AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕನ್ನಡತಿ’ ಧಾರಾವಾಹಿ: ಹರ್ಷ-ಭುವಿ ಮದುವೆ ಮುರಿಯಲು ಸಾನಿಯಾ ಮಾಡಿದ ಹೊಸ ಪ್ಲ್ಯಾನ್​ ಯಶಸ್ವಿ ಆಗೋದು ಪಕ್ಕಾ?

ರತ್ನಮಾಲಾ ಸೊಸೆಯಾಗಿ ಬಂದರೆ ಭುವಿಗೆ ಅಧಿಕಾರ ಹಸ್ತಾಂತರ ಆಗೋದು ಬಹುತೇಕ ಖಚಿತ ಎಂಬುದು ಸಾನಿಯಾಗೂ ತಿಳಿದಿದೆ. ಹೀಗಾಗಿ, ಈ ಮದುವೆಯನ್ನು ಮುಂದೂಡಲು ಎಲ್ಲಿಲ್ಲದ ಪ್ಲ್ಯಾನ್ ರೂಪಿಸುತ್ತಿದ್ದಾಳೆ ಸಾನಿಯಾ.

‘ಕನ್ನಡತಿ’ ಧಾರಾವಾಹಿ: ಹರ್ಷ-ಭುವಿ ಮದುವೆ ಮುರಿಯಲು ಸಾನಿಯಾ ಮಾಡಿದ ಹೊಸ ಪ್ಲ್ಯಾನ್​ ಯಶಸ್ವಿ ಆಗೋದು ಪಕ್ಕಾ?
ಹರ್ಷ-ಭುವಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Feb 03, 2022 | 4:58 PM

Share

‘ಕನ್ನಡತಿ’ ಧಾರಾವಾಹಿ (Kannadathi Serial) ಈಗ ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಹರ್ಷ ಮತ್ತು ಭುವಿ ಇಬ್ಬರೂ ಈಗ ಪ್ರೇಮ ಲೋಕದಲ್ಲಿ (Harsha And Bhuvi Lovestory)  ಕಳೆದು ಹೋಗಿದ್ದಾರೆ. ಭುವಿಯನ್ನು ಒಲಿಸಿಕೊಳ್ಳುವಲ್ಲಿ ಹರ್ಷ ಯಶಸ್ವಿಯಾಗಿದ್ದಾನೆ. ಹರ್ಷನ ತಾಯಿ ರತ್ನಮಾಲಾಳಿಗೂ ಭುವಿ ಸೊಸೆ ಆಗಿ ಬರುತ್ತಿರುವ ವಿಚಾರ ಖುಷಿ ನೀಡಿದೆ. ಹರ್ಷ ಮತ್ತು ಭುವಿ ಪ್ರೀತಿಸುತ್ತಿದ್ದಾರೆ ಎನ್ನುವ ವಿಚಾರ ಸಾನಿಯಾಗೆ ನೇರವಾಗಿ ಯಾರೂ ಹೇಳಿಲ್ಲ. ಆದರೆ, ಅವಳು ತನ್ನ ಕಳ್ಳಬುದ್ಧಿ ಉಪಯೋಗಿಸಿ ಇದನ್ನು ಪತ್ತೆ ಹಚ್ಚಿದ್ದಾಳೆ. ಇದರಿಂದ ಹರ್ಷ ಮತ್ತು ಭುವಿಗೆ ಸಂಕಷ್ಟ ಹೆಚ್ಚುವ ಸಾಧ್ಯತೆ ಅಧಿಕವಾಗಿದೆ. ಈ ಮಧ್ಯೆ ಇವರ ಮದುವೆ ಮುರಿಯೋಕೆ ಸಾನಿಯಾ ಮಾಸ್ಟರ್​ ಪ್ಲ್ಯಾನ್​ ಒಂದನ್ನು ರೂಪಿಸುತ್ತಿದ್ದಾಳೆ. ಇದು ಯಶಸ್ಸು ಕಾಣುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಭುವಿಯ ಮನೆಯನ್ನು ಕೆದಕಿ ನೋಡಿದಾಗ ಹರ್ಷನ ಜತೆಗಿನ ಪ್ರೀತಿ ವಿಚಾರ ಸಾನಿಯಾಗೆ ತಿಳಿದಿದೆ. ರತ್ನಮಾಲಾ ಸೊಸೆಯಾಗಿ ಬಂದರೆ ಭುವಿಗೆ ಅಧಿಕಾರ ಹಸ್ತಾಂತರ ಆಗೋದು ಬಹುತೇಕ ಖಚಿತ ಎಂಬುದು ಸಾನಿಯಾಗೂ ತಿಳಿದಿದೆ. ಹೀಗಾಗಿ, ಈ ಮದುವೆಯನ್ನು ಮುಂದೂಡಲು ಎಲ್ಲಿಲ್ಲದ ಪ್ಲ್ಯಾನ್ ರೂಪಿಸುತ್ತಿದ್ದಾಳೆ ಸಾನಿಯಾ. ಮದುವೆ ಮುಂದೂಡಿದರೆ ನಂತರ ಒಂದಷ್ಟು ಸಮಯ ಸಿಗುತ್ತದೆ. ಆ ಸಂದರ್ಭದಲ್ಲಿ ಬೇರೆ ಪ್ಲ್ಯಾನ್​ ರೂಪಿಸಬಹುದು ಎಂಬುದು ಅವಳ ಆಲೋಚನೆ.

ಹರ್ಷನ ತಂಗಿ ಸುಚಿಯ ಮದುವೆ ಮಾಡಲು ಪ್ಲ್ಯಾನ್​ ನಡೆದಿದೆ. ಆದರೆ, ಸುಚಿ ಈಗತಾನೇ ಕಾಲೇಜು ಓದುತ್ತಿದ್ದಾಳೆ. ಈಗ ಮದುವೆ ಬೇಡ ಎಂಬುದು ಅವಳ ಹಠ. ಆದರೆ, ಸಾನಿಯಾ ತಲೆಯಲ್ಲಿ ಓಡುತ್ತಿರುವ ಪ್ಲ್ಯಾನ್​ ಬೇರೆ. ಅವಳು ಸುಚಿ ಮದುವೆ ಮಾಡಲು ಯೋಜನೆ ರೂಪಿಸಿದ್ದಾರೆ. ಅದಕ್ಕೂ ಒಂದು ಕಾರಣವಿದೆ.

ಒಂದೊಮ್ಮೆ ಸುಚಿ ಮದುವೆ ಆದರೆ, ಹರ್ಷ ಮದುವೆ ಆಗುವುದು ವಿಳಂಬವಾಗುತ್ತದೆ. ಹೀಗಾದಲ್ಲಿ ಸಾನಿಯಾ ಒಂದು ಹಂತದಲ್ಲಿ ಗೆದ್ದಂತೆ. ಇದಿಷ್ಟೇ ಸಮಯದಲ್ಲಿ ಹರ್ಷನನ್ನು ಮಟ್ಟ ಹಾಕಲು ಅವಳು ಮತ್ತೊಂದು ಪ್ಲ್ಯಾನ್​ ರೂಪಿಸಬಹುದು. ಈ ಕಾರಣಕ್ಕೆ ಹರ್ಷನ ಮದುವೆ ಮುಂದೂಡಲು ಏನೆಲ್ಲ ಬೇಕೋ ಅದೆಲ್ಲವನ್ನೂ ಸಾನಿಯಾ ಮಾಡುತ್ತಿದ್ದಾಳೆ.

ಹರ್ಷನಿಗೆ ಸರ್​ಪ್ರೈಸ್​: 

ಸೋಮವಾರದ (ಜನವರಿ 31) ಎಪಿಸೋಡ್​ನಲ್ಲಿ ಹರ್ಷನಿಗೆ ಭುವಿ ಲವ್​ ಲೆಟರ್​ ಬರೆದಿದ್ದಾಳೆ. ಇದು ಆಕೆಯಿಂದ ಹರ್ಷನಿಗೆ ಬಂದ ಮೊದಲ ಪ್ರೇಮ ಬರಹ. ಈ ವಿಚಾರದಲ್ಲಿ ಆತ ಸಖತ್ ಖುಷಿಪಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಭುವಿ ಮತ್ತಷ್ಟು ಚೇಂಜ್​ ಆಗಲಿದ್ದಾಳೆ! ಈ ವಿಚಾರವನ್ನು ಸ್ವತಃ ಭುವಿ ಪಾತ್ರ ಮಾಡಿರುವ ರಂಜನಿ ರಾಘವನ್​ ಹೇಳಿಕೊಂಡಿದ್ದರು.

‘ಪ್ರೀತಿ ಹೇಳಿಕೊಳ್ಳುವುದರಲ್ಲಿರಬಹುದು ಅಥವಾ ಎಲ್ಲಾದರೂ ಕರೆದುಕೊಂಡು ಹೋಗುವುದರಲ್ಲಿರಬಹುದು, ಹರ್ಷನೇ ತುಂಬಾ ಎಫರ್ಟ್​ ಹಾಕುತ್ತಿದ್ದ. ಆದರೆ, ಭುವಿ ತನ್ನ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು, ಹರ್ಷನನ್ನು ಕರೆದುಕೊಂಡು ಒಂದಷ್ಟು ಪ್ಲ್ಯಾನಿಂಗ್​ ಮಾಡಿದ್ದಾಳೆ. ಅದೇನು ಎಂಬುದನ್ನು ಧಾರಾವಾಹಿಯಲ್ಲಿ ನೋಡಿ’ ಎಂದಿದ್ದರು ರಂಜನಿ ರಾಘವನ್​.

ಇದನ್ನೂ ಓದಿ: ‘ಕನ್ನಡತಿ’ ನಟಿ ರಂಜನಿ ರಾಘವನ್​ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ

ಭುವಿ ಸೀರೆ ಬಗ್ಗೆ ಅನೇಕರಿಗೆ ಇದೆ ತಕರಾರು; ರಂಜನಿ ರಾಘವನ್​ ಬಿಚ್ಚಿಟ್ಟ ಅಚ್ಚರಿ ಮಾಹಿತಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ