ಈ ವಾರ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರ

ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ 'ಭಾಗ್ಯಲಕ್ಷ್ಮಿ' ಈಗ ಮುಕ್ತಾಯದ ಹಂತಕ್ಕೆ ತಲುಪಿದೆ. ಸಾವಿರಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿರುವ ಈ ಯಶಸ್ವಿ ಸೀರಿಯಲ್, ವೀಕ್ಷಕರಿಗೆ ಭಾವನಾತ್ಮಕ ವಿದಾಯ ಹೇಳಲು ಸಿದ್ಧವಾಗಿದೆ. ಭಾಗ್ಯ ತನ್ನ ಗಂಡನ ಮನೆಯವರ ಒಪ್ಪಿಗೆ, ಕನ್ನಿಕಾಳ ಪರಿವರ್ತನೆ, ಮತ್ತು ಕುಟುಂಬದ ಪುನರ್ಮಿಲನದಂತಹ ಪ್ರಮುಖ ಪ್ರಶ್ನೆಗಳಿಗೆ ಅಂತಿಮ ಸಂಚಿಕೆಗಳಲ್ಲಿ ಉತ್ತರ ನೀಡಲಿದೆ.

ಈ ವಾರ ಭಾಗ್ಯಲಕ್ಷ್ಮೀ’ ಧಾರಾವಾಹಿಯ ಕೊನೆಯ ಸಂಚಿಕೆ ಪ್ರಸಾರ
ಭಾಗ್ಯಲಕ್ಷ್ಮೀ
Image Credit source: Colors Kannada
Edited By:

Updated on: Jun 01, 2026 | 7:48 AM

ಕನ್ನಡ ಕಿರುತೆರೆ ವೀಕ್ಷಕರ ನೆಚ್ಚಿನ ಧಾರಾವಾಹಿಗಳಲ್ಲಿ ಒಂದಾದ, ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಸೀರಿಯಲ್ ‘ಭಾಗ್ಯಲಕ್ಷ್ಮೀ’ ಈಗ ತನ್ನ ಸುದೀರ್ಘ ಹಾಗೂ ಯಶಸ್ವಿ ಪಯಣವನ್ನು ಮುಗಿಸಲು ಸಜ್ಜಾಗಿದೆ. ಹೌದು, ಸಾವಿರಕ್ಕೂ ಹೆಚ್ಚು ಸಂಚಿಕೆಗಳ ಮೂಲಕ ಕನ್ನಡಿಗರ ಮನೆಮಾತಾಗಿದ್ದ ಈ ಧಾರಾವಾಹಿ ಈಗ ಮುಕ್ತಾಯದ ಹಂತಕ್ಕೆ ತಲುಪಿದ್ದು, ಅಂತಿಮ ಸಂಚಿಕೆಗಳು ಪ್ರಸಾರವಾಗುತ್ತಿವೆ.

ಕನ್ನಡ ಕಿರುತೆರೆಯಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿ, ವರ್ಷಗಳಿಂದ ಕರುನಾಡಿನ ಪ್ರೇಕ್ಷಕರ ಹೃದಯ ಆಳಿದ್ದ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ಈಗ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ತನ್ನ ಸ್ವಾಭಿಮಾನಕ್ಕಾಗಿ ಏನು ಬೇಕಾದರೂ ಮಾಡುವ ದಿಟ್ಟ ಹೆಣ್ಣುಮಗಳು ‘ಭಾಗ್ಯ’ಳ ಕಥೆ ಈಗ ಅಂತಿಮ ಘಟ್ಟಕ್ಕೆ ತಲುಪಿದ್ದು, ವಾಹಿನಿಯು ಇದರ ಕೊನೆಯ ಸಂಚಿಕೆಗಳ ಪ್ರೋಮೋವನ್ನು ಹಂಚಿಕೊಂಡಿದೆ.

ಹೌದು, ‘ಭಾಗ್ಯಲಕ್ಷ್ಮಿ’ ಧಾರಾವಾಹಿಯು ಕೇವಲ ಒಂದು ಕಥೆಯಾಗಿರದೆ, ಹೆಜ್ಜೆ ಹೆಜ್ಜೆಗೂ ಹೊಸ ದಾಖಲೆ ಬರೆಯುತ್ತಾ 1000ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿ ಯಶಸ್ವಿಯಾಗಿ ಮುನ್ನಡೆದಿತ್ತು. ಇಷ್ಟು ದಿನಗಳ ಕಾಲ ಗೃಹಿಣಿಯರ ಪಾಲಿನ ಸ್ಫೂರ್ತಿಯ ಸೆಲೆಯಾಗಿ, ಸ್ವಾಭಿಮಾನದ ಗಣಿಯಾಗಿ ಮೂಡಿಬಂದಿದ್ದ ಈ ಸೀರಿಯಲ್, ಇದೀಗ ತನ್ನ ‘ಹೆಮ್ಮೆಯ ಕೊನೆಯ ಹೆಜ್ಜೆ’ಯನ್ನು ಇಡುತ್ತಿದೆ.

ಭಾಗ್ಯ ತನ್ನ ಗಂಡನ ಮನೆಯವರ ಮೆಚ್ಚುಗೆಯನ್ನು ಪೂರ್ತಿಯಾಗಿ ಗಳಿಸುತ್ತಾಳಾ? ದಾರಿ ತಪ್ಪಿರುವ ಕನ್ನಿಕಾಳನ್ನು ಕೊನೆಗೂ ಸರಿದಾರಿಗೆ ತರುತ್ತಾಳಾ? ದೂರವಾಗಿದ್ದ ಮಗಳು ಮತ್ತೆ ಹತ್ತಿರವಾಗುತ್ತಾಳಾ? ಮತ್ತು ಕುಸುಮಾಳನ್ನು ಮತ್ತೆ ಮನೆಗೆ ಬರುವಂತೆ ಮಾಡುತ್ತಾಳಾ? ಇದೇ ಮೊದಲಾದ ಕುತೂಹಲಕಾರಿ ಪ್ರಶ್ನೆಗಳಿಗೆ ಈ ಅಂತಿಮ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ. ಒಟ್ಟಿನಲ್ಲಿ, ಇಷ್ಟು ದಿನಗಳ ಕಾಲ ವೀಕ್ಷಕರನ್ನು ರಂಜಿಸಿದ ಭಾಗ್ಯಳ ಈ ಸುಂದರ ಪಯಣಕ್ಕೆ ಈಗ ಅರ್ಥಪೂರ್ಣ ಅಂತ್ಯ ಸಿಗುವ ಸಮಯ ಹತ್ತಿರ ಬಂದಿದೆ.

ಇದನ್ನೂ ಓದಿ: ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ’ ಮೆಚ್ಚಿದ ಗೌತಮಿ ಜಾದವ್

‘ಭಾಗ್ಯಲಕ್ಷ್ಮಿ’ ಧಾರಾವಾಹಿಯ ಈ ರೋಮಾಂಚಕ ಅಂತಿಮ ಸಂಚಿಕೆಗಳು ಪ್ರತಿ ದಿನ ಸಂಜೆ 7 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us