AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ

Divya Uruduga - Aravind KP: ದಿವ್ಯಾ ಉರುಡುಗ ಹಾಗೂ ಅರವಿಂದ್ ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಕ್ಲೋಸ್​ ಆಗಿದ್ದಾರೆ. ದೊಡ್ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ಅವರು ಒಟ್ಟಿಗೆ ಇರುತ್ತಾರೆ. ಈ ಮಧ್ಯೆ ಅರವಿಂದ್-ದಿವ್ಯಾ ಒಡನಾಟ ಉಳಿದವರಿಗೆ ಕಿರಿಕಿರಿ ತಂದಿಡುತ್ತಿದೆ. ಇದನ್ನು ಶುಭಾ ಹೇಳಿಕೊಂಡಿದ್ದಾರೆ.

ದಿವ್ಯಾ ಉರುಡುಗ-ಅರವಿಂದ್ ಒಡನಾಟದಿಂದ ಮನೆಯವರಿಗೆ ಕಿರಿಕಿರಿ; ಎಲ್ಲರೆದುರು ಅಸಮಾಧಾನ ಹೊರಹಾಕಿದ ಶುಭಾ
ದಿವ್ಯಾ ಉರುಡುಗ
TV9 Web
| Edited By: |

Updated on:Jul 29, 2021 | 9:18 AM

Share

ಕನ್ನಡ ಬಿಗ್​ ಬಾಸ್ ಸೀಸನ್​ 8 ಆರಂಭವಾದ ಕೆಲವೇ ವಾರಗಳಲ್ಲಿ ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ ಕ್ಲೋಸ್ ಆಗಿದ್ದರು. ಅವರ ನಡುವೆ ಪ್ರೀತಿ ಇರೋದು ಸ್ಪಷ್ಟವಾಗಿದೆ. ಈ ಮಧ್ಯೆ ಅವರ ಒಡನಾಟದಿಂದ ಮನೆಯವರಿಗೆ ಸಾಕಷ್ಟು ಕಿರಿಕಿರಿ ಉಂಟಾಗುತ್ತಿದೆ. ಇದನ್ನು ಶುಭಾ ಪೂಂಜಾ ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ.

ದಿವ್ಯಾ ಉರುಡುಗ ಹಾಗೂ ಅರವಿಂದ್ ಇಬ್ಬರೂ ಬಿಗ್​ ಬಾಸ್​ ಮನೆಯಲ್ಲಿ ಕ್ಲೋಸ್​ ಆಗಿದ್ದಾರೆ. ದೊಡ್ಮನೆಯಲ್ಲಿ ಸಮಯ ಸಿಕ್ಕಾಗೆಲ್ಲ ಅವರು ಒಟ್ಟಿಗೆ ಇರುತ್ತಾರೆ. ಅರವಿಂದ್ ಮಾತನ್ನು ದಿವ್ಯಾ ಹೆಚ್ಚು ಕೇಳುತ್ತಾರೆ. ಅವರನ್ನು ಕಂಡರೆ ದಿವ್ಯಾಗೆ ಭಯ ಎನ್ನುವ ಮಾತು ಬಿಗ್​ ಬಾಸ್​ ಮನೆಯಲ್ಲಿ ಚಾಲ್ತಿಯಲ್ಲಿದೆ. ಈ ಮಧ್ಯೆ ಅರವಿಂದ್-ದಿವ್ಯಾ ಒಡನಾಟ ಉಳಿದವರಿಗೆ ಕಿರಿಕಿರಿ ತಂದಿಡುತ್ತಿದೆ. ಇದನ್ನು ಶುಭಾ ಹೇಳಿಕೊಂಡಿದ್ದಾರೆ.

ರಾತ್ರಿ ಲೈಟ್​ ಆಫ್​ ಆದ ನಂತರದಲ್ಲಿ ಎಲ್ಲರೂ ನಿದ್ರಿಸಬೇಕು. ಆದರೆ, ದಿವ್ಯಾ ಉರುಡುಗ  ಆ ರೀತಿ ಮಾಡುತ್ತಿಲ್ಲ. ಅರವಿಂದ್ ಬಳಿ ತೆರಳುವ ಅವರು ಸಣ್ಣ ಧ್ವನಿಯಲ್ಲಿ ಮಾತನಾಡುತ್ತಾರೆ. ಮನೆಯಲ್ಲಿ ಶಾಂತತೆ ಇರುವುದರಿಂದ ಅದು ದೊಡ್ಡದಾಗಿ ಕೇಳುತ್ತದೆ. ಇದು ಶುಭಾ ಹಾಗೂ ಪ್ರಶಾಂತ್​ ಸಂಬರಗಿಗೆ ಕಿರಿಕಿರಿ ತಂದಿದೆ. ಈ ಬಗ್ಗೆ ಅವರು ಓಪನ್​ ಆಗಿಯೇ ದೂರಿದ್ದಾರೆ.

‘ಅರವಿಂದ್​ ಗೊರಕೆ ಹೊಡೆಯುತ್ತಿರುತ್ತಾರೆ. ಆಗ ದಿವ್ಯಾ ಬಂದು ಅವರನ್ನು ಕರೆದು ಕರೆದು ಎಬ್ಬಿಸುತ್ತಾರೆ’ ಎಂದು ಪ್ರಶಾಂತ್​ ದೂರಿದರು. ಇದಕ್ಕೆ ಶುಭಾ ಧ್ವನಿಗೂಡಿಸಿದರು. ‘ಅರವಿಂದ್ ಸಣ್ಣದಾಗಿ ಮಾತನಾಡುತ್ತಾನೆ. ಅದು ಅಷ್ಟಾಗಿ ಕೇಳೋದಿಲ್ಲ. ಆದರೆ, ನೀನು ಪಿಸುಗುಡೋದು ದೊಡ್ಡದಾಗಿ ಕೇಳುತ್ತದೆ’ ಎಂದು ದಿವ್ಯಾಗೆ ಹೇಳಿದರು ಶುಭಾ.

‘ರಾತ್ರಿ ನಿದ್ದೆ ಬರೋ ಟೈಮ್​ನಲ್ಲಿ ಆ ರೀತಿ ಮಾತನಾಡಿದರೆ ನಿಜವಾಗಿಯೂ ಹಿಂಸೆ ಎನಿಸುತ್ತದೆ. ನಿತ್ಯ ಅಷ್ಟೊತ್ತು ಮಾತನಾಡಿರುತ್ತೀರಿ. ಹಾಗಿದ್ರೂ ರಾತ್ರಿ ಮತ್ತೇಕೆ ಮಾತನಾಡಬೇಕು?’ ಎಂದು ಶುಭಾ ಪ್ರಶ್ನೆ ಮಾಡಿದರು. ದಿವ್ಯಾ ಇನ್ನು ಆ ರೀತಿ ಆಗುವುದಿಲ್ಲ ಎಂದು ಭರವಸೆ ನೀಡಿದರು.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಿಂದ ಒಂದೇ ವಾರದಲ್ಲಿ ಎಲಿಮಿನೇಟ್​ ಆಗಲಿದ್ದಾರೆ ಮೂರು ಸ್ಪರ್ಧಿಗಳು?

ಬಿಗ್​ ಬಾಸ್​ ಮನೆಯಿಂದ ಕಾಣೆಯಾದ ಶುಭಾ ಪೂಂಜಾ; ಸ್ಪರ್ಧಿಗಳಿಗೆ ಮಿಡ್​ವೀಕ್​ ಟ್ವಿಸ್ಟ್​

Published On - 7:24 am, Thu, 29 July 21

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್