‘ಬಿಗ್ ಬಾಸ್’ಗೆ ಅವಮಾನ ಮಾಡಿದ್ದ ಸ್ಪರ್ಧಿಯನ್ನು ಮುಲಾಜಿಲ್ಲದೆ ಹೊರಹಾಕಿದ್ದ ಸಲ್ಲು; ಕನ್ನಡದಲ್ಲೂ ಮರುಕಳಿಸಲಿದೆ ಘಟನೆ?

|

Updated on: Oct 04, 2024 | 11:56 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿರೋ ಜಗದೀಶ್ ಅವರು ಸಾಕಷ್ಟು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್​ನೇ ಎಕ್ಸ್​ಪೋಸ್ ಮಾಡ್ತೀನಿ ಎಂದಿದ್ದ ಅವರು, ಈಗ ಬಿಗ್ ಬಾಸ್​ನೇ ಖರೀದಿ ಮಾಡೋ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆಗಳು ನಡೆಯುತ್ತಿವೆ.

‘ಬಿಗ್ ಬಾಸ್’ಗೆ ಅವಮಾನ ಮಾಡಿದ್ದ ಸ್ಪರ್ಧಿಯನ್ನು ಮುಲಾಜಿಲ್ಲದೆ ಹೊರಹಾಕಿದ್ದ ಸಲ್ಲು; ಕನ್ನಡದಲ್ಲೂ ಮರುಕಳಿಸಲಿದೆ ಘಟನೆ?
ಹಿಂದಿ ಬಿಗ್ ಬಾಸ್​ ಮಾದರಿಯಲ್ಲಿ ಕನ್ನಡದಲ್ಲಿ ಜಗದೀಶ್​ ಎಲಿಮಿನೇಷನ್?
Follow us on

ಬಿಗ್ ಬಾಸ್​ನಲ್ಲಿ ಯಾವುದಾದರೂ ಸ್ಪರ್ಧಿ ಮೇಲೆ ಸಲ್ಮಾನ್ ಖಾನ್ ಕೋಪಗೊಂಡರೆ ಅವರ ಕಥೆ ಮುಗಿದಂತೆ. ಆ ಸ್ಪರ್ಧಿಯನ್ನು ತಕ್ಷಣಕ್ಕೆ ಮನೆಯಿಂದ ಹೊರಹಾಕಲೂ ಅವರು ಹಿಂಜರಿಯುವುದಿಲ್ಲ. ‘ಬಿಗ್ ಬಾಸ್’ಗೆ ಅವಮಾನ ಮಾಡಿದ್ದ ಸ್ಪರ್ಧಿಯನ್ನು ಸಲ್ಮಾನ್ ಖಾನ್ ಹೊರಹಾಕಿದ್ದರು. ಈಗ ಕನ್ನಡದಲ್ಲೂ ಅದೇ ರೀತಿಯ ಘಟನೆ ಮರುಕಳಿಸಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡಿದೆ. ವೀಕೆಂಡ್ ಎಪಿಸೋಡ್​ಗಾಗಿ ಫ್ಯಾನ್ಸ್ ಕಾದಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ 17 ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಲಾಯರ್ ಜಗದೀಶ್ ಅವರು ಮಿತಿಮೀರಿ ವರ್ತಿಸುತ್ತಿದ್ದಾರೆ. ಬಿಗ್ ಬಾಸ್​ಗೆ ಅವಾಜ್ ಹಾಕಿದ್ದಾರೆ. ಬಿಗ್ ಬಾಸ್ ಶೋಗೆ ಅವಮಾನ ಮಾಡಿದ್ದಾರೆ. ಇದನ್ನು ಸುದೀಪ್ ಅವರು ಖಂಡಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ. ಹಿಂದಿ ಬಿಗ್ ಬಾಸ್ ರೀತಿಯೇ ಇಲ್ಲಿಯೂ ಮಾಡಲಿ ಎಂದು ಕೋರಿಕೊಳ್ಳಲಾಗುತ್ತಿದೆ.

ಹಿಂದಿ ಬಿಗ್ ಬಾಸ್​ನ 10ನೇ ಸೀಸನ್​ನಲ್ಲಿ ಪ್ರಿಯಾಂಕಾ ಜಗ್ಗಾ ಎಂಬುವವರು ದರ್ಪ ತೋರಿದ್ದರು. ‘ಬಿಗ್ ಬಾಸ್ ಶೋ ನನ್ನ ಲೆವೆಲ್​ಗೆ ಅಲ್ಲವೇ ಅಲ್ಲ’ ಎಂದಿದ್ದರು. ವೀಕೆಂಡ್​ನಲ್ಲಿ ಸಲ್ಮಾನ್ ಖಾನ್ ಅವರು ನೇರವಾಗಿ ಹೊರಹೋಗುವಂತೆ ಹೇಳಿದ್ದರು. ಜೊತೆಗೆ ಕಲರ್ಸ್ ವಾಹಿನಿಯ ಜೊತೆ ಅವರು ಕೆಲಸ ಮಾಡಿದರೆ ನಾನು ಕಲರ್ಸ್ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತೇನೆ ಎಂದು ಹೇಳಿದ್ದರು ಸಲ್ಲು. ತಕ್ಷಣವೇ ಪ್ರಿಯಾಂಕಾನ ಹೊರಹಾಕಲಾಯಿತು.

ಇದನ್ನೂ ಓದಿ: ‘ನಂಗೆ ಬಿಗ್ ಬಾಸ್​ನೇ ಖರೀದಿಸೋ ತಾಕತ್ತಿದೆ, ಆಗ ಕಪ್ ನಂದೇ’; ಬಡಾಯಿ ಕೊಚ್ಚಿಕೊಂಡ ಜಗದೀಶ್

ಕನ್ನಡದಲ್ಲೂ ಬಿಗ್ ಬಾಸ್​ಗೆ ಅವಮಾನ ಮಾಡುವ ರೀತಿಯ ಘಟನೆ ನಡೆದಿದೆ. ಜಗದೀಶ್ ಅವರು ‘ಬಿಗ್ ಬಾಸ್ ಕಿತ್ತೋಗಿರೋ ಪ್ರೋಗ್ರಾಂ’, ‘ಬಿಗ್ ಬಾಸ್​ನೇ ಖರೀದಿ ಮಾಡುತ್ತೇನೆ’, ‘ನನ್ನ ಎದುರಾಕ್ಕೊಂಡು ಬಿಗ್ ಬಾಸ್ ನಡೆಸ್ತೀರಾ’ ಎಂದೆಲ್ಲ ಪ್ರಶ್ನೆ ಮಾಡಿದ್ದರು. ಮನೆಯಲ್ಲಿದ್ದುಕೊಂಡೇ ಸ್ಪರ್ಧಿ ಹೇಳುವ ಮಾತು ಇದಲ್ಲ. ಹೀಗಾಗಿ, ಜಗದೀಶ್ ಅವರನ್ನು ಸುದೀಪ್ ನೇರವಾಗಿ ಹೊರಕ್ಕೆ ಹಾಕಲಿ ಎಂದು ಅನೇಕರು ಬಯಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:54 am, Fri, 4 October 24