AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಂತನ ವಿರುದ್ಧ ಗಂಭೀರ ಆರೋಪ ಮಾಡಿದ ಗೌತಮಿ; 3 ಗಂಟೆ ಆಟ ಆಡಿ ಸಾಬೀತು ಮಾಡಿದ ಸ್ಪರ್ಧಿ

ಈ ವಾರ ಗೌತಮಿ ಹಾಗೂ ಹನುಮಂತ ಒಟ್ಟಾಗಿ ಆಟ ಆಡಿದ್ದರು. ಬಿಗ್ ಬಾಸ್ ಜೋಡಿಯನ್ನು ಬದಲಿಸುವ ಆಯ್ಕೆಯನ್ನು ಗೌತಮಿಗೆ ನೀಡಿದ್ದರು. ಆಗ ಹನುಮಂತನ ಬಗ್ಗೆ ಗೌತಮಿ ಕೆಲ ತಕರಾರರನ್ನು ತೆಗೆದಿದ್ದರು. ಈಗ ಟಾಸ್ಕ್ ಆಡುವ ಮೂಲಕ ಹನುಮಂತ ಇದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ.

ಹನುಮಂತನ ವಿರುದ್ಧ ಗಂಭೀರ ಆರೋಪ ಮಾಡಿದ ಗೌತಮಿ; 3 ಗಂಟೆ ಆಟ ಆಡಿ ಸಾಬೀತು ಮಾಡಿದ ಸ್ಪರ್ಧಿ
ಹನುಮಂತ
ರಾಜೇಶ್ ದುಗ್ಗುಮನೆ
|

Updated on:Nov 15, 2024 | 7:47 AM

Share

ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಬೇರೆಯದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸ್ಪರ್ಧಿಗಳ ಜೊತೆ ಚೆನ್ನಾಗಿ ಬೆರೆತು ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಹನುಮಂತ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 3 ಗಂಟೆ ಆಟ ಆಡಿದ್ದಾರೆ. ಗೌತಮಿ ಅವರು ಮಾಡಿದ ಆರೋಪ ಸುಳ್ಳು ಎಂಬುದನ್ನು ಅವರು ಸಾಬೀತು ಮಾಡಿ ತೋರಿಸಿದ್ದಾರೆ. ಅವರ ಆಟಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬಂದಿದೆ.

ಎರಡು ಡಬ್ಬಿಯ ಮಾದರಿಯ ವಸ್ತುವನ್ನು ಇಡಲಾಗಿತ್ತು. ಅದರ ಮೇಲೆ ಸ್ಪರ್ಧಿಗಳು ಕೂರಬೇಕು. ಆ ಬಳಿಕ ಬಾಕ್ಸ್ ಒಂದನ್ನು ನೀಡಲಾಗುತ್ತದೆ. ಆ ಬಾಕ್ಸ್​ನ ಕಾಲಿನಲ್ಲಿ ಒತ್ತಿ ಹಿಡಿದುಟ್ಟುಕೊಳ್ಳಬೇಕು. ಇದನ್ನು ಹನುಮಂತ ಹಾಗೂ ಗೌತಮಿ ಉತ್ತಮವಾಗಿ ಆಟ ಆಡಿದ್ದಾರೆ. ಇಬ್ಬರೂ ಹೊಂದಾಣಿಕೆಯ ಆಟ ಆಡಿ ಇದನ್ನು ಗೆದ್ದಿದ್ದಾರೆ ಮತ್ತು 200 ಅಂಕಗಳನ್ನು ಪಡೆದಿದ್ದಾರೆ.

ಈ ವಾರ ಗೌತಮಿ ಹಾಗೂ ಹನುಮಂತ ಒಟ್ಟಾಗಿ ಆಟ ಆಡಿದ್ದರು. ಬಿಗ್ ಬಾಸ್ ಜೋಡಿಯನ್ನು ಬದಲಿಸುವ ಆಯ್ಕೆಯನ್ನು ಗೌತಮಿಗೆ ನೀಡಿದ್ದರು. ಆಗ ಹನುಮಂತನ ಬಗ್ಗೆ ಗೌತಮಿ ಕೆಲ ತಕರಾರರನ್ನು ತೆಗೆದಿದ್ದರು. ‘ಹನುಮಂತ ಮೂಡಿ. ಅವನಿಗೆ ನಾವು ಹೇಳಿದರೆ ಮಾಡುವುದಿಲ್ಲ. ಅವನಿಗೆ ಮಾಡಬೇಕು ಎನಿಸಿದರೆ ಮಾತ್ರ ಮಾಡುತ್ತಾನೆ. ಅವನಿಗೆ ಟಾಸ್ಕ್ ಗೆಲ್ಲಲೇಬೇಕು ಎಂಬ ಛಲವೆಲ್ಲ ಇಲ್ಲ’ ಎಂದಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್’ ಮನೆಗೆ ‘ರಾಮಾಚಾರಿ’ ಜೋಡಿ; ಕುರಿನ ಕರೆದಂತೆ ಚಾರುನ ಕರೆದ ಹನುಮಂತ

ಈಗ ಟಾಸ್ಕ್ ಆಡುವ ಮೂಲಕ ಹನುಮಂತ ಇದನ್ನು ಸುಳ್ಳು ಎಂದು ಸಾಬೀತು ಮಾಡಿದ್ದಾರೆ. ಈ ರೀತಿ ಕಾಲಿನಲ್ಲೇ ಡಬ್ಬಾನ ಹಿಡಿದು ಹನುಮಂತ ಹಾಗೂ ಗೌತಮಿ ಬರೋಬ್ಬರಿ 3 ಗಂಟೆ ಇದ್ದರು ಅನ್ನೋದು ವಿಶೇಷ. ಈ ಮೂಲಕ ಹನುಮಂತ ಕೇವಲ ಮನರಂಜನೆ ಮಾತ್ರವಲ್ಲ ಆಟವನ್ನೂ ಚೆನ್ನಾಗಿ ಆಡುತ್ತೇನೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಳೆದ ವಾರ ಅವರು ಕ್ಯಾಪ್ಟನ್ ಆಗಿದ್ದರು. ಈ ವೇಳೆ ಉತ್ತಮ ಕ್ಯಾಪ್ಟನ್ಸಿ ಮೂಲಕ ಅವರು ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಈ ವಾರ ಆಟದ ಮೂಲಕ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:58 am, Fri, 15 November 24

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?