‘ಯಾರೂ ಬರಿಗೈಯಲ್ಲಿ ಹೋಗ್ತಾ ಇಲ್ಲ’; ಟಾಪ್ 6 ಸ್ಪರ್ಧಿಗಳಿಗೆ ಸಿಗ್ತಿದೆ ಭರ್ಜರಿ ಹಣ

ಐದನೇ ರನ್ನರ್ ಅಪ್​ ಆಗಿ ತುಕಾಲಿ ಸಂತೋಷ್ ಅವರು ಹೊರಗೆ ಬಂದಿದ್ದಾರೆ. ಅವರು ಖುಷಿಯಿಂದಲೇ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಇದನ್ನು ಸುದೀಪ್ ಘೋಷಣೆ ಮಾಡಿದರು.

‘ಯಾರೂ ಬರಿಗೈಯಲ್ಲಿ ಹೋಗ್ತಾ ಇಲ್ಲ’; ಟಾಪ್ 6 ಸ್ಪರ್ಧಿಗಳಿಗೆ ಸಿಗ್ತಿದೆ ಭರ್ಜರಿ ಹಣ
ಬಿಗ್ ಬಾಸ್ ಸ್ಪರ್ಧಿಗಳು
Edited By:

Updated on: Jan 28, 2024 | 8:36 PM

ಬಿಗ್ ಬಾಸ್​ನಲ್ಲಿ (Bigg Boss) ಇದೇ ಮೊದಲ ಬಾರಿ ಟಾಪ್​ ಐದು ಕಾನ್ಸೆಪ್ಟ್ ಬದಲು, ಟಾಪ್​ 6 ಕಾನ್ಸೆಪ್ಟ್ ತರಲಾಗಿದೆ. ಅಂದರೆ ಫಿನಾಲೆಯಲ್ಲಿ ಐವರ ಬದಲು ಆರು ಜನ ಇದ್ದಾರೆ. ವಿನ್ನರ್​ಗೆ ಮಾತ್ರ ಅಲ್ಲ ಟಾಪ್​ 6ರಲ್ಲಿ ಇರುವ ಎಲ್ಲರಿಗೂ ಹಣ ಸಿಗುತ್ತಿದೆ. ಈ ಬಗ್ಗೆ ಕಿಚ್ಚ ಸುದೀಪ್ ಅವರು ಮಾಹಿತಿ ನೀಡಿದ್ದಾರೆ. ಪ್ರತಿ ಸ್ಪರ್ಧಿಗೂ ಈ ಬಾರಿ ಹಣ ಸಿಗಲಿದೆ. ಹೀಗಾಗಿ ಯಾವ ಸ್ಪರ್ಧಿಗಳಿಗೂ ನಿರಾಸೆ ಆಗುತ್ತಿಲ್ಲ.

ಫಿನಾಲೆ ಎಪಿಸೋಡ್​​ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣುತ್ತಿದೆ. ಕಿಚ್ಚ ಸುದೀಪ್ ಅವರು ಎಂದಿನ ಜೋಶ್​ನಲ್ಲಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ಅವರು ರನ್ನರ್​ಅಪ್​ಗಳಿಗೂ ಹಣ ಸಿಗಲಿದೆ ಎಂಬ ವಿಚಾರವನ್ನು ರಿವೀಲ್ ಮಾಡಿದ್ದಾರೆ. ಜೊತೆಗೆ ಯಾರಿಗೆ ಎಷ್ಟು ಲಕ್ಷ ರೂಪಾಯಿ ಸಿಗುತ್ತದೆ ಎಂಬುದನ್ನು ವಿವರಿಸಿದ್ದಾರೆ. ಇದನ್ನು ಕೇಳಿ ದೊಡ್ಮನೆ ಒಳಗೆ ಇರುವ ಸ್ಪರ್ಧಿಗಳು ಹಾಗೂ ಶನಿವಾರ (ಜನವರಿ 28) ಎಪಿಸೋಡ್​​ನಲ್ಲಿ ಔಟ್ ಆಗಿರುವ ತುಕಾಲಿ ಸಂತೋಷ್ ಅವರು ಖುಷಿಪಟ್ಟಿದ್ದಾರೆ.

ಐದನೇ ರನ್ನರ್ ಅಪ್​ ಆಗಿ ತುಕಾಲಿ ಸಂತೋಷ್ ಅವರು ಹೊರಗೆ ಬಂದಿದ್ದಾರೆ. ಅವರು ಖುಷಿಯಿಂದಲೇ ದೊಡ್ಮನೆಯಿಂದ ಔಟ್ ಆಗಿದ್ದಾರೆ. ಅವರಿಗೆ 2 ಲಕ್ಷ ರೂಪಾಯಿ ಬಹುಮಾನ ಹಣ ಸಿಕ್ಕಿದೆ. ಇದನ್ನು ಸುದೀಪ್ ಘೋಷಣೆ ಮಾಡಿದರು. ಅವರು ವೇದಿಕೆ ಮೇಲೆ ಬಂದು ಚೆಕ್ ತೆಗೆದುಕೊಂಡು ಹೋದರು. ಇನ್ನು ನಾಲ್ಕನೇ ರನ್ನರ್ ಅಪ್​ಗೂ ಎರಡು ಲಕ್ಷ ರೂಪಾಯಿ ಸಿಗುತ್ತಿದೆ.

ಮೂರನೇ ರನ್ನರ್ ಅಪ್​ಗೆ ಸ್ವಲ್ಪ ಹೆಚ್ಚಿನ ಹಣ ಸಿಗುತ್ತಿದೆ. ಐದು ಲಕ್ಷ ರೂಪಾಯಿ ಹಣವನ್ನು ಅವರು ಮನೆಗೆ ತೆಗೆದುಕೊಂಡು ಹೋಗಲಿದ್ದಾರೆ. ಎರಡನೇ ರನ್ನರ್​ಅಪ್​ಗೆ ಬರೋಬ್ಬರಿ ಏಳು ಲಕ್ಷ ರೂಪಾಯಿ ಸಿಗಲಿದೆ. ಮೊದಲ ರನ್ನರ್ ಅಪ್​ಗೆ 10 ಲಕ್ಷ ರೂಪಾಯಿ ಹಣ ಸಿಗಲಿದೆ. ಇದನ್ನು ಕೇಳಿ ಸ್ಪರ್ಧಿಗಳು ಖುಷಿ ಪಟ್ಟಿದ್ದಾರೆ. ಮೊದಲ ರನ್ನರ್​ಅಪ್​ಗೆ ಬೌನ್ಸ್ ಬೈಕ್ ಕೂಡ ಸಿಗುತ್ತಿದೆ.

ಇನ್ನು ವಿನ್ನರ್​ಗೆ ಸಾಕಷ್ಟು ಧಮಾಕಾ ಇದೆ. ಈ ಬಗ್ಗೆ ಕಿಚ್ಚ ಸುದೀಪ್ ಈ ಮೊದಲೇ ಘೋಷಣೆ ಮಾಡಿದ್ದರು. ವಿನ್ನರ್​ಗೆ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಸಿಗುತ್ತಿದೆ. ಇದರ ಜೊತೆಗೆ ಮಾರುತಿ ಸುಜುಕಿ ಬ್ರೇಜಾ ಕಾರು ಸಿಗುತ್ತಿದೆ. ಜೊತೆಗೆ ಒಂದು ಬೌನ್ಸ್​ ಎಲೆಕ್ಟ್ರಿಕ್ ಸ್ಕೂಟರ್ ಸಿಗಲಿದೆ. ಈ ಕುರಿತು ಕಿಚ್ಚ ಸುದೀಪ್ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ: Tukali Santhosh: ಈ 5 ಕಾರಣದಿಂದಲೇ ತುಕಾಲಿ ಸಂತೋಷ್​ಗೆ ಮಿಸ್​ ಆಯ್ತು ಬಿಗ್ ಬಾಸ್​ ಟ್ರೋಫಿ

ಬಿಗ್ ಬಾಸ್ ಫೈನಲ್​ಡೇಗೆ ಉಳಿದುಕೊಂಡಿದ್ದು ಐದು ಮಂದಿ ಮಾತ್ರ. ವರ್ತೂರು ಸಂತೋಷ್, ವಿನಯ್ ಗೌಡ, ಕಾರ್ತಿಕ್ ಮಹೇಶ್, ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಆಟ ಮುಂದುವರಿಸಿದ್ದಾರೆ. ಇವರ ಪೈಕಿ ಒಬ್ಬರು ಕಪ್ ಎತ್ತಲಿದ್ದಾರೆ. ಇಂದು (ಜನವರಿ 28) ಮಧ್ಯರಾತ್ರಿ ವೇಳೆಗೆ ಈ ವಿಚಾರ ಅನೌನ್ಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us