AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ನಿಮ್ಮ ಮನೆಯ ನಾಯಿನಾ?’; ಹಾಸ್ಯ ಕಲಾವಿದರ ಅವಮಾನಿಸಿದ ಜಗದೀಶ್ ವಿರುದ್ಧ ಮಾನಸಾ ಕಿಡಿ

ಜಗದೀಶ್ ಅವರು ನಿರಂತರವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ಧನರಾಜ್ ಅವರನ್ನು ‘ಕಾಮಿಡಿ ಪೀಸ್ ರೀತಿ ಕಾಣ್ತೀಯಾ’ ಎನ್ನುತ್ತಾ ಬರುತ್ತಿದ್ದಾರೆ. ಇದನ್ನು ಅವರು ಹಲವು ಬಾರಿ ಹೇಳಿದ್ದಾರೆ. ಇದು ಹಾಸ್ಯ ಕಲಾವಿದೆ ಮಾನಸಾ ಅವರನ್ನು ಕುಪಿತಗೊಳಿಸಿದೆ. ಅವರು ಮಾನಸಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ನಾನು ನಿಮ್ಮ ಮನೆಯ ನಾಯಿನಾ?’; ಹಾಸ್ಯ ಕಲಾವಿದರ ಅವಮಾನಿಸಿದ ಜಗದೀಶ್ ವಿರುದ್ಧ ಮಾನಸಾ ಕಿಡಿ
ಮಾನಸಾ-ಜಗದೀಶ್
ರಾಜೇಶ್ ದುಗ್ಗುಮನೆ
|

Updated on: Oct 03, 2024 | 7:44 AM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆಯಲ್ಲಿ ಎಲ್ಲರೂ ಏಕ ಕಾಲಕಕ್ಕೆ ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರು ನಡೆದುಕೊಳ್ಳುತ್ತಿರುವ ರೀತಿ. ಅವರು ಬೇಕಂತಲೇ ಎಲ್ಲರನ್ನೂ ಕುಪಿತಗೊಳಿಸೋ ಕೆಲಸ ಮಾಡುತ್ತಿದ್ದಾರೆ. ಲಾಯರ್ ಜಗದೀಶ್ ವಿರುದ್ಧ ಮಾನಸಾ ಅವರು ತಿರುಗಿ ಬಿದ್ದಿದ್ದಾರೆ. ಹಾಸ್ಯ ಕಲಾವಿದರನ್ನು ಅವಮಾನಿಸಿದ ಜಗದೀಶ್ ವಿರುದ್ಧ ಅವರು ಸಿಡಿದೆದ್ದಿದ್ದಾರೆ.

ಧನರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ ಬಿಗ್ ಬಾಸ್ ಮನೆಗೆ ಬಂದವರು. ಅವರು ಹಾಸ್ಯ ವಿಡಿಯೋಗಳನ್ನು ಮಾಡಿಕೊಂಡು ಇದ್ದರು. ಬಿಗ್ ಬಾಸ್ ಮನೆಯಲ್ಲೂ ಅವರು ಎಲ್ಲರನ್ನೂ ನಗಿಸೋ ಕೆಲಸ ಮಾಡುತ್ತಿದ್ದಾರೆ, ಅವರನ್ನು ಹಂಗಿಸೋ ಕೆಲಸವನ್ನು ಜಗದೀಶ್ ಮಾಡಿದ್ದಾರೆ. ಜಗದೀಶ್ ಅವರು ನಿರಂತರವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ಧನರಾಜ್ ಅವರನ್ನು ‘ಕಾಮಿಡಿ ಪೀಸ್ ರೀತಿ ಕಾಣ್ತೀಯಾ’ ಎನ್ನುತ್ತಾ ಬರುತ್ತಿದ್ದಾರೆ. ಇದನ್ನು ಅವರು ಹಲವು ಬಾರಿ ಹೇಳಿದ್ದಾರೆ.

ಅವರ ಈ ಹೇಳಿಕೆ ಮಾನಸಾ ಅವರನ್ನು ಟ್ರಿಗರ್ ಮಾಡಿದೆ. ಮಾನಸಾ ಹಾಸ್ಯ ಕಲಾವಿದೆ. ಅವರು ‘ಗಿಚ್ಚಿ ಗಿಲಿಗಿಲಿ 3’ನಲ್ಲಿ ಸ್ಪರ್ಧೆ ಮಾಡಿ ಎಲ್ಲರನ್ನೂ ನಗಿಸಿದ್ದರು. ಅವರಿಗೆ ಈ ಮಾತಿನಿಂದ ಅವಮಾನ ಆಗಿದೆ. ಇದಕ್ಕೆ ಅವರು ಸಿಟ್ಟಾಗಿದ್ದಾರೆ. ‘ಹಾಸ್ಯ ಕಲಾವಿದರ ಅವಮಾನಿಸಬೇಡಿ. ಪದೇ ಪದೇ ಕಾಮಿಡಿ ಪೀಸಾ, ಕಾಮಿಡಿ ಪೀಸಾ ಎನ್ನುವ ಮಾತನ್ನು ಹೇಳಬೇಡಿ’ ಎಂದು ಕೋರಿದ್ದಾರೆ. ಆದರೆ, ಜಗದೀಶ್ ಇದನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಮೂರೇ ದಿನಕ್ಕೆ ಸುಸ್ತಾದ ಧನರಾಜ್; ಕಷ್ಟ ಆಗುತ್ತಿದೆ ಎಂದು ಕಣ್ಣೀರು

ಇದರಿಂದ ಸಿಟ್ಟಾದ ಮಾನಸಾ, ‘ಪದೇ ಪದೇ ಹೇಳಬೇಡಿ. ಕಾಮಿಸಿ ಪೀಸ್​ ಎಂದರೆ ನಿರಪಯೋಗಿ ಅಲ್ಲ. ಸಾವಿರ ಟೆನ್ಷನ್​ ಇದ್ದರೂ ನಗಿಸುತ್ತಾರೆ. ಮರ್ಯಾದೆಗೆ ಕೊಟ್ಟಷ್ಟೂ ಅತಿಯಾಗಿ ಆಡ್ತೀಯಾ’ ಎಂದು ಏಕವಚನದಲ್ಲೇ ಹೇಳಿದರು. ‘ಹೋಗೆಲೇ, ನಿನ್ನ ಯೋಗ್ಯತೆ ನೋಡಿಕೊಂಡು ಮಾತನಾಡು’ ಎಂದರು ಜಗದೀಶ್. ಇದರಿಂದ ಕೋಪಗೊಂಡ ಮಾನಸಾ, ‘ನಾನೇನು ನಿಮ್ಮ ಮನೆಯ ನಾಯಿನಾ? ನೀವು ಹೇಳಿದಂತೆ ಕೇಳಿಕೊಂಡು ಇರೋಕೆ’ ಎಂದರು. ‘ಅವಳು ಯಾವ ಸೀಮೆ ಹೆಂಗಸು’ ಎಂದರು ಜಗದೀಶ್. ಇದರಿಂದ ಇಡೀ ಮನೆ ಒಂದಾಗಿ ಜಗದೀಶ್ ವಿರುದ್ಧ ತಿರುಗಿ ಬಿತ್ತು. ‘ಈ ರೀತಿಯ ವಾತಾವರಣದಲ್ಲಿ ಬದುಕೋಕೆ ಸಾಧ್ಯವೇ ಇಲ್ಲ’ ಎಂದು ಕೆಲವರು ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್