AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಶ್ವಿನಿ ಜೊತೆ ಸೇರಿ ಮತ್ತೆ ಮೊದಲಿನ ಫಾರ್ಮ್​ಗೆ ಮರಳಿದ ಜಾನ್ವಿ; ಗಿಲ್ಲಿ ಛೀಮಾರಿ

Bigg Boss Kannada: ಅಶ್ವಿನಿ ಗೌಡ ಮತ್ತು ಜಾನ್ವಿ ಬಿಗ್ ಬಾಸ್ ಮನೆಯಲ್ಲಿ ಮೊದಲು ನಕಲಿ ಗೆಳೆತನ ಮುರಿದುಕೊಳ್ಳುವ ನಾಟಕವಾಡಿದ್ದರು. ಇದು ಅನಿರೀಕ್ಷಿತವಾಗಿ ನಿಜವಾಗಿ ಪರಿಣಮಿಸಿತು. ಈಗ ಇಬ್ಬರೂ ಮತ್ತೆ ಒಂದಾಗಿದ್ದು, ಜಾನ್ವಿ ಹಳೆಯ ಫಾರ್ಮ್‌ಗೆ ಮರಳಿದ್ದಾರೆ. ಜಾನ್ವಿಗೆ ಸುದೀಪ್ ವೀಕೆಂಡ್ ಕ್ಲಾಸ್ ಕಾಯುತ್ತಿದೆ.

ಅಶ್ವಿನಿ ಜೊತೆ ಸೇರಿ ಮತ್ತೆ ಮೊದಲಿನ ಫಾರ್ಮ್​ಗೆ ಮರಳಿದ ಜಾನ್ವಿ; ಗಿಲ್ಲಿ ಛೀಮಾರಿ
ಜಾನ್ವಿ
ರಾಜೇಶ್ ದುಗ್ಗುಮನೆ
|

Updated on: Nov 12, 2025 | 7:31 AM

Share

ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಜಾನ್ವಿ ಅವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿತ್ತು. ಆದರೆ, ಕೆಲವೇ ವಾರಗಳಲ್ಲಿ ಇವರ ಗೆಳೆತನ ಬ್ರೇಕ್ ಆಯಿತು. ಇಬ್ಬರೂ ಕಿತ್ತಾಡಿಕೊಂಡರು. ಇತ್ತೀಚೆಗೆ ರಿವೀಲ್ ಆದ ಮಾಹಿತಿ ಪ್ರಕಾರ ಅಶ್ವಿನಿ ಹಾಗೂ ಜಾನ್ವಿ ಈ ಬಗ್ಗೆ ಮೊದಲೇ ಮಾತನಾಡಿಕೊಂಡಿದ್ದರಂತೆ. ‘ನಾವಿಬ್ಬರೂ ಬೇರೆ ಆದಂತೆ ನಟಿಸೋಣ’ ಎಂದು ಮೈಕ್ ಇಲ್ಲದೆ ಚರ್ಚಿಸಿದ್ದರು. ಈಗ ಜಾನ್ವಿ ಹಾಗೂ ಅಶ್ವಿನಿ ಮಧ್ಯೆ ಮತ್ತೆ ಗೆಳೆತನ ಮೂಡಿದೆ. ಇದರಿಂದ ಜಾನ್ವಿ ಅವರು ಮೊದಲಿನ ಫಾರ್ಮ್​ಗೆ ಮರಳಿದ್ದಾರೆ.

ಮುರಿದಿತ್ತು ಗೆಳೆತನ

ಗೆಳೆತನ ಮುರಿದುಕೊಂಡಂತೆ ನಾಟಕ ಮಾಡೋದು ಅಶ್ವಿನಿ ಗೌಡ ಹಾಗೂ ಜಾನ್ವಿ ಅವರ ಪ್ಲ್ಯಾನ್ ಆಗಿತ್ತು. ದಿನ ಕಳೆದಂತೆ ಈ ವಿಚಾರ ಗಂಭೀರವಾಗುತ್ತಾ ಸಾಗಿತು. ಕೊನೆಗೆ ಯಾವ ಹಂತಕ್ಕೆ ಹೋಯಿತು ಎಂದರೆ ಇಬ್ಬರ ಗೆಳೆತನ ಹದಗೆಟ್ಟಿತ್ತು. ಹೀಗಿರುವಾಗಲೇ ಇಬ್ಬರ ಮಧ್ಯೆ ಮತ್ತೆ ಗೆಳೆತನದ ಚಿಗುರು ಒಡೆದಿದೆ. ಇಬ್ಬರೂ ಮಾತುಕತೆ ಆಡಿಕೊಂಡು ಸಂಬಂಧ ಸರಿ ಮಾಡಿಕೊಂಡಿದ್ದಾರೆ.

ಕಳ್ಳತನ

ಅಶ್ವಿನಿ ಗೌಡ ಹಾಗೂ ಜಾನ್ವಿ ಒಟ್ಟಾಗಿ ಸೇರಿಕೊಂಡು ಮಾಡಿದ ಕೆಲ ಕೆಟ್ಟ ಕೆಲಸಗಳಿಂದ ಇಬ್ಬರೂ ಹೊರ ಜಗತ್ತಿಗೆ ನೆಗೆಟಿವ್ ಆಗಿ ಕಾಣಿಸಿದರು. ಅಶ್ವಿನಿ ನೆರಳಿನಿಂದ ಹೊರ ಬರುತ್ತಿದ್ದಂತೆ ಜಾನ್ವಿ ಬದಲಾದರು. ಅವರಿಗೆ ಕೆಲ ವಾರ ಸುದೀಪ್ ಕ್ಲಾಸ್​ ತಪ್ಪಿತು. ಆದರೆ, ಈಗ ಅಶ್ವಿನಿ ಜೊತೆ ಮತ್ತೆ ಸೇರುತ್ತಿದ್ದಂತೆ ಅವರು ಹಳೆಯ ಫಾರ್ಮ್​ಗೆ ಮರಳಿದಂತೆ.

ಸುಧಿ ಮೊದಲಾದವರ ಜೊತೆ ಸೇರಿಕೊಂಡು ಜಾನ್ವಿ ಅವರು ಮನೆಯವರಿಗೆ ಇಟ್ಟ ಹಾಲನ್ನು ಕದ್ದಿದ್ದಾರೆ. ಮನೆಯವರಿಗೆ ಎಂದು ಮೀಸಲಿಟ್ಟಮೇಲೆ ಅದರಲ್ಲಿ ಎಲ್ಲರ ಪಾಲೂ ಇರುತ್ತದೆ. ಆದರೆ, ತಮಗಷ್ಟೇ ಸಿಗಬೇಕು ಎಂದು ಬಯಸೋದು ತಪ್ಪಾಗುತ್ತದೆ. ಈ ಕಾರಣಕ್ಕೆ ಸುದೀಪ್ ವೀಕೆಂಡ್​ನಲ್ಲಿ ಜಾನ್ವಿಗೆ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಗಿಲ್ಲಿ ನಟನ ಛೀಮಾರಿ

ಗಿಲ್ಲಿ ನಟ ಅವರು ಜಾನ್ವಿಗೆ ಛೀಮಾರಿ ಹಾಕಿದ್ದಾರೆ. ‘ಇಷ್ಟೆಲ್ಲ ಆದ ಬಳಿಕವೂ ಮತ್ತೆ ಅಶ್ವಿನಿ ಅವರ ಜೊತೆಯೇ ಹೋಗುತ್ತಿದ್ದೀರಲ್ಲ. ನಾನಾಗಿದ್ದರೆ ಅವರ ಗೆಳೆತನ ಮುರಿದುಕೊಂಡು ಈಚೆ ಬರುತ್ತಿದ್ದೆ’ ಎಂದು ಗಿಲ್ಲಿ ಹೇಳಿದ್ದಾರೆ. ಇದಕ್ಕೆ ಜಾನ್ವಿ ಅವರು ನಕ್ಕಿದ್ದಾರೆ. ಈ ಮೂಲಕ ತಾವು ಬದಲಾಗೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದಂತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್​ ಅಪ್ಡೇಟ್​:ಪರಿಷ್ಕರಣೆಗೆ ಗಡುವು ವಿಸ್ತರಣೆ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
ಉಜ್ಬೆಕಿಸ್ತಾನ್‌ ಮಕ್ಕಳ ಬಾಯಲ್ಲಿ ತಾವೇ ಬರೆದ ಕವಿತೆ ಕೇಳಿ ಭಾವುಕರಾದ ಮೋದಿ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
BMTC,KSRTC ನಿಲ್ದಾಣಗಳಿಗೆ ದಿಢೀರ್ ಭೇಟಿ, ಪ್ರಯಾಣಿಕರ ಸಮಸ್ಯೆ ಆಲಿಸಿದ ಸಚಿವ
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಬೆಂಗಳೂರಿನಲ್ಲಿ ಕಳಪೆ ಸಿಹಿ ತಿನಿಸುಗಳ ಮಾರಾಟಕ್ಕೆ ಲಗಾಮು
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕೆಪಿಎಸ್‌ಸಿ ಅಕ್ರಮದ ಮತ್ತಷ್ಟು ಸ್ಫೋಟಕ ವಿಚಾರಗಳನ್ನ ಬಹಿರಂಗಪಡಿಸಿದ HDK
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ಕಿರ್ಗಿಸ್ತಾನದಲ್ಲಿ ಅರ್ಮೇನಿಯಾ ಪ್ರಧಾನಿ ಜೊತೆ ಪಿಎಂ ಮೋದಿ ದ್ವಿಪಕ್ಷೀಯ ಸಭೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ತುಮಕೂರಿನ ರಂಗು ಸುಧೀರ್, ಕೀರ್ತಿ ಆಚಾರ್ಯ ನಾಪತ್ತೆ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ನೇಪಾಳ ಪ್ರವಾಹ: ಸಂಪರ್ಕಕ್ಕೆ ಸಿಗದ 13 ಕನ್ನಡಿಗರು, ಸಿಎಂ ಹೇಳಿದ್ದೇನು ನೋಡಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
ಉಜ್ಬೇಕಿಸ್ತಾನದಲ್ಲಿ ಭಾರತೀಯ ಸಂಸ್ಕೃತಿಯ ಕಂಪು ಪಸರಿಸಿದ ಪಿಎಂ ಮೋದಿ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ
CID ತನಿಖೆ ವೇಳೆ ಹಲವು ಸ್ಫೋಟಕ ಅಂಶಗಳು ಪತ್ತೆ