ಬಿಗ್ ಬಾಸ್​ನಲ್ಲಿರುವ ಗುಂಪುಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಕಿಚ್ಚ ಸುದೀಪ್; ಖಡಕ್ ಎಚ್ಚರಿಕೆ

|

Updated on: Nov 19, 2023 | 10:20 AM

ಬಿಗ್ ಬಾಸ್​ ಗೇಮ್ ಆಡಲು ಒಂದು ಟೀಂ ಮಾಡಿತ್ತು. ಈ ಟೀಂನ ಗುಂಪಾಗಿ ಬದಲು ಮಾಡಿಕೊಂಡಿದ್ದರು ವಿನಯ್. ನಾಮಿನೇಷನ್​ನಿಂದ ಹಿಡಿದು ಎಲ್ಲಾ ವಿಚಾರದಲ್ಲಿ ಗುಂಪುಗಾರಿಕೆ ನಡೆಯುತ್ತಲೇ ಇದೆ. ಈ ಬಗ್ಗೆ ಸುದೀಪ್ ಸಿಟ್ಟಾಗಿದ್ದಾರೆ.

ಬಿಗ್ ಬಾಸ್​ನಲ್ಲಿರುವ ಗುಂಪುಗಾರಿಕೆ ವಿರುದ್ಧ ಮತ್ತೆ ಸಿಡಿದೆದ್ದ ಕಿಚ್ಚ ಸುದೀಪ್; ಖಡಕ್ ಎಚ್ಚರಿಕೆ
ಸುದೀಪ್
Follow us on

ಬಿಗ್ ಬಾಸ್​ನಲ್ಲಿ ಈ ಬಾರಿ ಓಪನ್ ಆಗಿ ಗುಂಪುಗಾರಿಕೆ ನಡೆಯುತ್ತಲೇ ಇದೆ. ಇದರ ಬಗ್ಗೆ ಸುದೀಪ್ ಅವರು ಎರಡು ವಾರಗಳ ಹಿಂದೆ ಖಡಕ್ ಎಚ್ಚರಿಕೆ ನೀಡಿದ್ದರು. ಆದರೆ, ಮನೆ ಮಂದಿ ಇದನ್ನು ಮತ್ತೆ ಮುಂದುವರಿಸಿದ್ದಾರೆ. ವಿನಯ್ ಅವರು ಒಂದು ಗುಂಪು ಮಾಡಿಕೊಂಡಿದ್ದಾರೆ. ಇದರಲ್ಲಿ ಸ್ನೇಹಿತ್ ಹಾಗೂ ನಮ್ರತಾ ಇದ್ದಾರೆ. ಮತ್ತೊಂದು ಗುಂಪಿನಲ್ಲಿ ಕಾರ್ತಿಕ್, ಸಂಗೀತಾ, ತನಿಷಾ (Tanisha) ಇದ್ದಾರೆ. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಡ್ರೋನ್ ಪ್ರತಾಪ್ ಕೂಡ ಒಂದು ಗ್ರೂಪ್​ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಸುದೀಪ್ ಅಸಮಾಧಾನ ಹೊರಹಾಕಿದ್ದಾರೆ.

ಬಿಗ್ ಬಾಸ್​ ಗೇಮ್ ಆಡಲು ಒಂದು ಟೀಂ ಮಾಡಿತ್ತು. ಈ ಟೀಂನ ಗುಂಪಾಗಿ ಬದಲು ಮಾಡಿಕೊಂಡಿದ್ದರು ವಿನಯ್. ನಾಮಿನೇಷನ್​ನಿಂದ ಹಿಡಿದು ಎಲ್ಲಾ ವಿಚಾರದಲ್ಲಿ ಗುಂಪುಗಾರಿಕೆ ನಡೆಯುತ್ತಲೇ ಇದೆ. ಈ ಬಗ್ಗೆ ಸುದೀಪ್ ಸಿಟ್ಟಾಗಿದ್ದಾರೆ. ಈ ವಿಚಾರದಲ್ಲಿ ವೀಕೆಂಡ್​ನಲ್ಲಿ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅವರು ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

‘ಇಲ್ಲಿ ಗುಂಪುಗಾರಿಕೆ ಮುಂದುವರಿದಿದೆ. ಶೇ. 90 ಜನರು ಇಲ್ಲಿ ಬೇರೆಯವರ ಗೆಲ್ಲಿಸೋಕೆ ಬಂದಿದ್ದೀರಿ. ಯಾರೂ ಇಲ್ಲ ನಿಮ್ಮ ಆಟ ಆಡುತ್ತಿಲ್ಲ. ಒಂಟಿಯಾಗಿ ನಿಂತರೆ ನೀವು ಗೆಲ್ಲುತ್ತೀರಿ ಎನ್ನುವ ನಂಬಿಕೆ ನನಗಂತೂ ಇಲ್ಲ. ನಾಮಿನೇಷನ್ ಎಂದು ಬಂದಾಗ ಒಬ್ಬರ ಹೆಸರನ್ನು ಒಬ್ಬರು ತೆಗೆದುಕೊಳ್ಳಲೇಬೇಕು. ಉಳಿದಿರುವ ವಿಚಾರ ನಿಮಗೆ ಬಿಟ್ಟಿದ್ದು’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ಕಳಪೆ ಆಟವಾಡಿ ಕೂಲ್​ ಆಗಿರುವ ತನಿಷಾ ಕುಪ್ಪಂಡ; ಇದನ್ನೆಲ್ಲ ನೋಡಿ ಗರಂ ಆದ ವಿನಯ್​ ಗೌಡ

ವಿನಯ್ ತಮ್ಮ ಗುಂಪಿನ ಸಾರಥ್ಯ ವಹಿಸಿದ್ದರು. ಈ ಗುಂಪು ಈಗ ಸಣ್ಣದಾಗುತ್ತಾ ಬರುತ್ತಿದೆ. ಅವರ ಗ್ರೂಪ್​ನಲ್ಲಿದ್ದ ರಕ್ಷಕ್ ಮೊದಲು ಔಟ್ ಆದರು. ಆ ಬಳಿಕ, ಈಶಾನಿ ಕೂಡ ಹೊರ ಹೋದರು. ಇಷ್ಟಾದರೂ ಅವರು ಎಚ್ಚೆತ್ತುಕೊಂಡಿಲ್ಲ. ನಮ್ರತಾ ಅವರು ಈಗಲೂ ವಿನಯ್ ಹಿಂದೆ, ಸ್ನೇಹಿತ್ ಜೊತೆ ಸುತ್ತಾಡುತ್ತಿದ್ದಾರೆ. ಅವರು ಇನ್ನಷ್ಟು ಬದಲಾಗಬೇಕಾದ ಅವಶ್ಯಕತೆ ಇದೆ ಎಂಬುದು ವೀಕ್ಷಕರ ಅಭಿಪ್ರಾಯ. ಕಲರ್ಸ್ ಕನ್ನಡ ವಾಹಿನಿಯಲ್ಲಿ  ಎಪಿಸೋಡ್ ಪ್ರಸಾರ ಕಾಣುತ್ತದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವಿಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:19 am, Sun, 19 November 23