AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾನಿಯಾ ಹಣೆಗೆ ಗನ್​ ಇಟ್ಟು ಬುಲೆಟ್ ಹಾರಿಸಿದ ಹರ್ಷ; ಮನೆ ಮಂದಿಗೆ ಆಘಾತ

Kannadathi Serial: ‘ನೀವು ಬದಲಾಗಿಲ್ಲ. ನಿಮ್ಮನ್ನು ಮುಗಿಸೇ ಬಿಡ್ತೀನಿ’ ಎಂದು ಹರ್ಷ ಟ್ರಿಗರ್ ಒತ್ತಿದ್ದಾನೆ. ಗನ್​ನಿಂದ ಬುಲೆಟ್ ಕೂಡ ಹಾರಿದೆ.

ಸಾನಿಯಾ ಹಣೆಗೆ ಗನ್​ ಇಟ್ಟು ಬುಲೆಟ್ ಹಾರಿಸಿದ ಹರ್ಷ; ಮನೆ ಮಂದಿಗೆ ಆಘಾತ
‘ಕನ್ನಡತಿ’ ಧಾರಾವಾಹಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on:Oct 06, 2022 | 10:00 AM

Share

‘ಕನ್ನಡತಿ’ ಧಾರಾವಾಹಿಯ (Kannadathi serial) ಕಥಾ ನಾಯಕ ಹರ್ಷನಿಗೆ ಎಲ್ಲಿಲ್ಲದ ಕೋಪ. ಆತನಿಗೆ ಸಿಟ್ಟು ಸದಾ ಮೂಗಿನ ತುದಿಯಲ್ಲೇ ಇರುತ್ತದೆ. ಯಾರಾದರೂ ಅವನನ್ನು ಕೆಣಕಿದರೆ ಏಕಾಏಕಿ ಸಿಟ್ಟು ಬರುತ್ತದೆ. ಈ ವಿಚಾರ ಗೊತ್ತಿದ್ದೂ ಸಾನಿಯಾ ಯಾವಾಗಲೂ ಹರ್ಷನ ಕೆಣಕುತ್ತಾಳೆ. ಆತ ಏನೂ ಮಾಡುವುದಿಲ್ಲ, ರತ್ನಮಾಲಾ ತನ್ನನ್ನು ರಕ್ಷಿಸುತ್ತಾಳೆ ಎಂಬ ನಂಬಿಕೆ ಮೇಲೆ ಮೆರೆಯುತ್ತಿದ್ದಾಳೆ. ಆದರೆ, ಇತ್ತೀಚೆಗೆ ಅವಳ ಲೆಕ್ಕಾಚಾರ ಉಲ್ಟಾ-ಪಲ್ಟಾ ಆಗುತ್ತಿದೆ. ಎಂಡಿ ಪಟ್ಟ ಶೀಘ್ರವೇ ಹೋಗುವ ಸೂಚನೆ ಸಿಕ್ಕಿದೆ. ಈ ಮಧ್ಯೆ ಹರ್ಷನ ಗನ್​ನಿಂದ ಬುಲೆಟ್ ಹಾರಿದೆ. ಗನ್​ನಿಂದ ಹೊರಟ ಬುಲೆಟ್ ಹೊಕ್ಕಿದ್ದು ಯಾರಿಗೆ ಎಂಬುದು ಸದ್ಯದ ಕುತೂಹಲ.

ಹರ್ಷ ಹಾಗೂ ಸಾನಿಯಾ ಮಧ್ಯೆ ವಾರ್ ನಡೆಯುತ್ತಲೇ ಬರುತ್ತಿದೆ. ಈಗ ಅದು ಮಿತಿಮೀರಿದೆ. ಭುವಿಯನ್ನು ಕೆಲಸದಿಂದ ತೆಗೆಯಲು ಸಾನಿಯಾ ಸಂಚು ನಡೆಸಿ ಯಶಸ್ವಿ ಆಗಿದ್ದಳು. ಈ ವಿಚಾರ ಹರ್ಷನಿಗೆ ತಿಳಿದಿದೆ. ಇದರಿಂದ ಆತ ಸಿಟ್ಟಾಗಿದ್ದಾನೆ. ಅಷ್ಟೇ ಅಲ್ಲ, ಅವಳ ವಿರುದ್ಧ ಹಗೆ ತೀರಿಸಿಕೊಳ್ಳಲು ನಿರ್ಧರಿಸಿದ್ದಾನೆ. ಈ ಬಾರಿ ಆತನ ದ್ವೇಷ ಮಿತಿಮೀರಿದೆ.

ಭುವಿಯನ್ನು ಕೆಲಸದಿಂದ ತೆಗೆಯಲು ಸಂಚು ರೂಪಿಸಿದ್ದು ಸಾನಿಯಾ. ಇದಕ್ಕೆ ಸಹಾಯ ಮಾಡಿದ್ದು ನೀಲೇಶ್ ಎಂಬ ವ್ಯಕ್ತಿ. ಆತನಿಗೆ ದುಡ್ಡುಕೊಟ್ಟು ಈ ಕೆಟ್ಟ ಕೆಲಸವನ್ನು ಮಾಡಿಸಿದ್ದಾಳೆ. ಈಗ ಹರ್ಷನ ಬೆದರಿಕೆಗೆ ಹೆದರಿರುವ ಆತ ಹರ್ಷನ ಬಳಿ ತಪ್ಪು ಒಪ್ಪಿಕೊಂಡಿದ್ದ. ‘ಏನಾದರೂ ಹೆಚ್ಚುಕಮ್ಮಿ ಆದರೆ ಬೇಕಾಗುತ್ತದೆ ಎಂಬ ಕಾರಣಕ್ಕೆ ಸಾನಿಯಾ ಅವರೇ ನನಗೆ ಗನ್ ನೀಡಿದ್ದರು’ ಎಂದು ಹರ್ಷನ ಎದುರು ನೀಲೇಶ್ ಒಪ್ಪಿಕೊಂಡಿದ್ದಾನೆ. ಇದನ್ನು ಕೇಳಿ ಹರ್ಷನಿಗೆ ಕೋಪ ಹೆಚ್ಚಿದೆ.

ಇದನ್ನೂ ಓದಿ
Image
‘ನಿಮ್ಮನ್ನು ಸುಡಬೇಕೋ ಅಥವಾ ಹೂಳಬೇಕೋ ನಿರ್ಧರಿಸುತ್ತೇನೆ’; ಸಾನಿಯಾಗೆ ಹರ್ಷನ ಎಚ್ಚರಿಕೆ
Image
ಹರ್ಷ ಎದುರು ಕತ್ತಿ, ಪಿಸ್ತೂಲ್ ಹಿಡಿದು ನಿಂತ ಸಾನಿಯಾ ಬಲಗೈ ಬಂಟ; ಆ ಬಳಿಕ ನಡೆದಿದ್ದು ಮಾತ್ರ ಅಚ್ಚರಿ
Image
ಸಾನಿಯಾ ಬಲಗೈ ಬಂಟನ ಅವಾಂತರ; ರತ್ನಮಾಲಾ ಎದುರು ಹೊರ ಬೀಳಲಿದೆಯೇ ಅಸಲಿ ವಿಚಾರ?
Image
10 ತಲೆ ರಾವಣನಾದ ಹರ್ಷ; ವಿಚಿತ್ರ ರೂಪ ನೋಡಿ ಭಯಬಿದ್ದ ಮನೆ ಮಂದಿ

ರತ್ನಮಾಲಾ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿತ್ತು. ಗೊಂಬೆಗಳನ್ನು ಕೂರಿಸಿ ಪೂಜೆ ಮಾಡಲಾಗುತ್ತಿತ್ತು. ಕುಂಕುಮ ಹಿಡಿದು ಬಂದ ಸಾನಿಯಾಗೆ ಹರ್ಷ ತೊಂದರೆ ಕೊಟ್ಟಿದ್ದಾನೆ. ಅವಳ ಮುಖಕ್ಕೆ ಕುಂಕುಮ ಸೋಕಿ ಕ್ಷಮೆ ಕೇಳಿದ್ದಾನೆ. ಇದರಿಂದ ಸಾನಿಯಾಗೆ ಸಿಟ್ಟು ಬಂದಿದೆ.

ನೀಲೇಶ್​ಗೆ ಸಾನಿಯಾ ಕೊಟ್ಟ ಗನ್​ ಅನ್ನು ಹರ್ಷ ತೆಗೆದುಕೊಂಡು ಬಂದಿದ್ದ. ಪೂಜೆ ಸಂದರ್ಭದಲ್ಲಿ ಗನ್ ತೆಗೆದ ಹರ್ಷ ಆಕೆಯ ಹಣೆಗೆ ಹಿಡಿದಿದ್ದಾನೆ. ‘ಇಷ್ಟು ದಿನ ನೀವು ಮಾಡುತ್ತಿದ್ದ ಎಲ್ಲವನ್ನೂ ಸಹಿಸಿಕೊಂಡು ಬಂದೆ. ನೀವು ಬದಲಾಗುತ್ತೀರಿ ಎಂದು ಭಾವಿಸುತ್ತಲೇ ಇದ್ದೆ. ಆದರೆ, ನೀವು ಬದಲಾಗಿಲ್ಲ. ನಿಮ್ಮನ್ನು ಮುಗಿಸೇ ಬಿಡ್ತೀನಿ’ ಎಂದು ಹರ್ಷ ಟ್ರಿಗರ್ ಒತ್ತಿದ್ದಾನೆ. ಗನ್​ನಿಂದ ಬುಲೆಟ್ ಕೂಡ ಹಾರಿದೆ. ಆದರೆ, ಈ ಬುಲೆಟ್ ಸಾನಿಯಾಳ ತಲೆ ಹೊಕ್ಕಿತೇ ಅಥವಾ ಇಲ್ಲವೇ ಅನ್ನೋದು ಸದ್ಯದ ಕುತೂಹಲ.

ಸಾನಿಯಾಳ ಕೋರಿಕೆ ಮೇರೆಗೆ ಮಾಧ್ಯಮದ ಇಬ್ಬರು ರತ್ನಮಾಲಾ ಸಂದರ್ಶನ ಪಡೆಯಲು ಬಂದಿದ್ದರು. ಅವರು ಈ ಘಟನೆ ನಡೆಯುವ ಸಂದರ್ಭದಲ್ಲಿ ಮೆತ್ತಿಮೇಲೆ ನಿಂತು ಇದೆಲ್ಲವನ್ನೂ ಶೂಟ್ ಮಾಡುತ್ತಿದ್ದರು. ಟಿಆರ್​ಪಿಗೋಸ್ಕರ ಈ ವಿಡಿಯೋವನ್ನು ಅವರು ಪ್ರಸಾರ ಮಾಡೋದು ಪಕ್ಕಾ. ಇದು ಹರ್ಷನ ರೆಪ್ಯುಟೇಷನ್​ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ವರುಧಿನಿ ಪಾತ್ರ ‘ಕನ್ನಡತಿ’ ಧಾರಾವಾಹಿಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಈ ಪಾತ್ರ ಮಾಡುತ್ತಿರುವ ಸಾರಾ ಅಣ್ಣಯ್ಯ ಅವರು ಟ್ರಿಪ್ ತೆರಳಿದ್ದಾರೆ. ತಾಜ್​ಮಹಲ್ ಮೊದಲಾದ ಕಡೆಗಳಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ. ಈ ಕಾರಣಕ್ಕೆ ಅವರು ಧಾರಾವಾಹಿಯಲ್ಲಿ ಅಷ್ಟಾಗಿ ಕಾಣಿಸುತ್ತಿಲ್ಲ.

ಶ್ರೀಲಕ್ಷ್ಮಿ ಎಚ್.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:30 am, Wed, 5 October 22

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ