‘ನಾನು ನಿಮ್ಮ ಮನೆಯ ನಾಯಿನಾ?’; ಹಾಸ್ಯ ಕಲಾವಿದರ ಅವಮಾನಿಸಿದ ಜಗದೀಶ್ ವಿರುದ್ಧ ಮಾನಸಾ ಕಿಡಿ

ಜಗದೀಶ್ ಅವರು ನಿರಂತರವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ಧನರಾಜ್ ಅವರನ್ನು ‘ಕಾಮಿಡಿ ಪೀಸ್ ರೀತಿ ಕಾಣ್ತೀಯಾ’ ಎನ್ನುತ್ತಾ ಬರುತ್ತಿದ್ದಾರೆ. ಇದನ್ನು ಅವರು ಹಲವು ಬಾರಿ ಹೇಳಿದ್ದಾರೆ. ಇದು ಹಾಸ್ಯ ಕಲಾವಿದೆ ಮಾನಸಾ ಅವರನ್ನು ಕುಪಿತಗೊಳಿಸಿದೆ. ಅವರು ಮಾನಸಾ ವಿರುದ್ಧ ತಿರುಗಿ ಬಿದ್ದಿದ್ದಾರೆ.

‘ನಾನು ನಿಮ್ಮ ಮನೆಯ ನಾಯಿನಾ?’; ಹಾಸ್ಯ ಕಲಾವಿದರ ಅವಮಾನಿಸಿದ ಜಗದೀಶ್ ವಿರುದ್ಧ ಮಾನಸಾ ಕಿಡಿ
ಮಾನಸಾ-ಜಗದೀಶ್
Follow us
|

Updated on: Oct 03, 2024 | 7:44 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ ಮನೆಯಲ್ಲಿ ಎಲ್ಲರೂ ಏಕ ಕಾಲಕಕ್ಕೆ ಲಾಯರ್ ಜಗದೀಶ್ ವಿರುದ್ಧ ತಿರುಗಿ ಬಿದ್ದಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರು ನಡೆದುಕೊಳ್ಳುತ್ತಿರುವ ರೀತಿ. ಅವರು ಬೇಕಂತಲೇ ಎಲ್ಲರನ್ನೂ ಕುಪಿತಗೊಳಿಸೋ ಕೆಲಸ ಮಾಡುತ್ತಿದ್ದಾರೆ. ಲಾಯರ್ ಜಗದೀಶ್ ವಿರುದ್ಧ ಮಾನಸಾ ಅವರು ತಿರುಗಿ ಬಿದ್ದಿದ್ದಾರೆ. ಹಾಸ್ಯ ಕಲಾವಿದರನ್ನು ಅವಮಾನಿಸಿದ ಜಗದೀಶ್ ವಿರುದ್ಧ ಅವರು ಸಿಡಿದೆದ್ದಿದ್ದಾರೆ.

ಧನರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿ ಬಿಗ್ ಬಾಸ್ ಮನೆಗೆ ಬಂದವರು. ಅವರು ಹಾಸ್ಯ ವಿಡಿಯೋಗಳನ್ನು ಮಾಡಿಕೊಂಡು ಇದ್ದರು. ಬಿಗ್ ಬಾಸ್ ಮನೆಯಲ್ಲೂ ಅವರು ಎಲ್ಲರನ್ನೂ ನಗಿಸೋ ಕೆಲಸ ಮಾಡುತ್ತಿದ್ದಾರೆ, ಅವರನ್ನು ಹಂಗಿಸೋ ಕೆಲಸವನ್ನು ಜಗದೀಶ್ ಮಾಡಿದ್ದಾರೆ. ಜಗದೀಶ್ ಅವರು ನಿರಂತರವಾಗಿ ಹಾಗೂ ಉದ್ದೇಶ ಪೂರ್ವಕವಾಗಿ ಧನರಾಜ್ ಅವರನ್ನು ‘ಕಾಮಿಡಿ ಪೀಸ್ ರೀತಿ ಕಾಣ್ತೀಯಾ’ ಎನ್ನುತ್ತಾ ಬರುತ್ತಿದ್ದಾರೆ. ಇದನ್ನು ಅವರು ಹಲವು ಬಾರಿ ಹೇಳಿದ್ದಾರೆ.

ಅವರ ಈ ಹೇಳಿಕೆ ಮಾನಸಾ ಅವರನ್ನು ಟ್ರಿಗರ್ ಮಾಡಿದೆ. ಮಾನಸಾ ಹಾಸ್ಯ ಕಲಾವಿದೆ. ಅವರು ‘ಗಿಚ್ಚಿ ಗಿಲಿಗಿಲಿ 3’ನಲ್ಲಿ ಸ್ಪರ್ಧೆ ಮಾಡಿ ಎಲ್ಲರನ್ನೂ ನಗಿಸಿದ್ದರು. ಅವರಿಗೆ ಈ ಮಾತಿನಿಂದ ಅವಮಾನ ಆಗಿದೆ. ಇದಕ್ಕೆ ಅವರು ಸಿಟ್ಟಾಗಿದ್ದಾರೆ. ‘ಹಾಸ್ಯ ಕಲಾವಿದರ ಅವಮಾನಿಸಬೇಡಿ. ಪದೇ ಪದೇ ಕಾಮಿಡಿ ಪೀಸಾ, ಕಾಮಿಡಿ ಪೀಸಾ ಎನ್ನುವ ಮಾತನ್ನು ಹೇಳಬೇಡಿ’ ಎಂದು ಕೋರಿದ್ದಾರೆ. ಆದರೆ, ಜಗದೀಶ್ ಇದನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​ನಲ್ಲಿ ಮೂರೇ ದಿನಕ್ಕೆ ಸುಸ್ತಾದ ಧನರಾಜ್; ಕಷ್ಟ ಆಗುತ್ತಿದೆ ಎಂದು ಕಣ್ಣೀರು

ಇದರಿಂದ ಸಿಟ್ಟಾದ ಮಾನಸಾ, ‘ಪದೇ ಪದೇ ಹೇಳಬೇಡಿ. ಕಾಮಿಸಿ ಪೀಸ್​ ಎಂದರೆ ನಿರಪಯೋಗಿ ಅಲ್ಲ. ಸಾವಿರ ಟೆನ್ಷನ್​ ಇದ್ದರೂ ನಗಿಸುತ್ತಾರೆ. ಮರ್ಯಾದೆಗೆ ಕೊಟ್ಟಷ್ಟೂ ಅತಿಯಾಗಿ ಆಡ್ತೀಯಾ’ ಎಂದು ಏಕವಚನದಲ್ಲೇ ಹೇಳಿದರು. ‘ಹೋಗೆಲೇ, ನಿನ್ನ ಯೋಗ್ಯತೆ ನೋಡಿಕೊಂಡು ಮಾತನಾಡು’ ಎಂದರು ಜಗದೀಶ್. ಇದರಿಂದ ಕೋಪಗೊಂಡ ಮಾನಸಾ, ‘ನಾನೇನು ನಿಮ್ಮ ಮನೆಯ ನಾಯಿನಾ? ನೀವು ಹೇಳಿದಂತೆ ಕೇಳಿಕೊಂಡು ಇರೋಕೆ’ ಎಂದರು. ‘ಅವಳು ಯಾವ ಸೀಮೆ ಹೆಂಗಸು’ ಎಂದರು ಜಗದೀಶ್. ಇದರಿಂದ ಇಡೀ ಮನೆ ಒಂದಾಗಿ ಜಗದೀಶ್ ವಿರುದ್ಧ ತಿರುಗಿ ಬಿತ್ತು. ‘ಈ ರೀತಿಯ ವಾತಾವರಣದಲ್ಲಿ ಬದುಕೋಕೆ ಸಾಧ್ಯವೇ ಇಲ್ಲ’ ಎಂದು ಕೆಲವರು ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ನವರಾತ್ರಿಯ ಮೊದಲ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
ನವರಾತ್ರಿಯ ಮೊದಲ ದಿನವಾದ ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ? ತಿಳಿಯಿರಿ
Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ರಸ್ತೆಗಳು ಜಲಾವೃತ
Bengaluru Rains: ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ; ರಸ್ತೆಗಳು ಜಲಾವೃತ
ಥಾಣೆಯ ತಿಂಡಿ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ
ಥಾಣೆಯ ತಿಂಡಿ ಫ್ಯಾಕ್ಟರಿಯಲ್ಲಿ ಭಾರೀ ಬೆಂಕಿ ಅವಘಡ
ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಮಾರ್ಟಿನ್ ಟ್ರೇಲರ್ ಕೊನೆಯಲ್ಲಿ ಇಂಥ ಡೈಲಾಗ್ ಬೇಕಿತ್ತಾ? ಉತ್ತರ ನೀಡಿದ ಧ್ರುವ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ
ಧ್ವಜ ಹಿಡಿದ ಕೈಯಲ್ಲೇ ಸಿದ್ದರಾಮಯ್ಯನ ಶೂ ಬಿಚ್ಚಿದ ಕಾಂಗ್ರೆಸ್ ಕಾರ್ಯಕರ್ತ
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
ಮಾರ್ಟಿನ್ ರಿಲೀಸ್ ಹೊಸ್ತಿಲಲ್ಲಿ ಚಿತ್ರತಂಡದ ಸುದ್ದಿಗೋಷ್ಠಿ; ಲೈವ್ ನೋಡಿ..
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
‘ನಾನೇ ಬಿಗ್ ಬಾಸ್’: ಶಾಕಿಂಗ್ ಹೇಳಿಕೆ ನೀಡಿ ಹೊರಗೆ ಬರಲು ಸಿದ್ಧವಾದ ಜಗದೀಶ್​
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಧಾರವಾಡ: ಧಾರ್ಮಿಕ ಧ್ವಜದ ಕೆಳಗೆ ರಾಷ್ಟ್ರಧ್ವಜ ಅಳವಡಿಕೆ ಮಾಡಿ ಅಪಮಾನ
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗ್ಯಾಲಕ್ಸಿ ಹೊಸ ಸ್ಮಾರ್ಟ್​ಫೋನ್ ಭಾರತದ ಮಾರುಕಟ್ಟೆಗೆ ಗ್ರ್ಯಾಂಡ್ ಎಂಟ್ರಿ!
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ