AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೊಡ್ಡ ರಹಸ್ಯ ಬಯಲು ಮಾಡಲು ಹೋಗಿ ಗೊಂದಲಕ್ಕೆ ತುತ್ತಾದ ಝೇಂಡೆ; ತಿಳಿಯಿತು ಹಲವು ವಿಚಾರ

ಆರ್ಯವರ್ಧನ್​ ಸಹೋದರನ ಹೆಸರು ವಿಶ್ವಾಸ್ ದೇಸಾಯಿ. 700 ಕೋಟಿ ರೂಪಾಯಿ ಸಾಲ ಮಾಡಿಕೊಂಡ ಕಾರಣ ಆತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ. ಆತನ ಮುಖದ ಚರ್ಮವನ್ನು ತೆಗೆದು ಆರ್ಯವರ್ಧನ್​ಗೆ ಹಾಕಲಾಗಿದೆ.

ದೊಡ್ಡ ರಹಸ್ಯ ಬಯಲು ಮಾಡಲು ಹೋಗಿ ಗೊಂದಲಕ್ಕೆ ತುತ್ತಾದ ಝೇಂಡೆ; ತಿಳಿಯಿತು ಹಲವು ವಿಚಾರ
ಸಂಜು-ಝೇಂಡೆ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 13, 2022 | 7:31 AM

Share

‘ಜೊತೆ ಜೊತೆಯಲಿ’ (Jothe Jotheyali Serial) ಧಾರಾವಾಹಿಗೆ ಸಾಕಷ್ಟು ಟ್ವಿಸ್ಟ್​ಗಳನ್ನು ನೀಡುತ್ತಿದ್ದಾರೆ ನಿರ್ದೇಶಕರು. ಆರ್ಯವರ್ಧನ್ ಪಾತ್ರಧಾರಿ ಬದಲಾಗಿದ್ದಾರೆ. ಅನಿರುದ್ಧ ಜತ್ಕರ್ ಮಾಡುತ್ತಿದ್ದ ಪಾತ್ರವನ್ನು ಈಗ ಹರೀಶ್ ರಾಜ್ ನಿರ್ವಹಿಸುತ್ತಿದ್ದಾರೆ. ಹೊಸ ಪಾತ್ರಧಾರಿಗೆ ವೀಕ್ಷಕರು ಹೊಂದಿಕೊಳ್ಳುತ್ತಿದ್ದಾರೆ. ಪಾತ್ರಧಾರಿ ಬದಲಾದ ಕಾರಣ ಕಥೆಯಲ್ಲಿ ಒಂದಷ್ಟು ವಿಚಾರಗಳನ್ನು ಬದಲಾಯಿಸಿಕೊಂಡಿದ್ದಾರೆ ನಿರ್ದೇಶಕರು. ಹೊಸ ಆರ್ಯವರ್ಧನ್​ನ (Aryavardhan) ಸಂಜು ಎಂದು ಪರಿಚಯಿಸಲಾಗಿದೆ. ಆತನಿಗೆ ನೆನಪೆಲ್ಲವೂ ಅಳಿಸಿ ಹೋಗಿದೆ. ಅಷ್ಟೇ ಅಲ್ಲ, ಮುಖ ಬದಲಾಗಿದೆ. ಈತ ಯಾರು ಎಂದು ಬೆನ್ನತ್ತಿ ಹೋದ ಝೇಂಡೆಗೆ ಹಲವು ವಿಚಾರಗಳು ಗೊತ್ತಾಗಿದೆ.

ಆರ್ಯವರ್ಧನ್​ ಸಹೋದರನ ಹೆಸರು ವಿಶ್ವಾಸ್ ದೇಸಾಯಿ. 700 ಕೋಟಿ ರೂಪಾಯಿ ಸಾಲ ಮಾಡಿಕೊಂಡ ಕಾರಣ ಆತ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದ. ಆತನ ಮುಖದ ಚರ್ಮವನ್ನು ತೆಗೆದು ಆರ್ಯವರ್ಧನ್​ಗೆ ಹಾಕಲಾಗಿದೆ. ಈ ಕಾರಣಕ್ಕೆ ವಿಶ್ವಾಸ್ ರೀತಿ ಕಾಣಿಸುತ್ತಿದ್ದಾನೆ ಆರ್ಯವರ್ಧನ್. ಹೀಗಾಗಿ ಆತ ವಿಶ್ವಾಸ್ ಎಂದು ಎಲ್ಲರೂ ನಂಬಿದ್ದಾರೆ. ‘ಈತ ನನ್ನ ಮಗ ವಿಶ್ವಾಸ್​. ಆತನನ್ನು ನಾವು ಪ್ರೀತಿಯಿಂದ ಸಂಜು ಎಂದು ಕರೆಯುತ್ತೇವೆ’ ಎಂದು ರಾಜ ನಂದಿನಿ ಕುಟುಂಬಕ್ಕೆ ಪರಿಚಯ ಮಾಡಿದ್ದಳು ಸಂಜುವಿನ ತಾಯಿ ಪ್ರಿಯಾ.

ವಿಶ್ವಾಸ್ ದೇಸಾಯಿ ಚಿಕಿತ್ಸೆ ಪಡೆದ ಆಸ್ಪತ್ರೆಗೆ ತೆರಳಿದ ಝೇಂಡೆ ಅಲ್ಲಿ ಕೆಲವರನ್ನು ವಿಚಾರಿಸಿದ್ದ. ಆಗ ವಿಶ್ವಾಸ್ ಎಂಬ ರೋಗಿ ನಿಧನ ಹೊಂದಿದ್ದಾನೆ ಎಂಬ ವಿಚಾರ ಗೊತ್ತಾಗಿತ್ತು. ಇದನ್ನು ಕೇಳಿ ಝೇಂಡೆ ಶಾಕ್​​ಗೆ ಒಳಗಾಗಿದ್ದಾನೆ. ಇತ್ತ ವಿಶ್ವಾಸ್ ಮನೆಗೆ ಹೋಗಿಯೂ ಝೇಂಡೆ ವಿಚಾರಿಸಿದ್ದಾನೆ. ‘ವಿಶ್ವ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಮನೆ ಕೆಲಸದವನು ಹೇಳಿದ್ದಾನೆ. ಇದನ್ನು ಕೇಳಿ ಝೇಂಡೆಗೆ ಅನುಮಾನ ವ್ಯಕ್ತವಾಗಿದೆ. ರಾಜ ನಂದಿನಿ ನಿವಾಸಕ್ಕೆ ಸೇರಿದ ವಿಶ್ವಾಸ್ ಯಾರು ಎಂಬ ಬಗ್ಗೆ ಸಾಕಷ್ಟು ಗೊಂದಲ ಮೂಡಿದೆ. ಆತನ ಎದುರು ದೊಡ್ಡ ಗೊಂದಲದ ಗೂಡೇ ಸೃಷ್ಟಿ ಆಗಿದೆ.

ಇದನ್ನೂ ಓದಿ
Image
‘ಅವರನ್ನು ಸುಮ್ಮನೆ ಬಿಡಲ್ಲ’; ಶಪಥ ಮಾಡಿ ಮನೆ ಒಳಗೆ ಬಂದ ಅನು ಸಿರಿಮನೆ
Image
Megha Shetty: ಮಹೇಶ್ ಬಾಬು ಭೇಟಿ ಹಿಂದಿನ ಉದ್ದೇಶ ತಿಳಿಸಿದ ನಟಿ ಮೇಘಾ ಶೆಟ್ಟಿ
Image
Megha Shetty: ಕಲರ್ಸ್​ ಕನ್ನಡದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ನಟಿ ಮೇಘಾ ಶೆಟ್ಟಿ
Image
ಮೇಘಾ ಶೆಟ್ಟಿ ಮನೆಗೆ ಬಂತು ಎರಡು ಐಷಾರಾಮಿ ಕಾರು; ಖುಷಿ ಹಂಚಿಕೊಂಡ ನಟಿ

ಆರ್ಯವರ್ಧನ್ ಹತ್ಯೆ ಮಾಡಲು ಯಾರೋ ಸಂಚು ರೂಪಿಸಿದ್ದಾರೆ ಎಂಬ ಅನುಮಾನ ಝೇಂಡೆಗೆ ಮೂಡಿತ್ತು. ಅದು ಅನು ಎಂದು ಆತ ಬಲವಾಗಿ ನಂಬಿದ್ದಾನೆ. ಹೀಗಿರುವಾಗಲೇ ರಾಜ ನಂದಿನಿ ನಿವಾಸಕ್ಕೆ ಹೊಸಬನ ಎಂಟ್ರಿ ಆಗಿರುವುದು ಆತನಿಗೆ ಸಾಕಷ್ಟು ಅನುಮಾನ ಮೂಡಿಸಿದೆ. ಆತ ಯಾರು ಎಂದು ಕಂಡು ಹಿಡಿಯಲೇಬೇಕು ಎಂಬ ಹಠಕ್ಕೆ ಬಿದ್ದಿದ್ದಾನೆ.

ಸಂಜುಗೆ ಅನು ಮೇಲೆ ಪ್ರೀತಿ: 

ಸಂಜು (ಆರ್ಯವರ್ಧನ್) ಅನೇಕ ಬಾರಿ ಅನು ಸಿರಿಮನೆಯನ್ನು ಭೇಟಿ ಮಾಡಿದ್ದಾನೆ. ಆತನಿಗೆ ಗೊತ್ತಿಲ್ಲದೆ ಆಕೆಯ ಮೇಲೆ ಪ್ರೀತಿ ಹುಟ್ಟುತ್ತಿದೆ. ಹೀಗೇಕೆ ಆಗುತ್ತಿದೆ ಎಂಬುದು ಆತನಿಗೆ ತಿಳಿಯುತ್ತಿಲ್ಲ. ‘ಅನು ಬೇರೊಬ್ಬನ ಹೆಂಡತಿ. ಅಷ್ಟೇ ಅಲ್ಲ ಪ್ರೆಗ್ನೆಂಟ್ ಕೂಡ. ಅವಳ ಮೇಲೆ ಪ್ರೀತಿ ಹುಟ್ಟುತ್ತದೆ ಎಂದರೆ ಏನರ್ಥ. ಅವಳಿಂದ ನಾನು ಅಂತರ ಕಾಯ್ದುಕೊಳ್ಳಬೇಕು’ ಎಂದು ಸಂಜು ನಿರ್ಧರಿಸಿದ್ದಾನೆ. ಇದಾದ ಕೆಲವೇ ನಿಮಿಷಗಳಲ್ಲಿ ಅನುಮೇಲೆ ಆತನಿಗೆ ಮತ್ತೆ ಒಲವು ಹುಟ್ಟಿದೆ. ಹೀಗಿರುವಾಗಲೇ ಹೆಂಡತಿಯ ಕರೆ ಬಂದಿದೆ.

ವಿಶ್ವಾಸ್ ದೇಸಾಯಿ ಪತ್ನಿ ಹೆಸರು ಆರಾಧನಾ. ಈಗ ಸಂಜು ಕೈಯಲ್ಲಿ ಇರುವ ಮೊಬೈಲ್ ಕೂಡ ವಿಶ್ವಾಸ್​ದೆ. ವಿಶ್ವಾಸ್ ಮೃತಪಟ್ಟ ವಿಚಾರ ಆರಾಧನಾಗೆ ತಿಳಿದಿಲ್ಲ. ಇತ್ತ ಸಂಜುಗೆ ತನ್ನ ಹಿನ್ನೆಲೆ ಗೊತ್ತಿಲ್ಲ. ಹೀಗಾಗಿ, ತನ್ನ ಮೊಬೈಲ್​ಗೆ ಬಂದ ಕರೆಯನ್ನು ಆತ ಸ್ವೀಕರಿಸಿದ್ದಾನೆ. ಆ ಕಡೆಯಿಂದ ಪತ್ನಿ ಆರಾಧನಾ ಮಾತನಾಡಿದ್ದಾಳೆ. ಇದರಿಂದ ಆತನ ಮನಸ್ಸು ಕೂಡ ಗೊಂದಲದ ಗೂಡಾಗಿದೆ.

ಶ್ರೀಲಕ್ಷ್ಮಿ ಎಚ್.

ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ