‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?

ಬಿಗ್​ ಬಾಸ್​ ಜರ್ನಿಯ 109ನೇ ದಿನದಲ್ಲಿ ವಿನಯ್​ ಗೌಡ ಅವರಿಗೆ ಡ್ರೋನ್​ ಪ್ರತಾಪ್​ ಸಿಕ್ಕಾಪಟ್ಟೆ ತಿರುಗೇಟು ನೀಡಿದ್ದಾರೆ. ಪ್ರತಾಪ್​ ಅವರ ಖಡಕ್​ ಮಾತುಗಳನ್ನು ಕೇಳಿದ ಬಳಿಕ ವಿನಯ್​ ಅವರು ಕಾರ್ತಿಕ್​ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು. ಆದರೆ, ‘ಪ್ರತಾಪ್​ ಗೆಲ್ಲುತ್ತಾನೆ ಅಂತ ತಮಾಷೆಗೂ ಹೇಳಬೇಡ’ ಎಂದಿದ್ದಾರೆ ಕಾರ್ತಿಕ್​ ಮಹೇಶ್​.

‘ಡ್ರೋನ್​ ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂದ ವಿನಯ್​ ಗೌಡ; ಈ ಮಾತಿಗೆ ಕಾರಣ ಏನು?
ಡ್ರೋನ್​ ಪ್ರತಾಪ್​, ವಿನಯ್​ ಗೌಡ
Follow us
|

Updated on: Jan 25, 2024 | 5:30 PM

ಬಿಗ್​ ಬಾಸ್​ ಮನೆಯಲ್ಲಿ ವಿನಯ್​ ಗೌಡ ಮತ್ತು ಡ್ರೋನ್​ ಪ್ರತಾಪ್ (Drone Prathap)​ ನಡುವೆ ಮೊದಲಿನಿಂದಲೂ ಕಿರಿಕ್​ ಆಗುತ್ತಲೇ ಇದೆ. ಕೊನೇ ವಾರದ ತನಕವೂ ಅದು ಮುಂದುವರಿದಿದೆ. ಡ್ರೋನ್​ ಪ್ರತಾಪ್​ ಅವರಿಗೆ ಜನರಿಂದ ಬೆಂಬಲ ಸಿಕ್ಕಿದೆ. ಹಾಗಾಗಿ ಅವರು ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿದ್ದಾರೆ. ಅಂತಿಮವಾಗಿ ಅವರೇ ಬಿಗ್​ ಬಾಸ್​ (Bigg Boss Kannada) ಟ್ರೋಫಿ ಗೆಲ್ಲಲಿ ಎಂದು ಅವರ ಬೆಂಬಲಿಗರು ಆಶಿಸುತ್ತಿದ್ದಾರೆ. ಆದರೆ ಡ್ರೋನ್​ ಪ್ರತಾಪ್​ ಬಗ್ಗೆ ವಿನಯ್​ ಗೌಡ (Vinay Gowda) ಅವರಿಗೆ ಸಾಕಷ್ಟು ಅಸಮಾಧಾನ ಇದೆ. ಹಾಗಿದ್ದರೂ ಕೂಡ ‘ಪ್ರತಾಪ್​ ಗೆದ್ದರೂ ಗೆಲ್ಲಬಹುದು’ ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆ ಇಲ್ಲಿದೆ ವಿವರಣೆ.

109ನೇ ದಿನದಲ್ಲಿ ವಿನಯ್​ ಗೌಡ ಅವರಿಗೆ ಡ್ರೋನ್​ ಪ್ರತಾಪ್​ ಸಿಕ್ಕಾಪಟ್ಟೆ ತಿರುಗೇಟು ನೀಡಿದ್ದಾರೆ. ‘ನೀವು ಬಾತ್​ರೂಮ್​ನಲ್ಲಿ ಅತ್ತರೆ ಅದು ಪ್ರೀತಿ. ನಾನು ಅತ್ತರೆ ಸಿಂಪತಿ ಎನ್ನುತ್ತೀರಿ. ನಿಮ್ಮ ಸ್ವಭಾವದಲ್ಲಿ ಬದಲಾವಣೆ ಆದರೆ ಅದು ಸಹಜ. ಆದರೆ ನಾನು ಹಳ್ಳಿ ಭಾಷೆ ಮಾತನಾಡಿದರೆ ಲೈಮ್​ಲೈಟ್​ಗಾಗಿ ಮಾಡಿದ್ದು ಎನ್ನುತ್ತೀರಿ’ ಎಂದು ಡ್ರೋನ್​ ಪ್ರತಾಪ್​ ಅವರು ಖಡಕ್​ ಮಾತುಗಳ ಬಾಣವನ್ನು ವಿನಯ್​ ಕಡೆಗೆ ಎಸೆದಿದ್ದಾರೆ. ಈ ಮಾತುಗಳನ್ನು ಕೇಳಿದ ಬಳಿಕ ವಿನಯ್​ ಅವರು ಕಾರ್ತಿಕ್​ ಎದುರು ತಮ್ಮ ಅನಿಸಿಕೆ ಹಂಚಿಕೊಂಡರು.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ ಮೇಲೆ ಇರುವ ಕೇಸ್​ ಒಂದಲ್ಲ, ಎರಡಲ್ಲ; ಎಲ್ಲವನ್ನೂ ವಿವರಿಸಿದ ಲಾಯರ್​

‘ಥರ್ಡ್​ ಕ್ಲಾಸ್​ ಥರ ಮಾತಾಡ್ತಾನೆ. ಬರೀ ನಾಟಕ ಆಡಿಕೊಂಡು ಇಲ್ಲಿಯ ತನಕ ಬಂದಿದ್ದಾನೆ. ಜನರು ಹಾಕಿರುವ ಭಿಕ್ಷೆ, ಅದನ್ನು ಒಪ್ಪಿಕೊಳ್ತೀನಿ ಅಂತ ಎಷ್ಟು ನಾಟಕ ಆಡ್ತಾನೋ. ಹೊರಗಡೆ ಜನರಿಗೆ ಈ ಥರ ನಾಟಕ ಕಾಣಿಸುತ್ತಿಲ್ಲ ಎಂದರೆ ನನಗೆ ತುಂಬ ನಿರಾಸೆ ಆಗತ್ತೆ. ನಾಟಕ ಆಡಿಕೊಂಡು ಗೆದ್ದರೂ ಗೆದ್ದು ಬಿಡುತ್ತಾನೆ’ ಎಂದು ವಿನಯ್​ ಗೌಡ ಅವರು ಹೇಳಿದರು. ‘ಏ.. ಹಾಗೆಲ್ಲ ಹೇಳಬೇಡ. ತಮಾಷೆಗೂ ಆ ಮಾತನ್ನು ಹೇಳಬೇಡ’ ಎಂದಿದ್ದಾರೆ ಕಾರ್ತಿಕ್​ ಮಹೇಶ್​.

ಇದನ್ನೂ ಓದಿ: ಡ್ರೋನ್​ ಪ್ರತಾಪ್​ಗೆ ಮನೆಮಂದಿ ಚುಚ್ಚುಮಾತು; ಎಲ್ಲವನ್ನೂ ಕೇಳಿಸಿಕೊಂಡು ಕಣ್ಣೀರು ಹಾಕಿದ ಸಂಗೀತಾ

‘ಜನರು ಎಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಇರುತ್ತಾರೆ. ಡ್ರೋನ್​ ಪ್ರತಾಪ್​ ಇಲ್ಲಿ ನಾಟಕ ಆಡಿದರೆ ಬಿಗ್​ ಬಾಸ್​ ಮುಗಿದ ಮೇಲೂ ನಾಟಕ ಮುಂದುವರಿಸಬೇಕು’ ಎಂದಿದ್ದಾರೆ ವಿನಯ್​. ಆರಂಭದಲ್ಲಿ ಸಂಗೀತಾ ಶೃಂಗೇರಿ ಮತ್ತು ಡ್ರೋನ್​ ಪ್ರತಾಪ್​ ಅವರ ನಡುವೆ ಒಂದು ಅಂತರ ಇತ್ತು. ಆದರೆ ಇತ್ತೀಚಿನ ವಾರಗಳಲ್ಲಿ ಸಂಗೀತಾ ಮತ್ತು ಪ್ರತಾಪ್​ ಕ್ಲೋಸ್​ ಆಗಿದ್ದಾರೆ. ಇಬ್ಬರೂ ಸ್ಟ್ರಾಂಗ್​ ಸ್ಪರ್ಧಿಗಳಾಗಿದ್ದಾರೆ. ಬಿಗ್​ ಬಾಸ್​ ಶೋನಿಂದ ಪ್ರತಾಪ್​ ಅವರ ಜನಪ್ರಿಯತೆ ಹೆಚ್ಚಿದೆ. ಈ ಮೊದಲು ಇದ್ದ ಅವರ ಇಮೇಜ್​ ಬದಲಾವಣೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ