AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷ ಎದುರು ಕತ್ತಿ, ಪಿಸ್ತೂಲ್ ಹಿಡಿದು ನಿಂತ ಸಾನಿಯಾ ಬಲಗೈ ಬಂಟ; ಆ ಬಳಿಕ ನಡೆದಿದ್ದು ಮಾತ್ರ ಅಚ್ಚರಿ

ಹರ್ಷನ ಪತ್ನಿ ಭುವಿಯನ್ನು ಕೆಲಸದಿಂದ ತೆಗೆಯಲು ಸಾನಿಯಾ ಪ್ಲ್ಯಾನ್ ಒಂದನ್ನು ರೂಪಿಸಿದ್ದಳು. ಈ ಸಂದರ್ಭದಲ್ಲಿ ಓರ್ವ ಯುವಕನನ್ನು ಆಕೆ ಆಯ್ಕೆ ಮಾಡಿಕೊಂಡಿದ್ದಳು. ಅಂದುಕೊಂಡಂತೆ ಸಾನಿಯಾ ಜಾಬ್ ಹೋಗಿತ್ತು. ಈ ಕಾರಣಕ್ಕೆ ತನ್ನ ಬಲಗೈ ಬಂಟನ ಮೇಲೆ ಸಾನಿಯಾಗೆ ಸಾಕಷ್ಟು ನಂಬಿಕೆ ಬಂದಿದೆ.

ಹರ್ಷ ಎದುರು ಕತ್ತಿ, ಪಿಸ್ತೂಲ್ ಹಿಡಿದು ನಿಂತ ಸಾನಿಯಾ ಬಲಗೈ ಬಂಟ; ಆ ಬಳಿಕ ನಡೆದಿದ್ದು ಮಾತ್ರ ಅಚ್ಚರಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 01, 2022 | 9:00 AM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಹಾಗೂ ಸಾನಿಯಾ ಮಧ್ಯೆ ವಾರ್ ನಡೆಯುತ್ತಲೇ ಇರುತ್ತದೆ. ಕೆಲವೊಂದು ವಿಚಾರಗಳಲ್ಲಿ ಶೀತಲ ಸಮರದ ರೀತಿಯಲ್ಲಿ ಕಿತ್ತಾಟ ನಡೆದರೆ ಇನ್ನೂ ಕೆಲ ಸಂದರ್ಭದಲ್ಲಿ ಓಪನ್ ಆಗಿಯೇ ಇಬ್ಬರೂ ಜಗಳ ಆಡಿಕೊಳ್ಳುತ್ತಾರೆ. ಕೆಲವೊಮ್ಮೆ ಅದು ಮಿತಿ ಮೀರಿದ್ದೂ ಇದೆ. ಈಗ ಸಾನಿಯಾಳನ್ನು ಮಟ್ಟಹಾಕಲು ಹರ್ಷ ಪ್ಲ್ಯಾನ್ ಒಂದನ್ನು ರೂಪಿಸಿದ್ದಾನೆ. ಹರ್ಷನ ಪ್ಲ್ಯಾನ್ ಸಕ್ಸಸ್ ಆದರೆ ಸಾನಿಯಾ (Saniya) ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್​​ನಿಂದ ಕೆಳಗೆ ಇಳಿಯೋದು ಪಕ್ಕಾ ಆಗಲಿದೆ. ಅಷ್ಟಕ್ಕೂ ಹರ್ಷ ಮಾಡಿದ್ದೇನು? ಆ ಪ್ರಶ್ನೆಗೆ ಈ ಸ್ಟೋರಿಯಲ್ಲಿದೆ ಉತ್ತರ.

ಹರ್ಷನ ಪತ್ನಿ ಭುವಿಯನ್ನು ಕೆಲಸದಿಂದ ತೆಗೆಯಲು ಸಾನಿಯಾ ಪ್ಲ್ಯಾನ್ ಒಂದನ್ನು ರೂಪಿಸಿದ್ದಳು. ಈ ಸಂದರ್ಭದಲ್ಲಿ ಓರ್ವ ಯುವಕನನ್ನು ಆಕೆ ಆಯ್ಕೆ ಮಾಡಿಕೊಂಡಿದ್ದಳು. ಆ ಕೆಲಸವನ್ನು ಆತ ಯಶಸ್ವಿಯಾಗಿ ಪೂರ್ತಿಗೊಳಿಸಿದ್ದ. ಅಂದುಕೊಂಡಂತೆ ಸಾನಿಯಾ ಜಾಬ್ ಹೋಗಿತ್ತು. ಈ ಕಾರಣಕ್ಕೆ ತನ್ನ ಬಲಗೈ ಬಂಟನ ಮೇಲೆ ಸಾನಿಯಾಗೆ ಸಾಕಷ್ಟು ನಂಬಿಕೆ ಬಂದಿದೆ. ಹೀಗಾಗಿ, ಉಂಗುರದ ಮೇಲಿದ್ದ ಡೈಮಂಡ್ ಮಾರಿ ಆತನಿಗೆ ದುಡ್ಡು ನೀಡಿದ್ದಾಳೆ. ಅಷ್ಟೇ ಅಲ್ಲ, ರತ್ನಮಾಲಾ ಬಳಿ ಇರುವ ಪ್ರಮುಖ ಫೈಲ್​ ಅನ್ನು ಕದ್ದು ತರುವಂತೆ ಸೂಚಿಸಿದ್ದಾಳೆ.

ಸಾನಿಯಾ ಅಂದುಕೊಂಡಿದ್ದೇ ಒಂದು ಅಲ್ಲಿ ನಡೆದಿದ್ದೇ ಇನ್ನೊಂದು. ಆಕೆಯ ಸಹಚರ ಕೆಲಸದ ವಿಚಾರದಲ್ಲಿ ಎಡವಟ್ಟೊಂದನ್ನು ಮಾಡಿಕೊಂಡಿದ್ದ. ಫೈಲ್ ಕದ್ದು ತರುವಾಗ ಅದು ರತ್ನಮಾಲಾ ಕಾಲ ಕೆಳಗೆ ಬಿದ್ದು ಹೋಗಿದೆ. ಇದನ್ನು ನೋಡಿದ ರತ್ನಮಾಲಾ ಬೈಯ್ಯಬೇಕು ಅಂದುಕೊಂಡಿದ್ದಳು. ಆದರೆ, ಬೈದಿಲ್ಲ. ಬದಲಿಗೆ ಮಾತಿನಲ್ಲೇ ತಿವಿದಿದ್ದಾಳೆ. ಇದಾದ ಮರುದಿನ ಸಾನಿಯಾ ಸಹಚರ ಗನ್ ಹಾಗೂ ಚಾಕು ಹಿಡಿದು ಹರ್ಷನ ಎದುರು ಪ್ರತ್ಯಕ್ಷನಾಗಿದ್ದಾನೆ!

ಇದನ್ನೂ ಓದಿ
Image
ಏಕವಚನದಲ್ಲಿ ಬೈಸಿಕೊಂಡು, ಆಸ್ಪತ್ರೆಯಲ್ಲಿ ನಿದ್ರಿಸಿದ ಸಾನಿಯಾ; ಆದ ಅವಮಾನಕ್ಕೆ ಸೇಡು ತೀರಿಸಿಕೊಳ್ತಾಳಾ ರತ್ನಮಾಲಾ ಸೊಸೆ?
Image
‘ಕನ್ನಡತಿ’ ಧಾರಾವಾಹಿಯಿಂದ ಹೊರ ನಡೆದ ರಕ್ಷಿತ್; ‘ಬಿಗ್ ಬಾಸ್​’ ಎಂಟ್ರಿ ಬಗ್ಗೆ ಶುರು ಆಗಿದೆ ಚರ್ಚೆ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಹರ್ಷ ದೂರವಾಣಿಯಲ್ಲಿ ಏನನ್ನೋ ಮಾತನಾಡುತ್ತಿದ್ದ. ಆ ಸಂದರ್ಭಕ್ಕೆ ಸರಿಯಾಗಿ ಸಾನಿಯಾ ಸಹಚರ ಹರ್ಷನ ಎದುರು ಪ್ರತ್ಯಕ್ಷನಾಗಿದ್ದಾನೆ. ಅವನ ಕೈನಲ್ಲಿ ಗನ್ ಹಾಗೂ ಚಾಕು ಇತ್ತು. ಇದನ್ನು ನೋಡಿದ ತಕ್ಷಣವೇ ಹರ್ಷನಿಗೆ ಕೋಪ ಉಕ್ಕಿದೆ. ಆತನಿಗೆ ಬದಲಾಗುವಂತೆ ಈ ಮೊದಲೇ ಹರ್ಷ ಬುದ್ಧಿವಾದ ಹೇಳಿದ್ದ. ಆದರೆ, ಈತ ಬದಲಾಗುವವನಲ್ಲ ಎಂದು ಭಾವಿಸಿ ಆತನ ಮೇಲೆ ಹರ್ಷ ಹಲ್ಲೆ ಮಾಡಿದ್ದಾನೆ. ಮುಖಮೂತಿ ನೋಡದೆ ಹೊಡೆದಿದ್ದಾನೆ.

ಹರ್ಷನ ಏಟು ಬೀಳುತ್ತಿದ್ದಂತೆ ಸಾನಿಯಾ ಸಹಚರ ಅಸಲಿ ವಿಚಾರ ಏನು ಎಂಬುದನ್ನು ಒಪ್ಪಿಕೊಂಡಿದ್ದಾನೆ. ‘ನನ್ನ ತಾಯಿ ಆಸ್ಪತ್ರೆ ಸೇರಿದ್ದರು. ಅವರನ್ನು ಭುವಿ ಅವರೇ ಬದುಕಿಸಿದ್ದಾರೆ. ನಮ್ಮ ಟೀಚರ್​ಗೆ ಮೋಸ ಮಾಡೋಕೆ ಮನಸ್ಸು ಬರುತ್ತಿಲ್ಲ. ಹೀಗಾಗಿ ಸರೆಂಡರ್ ಆಗೋಕೆ ಬಂದಿದ್ದೇನೆ. ಈ ಗನ್ ಹಾಗೂ ಚಾಕು ನೀಡಿದ್ದು ಸಾನಿಯಾ. ನನ್ನ ರಕ್ಷಣೆಗೆಂದು ಅವರೇ ನನಗೆ ಇದನ್ನೆಲ್ಲ ನೀಡಿದ್ದರು’ ಎಂದು ತಪ್ಪು ಒಪ್ಪಿಕೊಂಡಿದ್ದಾನೆ ಆತ. ಈ ಮಾತನ್ನು ಕೇಳಿ ಹರ್ಷನಿಗೆ ಅಚ್ಚರಿ ಆಗಿದೆ. ಗನ್ ಹಿಡಿದು ಆತ ಸಾಯಿಸಲು ಬಂದಿದ್ದಾನೆ ಎಂದು ಹರ್ಷ ಭಾವಿಸಿದ್ದ. ಆದರೆ ಅಲ್ಲಿ ನಡೆದಿದ್ದೇ ಬೇರೆ.

ಇದನ್ನೂ ಓದಿ: ಸಾನಿಯಾ ಬಲಗೈ ಬಂಟನ ಅವಾಂತರ; ರತ್ನಮಾಲಾ ಎದುರು ಹೊರ ಬೀಳಲಿದೆಯೇ ಅಸಲಿ ವಿಚಾರ?

ಸಾನಿಯಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕು ಎಂದು ಹರ್ಷ ಕಾಯುತ್ತಲೇ ಇದ್ದಾನೆ. ಈಗ ಸಾನಿಯಾ ಬಲಗೈ ಬಂಟನೇ ಬಂದು ಹರ್ಷನ ಬಳಿ ತಪ್ಪು ಒಪ್ಪಿಕೊಂಡಿದ್ದಾನೆ. ಈ ಕಾರಣದಿಂದ ಹರ್ಷನಿಗೆ ತನ್ನ ಹಗೆ ತೀರಿಸಿಕೊಳ್ಳಲು ಒಂದೊಳ್ಳೆಯ ಅವಕಾಶ ಸಿಕ್ಕಂತೆ ಆಗಿದೆ. ಸಾನಿಯಾ ಎದುರು ಈತನನ್ನು ಕರೆದುಕೊಂಡು ಹೋಗಿ ನಿಲ್ಲಿಸಿ, ಅಸಲಿ ವಿಚಾರ ಬಯಲು ಮಾಡಿದರೆ ಸಾನಿಯಾ ಮತ್ತೊಂದು ಮುಖ ಅನಾವರಣ ಆಗಬಹುದು ಎಂಬುದು ಹರ್ಷನ ಆಲೋಚನೆ. ಧಾರಾವಾಹಿಗೆ ಯಾವ ರೀತಿಯಲ್ಲಿ ಟ್ವಿಸ್ಟ್ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಶ್ರೀಲಕ್ಷ್ಮಿ ಎಚ್.

ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ