AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?

ಬಿಗ್​ ಬಾಸ್​ ಜರ್ನಿಯ 109ನೇ ದಿನದಲ್ಲಿ ವಿನಯ್​ ಗೌಡ ಅವರಿಗೆ ಡ್ರೋನ್​ ಪ್ರತಾಪ್​ ಸಿಕ್ಕಾಪಟ್ಟೆ ತಿರುಗೇಟು ನೀಡಿದ್ದಾರೆ. ಪ್ರತಾಪ್​ ಅವರ ಖಡಕ್​ ಮಾತುಗಳನ್ನು ಕೇಳಿದ ಬಳಿಕ ವಿನಯ್​ ಅವರು ಕಾರ್ತಿಕ್​ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು. ಆದರೆ, ‘ಪ್ರತಾಪ್​ ಗೆಲ್ಲುತ್ತಾನೆ ಅಂತ ತಮಾಷೆಗೂ ಹೇಳಬೇಡ’ ಎಂದಿದ್ದಾರೆ ಕಾರ್ತಿಕ್​ ಮಹೇಶ್​.

‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?
ಡ್ರೋನ್​ ಪ್ರತಾಪ್​, ವಿನಯ್​ ಗೌಡ
ಮದನ್​ ಕುಮಾರ್​
|

Updated on: Jan 25, 2024 | 5:30 PM

Share

ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಮತ್ತು ಡ್ರೋನ್​ ಪ್ರತಾಪ್ (Drone Prathap)​ ನಡುವೆ ಮೊದಲಿನಿಂದಲೂ ಕಿರಿಕ್​ ಆಗುತ್ತಲೇ ಇದೆ. ಕೊನೇ ವಾರದ ತನಕವೂ ಅದು ಮುಂದುವರಿದಿದೆ. ಡ್ರೋನ್​ ಪ್ರತಾಪ್​ ಅವರಿಗೆ ಜನರಿಂದ ಬೆಂಬಲ ಸಿಕ್ಕಿದೆ. ಹಾಗಾಗಿ ಅವರು ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಅಂತಿಮವಾಗಿ ಅವರೇ ಬಿಗ್​ ಬಾಸ್​ (Bigg Boss Kannada) ಟ್ರೋಫಿ ಗೆಲ್ಲಲಿ ಎಂದು ಅವರ ಬೆಂಬಲಿಗರು ಆಶಿಸುತ್ತಿದ್ದಾರೆ. ಆದರೆ ಡ್ರೋನ್​ ಪ್ರತಾಪ್​ ಬಗ್ಗೆ ವಿನಯ್​ ಗೌಡ (Vinay Gowda) ಅವರಿಗೆ ಸಾಕಷ್ಟು ಅಸಮಾಧಾನ ಇದೆ. ಹಾಗಿದ್ದರೂ ಕೂಡ ‘ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ವಿವರಣೆ.

109ನೇ ದಿನದಲ್ಲಿ ವಿನಯ್​ ಗೌಡ ಅವರಿಗೆ ಡ್ರೋನ್​ ಪ್ರತಾಪ್​ ಸಿಕ್ಕಾಪಟ್ಟೆ ತಿರುಗೇಟು ನೀಡಿದ್ದಾರೆ. ‘ನೀವು ಬಾತ್​ರೂಮ್​ನಲ್ಲಿ ಅತ್ತರೆ ಅದು ಪ್ರೀತಿ. ನಾನು ಅತ್ತರೆ ಸಿಂಪತಿ ಎನ್ನುತ್ತೀರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಆದರೆ ಅದು ಸಹಜ. ಆದರೆ ನಾನು ಹಳ್ಳಿ ಭಾಷೆ ಮಾತನಾಡಿದರೆ ಲೈಮ್​ಲೈಟ್​ಗಾಗಿ ಮಾಡಿದ್ದು ಎನ್ನುತ್ತೀರಿ’ ಎಂದು ಡ್ರೋನ್​ ಪ್ರತಾಪ್​ ಅವರು ಖಡಕ್​ ಮಾತುಗಳ ಬಾಣವನ್ನು ವಿನಯ್​ ಕಡೆಗೆ ಎಸೆದಿದ್ದಾರೆ. ಈ ಮಾತುಗಳನ್ನು ಕೇಳಿದ ಬಳಿಕ ವಿನಯ್​ ಅವರು ಕಾರ್ತಿಕ್​ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಮೇಲೆ ಇರುವ ಕೇಸ್​ ಒಂದಲ್ಲ, ಎರಡಲ್ಲ; ಎಲ್ಲವನ್ನೂ ವಿವರಿಸಿದ ಲಾಯರ್​

‘ಥರ್ಡ್​ ಕ್ಲಾಸ್​ ಥರ ಮಾತಾಡ್ತಾನೆ. ಬರೀ ನಾಟಕ ಆಡಿಕೊಂಡು ಇಲ್ಲಿಯ ತನಕ ಬಂದಿದ್ದಾನೆ. ಜನರು ಹಾಕಿರುವ ಭಿಕ್ಷೆ, ಅದನ್ನು ಒಪ್ಪಿಕೊಳ್ತೀನಿ ಅಂತ ಎಷ್ಟು ನಾಟಕ ಆಡ್ತಾನೋ. ಹೊರಗಡೆ ಜನರಿಗೆ ಈ ಥರ ನಾಟಕ ಕಾಣಿಸುತ್ತಿಲ್ಲ ಎಂದರೆ ನನಗೆ ತುಂಬ ನಿರಾಸೆ ಆಗತ್ತೆ. ನಾಟಕ ಆಡಿಕೊಂಡು ಗೆದ್ದರೂ ಗೆದ್ದು ಬಿಡುತ್ತಾನೆ’ ಎಂದು ವಿನಯ್​ ಗೌಡ ಅವರು ಹೇಳಿದರು. ‘ಏ.. ಹಾಗೆಲ್ಲ ಹೇಳಬೇಡ. ತಮಾಷೆಗೂ ಆ ಮಾತನ್ನು ಹೇಳಬೇಡ’ ಎಂದಿದ್ದಾರೆ ಕಾರ್ತಿಕ್​ ಮಹೇಶ್​.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ಗೆ ಮನೆಮಂದಿ ಚುಚ್ಚುಮಾತು; ಎಲ್ಲವನ್ನೂ ಕೇಳಿಸಿಕೊಂಡು ಕಣ್ಣೀರು ಹಾಕಿದ ಸಂಗೀತಾ

‘ಜನರು ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಇರುತ್ತಾರೆ. ಡ್ರೋನ್​ ಪ್ರತಾಪ್​ ಇಲ್ಲಿ ನಾಟಕ ಆಡಿದರೆ ಬಿಗ್​ ಬಾಸ್​ ಮುಗಿದ ಮೇಲೂ ನಾಟಕ ಮುಂದುವರಿಸಬೇಕು’ ಎಂದಿದ್ದಾರೆ ವಿನಯ್​. ಆರಂಭದಲ್ಲಿ ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​ ಅವರ ನಡುವೆ ಒಂದು ಅಂತರ ಇತ್ತು. ಆದರೆ ಇತ್ತೀಚಿನ ವಾರಗಳಲ್ಲಿ ಸಂಗೀತಾ ಮತ್ತು ಪ್ರತಾಪ್​ ಕ್ಲೋಸ್​ ಆಗಿದ್ದಾರೆ. ಇಬ್ಬರೂ ಸ್ಟ್ರಾಂಗ್​ ಸ್ಪರ್ಧಿಗಳಾಗಿದ್ದಾರೆ. ಬಿಗ್​ ಬಾಸ್​ ಶೋನಿಂದ ಪ್ರತಾಪ್​ ಅವರ ಜನಪ್ರಿಯತೆ ಹೆಚ್ಚಿದೆ. ಈ ಮೊದಲು ಇದ್ದ ಅವರ ಇಮೇಜ್​ ಬದಲಾವಣೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ಆನೇಕಲ್: ಗ್ರಾಮಕ್ಕೆ ನುಗ್ಗಿ ಕಾಡಾನೆಗಳ ನೈಟ್ ರೌಂಡ್ಸ್! ವಿಡಿಯೋ ವೈರಲ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಯತ್ನಾಳ್
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
ಬೆಂಕಿ ಹಚ್ಚುವ ಮುಲ್ಲಾಗಳಿಗೆ 6 ಸಾವಿರ ಕೊಡತ್ತೆ ಕಾಂಗ್ರೆಸ್ ಸರ್ಕಾರ: ಯತ್ನಾಳ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
Video: ಬೈಕ್​ನಲ್ಲಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಗೂಳಿ ದಾಳಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಗದಗ: ಮುಸುಕುಧಾರಿಗಳ ಅಟ್ಟಹಾಸ: ಮಾರಕಾಸ್ತ್ರ ಹಿಡಿದು ನಡುರಾತ್ರಿ ಎಂಟ್ರಿ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಬಿಸಿಲಲ್ಲಿ ಕುಸಿದುಬಿದ್ದ ತಾಯಿ, ಯಾರ್ಯಾರನ್ನೋ ಬೇಡಿ ನೀರು ತಂದ ಮಗ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಇರಾನ್​​ ಮೇಲೆ ಅಮೆರಿಕ-ಇಸ್ರೇಲ್ ದಾಳಿ, ಪ್ರಮುಖ ಸೇತುವೆ ಧ್ವಂಸ
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಮನೆ ಕಟ್ಟಬೇಕು ಎಂದುಕೊಂಡಿದ್ದೀರಾ? ಯಾವಾಗ ಅಡಿಪಾಯ ಹಾಕಿದರೆ ಉತ್ತಮ?
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಇಂದು ಈ ರಾಶಿಯವರ ಉದ್ಯೋಗದಲ್ಲಿ ಪ್ರಗತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ
ಕುಟುಂಬ ಸಮೇತ ಆತ್ಮಹತ್ಯೆ:ಸಚಿವರ ಮುಂದೆ ವಿಷದ ಬಾಟ್ಲು ಹಿಡಿದು ನಿಂತ ವ್ಯಕ್ತಿ