AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದಾನೆ. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದ. ಭುವಿ ಮನೆ ಒಳಗೆ ಬರುತ್ತಿದ್ದಂತೆ ಅವಳಿಗೆ ದೊಡ್ಡ ಸರ್​ಪ್ರೈಸ್​ ನೀಡಿದ್ದ.

ಕನ್ನಡತಿ ಭುವಿಗೆ ಬಿಟ್ಟು ಬಿಡದೇ ಕಾಡುತ್ತಿದೆ ಈ ಪ್ರಶ್ನೆ; ಇದಕ್ಕೆ ಹರ್ಷನಿಂದ ಬರುತ್ತಾ ಉತ್ತರ?
ಹರ್ಷ-ಭುವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Oct 20, 2021 | 9:36 PM

Share

‘ಕನ್ನಡತಿ’ ಧಾರಾವಾಹಿ ಕುತೂಹಲ ಘಟ್ಟ ತಲುಪಿದೆ. ಧಾರಾವಾಹಿ ಹೀರೋ ಹರ್ಷ (ಕಿರಣ್​ ರಾಜ್​) ಭುವಿಗೆ (ರಂಜನಿ ರಾಘವನ್​) ಪ್ರಪೋಸ್​ ಮಾಡೋಕೆ ರೆಡಿ ಆಗಿದ್ದಾನೆ. ಕಳೆದ ಒಂದು ವಾರದಿಂದ ಇದೇ ಹೈಲೈಟ್​ ಆಗುತ್ತಿದೆ. ಈ ಮಧ್ಯೆ ಭುವಿಗೆ ಬಿಟ್ಟೂ ಬಿಡದೆ ಒಂದು ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಹರ್ಷನಿಂದ ಉತ್ತರ ಸಿಗುತ್ತದೆಯೇ ಎಂಬುದು ಸದ್ಯದ ಪ್ರಶ್ನೆ.

ಭುವಿ ಜನ್ಮದಿನ ಬಂದಿದೆ. ಈ ವಿಶೇಷ ದಿನದಂದು ಹರ್ಷ ಪ್ರಪೋಸ್​ ಮಾಡಬೇಕು ಎಂದು ನಿರ್ಧರಿಸಿದ್ದಾನೆ. ಅಂತೆಯೇ, ಭುವಿ ತಂಗಿ ಬಿಂದು ಜತೆ ಸೇರಿ ಮನೆಯನ್ನೆಲ್ಲ ಅಲಂಕರಿಸಿದ್ದ. ಭುವಿ ಮನೆ ಒಳಗೆ ಬರುತ್ತಿದ್ದಂತೆ ಅವಳಿಗೆ ದೊಡ್ಡ ಸರ್​ಪ್ರೈಸ್​ ನೀಡಿದ್ದ. ಮನೆ ಒಳಗೆ ಮಾಡಲಾಗಿದ್ದ ಅಲಂಕಾರ ನೋಡಿ ಭುವನೇಶ್ವರಿಗೆ ನಿಜಕ್ಕೂ ಅಚ್ಚರಿ ಹಾಗೂ ಶಾಕ್​ ಎರಡೂ ಆಗಿತ್ತು. ಮರುದಿನ ಮಧ್ಯಾಹ್ನ ಭುವಿಯನ್ನು ಹರ್ಷ ಊಟಕ್ಕೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಭುವಿ ಕೇಳಿದ ಪ್ರಶ್ನೆಯಿಂದ ಹರ್ಷನಿಗೆ ಏನು ಉತ್ತರಿಸಬೇಕು ಎಂಬುದು ಗೊತ್ತಾಗಲೇ ಇಲ್ಲ.

ಹರ್ಷ ತನ್ನ ಹುಡುಗಿಯನ್ನು ಪರಿಚಯಿಸುತ್ತೇನೆ ಎಂದು ಭುವಿಗೆ ಭರವಸೆ ನೀಡಿದ್ದಾನೆ. ಆದರೆ, ಹರ್ಷ ತನ್ನನ್ನೇ ಪ್ರೀತಿಸುತ್ತಿದ್ದಾನೆ ಎನ್ನುವ ವಿಚಾರ ಆಕೆಗೆ ಇನ್ನೂ ತಿಳಿದಿಲ್ಲ. ಹೋಟೆಲ್​ನಲ್ಲಿ ಕುಳಿತಾಗಲೂ ‘ನೀವು ಪ್ರೀತಿಸುತ್ತಿರುವು ಹುಡುಗಿ ಇಲ್ಲೇ ಇದ್ದಾಳಾ?’ ಎಂದು ಹರ್ಷನನ್ನು ಭುವಿ ಕೇಳಿದಳು. ಈ ವೇಳೆ ಹರ್ಷನಿಂದ ಇಲ್ಲ ಎನ್ನುವ ಉತ್ತರ ಬಂತು.

ಊಟದ ನಂತರ ಭುವಿಯನ್ನು ಹರ್ಷ ಕರೆದುಕೊಂಡು ಹೋಗಿದ್ದು ಚಿತ್ರಮಂದಿರಕ್ಕೆ. ಇಡೀ ಚಿತ್ರಮಂದಿರವನ್ನು ಹರ್ಷ ತಮ್ಮಿಬ್ಬರಿಗಾಗಿ ಕಾಯ್ದಿರಿಸಿದ್ದ. ಸಿನಿಮಾ ಕೂಡ ಪ್ರಸಾರವಾಗುತ್ತಿತ್ತು. ಇಡೀ ಚಿತ್ರಮಂದಿರ ಖಾಲಿ ಇರುವುದನ್ನು ನೋಡಿದ ಭುವಿಗೆ ಅಚ್ಚರಿ ಆಗಿತ್ತು. ಸಿನಿಮಾ ಪ್ರಸಾರದ ವೇಳೆ ಭುವಿ ಮತ್ತೆ ‘ನಿಮ್ಮ ಹುಡುಗಿ ಎಲ್ಲಿ? ನನಗೆ ಯಾವಾಗ ಪರಿಚಯ ಮಾಡಿಸುತ್ತೀರಿ’ ಎಂದು ಕೇಳಿದಳು. ಇದಕ್ಕೆ ಹರ್ಷನಿಂದ ‘ಪರಿಚಯ ಮಾಡಿಸುತ್ತೇನೆ. ಈಗ ಸಿನಿಮಾ ನೋಡಿ ಪ್ಲೀಸ್​’ ಎನ್ನುವ ಉತ್ತರ ಬಂತು.

ಭುವಿ ಪದೇಪದೇ ನಿಮ್ಮ ಹುಡುಗಿ ಯಾರು ಎಂದು ಹರ್ಷನ ಬಳಿ ಕೇಳುತ್ತಲೇ ಇದ್ದಾಳೆ. ಆದರೆ, ಇದಕ್ಕೆ ಹರ್ಷನಿಗೆ ಉತ್ತರ ಕೊಡೋಕೆ ಆಗುತ್ತಿಲ್ಲ. ಹರ್ಷ ಪ್ರಪೋಸ್​ ಮಾಡಿದರೆ ಅದನ್ನು ಭುವಿ ಒಪ್ಪಿಕೊಳ್ಳುತ್ತಾಳಾ ಅನ್ನೋದು ಸದ್ಯದ ಕುತೂಹಲ.

ಇದನ್ನೂ ಓದಿ: ಜನ ಮೆಚ್ಚಿಕೊಂಡ ‘ಕನ್ನಡತಿ’ ಜೋಡಿಗೆ ಸಿಕ್ತು ಅವಾರ್ಡ್​; ಸಂಭ್ರಮಿಸಿದ ಕಿರಣ್​ ರಾಜ್​, ರಂಜನಿ ರಾಘವನ್​

‘ಕನ್ನಡತಿ’ ವರುಧಿನಿ ಪರವಾಗಿ ಧ್ವನಿ ಎತ್ತಿದ ವೀಕ್ಷಕರು; ಇದಕ್ಕೆ ಕಾರಣ ಶ್ವೇತಾ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ