AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿ ತೊಳೆಯುವ ಕೆಲಸ; ಪ್ರತಿ ದಿನ 10 ಸಾವಿರ ಸಂಬಳ: ಇಲ್ಲಿದೆ ಬಿಸ್ನೆಸ್ ಐಡಿಯಾ

ಒಂದು ನಾಯಿಗೆ ಸ್ನಾನ ಮಾಡಿಸಲು 1200 ರೂಪಾಯಿ ಸಂಬಳ. ದಿನಕ್ಕೆ 10 ನಾಯಿಯ ಮೈ ತೊಳೆದರೆ 10 ಸಾವಿರ ಸಂಬಳ ಸಿಗುತ್ತದೆ. ಇಂಥ ಒಂದು ಬೆಸ್ಟ್​ ಬಿಸ್ನೆಸ್​ ಐಡಿಯಾ ಬಗ್ಗೆ ಚರ್ಚೆ ಆಗಿದ್ದು ಬಿಗ್ ಬಾಸ್ ಮನೆಯ ಒಳಗೆ. ಹನುಮಂತ ಅವರ ತಲೆಗೆ ಈ ಐಡಿಯಾ ಹೊಳೆದಿದೆ. ಹಾಗಂತ ಇದು ಕಾಲ್ಪನಿಕ ಅಲ್ಲ. ಹನುಮಂತ ಅವರ ಲೆಕ್ಕಾಚಾರ ಸರಿಯಾಗಿಯೇ ಇದೆ.

ನಾಯಿ ತೊಳೆಯುವ ಕೆಲಸ; ಪ್ರತಿ ದಿನ 10 ಸಾವಿರ ಸಂಬಳ: ಇಲ್ಲಿದೆ ಬಿಸ್ನೆಸ್ ಐಡಿಯಾ
Bigg Boss Kannada 11
ಮದನ್​ ಕುಮಾರ್​
| Edited By: |

Updated on:Dec 28, 2024 | 8:05 AM

Share

ಬಿಗ್ ಬಾಸ್ ಮನೆಯಲ್ಲಿ ಜಗಳದ ಜೊತೆ ಸಿಕ್ಕಾಪಟ್ಟೆ ಫನ್​ ಕೂಡ ಇರುತ್ತದೆ. ಕಾಮಿಡಿ ಕಲಾವಿದರು ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗಿದ್ದರೆ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಮನರಂಜನೆ ಸಿಗುತ್ತದೆ. ‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಹನುಮಂತ ಮತ್ತು ಧನರಾಜ್ ಅವರು ಭರ್ಜರಿ ಕಾಮಿಡಿ ಮಾಡುತ್ತಿದ್ದಾರೆ. ಆದರೆ ಎಲ್ಲ ಎಪಿಸೋಡ್​ನಲ್ಲಿ ಅವರು ನಗಿಸುವುದಿಲ್ಲ. ಒಂದು ವೇಳೆ ಅವರಿಬ್ಬರು ನಗಿಸಲು ನಿಂತರೆ ಡಬಲ್ ಮನರಂಜನೆ ಗ್ಯಾರಂಟಿ. ಇತ್ತೀಚಿನ ಎಪಿಸೋಡ್​ನಲ್ಲಿ ಅಂಥ ಮನರಂಜನೆ ಕಾಣಿಸಿತು. ಹನುಮಂತ ಅವರು ನಾಯಿ ತೊಳೆಯುವ ಭರ್ಜರಿ ಬಿಸ್ನೆಸ್​ ಐಡಿಯಾ ಕೊಟ್ಟರು.

ಐಶ್ವರ್ಯಾ ಸಿಂಧೋಗಿ ಅವರ ಮನೆಯಲ್ಲಿ ಸಿಂಬಾ ಎಂಬ ಶ್ವಾನ ಸಾಕಿದ್ದಾರೆ. ಆ ಶ್ವಾನವನ್ನು ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಸಖತ್ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಡಿಸೆಂಬರ್​ 27ರ ಸಂಚಿಕೆಯಲ್ಲಿ ಅವರು ಸಿಂಬಾ ಬಗ್ಗೆ ಮಾತನಾಡಿದ್ದಾರೆ. ಆಗ ಧನರಾಜ್ ಮತ್ತು ಹನುಮಂತ ಅವರು ಹಲವು ಪ್ರಶ್ನೆ ಕೇಳಿದ್ದಾರೆ. ನಾಯಿಗೆ ಸ್ನಾನ ಮಾಡಿಸುತ್ತೀರಾ ಎಂಬ ಪ್ರಶ್ನೆ ಕೂಡ ಎದುರಾಯಿತು.

ಈ ಪ್ರಶ್ನೆಗೆ ಐಶ್ವರ್ಯಾ ಸಿಂಧೋಗಿ ಅವರು ಒಂದು ಅಚ್ಚರಿಯ ಉತ್ತರ ನೀಡಿದರು. ‘ನನಗೆ ಟೈಮ್​ ಇರುವುದಿಲ್ಲ. ಸಿಂಬಾಗೆ ಸ್ನಾನ ಮಾಡಿಸಲು ಹೊರಗಡೆಯಿಂದ ಜನ ಬರುತ್ತಾರೆ. ಒಮ್ಮೆ ಸ್ನಾನ ಮಾಡಿಸಲು 1200 ರೂಪಾಯಿ ನೀಡಬೇಕು’ ಎಂದು ಐಶ್ವರ್ಯಾ ಹೇಳಿದರು. 1200 ರೂಪಾಯಿ ಎಂಬ ವಿಷಯ ಕೇಳಿ ಹನುಮಂತ ಅವರಿಗೆ ಅಚ್ಚರಿ ಆಯಿತು. ಆಗ ಅವರು ಒಂದು ಬಿಸ್ನೆಸ್​ ಐಡಿಯಾದ ಬಗ್ಗೆ ಮಾತನಾಡಿದರು.

ತಾವು ಕೂಡ ನಾಯಿ ತೊಳೆಯುವ ಕೆಲಸ ಮಾಡಬಹುದು. ನಾಯಿ ತೊಳೆಯುತ್ತೇವೆ ಅಂತ ರಸ್ತೆಯಲ್ಲಿ ಕೂಗುತ್ತಾ ಹೋದರೆ ಆಯಿತು. ದಿನಕ್ಕೆ 10 ನಾಯಿ ತೊಳದರೆ 10 ಸಾವಿರ ಸಿಗುತ್ತದೆ ಎಂದು ಹನುಮಂತ ಅವರು ಸ್ಕೆಚ್​ ಹಾಕಿದ್ದಾರೆ. ಮದುವೆ ಆಗುವಾಗ ‘ಹುಡುಗ ಏನು ಕೆಲಸ ಮಾಡುತ್ತಾನೆ’ ಅಂತ ಹುಡುಗಿ ಕಡೆಯವರು ಕೇಳಿದರೆ, ‘ನಾಯಿ ತೊಳೆಯುತ್ತಾನೆ’ ಎನ್ನಬಹುದು ಅಂತ ಧನರಾಜ್ ಅವರು ಕಾಮಿಡಿ ಮಾಡಿದ್ದಾರೆ. ಒಟ್ಟಾರೆ ಈ ಸಂಭಾಷಣೆ ಸಖನ್ ಫನ್ ಆಗಿತ್ತು.

ಇದನ್ನೂ ಓದಿ: ಹನುಮಂತನಿಗೆ ಕಳಪೆ ಕೊಟ್ಟ ಮನೆಮಂದಿ, ಜೈಲು ಸೇರಿದ ಹಾಡು ಹಕ್ಕಿ

ಬಿಗ್ ಬಾಸ್ ಮನೆಯಲ್ಲಿ ಈಗ 90 ದಿನಗಳ ಕಳೆದಿವೆ. ಫಿನಾಲೆ ಸಮೀಪಿಸುತ್ತಿದೆ. ಈ ವಾರ ಭವ್ಯಾ ಗೌಡ ಮತ್ತು ರಜತ್​ ಹೊರತುಪಡಿಸಿ ಉಳಿದ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಯಾರು ಔಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಹೆಚ್ಚಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:10 pm, Fri, 27 December 24

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು