ಅನ್ನು ಹಿರಿಯ ನಟ, ನಿರ್ದೇಶಕ ಮಹೇಶ್ ಮಾಂಜ್ರೆಕರ್ ನಿರೂಪಣೆ ಮಾಡುತ್ತಿದ್ದರು.

ಇದನ್ನೂ ಓದಿ:ಬಿಗ್ ಬಾಸ್ ಮನೆಯ ಸೆ* ವಿಡಿಯೋ ವೈರಲ್; ತಪ್ಪು ಮಾಡಿದ ಪತಿಯನ್ನು ವಹಿಸಿಕೊಂಡು ಬಂದ ಪತ್ನಿ

ರಿತೇಶ್ ದೇಶ್​ಮುಖ್ ಮತ್ತು ಕಿಚ್ಚ ಸುದೀಪ್ ಅತ್ಯಾಪ್ತ ಗೆಳೆಯರು. ಸುದೀಪ್ ನಟಿಸಿದ ಮೊದಲ ಹಿಂದಿ ಸಿನಿಮಾ ‘ರಣ್’ನಲ್ಲಿ ರಿತೇಶ್ ದೇಶ್​ಮುಖ್ ಸಹ ನಾಯಕನಾಗಿ ನಟಿಸಿದ್ದರು. ಆ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಸಹ ನಟಿಸಿದ್ದರು. ಆ ಸಿನಿಮಾದಿಂದ ಈವರೆಗೆ ರಿತೇಶ್ ಹಾಗೂ ಸುದೀಪ್ ಆಪ್ತ ಗೆಳೆಯರು. ರಿತೇಶ್​ರ ಪತ್ನಿ ಜೆನಿಲಿಯಾ ದೇಶ್​ಮುಖ್ ಸಹ ಸುದೀಪ್​ರ ಆಪ್ತ ಗೆಳತಿ. ಇದೀಗ ಬಿಡುಗಡೆ ಆಗಿರುವ ಮರಾಠಿ ಪ್ರೋಮೋನಲ್ಲಿ ಸಹ ರಿತೇಶ್ ದೇಶ್​ಮುಖ್, ಸುದೀಪ್​ರ ಸ್ಟೈಲ್ ಅನ್ನೇ ಕಾಪಿ ಮಾಡಿದ್ದಾರೆ.

ಬಿಗ್​ಬಾಸ್ ಒಟಿಟಿ ಪ್ರಸ್ತುತ ಚಾಲ್ತಿಯಲ್ಲಿದ್ದು, ನಟ ಅನಿಲ್ ಕಪೂರ್ ಆ ಶೋ ನಿರೂಪಣೆ ಮಾಡುತ್ತಿದ್ದಾರೆ. ತೆಲುಗು ಬಿಗ್​ಬಾಸ್​ಗೆ ಸಿದ್ಧತೆ ಆರಂಭವಾಗಿದ್ದು ಕೆಲವು ಸ್ಪರ್ಧಿಗಳು ಖಾತ್ರಿ ಆಗಿದ್ದಾರೆ. ಹೋಟೆಲ್ ಆಂಟಿ, ಅಮೃತಾ ಪ್ರಣಯ್ ಸೇರಿದಂತೆ ಕೆಲವು ಜನಪ್ರಿಯ ಸ್ಪರ್ಧಿಗಳು ಶೋನಲ್ಲಿ ಭಾಗಿಯಾಗಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ಪ್ರವಾಹದಲ್ಲಿ ಸಿಲುಕಿದ 11 ಪ್ರವಾಸಿಗರ ಪ್ರಾಣ ಉಳಿಸಿದ ರಕ್ಷಣಾ ಪಡೆ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
ನಡುರಸ್ತೆಯಲ್ಲಿ ಡೀಸೆಲ್‌ ಟ್ಯಾಂಕರ್‌ಗೆ ಬೆಂಕಿ; ತಪ್ಪಿದ ಭಾರೀ ಅನಾಹುತ
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
‘ನನಗೂ ಕೆಟ್ಟ ಅನುಭವ ಆಗಿದೆ’; ನೀತು ಶೆಟ್ಟಿ ನೇರ ಮಾತು
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
ಚಿತ್ರದುರ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
4,4,4,4,4... ಒಂದೇ ಓವರ್​ನಲ್ಲಿ 5 ಬೌಂಡರಿ ಬಾರಿಸಿದ ಬಾಬರ್ ಆಝಂ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ
ನಾಗಮಂಗಲ ಗಲಭೆ: ಬಿಜೆಪಿ ನಾಯಕ ಅಶ್ವತ್ಥನಾರಾಯಣ ಹೇಳಿದ್ದೇನು ನೋಡಿ