AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸದಾಶಿವ ನಗರದಲ್ಲಿ ಮನೆ ಇದೆ, ಇದು 40 ಸಾವಿರ ರೂಪಾಯಿ ಬನಿಯನ್’; ಆಸ್ತಿ ವಿವರ ಹೇಳಿದ ಗಿಲ್ಲಿ ನಟ

ಬಿಗ್ ಬಾಸ್‌ನಲ್ಲಿ ರಿಷಾ ಸಿಂಪತಿ ಕಾರ್ಡ್ ಆರೋಪಕ್ಕೆ ಗಿಲ್ಲಿ, ತಾನು ಶ್ರೀಮಂತ ಎಂದು ಹೇಳಿದ್ದಾರೆ. "ಸದಾಶಿವನಗರದಲ್ಲಿ ಮನೆ, 40 ಸಾವಿರ ರೂಪಾಯಿ ಬನಿಯನ್, ಇಂಗ್ಲೆಂಡ್ ಪ್ಯಾಂಟ್ ಇದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಗಿಲ್ಲಿ ಮೂಲತಃ ರೈತಾಪಿ ಕುಟುಂಬದವರು. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಕಷ್ಟಗಳನ್ನು ಅನುಭವಿಸಿದ್ದಾರೆ.

‘ಸದಾಶಿವ ನಗರದಲ್ಲಿ ಮನೆ ಇದೆ, ಇದು 40 ಸಾವಿರ ರೂಪಾಯಿ ಬನಿಯನ್’; ಆಸ್ತಿ ವಿವರ ಹೇಳಿದ ಗಿಲ್ಲಿ ನಟ
ಗಿಲ್ಲಿ ನಟ
ರಾಜೇಶ್ ದುಗ್ಗುಮನೆ
|

Updated on: Nov 04, 2025 | 1:15 PM

Share

ಬಿಗ್ ಬಾಸ್ (Bigg Boss) ಮನೆಯಲ್ಲಿ ಸಿಂಪತಿ ಕಾರ್ಡ್ ಚೆನ್ನಾಗಿ ಕೆಲಸ ಮಾಡುತ್ತದೆ ಅನ್ನೋದು ಎಲ್ಲರಿಗೂ ಗೊತ್ತು. ಕೆಲವರು ಇದನ್ನು ಉದ್ದೇಶ ಪೂರ್ವಕವಾಗಿ ಮಾಡಿದರೆ, ಇನ್ನೂ ಕೆಲವರು ತಾವು ಇರೋದೇ ಹೀಗೆ ಎಂದು ಸಿಂಪಲ್ ಆಗಿರುತ್ತಾರೆ. ಕಳೆದ ಬಾರಿ ಬಿಗ್ ಬಾಸ್ ಮನೆಯಲ್ಲಿದ್ದ ಹನುಮಂತ ಲುಂಗಿ, ಶರ್ಟ್​ನಲ್ಲೇ ಸೀಸನ್ ಕಳೆದರು. ಅವರು ವಿನ್ ಕೂಡ ಆದರು. ಈ ಬಾರಿ ಗಿಲ್ಲಿ ನಟ ಅವರು, ಬನಿಯನ್​ನಲ್ಲೇ ಇರುತ್ತಿದ್ದಾರೆ. ಇದಕ್ಕೆ ರಿಷಾ ಬೇರೆ ಅರ್ಥ ಕೊಟ್ಟರು. ಅವರಿಗೆ ಗಿಲ್ಲಿ ಕೌಂಟರ್ ಕೊಟ್ಟಿದ್ದಾರೆ.

ಗಿಲ್ಲಿ ಹಾಗೂ ರಿಷಾ ಮಧ್ಯೆ ಸಾಕಷ್ಟು ಕಿತ್ತಾಟ ನಡೆದವು. ಗಿಲ್ಲಿ ಮೇಲೆ ಕೈ ಕೂಡ ಮಾಡಿದ್ದಾರೆ ರಿಷಾ. ಈ ವಿಚಾರದಲ್ಲಿ ಯಾವ ರೀತಿಯಲ್ಲಿ ಅವರಿಗೆ ಶಿಕ್ಷೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಹೀಗಿರುವಾಗಲೇ ‘ನೀನು ಸಿಂಪತಿಗಿಟ್ಟಿಸಿಕೊಳ್ಳಲು ಬನಿಯನ್ ಹಾಕಿ ಓಡಾಡ್ತೀಯಾ’ ಎಂದು ರಿಷಾ ಹೇಳಿದರು. ಇದಕ್ಕೆ ಗಿಲ್ಲಿ ಉತ್ತರಿಸಿದ್ದಾರೆ.

‘ನಾನು ಶ್ರೀಮಂತ. ಶ್ರೀಮಂತರೂ ಬನಿಯನ್ ಹಾಕ್ತಾರೆ. ನಮ್ಮ ಅಪ್ಪಂದು ಐಟಿ ಕಂಪನಿ ಇದೆ. 500 ಶಿಪ್ ಇದೆ. 800 ಗೋವುಗಳು ಇವೆ. ಬೆಂಗಳೂರಿನ ಸದಾಶಿವನಗರದಲ್ಲಿ ನಾಲ್ಕು ಮನೆ ಇದೆ. ನಾವು ಫುಲ್ ಸೆಟಲ್ಡ್’ ಎಂದರು ಗಿಲ್ಲಿ. ಆ ಬಳಿಕ ಬಟ್ಟೆಗಳ ಬೆಲೆ ಹೇಳಿದರು. ‘ಈ ಬನಿಯನ್ ಬೆಲೆ 40 ಸಾವಿರ ರೂಪಾಯಿ. ಇದು ಇಂಗ್ಲೆಂಡ್ ಪ್ಯಾಂಟ್. ಇದನ್ನು ತೊಳಿಯಬೇಕು ಎಂದಿಲ್ಲ. ಕುಡುಗಿದ್ರೆ ಕೊಳೆ ಉದುರಿ ಹೋಗುತ್ತದೆ’ ಎಂದು ರಿಷಾ ಗೌಡಗೆ ಟಾಂಟ್ ಕೊಟ್ಟರು. ಈ ವಿಡಿಯೋನ ಗಿಲ್ಲಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ‘ನಿನ್ನ ಪಾಡಿಗೆ ನೀನಿರು, ನನ್ನ ಪಾಡಿಗೆ ನಾನಿರ್ತೀನಿ’; ಸೂರಜ್​ಗೆ ನೇರವಾಗಿ ಹೇಳಿದ ರಾಶಿಕಾ

ಗಿಲ್ಲಿ ಸಾಕಷ್ಟು ಕಷ್ಟ ನೋಡಿದವರು. ಅವರು ರೈತಾಪಿ ಹಿನ್ನೆಲೆಯಿಂದ ಬಂದವರು. ಬೆಂಗಳೂರಿನಲ್ಲಿ ಅವರು ಒಂದು ಸಣ್ಣ ರೂಂನಲ್ಲಿ ಬಾಡಿಗೆ ಇದ್ದಾರೆ. ಲಗ್ಗೇರಿ ಬಳಿ ಅವರ ಬಾಡಿಗೆ ಮನೆ ಇದೆ. ಕಲಾ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರವನ್ನು ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ?
ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ರೋಹಿಣಿ ನಕ್ಷತ್ರದಲ್ಲಿ ಚಂದ್ರ ಸಂಚಾರ: ಇದಿನ ರಾಶಿ ಭವಿಷ್ಯ ವಿವರಣೆ ಇಲ್ಲಿದೆ
ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ
ವಂದೇ ಮಾತರಂ ರಾಷ್ಟ್ರಗೀತೆಯಾಗಬೇಕಿತ್ತು; ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದ
ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ
ಬೇರೊಬ್ಬರೊಂದಿಗೆ ಓಡಿಹೋದ ಹೆಂಡ್ತಿ: ಮರ್ಯಾದೆಗೆ ಹೆದರಿ ಪ್ರಾಣ ಬಿಟ್ಟ ಪತಿ
ಇದು ಕೊನೆ ಎಚ್ಚರಿಕೆ: ಸರ್ಕಾರಕ್ಕೆ ಮತ್ತೊಂದು ಡೆಡ್​​ಲೈನ್ ನೀಡಿದ ರೈತರು
ಇದು ಕೊನೆ ಎಚ್ಚರಿಕೆ: ಸರ್ಕಾರಕ್ಕೆ ಮತ್ತೊಂದು ಡೆಡ್​​ಲೈನ್ ನೀಡಿದ ರೈತರು
ಬೆಳಗಾವಿ ಕಬ್ಬು ಬೆಳೆಗಾರರ ಕಿಚ್ಚು: ಸ್ಥಳಕ್ಕೆ ಓಡಿ ಬಂದ ಸಚಿವ ಹೇಳಿದ್ದೇನು?
ಬೆಳಗಾವಿ ಕಬ್ಬು ಬೆಳೆಗಾರರ ಕಿಚ್ಚು: ಸ್ಥಳಕ್ಕೆ ಓಡಿ ಬಂದ ಸಚಿವ ಹೇಳಿದ್ದೇನು?
ರಾಹುಲ್, ಲಾಲುಗೆ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ
ರಾಹುಲ್, ಲಾಲುಗೆ ಸೀತಾ ಮಂದಿರ ನಿರ್ಮಾಣ ತಡೆಯಲು ಸಾಧ್ಯವಿಲ್ಲ; ಅಮಿತ್ ಶಾ
8 ದಿನ ಬಳಿಕ ಧರಣಿ ಸ್ಥಳಕ್ಕೆ ಬಂದ ಸಚಿವರ ವಿರುದ್ಧ ರೊಚ್ಚಿಗೆದ್ದ ರೈತರು
8 ದಿನ ಬಳಿಕ ಧರಣಿ ಸ್ಥಳಕ್ಕೆ ಬಂದ ಸಚಿವರ ವಿರುದ್ಧ ರೊಚ್ಚಿಗೆದ್ದ ರೈತರು
ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ಯಶ್: ಪುತ್ರನಿಗೆ ಹಣ ಸಹಾಯ
ಹರೀಶ್​​ ರಾಯ್ ಅಂತಿಮ ದರ್ಶನ ಪಡೆದ ಯಶ್: ಪುತ್ರನಿಗೆ ಹಣ ಸಹಾಯ
106 ಮೀ. ಉದ್ದದ ಸಿಕ್ಸರ್ ಬಾರಿಸಿದ ಶಿವಂ ದುಬೆ
106 ಮೀ. ಉದ್ದದ ಸಿಕ್ಸರ್ ಬಾರಿಸಿದ ಶಿವಂ ದುಬೆ