BBK9: ಮ್ಯಾಚ್​ ಫಿಕ್ಸಿಂಗ್​ ಆರೋಪದ ಮರು ವಾರವೇ ಬಿಗ್ ಬಾಸ್​ ಶೋಗೆ ಸುದೀಪ್​ ಗೈರು; ಮುನಿಸಿಕೊಂಡ್ರಾ ಕಿಚ್ಚ?

| Updated By: ಮದನ್​ ಕುಮಾರ್​

Updated on: Oct 22, 2022 | 9:40 PM

Bigg Boss Kannada: ಕಿಚ್ಚ ಸುದೀಪ್​ ಅವರು ಬಿಗ್​ ಬಾಸ್​ ಶೋ ತಪ್ಪಿಸಿಕೊಂಡಿದ್ದು ತೀರಾ ವಿರಳ. ವೀಕೆಂಡ್​ ಸಂಚಿಕೆಗಳಲ್ಲಿ ಅವರು ಇಲ್ಲ ಎಂದರೆ ಕಳೆಯೇ ಇರುವುದಿಲ್ಲ.

BBK9: ಮ್ಯಾಚ್​ ಫಿಕ್ಸಿಂಗ್​ ಆರೋಪದ ಮರು ವಾರವೇ ಬಿಗ್ ಬಾಸ್​ ಶೋಗೆ ಸುದೀಪ್​ ಗೈರು; ಮುನಿಸಿಕೊಂಡ್ರಾ ಕಿಚ್ಚ?
ಕಿಚ್ಚ ಸುದೀಪ್
Follow us on

ಕಳೆದ ವಾರ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ (Bigg Boss Kannada Season 9) ಶೋನಲ್ಲಿ ಕಿಚ್ಚ ಸುದೀಪ್​ ಅವರು ತುಂಬ ಕೋಪಗೊಂಡಿದ್ದರು. ಅದಕ್ಕೆ ಕಾರಣ ಆಗಿದ್ದು ಆರ್ಯವರ್ಧನ್​ ಗುರೂಜಿ (Aryavardhan Guruji) ಮಾಡಿದ ಒಂದು ಆರೋಪ. ಬಿಗ್​ ಬಾಸ್​ ಟಾಸ್ಕ್​ನಲ್ಲಿ ಮ್ಯಾಚ್​ ಫಿಕ್ಸಿಂಗ್ ಆಗಿರಬಹುದು ಎಂಬ ಅನುಮಾನ ಇದೆ ಎಂದು ಗುರೂಜಿ ಹೇಳಿದ್ದರು. ಅದನ್ನು ಕೇಳಿದ ಸುದೀಪ್​ಗೆ ಕೋಪ ನೆತ್ತಿಗೇರಿತ್ತು. ಈ ವೇದಿಕೆಗೆ ಇರುವ ಗೌರವ ಕಡಿಮೆ ಆಗಬಾರದು ಎಂದು ಅವರು ಖಡಕ್​ ಎಚ್ಚರಿಕೆ ನೀಡಿದ್ದರು. ಕೂಡಲೇ ಬ್ರೇಕ್​ ತೆಗೆದುಕೊಂಡು ಬಿರುಸಿನ ಮಾತಿಗೆ ಅಂತ್ಯ ಹಾಡಿದ್ದರು. ಕಾಕತಾಳೀಯ ಎಂಬಂತೆ ಈ ವಾರ ಬಿಗ್​ ಬಾಸ್​ ಶೋ ನಡೆಸಿಕೊಡಲು ಕಿಚ್ಚ ಸುದೀಪ್​ (Kichcha Sudeep) ಬಂದಿಲ್ಲ. ಅವರ ಅನುಪಸ್ಥಿತಿಯಲ್ಲೇ ವೀಕೆಂಡ್​ ಸಂಚಿಕೆ ಪ್ರಸಾರ ಆಗಿದೆ.

ಕಿಚ್ಚ ಸುದೀಪ್ ಅವರು ಮೊದಲ ಸೀಸನ್​ನಿಂದಲೂ ಬಿಗ್​ ಬಾಸ್​ ಶೋ ನಡೆಸಿಕೊಡುತ್ತಾ ಬಂದಿದ್ದಾರೆ. ಅವರ ನಿರೂಪಣೆಗೆ ಒಂದು ತೂಕ ಇದೆ. ಹಲವು ಬಗೆಯ ಮನಸ್ಥಿತಿ ಇರುವ ಸ್ಪರ್ಧಿಗಳನ್ನು ಅವರು ಚೆನ್ನಾಗಿ ನಿಭಾಯಿಸುತ್ತಾರೆ. ಎಂಥ ಸಂದರ್ಭ ಬಂದರೂ ಕಾರ್ಯಕ್ರಮ ಹಾದಿ ತಪ್ಪದ ರೀತಿಯಲ್ಲಿ ನೋಡಿಕೊಳ್ಳುತ್ತಾರೆ. ವೀಕೆಂಡ್​ ಸಂಚಿಕೆಗಳಲ್ಲಿ ಅವರು ಇಲ್ಲ ಎಂದರೆ ಕಳೆಯೇ ಇರುವುದಿಲ್ಲ. ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರ ನಾಲ್ಕನೇ ವಾರದ ವೀಕೆಂಡ್​ ಸಂಚಿಕೆಯಲ್ಲಿ ಅವರ ಅನುಪಸ್ಥಿತಿ ಕಾಡಿದೆ.

ಸುದೀಪ್​ ಅವರು ಬಿಗ್​ ಬಾಸ್​ ಶೋ ತಪ್ಪಿಸಿಕೊಂಡಿದ್ದು ತೀರಾ ವಿರಳ. ಕಳೆದ ಸೀಸನ್​ನಲ್ಲಿ ಅನಾರೋಗ್ಯದ ಕಾರಣದಿಂದ ಅವರು ಕೆಲವು ಸಂಚಿಕೆಗಳನ್ನು ನಡೆಸಿಕೊಡಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಅವರು ಗೈರು ಆಗಿರುವುದಕ್ಕೆ ಕಾರಣ ಏನು ಎಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಕಳೆದ ವಾರ ಗುರೂಜಿ ಅವರು ಬಿಗ್​ ಬಾಸ್​ ಬಗ್ಗೆ ಮಾಚ್​ ಫಿಕ್ಸಿಂಗ್​ ಆರೋಪ ಮಾಡಿದ್ದಕ್ಕೆ ಸುದೀಪ್​ ಕೋಪ ಮಾಡಿಕೊಂಡಿರಬಹುದೇ ಎಂಬ ಅನುಮಾನ ಕೂಡ ಮೂಡುವುದು ಸಹಜ. ಆದರೆ ಅಸಲಿಯತ್ತು ಬೇರೆಯೇ ಇದೆ.

ಇದನ್ನೂ ಓದಿ
BBK9: ಬಿಗ್​ ಬಾಸ್​ ಮೇಲೆ ಮ್ಯಾಚ್​ ಫಿಕ್ಸಿಂಗ್​ ಆರೋಪ; ಗುರೂಜಿ ವಿರುದ್ಧ ಗುಡುಗಿದ ಸುದೀಪ್​
BBK9: ಬಿಗ್​ ಬಾಸ್​ 2ನೇ ವಾರ ನವಾಜ್​ ಎಲಿಮಿನೇಟ್​; ದೊಡ್ಮನೆಯಲ್ಲಿ ನಡೆಯಲಿಲ್ಲ ಪ್ರಾಸದ ಆಟ
BBK9: ಬಿಗ್​ ಬಾಸ್​ನಿಂದ ಐಶ್ವರ್ಯಾ ಪಿಸ್ಸೆ ಎಲಿಮಿನೇಟ್​; ಒಂದೇ ವಾರಕ್ಕೆ ಮುಗಿಯಿತು ದೊಡ್ಮನೆ ಆಟ
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಕಿಚ್ಚ ಸುದೀಪ್ ಅವರು ಸಿನಿಮಾದ ಜೊತೆಯಲ್ಲಿ ಕುಟುಂಬಕ್ಕೂ ಹೆಚ್ಚು ಮಹತ್ವ ನೀಡುತ್ತಾರೆ. ಪತ್ನಿ ಪ್ರಿಯಾ ಜೊತೆ ವಿವಾಹ ವಾರ್ಷಿಕೋತ್ಸವ ಆಚರಿಸಲು ಅವರು ವಿದೇಶಕ್ಕೆ ತೆರಳಿದ್ದಾರೆ. ಆ ಕಾರಣದಿಂದ ಈ ವಾರದ ವೀಕೆಂಡ್​ ಸಂಚಿಕೆಯನ್ನು ನಡೆಸಿಕೊಡಲು ಸಾಧ್ಯವಾಗಿಲ್ಲ. ಆದಷ್ಟು ಬೇಗ ಅವರನ್ನು ಬಿಗ್​ ಬಾಸ್​ ವೇದಿಕೆ ಮೇಲೆ ನೋಡಲು ಅಭಿಮಾನಿಗಳು ಕಾದಿದ್ದಾರೆ. ಈ ವಾರ ಯಾರು ಎಲಿಮಿನೇಟ್​ ಆಗುತ್ತಾರೆ ಎಂಬದನ್ನು ತಿಳಿದುಕೊಳ್ಳುವ ಕೌತುಕ ಕೂಡ ಹೆಚ್ಚಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:40 pm, Sat, 22 October 22