AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು

ತಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್​ ಮಾಡಲು 7 ದಿನಗಳ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಸ್ಪರ್ಧಿಗಳು ಸೋಶಿಯಲ್​ ಮೀಡಿಯಾದಲ್ಲಿ ವೋಟ್​ಗಾಗಿ ಮನವಿ ಮಾಡಿಕೊಂಡಿದ್ದರು.

ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು
ಸೀಕ್ರೆಟ್​ ಆಗಿ ನಡೆಯಿತು ಬಿಗ್​ ಬಾಸ್​ ಫಿನಾಲೆ; ಫೋಟೋದಿಂದ ಬಯಲಾಯ್ತು ವಿನ್ನರ್​ ಹೆಸರು
TV9 Web
| Edited By: |

Updated on: Jul 25, 2021 | 11:39 AM

Share

ಬಿಗ್​ ಬಾಸ್​ ಫಿನಾಲೆ (Bigg Boss finale) ಕಾರ್ಯಕ್ರಮ ಎಂದರೆ ಅದ್ದೂರಿಯಾಗಿ ನಡೆಯುತ್ತದೆ. ಹಲವಾರು ಪ್ರೇಕ್ಷಕರ ಸಮ್ಮುಖದಲ್ಲಿ ಚಿತ್ರೀಕರಣ ನಡೆಯುತ್ತದೆ. ಫಿನಾಲೆ ದಿನಾಂಕ ಮುಂಚಿತವಾಗಿಯೇ ಘೋಷಣೆ ಆಗಿರುತ್ತದೆ. ಆದರೆ ಮಲಯಾಳಂ ಬಿಗ್ ಬಾಸ್​ ಮೂರನೇ ಸೀಸನ್​ನಲ್ಲಿ (Bigg Boss Malayalam season 3 ) ಇದೆಲ್ಲ ಉಲ್ಟಾಪಲ್ಟಾ ಆಗಿದೆ. ಏನೂ ಸದ್ದು ಗದ್ದಲ ಇಲ್ಲದೇ ಫಿನಾಲೆ ಕಾರ್ಯಕ್ರಮ ಮಾಡಿ ಮುಗಿಸಲಾಗಿದೆ. ವಿನ್ನರ್​ (Bigg Boss Winner) ಯಾರು ಎಂಬ ವಿಷಯವನ್ನೂ ಗೌಪ್ಯವಾಗಿ ಇರಿಸಲಾಗಿದೆ. ಆದರೆ ವೈರಲ್​ ಆಗಿರುವ ಒಂದು ಫೋಟೋದಿಂದಾಗಿ ಮಣಿಕುಟ್ಟನ್​ ಅವರೇ ವಿನ್ನರ್​ ಎಂಬ ವಿಚಾರ ಬಯಲಾಗಿದೆ.

ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್​ ನಡೆಸಿಕೊಡುವ ಮಲಯಾಳಂ ಬಿಗ್​ ಬಾಸ್​ಗೆ ಈ ಬಾರಿ ಕೊರೊನಾ ವೈರಸ್​ ಎರಡನೇ ಅಲೆಯ ಕಾರಣದಿಂದ ವಿಘ್ನ ಎದುರಾಗಿತ್ತು. ಚೆನ್ನೈನ ಸ್ಟುಡಿಯೋವೊಂದರಲ್ಲಿ ನಡೆಯುತ್ತಿದ್ದ ಈ ಶೋ ಅನ್ನು ಮೇ 19ರಂದು ರದ್ದು ಪಡಿಸಲಾಗಿತ್ತು. 97 ದಿನ ಪೂರೈಸಿದ್ದ ಮಲಯಾಳಂ ಬಿಗ್​ ಬಾಸ್​ ಮೂರನೇ ಸೀಸನ್​ಗೆ ಅನಿರೀಕ್ಷಿತವಾಗಿ ಬ್ರೇಕ್​ ಬಿದ್ದಿತ್ತು. ಈಗ ವಾತಾವರಣ ತಿಳಿಗೊಂಡಿದೆ. ಆದರೆ ಶೋಗೆ ಮರುಚಾಲನೆ ನೀಡಿಲ್ಲ. ಅದರ ಬದಲು ವೋಟಿಂಗ್​ ಮೂಲಕ ವಿನ್ನರ್​ ಯಾರು ಎಂಬುದನ್ನು ನಿರ್ಧರಿಸಲಾಗಿದೆ.

ತಮ್ಮಿಷ್ಟದ ಸ್ಪರ್ಧಿಗಳಿಗೆ ವೋಟ್​ ಮಾಡಲು 7 ದಿನಗಳ ಅವಕಾಶ ಕಲ್ಪಿಸಲಾಗಿತ್ತು. ಎಲ್ಲ ಸ್ಪರ್ಧಿಗಳು ಸೋಶಿಯಲ್​ ಮೀಡಿಯಾದಲ್ಲಿ ವೋಟ್​ಗಾಗಿ ಮನವಿ ಮಾಡಿಕೊಂಡಿದ್ದರು. ಯಾರಿಗೆ ಎಷ್ಟು ವೋಟ್​ ಬಂದಿದೆ ಎಂಬ ಆಧಾರದಲ್ಲಿ ವಿನ್ನರ್​ ಯಾರೆಂಬುದನ್ನು ನಿರ್ಧರಿಸಲಾಗಿದೆ. ನಟ ಮಣಿಕುಟ್ಟನ್​ ಈ ಬಾರಿ ಬಿಗ್​ ಬಾಸ್​ ವಿನ್ನರ್​ ಆಗಿ ಹೊರಹೊಮ್ಮಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಆಯೋಜಕರು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ ಬಿಗ್​ ಬಾಸ್​ ಟ್ರೋಫಿ ಹಿಡಿದು, ಅದಕ್ಕೆ ಮುತ್ತಿಕ್ಕುತ್ತಿರುವ ಮಣಿಕುಟ್ಟನ್​ ಅವರ ಫೋಟೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸೋರಿಕೆ ಆಗಿದೆ. ಅದನ್ನು ಕಂಡ ಎಲ್ಲರೂ ಮಣಿಕುಟ್ಟನ್​ ಅವರೇ ವಿನ್ನರ್​ ಎಂದು ಅಭಿನಂದನೆ ತಿಳಿಸುತ್ತಿದ್ದಾರೆ. ಶೀಘ್ರದಲ್ಲೇ ಏಷ್ಯಾನೆಟ್​ ವಾಹಿನಿಯಲ್ಲಿ ಫಿನಾಲೆ ಎಪಿಸೋಡ್​ ಪ್ರಸಾರ ಆಗಲಿದೆ. ಆಗ ಯಾರು ವಿನ್ನರ್​ ಎಂಬುದು ಅಧಿಕೃತವಾಗಿ ಗೊತ್ತಾಗಲಿದೆ.

ಕನ್ನಡದಲ್ಲೂ ಬಿಗ್​ ಬಾಸ್​ ಸೀಸನ್​ 8ರ ಫಿನಾಲೆ ದಿನಾಂಕ ಹತ್ತಿರ ಆಗುತ್ತಿದೆ. ದಿನದಿಂದ ದಿನಕ್ಕೆ ಸ್ಪರ್ಧಿಗಳ ನಡುವೆ ಪೈಪೋಟಿ ಹೆಚ್ಚುತ್ತಿದೆ. ಅಂತಿಮವಾಗಿ ಯಾರು ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿಯುತ್ತಾರೆ ಎಂಬ ಕೌತುಕ ಕಿರುತೆರೆ ಪ್ರೇಕ್ಷಕರ ಮನದಲ್ಲಿ ಮೂಡಿದೆ.

ಇದನ್ನೂ ಓದಿ:

ಬಿಗ್​ ಬಾಸ್​ ಮನೆಯಿಂದ ಶಮಂತ್​ ಬ್ರೋ ಗೌಡ ಎಲಿಮಿನೇಟ್? ಅನುಮಾನ ಹುಟ್ಟುಹಾಕಿದ ಆ ಒಂದು ಫೋಟೋ

ಬಿಗ್​ ಬಾಸ್​ ಸ್ಪರ್ಧಿ ವನಿತಾಗೆ 4ನೇ ಮದುವೆ? ಫೋಟೋ ಕಂಡು ಹುಬ್ಬೇರಿಸಿದ ಫ್ಯಾನ್ಸ್​

Follow Us
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ಬೆಂಗಳೂರಿನಲ್ಲಿ ಬೆಳಗಿನಿಂದಲೇ ಜಿಟಿ ಜಿಟಿ ಮಳೆ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
ದೇವರಾಜ ಅರಸು ಅವರ ವಿಂಟೇಜ್ ಕಾರಿನಲ್ಲಿ ಡಿಸಿಎಂ, ಸಚಿವರ ಸವಾರಿ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
‘ಜೈಲಿನಲ್ಲಿ ಅಧಿಕಾರಿಗಳಿಂದಲೇ ವೇಶ್ಯಾವಾಟಿಕೆ’: ಮಾಜಿ ಕೈದಿ ಗಂಭೀರ ಆರೋಪ
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
RSS ಶಾಖೆಯಲ್ಲಿ ಸಂಘದ ಗೀತೆ ಬಿಟ್ಟು ರಾಷ್ಟ್ರಗೀತೆ ಹಾಡಲಿ: ಹರಿಪ್ರಸಾದ್
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಸಚಿವ ಮಧು ಬಂಗಾರಪ್ಪ ಕ್ಷೇತ್ರದಲ್ಲೇ ತಪ್ಪದ ಬಸ್ ಗೋಳು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
ಕೆಎಂಎಫ್ ಪಶು ಆಹಾರ ಕಲಬೆರಕೆ ಹಗರಣ: ನಾಲ್ವರು ಅಧಿಕಾರಿಗಳ ಅಮಾನತು
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
440 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ 428 ರಲ್ಲಿ ಪ್ರಾಂಶುಪಾಲರೇ ಇಲ್ಲ
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು
ದೆಹಲಿಯಲ್ಲಿರುವ ಪಾಕ್ ಹೈಕಮಿಷನ್ ಹೊರಗಿನ ಬ್ಯಾರಿಕೇಡ್‌ಗಳ ತೆರವು