AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಸಾನಿಯಾಗೆ ಇದೆ ದೊಡ್ಡ ಕಂಟಕ; ಇದರಿಂದ ಅವರು ಪಾರಾಗೋದು ಕಷ್ಟ ಇದೆ

ರತ್ನಮಾಲಾ ತನ್ನ ಮನೆಗೆ ಸೌಪರ್ಣಿಕಾಳನ್ನು ಸೊಸೆಯಾಗಿ ತರಬೇಕು ಎಂದುಕೊಂಡಿದ್ದಾಳೆ. ಅವಳ ಹೆಸರಿನಲ್ಲೇ ವಿಲ್​ ಕೂಡ ಬರೆದಿಟ್ಟಿದ್ದಾಳೆ. ಇದರ ಸೂಚನೆ ಸಾನಿಯಾಗೆ ಸಿಕ್ಕಿದೆ.

‘ಕನ್ನಡತಿ’ ಸಾನಿಯಾಗೆ ಇದೆ ದೊಡ್ಡ ಕಂಟಕ; ಇದರಿಂದ ಅವರು ಪಾರಾಗೋದು ಕಷ್ಟ ಇದೆ
ಸಾನಿಯಾ
TV9 Web
| Edited By: |

Updated on: Nov 02, 2021 | 1:50 PM

Share

‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟ ದಾಟಿದೆ. ಇಷ್ಟು ದಿನ ಎದೆಯಲ್ಲಿ ಬಚ್ಚಿಟ್ಟುಕೊಂಡಿದ್ದ ಪ್ರೀತಿಯನ್ನು ಭುವಿ ಮುಂದೆ ಹರ್ಷ ವ್ಯಕ್ತಪಡಿಸಿದ್ದಾನೆ. ಅವಳ ಕಡೆಯಿಂದ ಇದಕ್ಕೆ ಯಾವುದೇ ಉತ್ತರ ಬಂದಿಲ್ಲ. ಹರ್ಷನ ಪ್ರೀತಿ ಒಪ್ಪಿಕೊಳ್ಳಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿ ಭುವಿ ಇದ್ದಾಳೆ. ಈ ಎಲ್ಲಾ ಘಟನೆಗಳ ಮಧ್ಯೆ ಸಾನಿಯಾಗೆ ಸಂಕಷ್ಟವೊಂದು ಎದುರಾಗುವ ಸೂಚನೆ ಸಿಕ್ಕಿದೆ. ಸಾನಿಯಾ ಈ ಕಂಟಕದಿಂದ ಪಾರಾಗೋದು ಕಷ್ಟ ಇದೆ ಅನ್ನೋದು ವೀಕ್ಷಕರ ಅಭಿಪ್ರಾಯ.

ರತ್ನಮಾಲಾ ತನ್ನ ಮನೆಗೆ ಸೌಪರ್ಣಿಕಾಳನ್ನು ಸೊಸೆಯಾಗಿ ತರಬೇಕು ಎಂದುಕೊಂಡಿದ್ದಾಳೆ. ಅವಳ ಹೆಸರಿನಲ್ಲೇ ವಿಲ್​ ಕೂಡ ಬರೆದಿಟ್ಟಿದ್ದಾಳೆ. ಇದರ ಸೂಚನೆ ಸಾನಿಯಾಗೆ ಸಿಕ್ಕಿದೆ. ಈ ಕಾರಣಕ್ಕೆ ಸೌಪರ್ಣಿಕಾ ಪತ್ತೆ ಹಚ್ಚುವ ಕಾರ್ಯದಲ್ಲಿ ಆಕೆ ಬ್ಯುಸಿ ಆಗಿದ್ದಳು. ಇದೇ ಸಂದರ್ಭದಲ್ಲಿ ಹರ್ಷ ಸಂಬಂಧವೇ ಇಲ್ಲದ ನಕಲಿ ಸೌಪರ್ಣಿಕಾಳನ್ನು ಕರೆದುಕೊಂಡು ಬಂದಿದ್ದ. ಇವಳೇ ನಿಜವಾದ ಸೌಪರ್ಣಿಕಾ ಎಂದು ತಿಳಿದ ಸಾನಿಯಾ ಆಕೆಯನ್ನು ಕೊಲ್ಲೋಕೆ ಸುಪಾರಿ ನೀಡಿದ್ದಳು.

ಸುಪಾರಿ ಕಿಲ್ಲರ್​ ಸೌಪರ್ಣಿಕಾಳನ್ನು ಕರೆದುಕೊಂಡು ಹೋಗಿ ಕೊಲ್ಲೋಕೆ ಪ್ರಯತ್ನ ನಡೆಸಿದ್ದ. ಇದು ಯಶಸ್ವಿ ಆಗುವುದರಲ್ಲಿತ್ತು. ಆದರೆ, ತಾನು ತೋಡಿದ ಗುಂಡಿಗೆ ಆತನೇ ಬಿದ್ದಿದ್ದ. ಆಕೆಯನ್ನು ಕೊಲ್ಲಲು ಹೋಗಿ ಕಿಲ್ಲರ್​ ತಾನೇ ಹತನಾಗಿದ್ದ. ಆತನ ಶವ ಪೊಲೀಸರಿಗೆ ಸಿಕ್ಕಿದೆ. ಇದರ ಜೊತೆಗೆ ಅವನ ಮೊಬೈಲ್​ ಕೂಡ ಸಿಕ್ಕಿದೆ.

ಆತ ಸಾಯುವುದಕ್ಕೂ ಮೊದಲು ಸಾನಿಯಾಗೆ ಕರೆ ಮಾಡಿ ಮಾತನಾಡಿದ್ದ. ಇದು ಮೊಬೈಲ್​ನಲ್ಲಿ ರೆಕಾರ್ಡ್​ ಆಗಿದೆ. ಒಂದೊಮ್ಮೆ ಪೊಲೀಸರು ಕಿಲ್ಲರ್​​ನ ಮೊಬೈಲ್​ ತೆರೆದು ನೋಡಿದರೆ ಸಾನಿಯಾ ಕರ್ಮಕಾಂಡ ಹೊರಬೀಳಲಿದೆ. ಆಗ, ಆಕೆ ಜೈಲು ಸೇರೋದು ಪಕ್ಕಾ. ಇದು ಸಾನಿಯಾಗೂ ಅರಿವಾಗಿದೆ. ಇದರಿಂದ ತಪ್ಪಿಸಿಕೊಳ್ಳೋಕೆ ಆಕೆ ಯಾವ ರೀತಿಯ ಸಂಚು ರೂಪಿಸುತ್ತಾಳೆ ಅನ್ನೋದು ಸದ್ಯದ ಕುತೂಹಲ. ಒಟ್ಟಿನಲ್ಲಿ ‘ಕನ್ನಡತಿ’ ನಾನಾ ತಿರುವುಗಳನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ.

ಇದನ್ನೂ ಓದಿ: ‘ಕನ್ನಡತಿ’ ವರುಧಿನಿ ಪರವಾಗಿ ಧ್ವನಿ ಎತ್ತಿದ ವೀಕ್ಷಕರು; ಇದಕ್ಕೆ ಕಾರಣ ಶ್ವೇತಾ

ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
ಚಾಮರಾಜನಗರ ಬೋನಿಗೆ ಬಿದ್ದ ಹುಲಿ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
2026 ವೃಶ್ಚಿಕ ರಾಶಿಗೆ ಗುರು ಸಂಚಾರದಿಂದ ಆರ್ಥಿಕ ಪ್ರಗತಿಯ ವರ್ಷ
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?
ಬಸ್​ ದುರಂತದಲ್ಲಿ ಸುಟ್ಟು ಕರಕಲಾದ ಮೃತದೇಹಗಳ ಗುರುತು ಪತ್ತೆ ಹೇಗಿರುತ್ತೆ?