AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ

ಬಿಗ್​ ಬಾಸ್​ ಕೊನೆಯ ವಾರದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರನ್ವಯ ಸ್ಪರ್ಧಿಗಳಿಗೋಸ್ಕರ ವಿಶೇಷ ಫೋಟೋ ವಾಲ್​ ಸಿದ್ಧಪಡಿಸಲಾಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ
ಬಿಗ್​ ಬಾಸ್​ ಮನೆಯಲ್ಲಿ ಮಂಜು ಕೋರಿಕೆ ದಿವ್ಯಾಗೆ ಶಾಪವಾಯ್ತು; ನೊಂದುಕೊಂಡ ಉರುಡುಗ
TV9 Web
| Edited By: |

Updated on: Aug 06, 2021 | 2:33 PM

Share

‘ಕನ್ನಡ ಬಿಗ್​ ಬಾಸ್​ ಸೀಸನ್​ 8’ ಫಿನಾಲೆ ಹಂತ ತಲುಪಿದೆ. ಶನಿವಾರ ಹಾಗೂ ಭಾನುವಾರ ಫಿನಾಲೆ ನಡೆಯಲಿದೆ. ಭಾನುವಾರ ರಾತ್ರಿ ಯಾರು ವಿಜೇತರು ಎನ್ನುವುದು ಘೋಷಣೆ ಆಗಲಿದೆ. ಇದಕ್ಕೂ ಮೊದಲು ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ ಕೋರಿಕೆ ಒಂದನ್ನು ಇಟ್ಟಿದ್ದರು. ಇದು ದಿವ್ಯಾ ಉರುಡುಗಗೆ ಶಾಪವಾಗಿದೆ. ಅಷ್ಟೇ ಅಲ್ಲ, ಈ ವಿಚಾರಕ್ಕೆ ಅವರು ತುಂಬಾನೇ ನೊಂದುಕೊಂಡಿದ್ದಾರೆ.

ಬಿಗ್​ ಬಾಸ್​ ಕೊನೆಯ ವಾರದಲ್ಲಿ ವಿಶೇಷ ಸವಲತ್ತುಗಳನ್ನು ನೀಡಲಾಗುತ್ತಿದೆ. ಇದರನ್ವಯ ಸ್ಪರ್ಧಿಗಳಿಗೋಸ್ಕರ ವಿಶೇಷ ಫೋಟೋ ವಾಲ್​ ಸಿದ್ಧಪಡಿಸಲಾಗಿದೆ. ಅಂದರೆ, ಫಿನಾಲೆಯಲ್ಲಿರುವ ಪ್ರತಿ ಸ್ಪರ್ಧಿಗಳ ಪ್ರಯಾಣದ ಫೋಟೋ ಝಲಕ್​ ಈ ವಾಲ್​ನಲ್ಲಿರುತ್ತದೆ. ಮೊದಲ ದಿನ ಅರವಿಂದ್ ಫೋಟೋ ವಾಲ್​, ಎರಡನೇ ದಿನ ವೈಷ್ಣವಿ ಹಾಗೂ ಮೂರನೇ ದಿನ ಮಂಜು ಪಾವಗಡ ಅವರ ಫೋಟೋ ವಾಲ್​ಅನ್ನು ಬಿಗ್​ ಬಾಸ್​ ಅನಾವರಣ ಮಾಡಿದ್ದರು.

ಆಗಸ್ಟ್​ 5ರ ಎಪಿಸೋಡ್​ನಲ್ಲಿ ದಿವ್ಯಾ ಉರುಡುಗ ಅವರ ಫೋಟೋ ವಾಲ್​ ಬರಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಈ ಕಾರಣಕ್ಕೆ ದಿವ್ಯಾ ಸ್ನಾನ ಮಾಡಿ ಅದ್ಭುತವಾಗಿ ರೆಡಿ ಆಗಿದ್ದರು. ಈ ಬಗ್ಗೆ ಮಂಜು ಪ್ರಶ್ನೆ ಮಾಡಿದ್ದಾರೆ. ‘ಏನಮ್ಮ ಇವತ್ತು ಅದ್ಭುತವಾಗಿ ರೆಡಿ ಆಗಿದ್ದೀಯಾ. ಏನು ಕಾರಣ? ಯಾವಾಗಲೂ ಇಷ್ಟೊಂದು ರೆಡಿ ಆಗಿದ್ದು ಕಂಡಿರಲಿಲ್ಲ. ಈಗ ಫೋಟೋ ವಾಲ್ ಪ್ರಶಾಂತ್​ ಅವರದ್ದಾಗಿರಬೇಕು. ದೇವರೇ ನಾನೇನು ಹೇಳಲ್ಲ, ನಿಂಗೇ ಎಲ್ಲವೂ ಗೊತ್ತು’ ಎಂದು ಕೋರಿದರು.

ಬಿಗ್​ ಬಾಸ್​ ಬಜರ್​ ಮಾಡಿದರು. ಹೊರಗೆ ನೋಡಿದರೆ ಪ್ರಶಾಂತ್​ ಅವರ ಫೋಟೋ ವಾಲ್​ ಇತ್ತು.  ಮಂಜು ಕೋರಿಕೆ ಇಡೇರಿತ್ತು. ಇದನ್ನು ನೋಡಿ ದಿವ್ಯಾ ತುಂಬಾನೇ ಬೇಸರ ಮಾಡಿಕೊಂಡರು. ‘ಬಿಗ್​ ಬಾಸ್​’ ಎಂದು ಕಿರುಚಿದರು. ಈ ಎಪಿಸೋಡ್​ ಅಭಿಮಾನಿಗಳಿಗೆ ಸಖತ್​ ಖುಷಿ ನೀಡಿದ್ದಂತೂ ಸತ್ಯ.

ಇದನ್ನೂ ಓದಿ: 

ಪ್ರಶಾಂತ್​ ಕಾರಿನ ಮೇಲೆ ದೈತ್ಯ ಕಲ್ಲನ್ನು ಹಾಕಿದ್ದ ದುಷ್ಕರ್ಮಿಗಳು; ಕೊಲೆ ಪ್ರಯತ್ನದ ಬಗ್ಗೆ ಬಿಗ್​ ಬಾಸ್​ನಲ್ಲಿ ಹೇಳಿಕೊಂಡ ಸಂಬರಗಿ

Follow Us
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ತಂದೆಯ ಅಂತ್ಯಸಂಸ್ಕಾರ ನೆರವೇರಿಸಿ ಲಿಂಗಸಮಾನತೆಯ ಸಂದೇಶ ಸಾರಿದ ಸಹೋದರಿಯರು
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!
ಮನೆಯ ಅಂಗಳದಲ್ಲಿ ಮಲಗಿದ್ದ ವೃದ್ಧೆಗೆ ಕಡಿದೇ ಬಿಡ್ತು ಹಾವು!