Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರೋಡಲ್ಲಿ ಓಡಾಡೋಕೆ ಆಗ್ತಿಲ್ಲ’; ಬಿಗ್ ಬಾಸ್​ಗೆ ಬಂದು ಸಮಸ್ಯೆ ಹೇಳಿಕೊಂಡ ಮೈಕಲ್

ಎಲಿಮಿನೇಟ್ ಆದ ಸ್ಪರ್ಧಿಗಳು ದೊಡ್ಮನೆಗೆ ಮರಳಿದ್ದಾರೆ. ಮೈಕಲ್ ಆಗಮಿಸುತ್ತಿದ್ದಂತೆ ಇಡೀ ಮನೆಯವರು ಖುಷಿಯಿಂದ ಕುಪ್ಪಳಿಸಿದರು. ‘ಮೈಕಲ್ ರೆಸ್ಪಾನ್ಸ್ ಹೇಗಿದೆ? ನಾರ್ಮಲ್ ಆಗಿ ಓಡಾಬಹುದಾ’ ಎಂದು ನಮ್ರತಾ ಕೇಳಿದರು. ಇದಕ್ಕೆ ಅವರು ಉತ್ತರಿಸಿದ್ದಾರೆ.

‘ರೋಡಲ್ಲಿ ಓಡಾಡೋಕೆ ಆಗ್ತಿಲ್ಲ’; ಬಿಗ್ ಬಾಸ್​ಗೆ ಬಂದು ಸಮಸ್ಯೆ ಹೇಳಿಕೊಂಡ ಮೈಕಲ್
ಮೈಕಲ್ ಅಜಯ್
Follow us
ರಾಜೇಶ್ ದುಗ್ಗುಮನೆ
|

Updated on: Jan 17, 2024 | 7:34 AM

‘ಬಿಗ್ ಬಾಸ್’ನಿಂದ ಮೈಕಲ್ ಅಜಯ್ (Michael Ajay) ಅವರು ಸಾಕಷ್ಟು ಜನಪ್ರಿಯತೆ ಪಡೆದರು. ಈ ಮೊದಲು ಅವರು ಯಾರು ಎಂಬುದು ಅನೇಕರಿಗೆ ಗೊತ್ತೇ ಇರಲಿಲ್ಲ. ಆದರೆ, ಈಗ ಅವರ ಖ್ಯಾತಿ ಕರ್ನಾಟಕದಾದ್ಯಂತ ಹಬ್ಬಿದೆ. ಅವರನ್ನು ಎಲ್ಲರೂ ಗುರುತಿಸುತ್ತಾರೆ. ಮೊದಲೆಲ್ಲ ಇವರು ಯಾವುದೋ ಆಫ್ರಿಕಾ ದೇಶದ ಪ್ರಜೆ ಇರಬಹುದು ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು. ಆದರೆ, ಈಗ ‘ಮಣ್ಣಿನ ಮಗ’ ಎಂದು ಅವರನ್ನು ಪ್ರೀತಿಯಿಂದ ಕರೆಯುತ್ತಾರೆ. ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಮೈಕಲ್ ಅವರು ಹೇಳಿಕೊಂಡಿದ್ದಾರೆ.

ಮೈಕಲ್ ಅಜಯ್ ನೈಜೀರಿಯಾ ಕನ್ನಡಿಗ. ಅಜ್ಜಿಯಿಂದ ಕನ್ನಡ ಮಾತನಾಡುವುದನ್ನು ಕಲಿತರು. ಅವರು ಬಿಗ್ ಬಾಸ್​ಗೆ ಬಂದಾಗ ಕನ್ನಡ ಮಾತನಾಡುವುದೇ ಒಂದು ಚಾಲೆಂಜ್ ಆಗಿತ್ತು. ಆದರೆ, ಅವರು ಹಿಂಜರಿಯಲಿಲ್ಲ. ಕಷ್ಟಪಟ್ಟು ಕನ್ನಡ ಮಾತನಾಡಿದರು. ಎಲ್ಲ ಕಡೆಗಳಲ್ಲಿ ಕನ್ನಡ ಬಳಕೆ ಮಾಡಿದರು. ಇದರಿಂದ ಅವರು ಅನೇಕರಿಗೆ ಇಷ್ಟ ಆದರು. ಹಳ್ಳಿ ಟಾಸ್ಕ್​ನಲ್ಲಿ ಮೈಕಲ್ ಎದುರಾಳಿ ತಂಡದವರು ‘ಮಣ್ಣಿನ ಮಗ’ ಎಂದು ತಂಡಕ್ಕೆ ಹೆಸರು ಇಟ್ಟುಕೊಂಡಿದ್ದರು. ಈ ವೇಳೆ ಮೈಕಲ್ ‘ಅವರು ಮಣ್ಣಿನ ಮಗನೋ ಅಥವಾ ನಾನೋ’ ಎಂದು ಕೇಳಿದ್ದರು. ಅಲ್ಲಿಂದ ಎಲ್ಲರೂ ಮೈಕಲ್​ನ ಮಣ್ಣಿನ ಮಗ ಎಂದು ಕರೆಯುತ್ತಾ ಬಂದರು.

ಜನವರಿ 16ರ ಎಪಿಸೋಡ್​ನಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ರೀಯೂನಿಯನ್ ಆಗಿದೆ. ಎಲಿಮಿನೇಟ್ ಆದ ಸ್ಪರ್ಧಿಗಳು ದೊಡ್ಮನೆಗೆ ಬಂದಿದ್ದಾರೆ. ಮೈಕಲ್ ಆಗಮಿಸುತ್ತಿದ್ದಂತೆ ಇಡೀ ಮನೆ ಖುಷಿಯಿಂದ ಕುಪ್ಪಳಿಸಿತು. ‘ಮೈಕಲ್ ರೆಸ್ಪಾನ್ಸ್ ಹೇಗಿದೆ? ನಾರ್ಮಲ್ ಆಗಿ ಓಡಾಬಹುದಾ’ ಎಂದು ನಮ್ರತಾ ಕೇಳಿದರು. ಇದಕ್ಕೆ ಮೈಕಲ್ ಉತ್ತರಿಸಿದರು. ‘ರೆಸ್ಪಾನ್ಸ್ ನೆಕ್ಸ್ಟ್​ ಲೆವಲ್ ಇದೆ. ರೋಡ್​ ಅಲ್ಲಿ ಓಡಾಡೋಕೆ ಆಗ್ತಿಲ್ಲ. ಎಲ್ಲರೂ ಮಣ್ಣಿನ ಮಗ ಅಂತಾನೇ ಕರ್ಯೋದು’ ಎಂದು ಖುಷಿಯಿಂದ ಹೇಳಿಕೊಂಡರು.

ಇದನ್ನೂ ಓದಿ: ‘ಬಿಗ್​ ಬಾಸ್​ನಲ್ಲಿ ಮೊದಲಿಗೆ ನನ್ನನ್ನು ಜಾಸ್ತಿ ತೋರಿಸಿಲ್ಲ’: ಕಾರಣ ತಿಳಿಸಿದ ಮೈಕಲ್​ ಅಜಯ್​

ಮೈಕಲ್ ಅವರಿಗೆ ಈ ಪರಿ ರೆಸ್ಪಾನ್ಸ್ ಸಿಗುತ್ತಿರುವುದು ನೋಡಿ ಎಲ್ಲರಿಗೂ ಖುಷಿ ಆಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
2 ಬಾರಿ ಫೈನ್ ಕಟ್ಟಿದ ಬಳಿಕ ಹೊಸ ಸೆಲೆಬ್ರೇಷನ್ ಪರಿಚಯಿಸಿದ ದಿಗ್ವೇಶ್ ರಾಠಿ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ಅಧಿವೇಶನದ ಬಗ್ಗೆ ಬೆಂಗಳೂರಲ್ಲಿ ಬ್ರೀಫ್ ಮಾಡಿದ್ದ ಮಲ್ಲಿಕಾರ್ಜುನ ಖರ್ಗೆ
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ದಾಳಿಗೆ ಬಂದ ಚಿರತೆಯಿಂದ ಬಾಲಕನನ್ನು ರಕ್ಷಿಸಿದ ಶ್ವಾನಗಳು
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ಕೊಕ್ಕನೂರ ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ‌ ಪಲ್ಲಕ್ಕಿ
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ರಥಗಳ ಮೇಲೆ ಬಾಳೆಹಣ್ಣು ಎಸೆದು ಹರಕೆ ತೀರಿಸಿಕೊಂಡ ಭಕ್ತರು
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಬೆಟ್ಟಿಂಗ್ ಆ್ಯಪ್ ಪ್ರಮೋಷನ್​ಗೆ ಇನ್​ಫ್ಲುಯೆನ್ಸರ್​ಗಳು ಎಷ್ಟು ಪಡೀತಾರೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ಶವ ಸಂಸ್ಕಾರದ ಸಮಯದಲ್ಲಿ ಮಾಡಿದ ಸಹಾಯ ಹೇಗೆ ಫಲ ಕೊಡುತ್ತೆ?
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
ರವಿ ಮೀನ ರಾಶಿಯಲ್ಲಿ, ಚಂದ್ರ ಸಿಂಹ ರಾಶಿಯಲ್ಲಿ ಸಂಚಾರ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್