AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂದಿನ ವರ್ಷದಿಂದ ಹೊಸ ಚಾನೆಲ್​ನಲ್ಲಿ ‘ಬಿಗ್ ಬಾಸ್​’; ಬೇರೆ ಆ್ಯಂಕರ್​ಗೆ ಮಣೆ?

ಬಿಗ್ ಬಾಸ್​ ಮನೆ ಒಳಗೆ ಯಾವ ಸ್ಪರ್ಧಿಗಳು ಬರುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಟಿಆರ್​ಪಿ ನಿರ್ಧಾರ ಆಗುತ್ತದೆ. ಇನ್ನು ವಾರಾಂತ್ಯದ ಎಪಿಸೋಡ್​ಗೆ ಹೆಚ್ಚಿನ ಟಿಆರ್​ಪಿ ಸಿಗುತ್ತದೆ. ಆದರೆ, ತೆಲುಗಿನಲ್ಲಿ ಈ ಶೋಗೆ ಟಿಆರ್​ಪಿ ಸಿಗುತ್ತಿಲ್ಲ.

ಮುಂದಿನ ವರ್ಷದಿಂದ ಹೊಸ ಚಾನೆಲ್​ನಲ್ಲಿ ‘ಬಿಗ್ ಬಾಸ್​’; ಬೇರೆ ಆ್ಯಂಕರ್​ಗೆ ಮಣೆ?
bigg boss
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Dec 05, 2022 | 6:30 AM

Share

ಹಲವು ಭಾಷೆಗಳಲ್ಲಿ ಬಿಗ್ ಬಾಸ್ ಫೇಮಸ್ ಆಗಿದೆ. ಈ ವರ್ಷ ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿ ಬಿಗ್ ಬಾಸ್ ಏಕಕಾಲಕ್ಕೆ ಆರಂಭ ಆಗಿದೆ. ಕನ್ನಡದಲ್ಲಿ ಸುದೀಪ್, (Sudeep) ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ (Akkineni Nagarjun) ಹಾಗೂ ತಮಿಳಿನಲ್ಲಿ ಕಮಲ್ ಹಾಸನ್ ಅವರು ಈ ಶೋನ ನಡೆಸಿಕೊಡುತ್ತಿದ್ದಾರೆ. ಈಗ ತೆಲುಗು ಕಿರುತೆರೆ​ ಅಂಗಳದಿಂದ ಹೊಸದೊಂದು ಅಪ್​ಡೇಟ್ ಸಿಕ್ಕಿದೆ. ತೆಲುಗು ಬಿಗ್ ಬಾಸ್​ಗೆ ಮುಂದಿನ ವರ್ಷದಿಂದ ಹೊಸ ಆ್ಯಂಕರ್ ಬರಲಿದ್ದಾರಂತೆ! ಸದ್ಯ ಈ ವಿಚಾರ ಕೇಳಿ ಒಂದು ವರ್ಗದ ಜನರು ಬೇಸರ ಮಾಡಿಕೊಂಡಿದ್ದಾರೆ.

ಅಕ್ಕಿನೇನಿ ನಾಗಾರ್ಜುನ ಅವರು ತೆಲುಗು ಬಿಗ್​ ಬಾಸ್​ನ ಹಲವು ಸೀಸನ್​ಗಳನ್ನು ನಿರೂಪಣೆ ಮಾಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೇರೆ ಆ್ಯಂಕರ್​ಗಳು ಬಂದಿದ್ದೂ ಇದೆ. ಆದರೆ, ಅಕ್ಕಿನೇನಿ ನಾಗಾರ್ಜುನ ಅವರಿಗೆ ಹೆಚ್ಚು ಚಾರ್ಮ್ ಇರುವ ಕಾರಣ ಪ್ರತಿ ಬಾರಿ ಅವರಿಗೆ ಮಣೆ ಹಾಕುವ ಕೆಲಸ ಆಗುತ್ತಿದೆ. ಆದರೆ, ತೆಲುಗಿ​ನಲ್ಲಿ ಬಿಗ್ ಬಾಸ್​ಗೆ ಟಿಆರ್​ಪಿ ಕುಸಿಯುತ್ತಿದೆ.

ಬಿಗ್ ಬಾಸ್​ ಮನೆ ಒಳಗೆ ಯಾವ ಸ್ಪರ್ಧಿಗಳು ಬರುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಟಿಆರ್​ಪಿ ನಿರ್ಧಾರ ಆಗುತ್ತದೆ. ಇನ್ನು ವಾರಾಂತ್ಯದ ಎಪಿಸೋಡ್​ಗೆ ಹೆಚ್ಚಿನ ಟಿಆರ್​ಪಿ ಸಿಗುತ್ತದೆ. ಆದರೆ, ತೆಲುಗಿನಲ್ಲಿ ಈ ಶೋಗೆ ಟಿಆರ್​ಪಿ ಸಿಗುತ್ತಿಲ್ಲ. ಇದು ಸ್ಟಾರ್ ಮಾ ವಾಹಿನಯ ಚಿಂತೆಗೆ ಕಾರಣ ಆಗಿದೆ.

ಮೂಲಗಳ ಪ್ರಕಾರ ಮುಂದಿನ ವರ್ಷದಿಂದ ಬೇರೆ ಚಾನೆಲ್​ನಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಇದರ ಜತೆಗೆ ನಿರೂಪಕರನ್ನು ಬದಲಿಸಲು ಆಲೋಚನೆ ನಡೆದಿದೆ. ಅಕ್ಕಿನೇನಿ ನಾಗಾರ್ಜುನ ಬದಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಸಮಂತಾ ರುತ್ ಪ್ರಭು ಸೇರಿ ಅನೇಕರಿಗೆ ಈ ಶೋನ ನಡೆಸಿಕೊಟ್ಟ ಅನುಭವ ಇದೆ. ಅವರಲ್ಲಿ ಯಾರಿಗೆ ಮಣೆ ಹಾಕಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಸ್ಪರ್ಧಿಗಳ​ ಕುಟುಂಬದವರು; ಹೇಗಿತ್ತು ಸ್ಪರ್ಧಿಗಳ ರಿಯಾಕ್ಷನ್? 

ಇನ್ನು ಸ್ಪರ್ಧಿಗಳ ಆಯ್ಕೆಯಲ್ಲೂ ಹೆಚ್ಚಿನ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ಖ್ಯಾತ ಸೆಲೆಬ್ರಿಟಿಗಳನ್ನು ಮನೆ ಒಳಗೆ ಕಳುಹಿಸುವ ಆಲೋಚನೆ ಸದ್ಯಕ್ಕಿದೆ. ಹಾಗೆ ಮಾಡಿದ ಬಳಿಕವಾದರೂ ಶೋನ ಟಿಆರ್​ಪಿ ಹೆಚ್ಚಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ