AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಲಿಮಿನೇಟ್ ಆದ ವ್ಯಕ್ತಿಯ ಮೇಲಿನ ವಿಶೇಷ ಪ್ರೀತಿಗೆ ಅವರ ವಸ್ತುವನ್ನು ಎತ್ತಿಟ್ಟುಕೊಂಡ ಹಂಸಾ  

ಜಗದೀಶ್ ಅವರು ಹಂಸಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದರು. ಇದು ಸಾಕಷ್ಟು ಶಾಕಿಂಗ್ ಎನಿಸಿತ್ತು. ಇದನ್ನು ಇಡೀ ಮನೆ ಖಂಡಿಸಿತು. ಸಂದರ್ಭದಲ್ಲಿ ರಂಜಿತ್ ಅವರು ಜಗದೀಶ್​ನ ತಳ್ಳಿದ್ದರು. ಹೀಗಾಗಿ, ಬಿಗ್ ಬಾಸ್ ಮನೆಯಿಂದ ಇಬ್ಬರನ್ನೂ ಹೊರಕ್ಕೆ ಹಾಕಲಾಗಿದೆ.

ಎಲಿಮಿನೇಟ್ ಆದ ವ್ಯಕ್ತಿಯ ಮೇಲಿನ ವಿಶೇಷ ಪ್ರೀತಿಗೆ ಅವರ ವಸ್ತುವನ್ನು ಎತ್ತಿಟ್ಟುಕೊಂಡ ಹಂಸಾ  
ಹಂಸಾ
ರಾಜೇಶ್ ದುಗ್ಗುಮನೆ
|

Updated on:Oct 19, 2024 | 6:51 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ವಾರದ ಮಧ್ಯವೇ ಎಲಿಮಿನೇಷನ್ ನಡೆದು ಹೋಗಿದೆ. ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಜಗದೀಶ್ ಅವರು ಅವಾಚ್ಯ ಶಬ್ದ ಬಳಕೆ ಮಾಡಿ ಎಲಿಮಿನೇಟ್ ಆದರೆ, ರಂಜಿತ್ ಅವರು ಜಗದೀಶ್​ನ ತಳ್ಳಿದ ಕಾರಣಕ್ಕೆ ಹೊರಕ್ಕೆ ಹೋಗಿದ್ದಾರೆ. ರಂಜಿತ್ ಅವರ ಬ್ಯಾಗ್​ನಿಂದ ಒಂದು ವಿಶೇಷ ವಸ್ತುವನ್ನು ಹಂಸಾ ನೆನಪಿಗಾಗಿ ಎತ್ತಿಟ್ಟುಕೊಂಡಿದ್ದಾರೆ.

ಜಗದೀಶ್ ಅವರು ಹಂಸಾ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದರು. ಇದು ಸಾಕಷ್ಟು ಶಾಕಿಂಗ್ ಎನಿಸಿತ್ತು. ಇದನ್ನು ಇಡೀ ಮನೆ ಖಂಡಿಸಿತು. ಆದಾಗ್ಯೂ ಜಗದೀಶ್ ಅವರು ಸ್ತಿಮಿತತೆ ಕಳೆದುಕೊಂಡು ಬಾಯಿಗೆ ಬಂದಂತೆ ಹೇಳುತ್ತಲೇ ಹೋದರು. ಈ ಸಂದರ್ಭದಲ್ಲಿ ರಂಜಿತ್ ಅವರು ಜಗದೀಶ್​ನ ತಳ್ಳಿದ್ದರು. ಹೀಗಾಗಿ, ಬಿಗ್ ಬಾಸ್ ಮನೆಯಿಂದ ಇಬ್ಬರನ್ನೂ ಹೊರಕ್ಕೆ ಹಾಕಲಾಗಿದೆ.

ಬಿಗ್ ಬಾಸ್​ನಿಂದ ಮೊದಲು ಹೊರ ಹೋಗಿದ್ದು ಜಗದೀಶ್. ಆಗ ಎಲ್ಲರೂ ಖುಷಿಯಿಂದ ಕೇಕೆ ಹಾಕಿದರು. ಆದರೆ, ರಂಜಿತ್ ಕೂಡ ಎಲಿಮಿನೇಟ್ ಆಗುತ್ತಾರೆ ಎಂದು ಅಲ್ಲಿದ್ದ ಯಾರೆಂದರೆ ಯಾರೂ ಊಹಿಸಿರಲಿಲ್ಲ. ಅವರು ಹೊರ ಹೋಗುತ್ತಿದ್ದಂತೆ ಎಲ್ಲರೂ ಬಿಗ್ ಬಾಸ್ ಬಳಿ ಮನವಿ ಮಾಡಿದರು. ಆ ಬಳಿಕ ದೊಡ್ಮನೆಯಲ್ಲಿ ಎಲ್ಲರೂ ಕಣ್ಣೀರು ಹಾಕಿದರು.

ಇದನ್ನೂ ಓದಿ: ಇಡೀ ಮನೆಗೆ ಕಣ್ಣೀರು ತರಿಸಿದ ಶಾಕಿಂಗ್ ಎಲಿಮಿನೇಷನ್; ಇದನ್ನು ಯಾರೂ ಊಹಿಸಿರಲಿಲ್ಲ

ರಂಜಿತ್ ಅವರು ಹೊರ ಹೋದ ಬಳಿಕ ಅವರ ಬ್ಯಾಗ್​ನ ಪ್ಯಾಕ್ ಮಾಡಿ ಇಡಬೇಕಿತ್ತು. ಅಂತೆಯೇ ಎಲ್ಲರೂ ರಂಜಿತ್ ಬ್ಯಾಗ್​ನ ಪ್ಯಾಕ್ ಮಾಡುತ್ತಿದ್ದರು. ಆಗ ಅಲ್ಲಿಗೆ ಬಂದ ಹಂಸಾ ಅವರು ರಂಜಿತ್ ಅವರ ವುಲ್ಲನ್ ಕ್ಯಾಪ್​ನ ತೆಗೆದುಕೊಂಡರು. ಚಳಿ ಆಗುವ ಸಂದರ್ಭದಲ್ಲಿ ಈ ಕ್ಯಾಪ್​ನ ರಂಜಿತ್ ಧರಿಸುತ್ತಿದ್ದರು. ಹೊರ ಬಂದ ಬಳಿಕ ಈ ಕ್ಯಾಪ್​ನ ಕೊಡೋದಾಗಿ ಅವರು ಹೇಳಿದ್ದಾರೆ. ಅಷ್ಟೇ ಅಲ್ಲ ರಂಜಿತ್ ಮೇಲಿನ ವಿಶೇಷ ಪ್ರೀತಿಗೆ ಅವರು ಕ್ಯಾಪ್​ನ ಸದಾ ಧರಿಸಿರುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:50 am, Sat, 19 October 24

ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್