AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ಯಲ್ಲಿ ಟ್ವಿಸ್ಟ್​​: ಭುವಿಯನ್ನು ಕೊಲ್ಲಲು ಸಾನಿಯಾ ಸುಪಾರಿ; ಇದಕ್ಕೆ 5 ಲಕ್ಷ ನೀಡಿದ್ದು ರತ್ನಮಾಲಾ

ರತ್ನಮಾಲಾ ಮನೆಯ ಆಸ್ತಿ ಸೌಪರ್ಣಿಕಾ ಹೆಸರಲ್ಲಿದೆ. ಈ ಹೆಸರಿನ ಮತ್ತೊಂದು ಯುವತಿಯನ್ನು ಹರ್ಷ ಕರೆತಂದಿದ್ದ. ಆ ಸಂದರ್ಭದಲ್ಲಿ ನಕಲಿ ಸೌಪರ್ಣಿಕಾಳನ್ನು ನಿಜವಾದ ಸೌಪರ್ಣಿಕ ಎಂದು ತಿಳಿದು ಕೊಲೆ ಮಾಡೋಕೆ ಸುಪಾರಿ ಕೊಟ್ಟಿದ್ದು ಇದೇ ಸಾನಿಯಾ.

‘ಕನ್ನಡತಿ’ಯಲ್ಲಿ ಟ್ವಿಸ್ಟ್​​: ಭುವಿಯನ್ನು ಕೊಲ್ಲಲು ಸಾನಿಯಾ ಸುಪಾರಿ; ಇದಕ್ಕೆ 5 ಲಕ್ಷ ನೀಡಿದ್ದು ರತ್ನಮಾಲಾ
ಸಾನಿಯಾ-ರತ್ನಾಮಾಲಾ-ಭುವಿ
TV9 Web
| Edited By: |

Updated on: Feb 25, 2022 | 3:00 PM

Share

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಮತ್ತು ಭುವಿ ಪ್ರೀತಿಯನ್ನು ತುಂಬಾನೇ ಗುಟ್ಟಾಗಿ ಇಡಲಾಗಿದೆ. ಹರ್ಷನ ತಾಯಿ ರತ್ನಮಾಲಾ ಕುಟುಂಬದ ಕೆಲವರಿಗೆ ಈ ವಿಚಾರ ಗೊತ್ತಿಲ್ಲ. ಈ ವಿಚಾರದಲ್ಲಿ ಗುಟ್ಟು ಮಾಡುವುದಕ್ಕೂ ಒಂದು ಕಾರಣ ಇದೆ. ಈ ವಿಚಾರ ಎಲ್ಲರಿಗೂ ಗೊತ್ತಾದರೆ ಭುವಿಗೆ ಯಾವ ಕ್ಷಣದಲ್ಲಿ ಬೇಕಾದರೂ ತೊಂದರೆ ಎದುರಾಗಬಹುದು. ಆದರೆ, ಧಾರಾವಾಹಿಯ ವಿಲನ್​ ಸಾನಿಯಾಗೆ ಈ ವಿಷಯ ತಿಳಿದು ಹೋಗಿದೆ. ಹರ್ಷ-ಭುವಿ ವಿಚಾರ ಗೊತ್ತಾಗಿದೆ ಎಂಬುದನ್ನು ಆಕೆ ತಾಯಿಯನ್ನು ಬಿಟ್ಟು ಮತ್ತಾರಿಗೂ ಹೇಳಿಲ್ಲ. ಈಗ ಸಾನಿಯಾ (Saniya) ಒಳಗೊಳಗೆ ಸಂಚು ರೂಪಿಸುತ್ತಿದ್ದಾಳೆ. ಈಗ ಸಾನಿಯಾ ತಲೆಯಲ್ಲಿ ಕ್ರಿಮಿನಲ್​ ಐಡಿಯಾ ಬಂದಿದೆ. ಭುವಿಯನ್ನು ಕೊಲ್ಲೋಕೆ ಸುಪಾರಿ ನೀಡಿದ್ದಾಳೆ. ಇದಕ್ಕೆ ಆಕೆ ರತ್ನಮಾಲಾಳಿಂದ ಹಣ ಪಡೆದಿದ್ದಾಳೆ!

ರತ್ನಮಾಲಾ ಮನೆಯ ಆಸ್ತಿ ಸೌಪರ್ಣಿಕಾ ಹೆಸರಲ್ಲಿದೆ. ಈ ಸೌಪರ್ಣಿಕಾ ಬೇರಾರು ಅಲ್ಲ ಹರ್ಷನ ಲವರ್​ ಭುವಿ. ಅವಳ ಮೂಲ ಹೆಸರು ಸೌಪರ್ಣಿಕಾ. ಈ ಹೆಸರಿನ ಮತ್ತೊಂದು ಯುವತಿಯನ್ನು ಹರ್ಷ ಕರೆತಂದಿದ್ದ. ಆ ಸಂದರ್ಭದಲ್ಲಿ ನಕಲಿ ಸೌಪರ್ಣಿಕಾಳನ್ನು ನಿಜವಾದ ಸೌಪರ್ಣಿಕ ಎಂದು ತಿಳಿದು ಕೊಲೆ ಮಾಡೋಕೆ ಸುಪಾರಿ ಕೊಟ್ಟಿದ್ದು ಇದೇ ಸಾನಿಯಾ. ಈ ಆಲೋಚನೆ ಹೊಳೆದಿದ್ದು ಅವಳ ತಾಯಿಯಿಂದ. ಈಗ ಭುವಿಯನ್ನು ರೇಸ್​ನಿಂದ ಹಿಂದೆ ಸರಿಸಲು ಸಾನಿಯಾ ಸುಪಾರಿ ನೀಡಿದ್ದಾಳೆ.

ಹಿಂದಿನ ಬಾರಿ ಸುಪಾರಿ ನೀಡುವಾಗ ಸಾನಿಯಾ ರತ್ನಮಾಲಾಳ ಸಂಸ್ಥೆಯ ಹಣ ಬಳಕೆ ಮಾಡಿಕೊಂಡಿದ್ದಳು. ಆದರೆ, ಈ ಬಾರಿ ಆ ರೀತಿ ಮಾಡಿಲ್ಲ. ಬದಲಿಗೆ ರತ್ನಮಾಲಾ ಬಳಿಯೇ ಹಣ ಕೇಳಿದ್ದಾಳೆ. ‘ನನಗೆ ಐದು ಲಕ್ಷ ರೂಪಾಯಿ ಹಣ ಬೇಕು. ಏಕೆ ಎಂದು ಪ್ರಶ್ನೆ ಮಾಡಬೇಡಿ. ನಾನು ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತೇನೆ. ಮುಂದೆ ಅದು ನಿಮಗೇ ತಿಳಿಯುತ್ತದೆ’ ಎಂದಳು ಸಾನಿಯಾ. ಇದಕ್ಕೆ ಮರುಮಾತಾಡದೆ ರತ್ನಮಾಲಾ ಹಣ ನೀಡಿದ್ದಾಳೆ.

ಈ ಹಣವನ್ನು ತೆಗೆದುಕೊಂಡು ಸಾನಿಯಾ ನೇರವಾಗಿ ಸುಪಾರಿ ಕಿಲ್ಲರ್​ ಬಳಿ ತೆರಳಿದ್ದಾಳೆ. ಐದು ಲಕ್ಷ ರೂಪಾಯಿ ಹಣವನ್ನು ಆತನಿಗೆ ನೀಡಿ ಭುವಿಯ ಫೋಟೋ ತೋರಿಸಿದ್ದಾಳೆ. ‘ಈಕೆ ಒಂದು ಗುಡ್ಡ ಇದೆ. ಆ ಪ್ರದೇಶಕ್ಕೆ ಇವಳು ಬರುತ್ತಾಳೆ. ಬಂದ ತಕ್ಷಣ ಅವಳನ್ನು ದೂಡಿ ಹತ್ಯೆ ಮಾಡಿಬಿಡು. ಇದು ನೋಡೋಕೆ ಅಪಘಾತ ಎಂದೇ ಅನಿಸಬೇಕು’ ಎಂದು ಸುಪಾರಿ ಕಿಲ್ಲರ್​ಗೆ ಹೇಳಿ ಬಂದಿದ್ದಾಳೆ ಸಾನಿಯಾ. ಸಾನಿಯಾ ಸಂಚು ಯಶಸ್ವಿಯಾಗುತ್ತದೆಯೋ ಅಥವಾ ವಿಫಲವಾಗುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸುಚಿ-ಭವಿಷ್​ ನಿಶ್ಚಿತಾರ್ಥ ನಿಲ್ಲಿಸಲು ಭುವಿಯ ಪ್ಲಾನ್​; ಸಾನಿಯಾಗೆ ತಲೆನೋವಾದ ರೇಚಲ್​

ಹರ್ಷನಿಗೆ ಭುವಿಯ ಅದ್ದೂರಿ ಪ್ರಪೋಸ್​; ಭಾನುವಾರ ‘ಕನ್ನಡತಿ’ ಧಾರಾವಾಹಿ 2 ಗಂಟೆಯ ವಿಶೇಷ ಸಂಚಿಕೆ  

ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಅಸ್ಸಾಂನಲ್ಲಿ ಹಿಂಸಾಚಾರ; ಸರ್ಕಾರದಿಂದ ಭದ್ರತೆ, ಇಂಟರ್​​ನೆಟ್​ ಸೇವೆ ಸ್ಥಗಿತ
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಸಿದ್ದರಾಮಯ್ಯ ಭೇಟಿ ಬಳಿಕ ಬಿಗ್ ಅಪ್ಡೇಟ್ ಕೊಟ್ಟ ರಾಜಣ್ಣ!
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಬಿಜೆಪಿ ನಾಯಕಿಯಿಂದ ದೃಷ್ಟಿಹೀನ ಮಹಿಳೆಗೆ ಚಿತ್ರಹಿಂಸೆ; ವಿಡಿಯೋ ವೈರಲ್
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ಹೊಸ ಡಾಂಬರು ರಸ್ತೆಯ ಪರಿಶೀಲನೆಗೆ ಹೋದ ಸಚಿವೆಗೆ ಕಾದಿತ್ತು ಶಾಕ್!
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದೂರುದಾರರಿಂದ ಪೇಪರ್ ಬಂಡಲ್ ತರಿಸಿದ್ದ ಪಿಸಿ ಅಮಾನತು
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ದಾವಣಗೆರೆ: ಗಾಂಜಾ ಕೇಸ್​ನಲ್ಲಿ ರಿಯಲ್​ ಎಸ್ಟೇಟ್​ ಉದ್ಯಮಿ ಅರೆಸ್ಟ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಮದುವೆಯಲ್ಲಿ ಕನ್ಯಾದಾನದ ವೇಳೆ ಮಂಗನಿಂದ ಮದುಮಗಳಿಗೆ ಶಾಕ್
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಧನುಶ್ ಅನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಗ್​​ಬಾಸ್: ಕಣ್ಣೀರಾದ ಮನೆ ಮಂದಿ
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಹುಬ್ಬಳ್ಳಿ ಮರ್ಯಾದೆ ಹತ್ಯೆ: ಆಸ್ಪತ್ರೆ ಬಿಲ್​ ಭರಿಸಲಾಗದೆ ಕುಟುಂಬ ಕಂಗಾಲು
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!
ಮನೆಗಳಲ್ಲಿ ಕಳುವು ಮಾಡಿದ್ದಲ್ಲದೆ, ಚಹಾ ಮಾಡಿ ಕುಡಿದು ಹೋದ ಕಳ್ಳರು!