AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ, ಪ್ರಕರಣ ದಾಖಲು

Bigg Boss: ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದೆ. ಬೆಲೆ ಬಾಳುವ ಬಟ್ಟೆ, ಆಭರಣಗಳನ್ನು ಹೊತ್ತೊಯ್ದಿದ್ದಾರೆಂದು ದೂರು ದಾಖಲಾಗಿದೆ.

ಬಿಗ್​ಬಾಸ್ ಸ್ಪರ್ಧಿ ಮೇಲೆ ಕಳ್ಳತನದ ಆರೋಪ, ಪ್ರಕರಣ ದಾಖಲು
ಮಂಜುನಾಥ ಸಿ.
|

Updated on: Dec 31, 2023 | 3:28 PM

Share

ಬಿಗ್​ಬಾಸ್ (BiggBoss) ಸ್ಪರ್ಧಿಯೊಬ್ಬರ ಮೇಲೆ ಕಳ್ಳತನದ ಆರೋಪ ಹೊರಿಸಲಾಗಿದೆ. ಈ ಬಗ್ಗೆ ಪ್ರಕರಣದ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಪ್ರಸಾರವಾಗುತ್ತಿರುವ ಹಿಂದಿಯ ಬಿಗ್​ಬಾಸ್ 17ರ ಸ್ಪರ್ಧಿ ಸನಾ ರಯೀಸ್ ಖಾನ್ ವಿರುದ್ಧ ಸೆಲೆಬ್ರಿಟಿ ಸ್ಪೈಲಿಸ್ಟ್ ಆಗಿರುವ ಖುಷ್ಬೂ ರಾವತ್ ಕಳ್ಳತನದ ಆರೋಪ ಹೊರಿಸಿದ್ದು, ದೂರು ಸಹ ದಾಖಲಿಸಿದ್ದಾರೆ.

ಸ್ವತಃ ವಕೀಲೆ ಸಹ ಆಗಿರುವ ಸನಾ ರಯೀಸ್ ಖಾನ್ ಬಿಗ್​ಬಾಸ್ 17 ರ ಸ್ಪರ್ಧಿಯಾಗಿ ಕೆಲ ವಾರ ಮನೆಯಲ್ಲಿದ್ದರು. ಕೆಲ ವಾರಗಳ ಹಿಂದೆ ಅವರು ಮನೆಯಿಂದ ಹೊರಗೆ ಬಂದಿದ್ದಾರೆ. ಸನಾ ರಯೀಸ್ ಖಾನ್ ಬಿಗ್​ಬಾಸ್ ಮನೆಯಲ್ಲಿದ್ದಾಗ ಅವರಿಗೆ ಉಡುಪು ಹಾಗೂ ಆಭರಣಗಳನ್ನು ಸ್ಟೈಲಿಸ್ಟ್ ಖುಷ್ಬೂ ರಾವತ್ ಕಳಿಸಿಕೊಡುತ್ತಿದ್ದರಂತೆ. ದುಬಾರಿ ಬೆಲೆಯ ಆಭರಣಗಳು, ಬಟ್ಟೆಗಳನ್ನು ಸನಾ ರಯೀಸ್ ಖಾನ್ ಅವರಿಗಾಗಿ ಖುಷ್ಬು ಅವರು ಕಳಿಸಿದ್ದರಂತೆ ಆದರೆ ಬಿಗ್​ಬಾಸ್​ನಿಂದ ಹೊರಗೆ ಬಂದ ಬಳಿಕ ಆ ಬಟ್ಟೆಗಳನ್ನು ಆಭರಣಗಳನ್ನು ಸನಾ ರಯೀಸ್ ಖಾನ್ ಮರಳಿಸಿಲ್ಲವಂತೆ.

ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ಖುಷ್ಬೂ ರಾವತ್, ‘‘ಕಳೆದ ನಾಲ್ಕು ವರ್ಷಗಳಿಂದಲೂ ನಾನು ಹಲವು ಬಿಗ್​ಬಾಸ್ ಸ್ಪರ್ಧಿಗಳಿಗೆ ಉಡುಪುಗಳನ್ನು ನೀಡುತ್ತಾ ಬಂದಿದ್ದೇನೆ. ಬೇರೆ-ಬೇರೆ ಕಡೆಗಳಿಂದ ಉಡುಪುಗಳನ್ನು ತರಿಸಿಕೊಂಡು ಅದಕ್ಕೆ ವರ್ಕ್ ಮಾಡಿಸಿ, ಅದಕ್ಕೆ ಒಪ್ಪುವ ಆಭರಣಗಳನ್ನು ಹುಡುಕುವುದು, ಮಾಡಿಸುವುದು ಇಷ್ಟೆಲ್ಲ ಶ್ರಮಪಟ್ಟು ಈ ಕೆಲಸ ಮಾಡುತ್ತಾ ಬರುತ್ತಿದ್ದೇನೆ. ಆದರೆ ಈ ವರ್ಷ ಸನಾ ರಯೀಸ್ ಖಾನ್ ಅವರಿಂದ ಆದಷ್ಟು ಕೆಟ್ಟ ಅನುಭವ ಯಾವಾಗಲೂ ಆಗಿಲ್ಲ’’ ಎಂದಿದ್ದಾರೆ.

ಇದನ್ನೂ ಓದಿ:ಬಿಗ್​ಬಾಸ್ ಗೆಲ್ಲುವ ಕ್ಷಮತೆ ಇರುವ ಸ್ಪರ್ಧಿ ಯಾರು? ಮನೆಯವರೇ ಕೊಟ್ಟರು ಉತ್ತರ

‘‘ಹಲವು ದುಬಾರಿ ಉಡುಗೆಗಳು, ಆಭರಣಗಳನ್ನು ನಾವು ಕಳಿಸಿಕೊಟ್ಟಿದ್ದೆವು. ಬಿಗ್​ಬಾಸ್​ ಮನೆಯಿಂದ ಹೊರಗೆ ಬಂದ ಬಳಿಕ ಆ ಬಟ್ಟೆಗಳು, ಆಭರಣಗಳನ್ನು ಸನಾ ರಯೀಸ್ ಖಾನ್ ಮರಳಿಸಿಲ್ಲ, ಅವರಿಗೆ ಅವರ ಸಹಾಯಕರಿಗೆ ಹಲವು ಬಾರಿ ಮನವಿ ಮಾಡಿದ ಬಳಿಕವೂ ನಮ್ಮ ವಸ್ತುಗಳು ನಮಗೆ ಸೇರಿಲ್ಲ. ಹಾಗಾಗಿ ಕಾನೂನಿನ ಮೊರೆ ಹೋಗದೆ ಬೇರೆ ದಾರಿಯೇ ಇಲ್ಲ. ಸನಾ ರಯೀಸ್ ಖಾನ್ ಅವರನ್ನು ಪ್ರೀತಿಸುವವರು ಇದನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸಿದ್ದೇನೆ’’ ಎಂದು ಬರೆದುಕೊಂಡಿದ್ದಾರೆ.

ಸನಾ ರಯೀಸ್ ಖಾನ್, ಬಿಗ್​ಬಾಸ್ ಮನೆಯ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಅಂಕಿತಾ ಲೋಖಂಡೆ ಪತಿ ವಿಕ್ಕಿ ಜೈನ್ ಜೊತೆ ಆತ್ಮೀಯವಾಗಿದ್ದಿದ್ದಕ್ಕೆ ಇವರು ಹೊರಗೆ ಚರ್ಚೆ ಹುಟ್ಟು ಹಾಕಿದ್ದರು. ಮನೆಯಲ್ಲಿಯೂ ಸಹ ಇದೇ ಕಾರಣಕ್ಕೆ ಇತರೆ ಸ್ಪರ್ಧಿಗಳಿಂದ ವಿರೋಧಕ್ಕೂ ಒಳಗಾದರು. ಅಲ್ಲದೆ, ಮನೆ ಕೆಲಸ ಮಾಡದೆ, ಮನೆಯವರಿಗೆ ರೇಷನ್ ಸಿಗದಂತೆ ಮಾಡಿದ್ದು ಸಹ ಸ್ಪರ್ಧಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್