AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊನೆಯ ಕ್ಷಣದಲ್ಲಿ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದೇಕೆ? ಬಿಗ್ ಬಾಸ್ ಕೊಟ್ಟರು ಕಾರಣ

Bigg Boss Midweek Elimination: ಈ ವಾರದ ಮಧ್ಯದಲ್ಲಿ ಬಿಗ್ ಬಾಸ್ ಕನ್ನಡದಲ್ಲಿ ಒಬ್ಬ ಸ್ಪರ್ಧಿಯನ್ನು ಹೊರಹಾಕುವುದಾಗಿ ಘೋಷಿಸಲಾಗಿತ್ತು. ಆದರೆ, ಅನಿರೀಕ್ಷಿತ ತಿರುವಿನಲ್ಲಿ, ಯಾರನ್ನೂ ಹೊರಹಾಕಲಾಗಿಲ್ಲ. ಕೊನೆಯಲ್ಲಿ ಭವ್ಯಾ ಹಾಗೂ ಗೌತಮಿ ಇದ್ದರು. ಆದರೆ, ತಾತ್ಕಾಲಿಕವಾಗಿ ಇದನ್ನು ನಡೆಸುತ್ತಿಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಕೊನೆಯ ಕ್ಷಣದಲ್ಲಿ ಮಿಡ್ ವೀಕ್ ಎಲಿಮಿನೇಷನ್ ರದ್ದಾಗಿದ್ದೇಕೆ? ಬಿಗ್ ಬಾಸ್ ಕೊಟ್ಟರು ಕಾರಣ
ಬಿಗ್ ಬಾಸ್
ರಾಜೇಶ್ ದುಗ್ಗುಮನೆ
|

Updated on:Jan 16, 2025 | 8:47 AM

Share

ಈ ವಾರದ ಮಧ್ಯದಲ್ಲಿ ಒಬ್ಬರು ಬಿಗ್ ಬಾಸ್​ನಿಂದ ಹೊರ ಹೋಗಲಿದ್ದಾರೆ ಎಂದು ಸುದೀಪ್ ಘೋಷಿಸಿದ್ದರು. ಈ ಮೂಲಕ ದೊಡ್ಮನೆಯ ಸದಸ್ಯರ ಸಂಖ್ಯೆ 8ರಿಂದ ಏಳಕ್ಕೆ ಇಳಿಕೆ ಆಗಲಿದೆ ಎಂದು ವೀಕ್ಷಕರು ಅಂದುಕೊಂಡಿದ್ದರು. ಆದರೆ, ಸದ್ಯಕ್ಕೆ ಅದು ಸುಳ್ಳಾಗಿದೆ. ಮಿಡ್ ವೀಕ್ ಎಲಿಮಿನೇಷನ್ ಡ್ರಾಮಾ ನಡೆಸಿ ನಂತರ ಕೊನೆಯ ಕ್ಷಣದಲ್ಲಿ ಅದನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ. ಹಾಗಾದರೆ ಯಾರೂ ದೊಡ್ಮನೆಯಿಂದ ಹೊರ ಹೋಗಿಲ್ಲವೇ? ಹೋಗುತ್ತಾರೆ ಎಂದಾದರೆ ಯಾವಾಗ? ಆ ಎಲ್ಲ ಪ್ರಶ್ನೆಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.

‘ಬಿಗ್ ಬಾಸ್’ನಲ್ಲಿ ಹನುಮಂತ ಅವರು ಫಿನಾಲೆ ವೀಕ್ ತಲುಪಿಯಾಗಿದೆ. ಧನರಾಜ್ ಅವರು ಟಾಸ್ಕ್ ಆಡಿ ಮಧ್ಯ ವಾರದ ಎಲಿಮಿನೇಷ್​​ನಿಂದ ಬಚಾವ್ ಆದರು. ಸದ್ಯ ಗೌತಮಿ, ಭವ್ಯಾ ಗೌಡ, ಮಂಜು, ತ್ರಿವಿಕ್ರಂ, ರಜತ್ ಹಾಗೂ ಮೋಕ್ಷಿತಾ ನಾಮಿನೇಷನ್​ ಲಿಸ್ಟ್​ನಲ್ಲಿ ಇದ್ದರು. ಇವರ ಪೈಕಿ ಒಬ್ಬರು ಎಲಿಮಿನೇಟ್ ಆಗೋದು ಪಕ್ಕಾ ಎನ್ನಲಾಗಿತ್ತು. ಅದರಂತೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ನಡೆಸಲಾಯಿತು.

ಮೊದಲು ಬಿಗ್ ಬಾಸ್ ಮನೆಯ ಮುಖ್ಯದ್ವಾರ ತೆಗೆಯಲಾಯಿತು. ಆ ಬಳಿಕ ಒಬ್ಬೊಬ್ಬರಾಗಿ ಸ್ಪರ್ಧಿಗಳನ್ನು ಕರೆದರು ಬಿಗ್ ಬಾಸ್. ‘ಇಂದು ಈ ಮುಖ್ಯದ್ವಾರ ತೆಗೆದಿರುವುದು ನಿಮಗಾಗಿ ಅಲ್ಲ’ ಎಂದು ಹೇಳುತ್ತಾ ಬಂದರು. ಕೊನೆಯಲ್ಲಿ ಭವ್ಯಾ ಹಾಗೂ ಗೌತಮಿಯನ್ನು ಕರೆಯಲಾಯಿತು. ಮೊದಲು ಗೌತಮಿಯನ್ನು ನಿಲ್ಲಿಸಿ, ‘ಈ ಬಾಗಿಲು ತೆರೆದಿರುವುದು ನಿಮಗಾಗಿ..’ ಎಂದು ಪೌಸ್ ಕೊಟ್ಟ ಬಿಗ್​ ಬಾಸ್ ಕೊನೆಯಲ್ಲಿ ‘ಅಲ್ಲ’ ಎಂದರು.

ಹೀಗಾಗಿ ಭವ್ಯಾ ಹೊರ ಹೋಗೋದು ಖಚಿತ ಎಂದು ಎಲ್ಲರೂ ಅಂದುಕೊಂಡರು. ಭವ್ಯಾ ಕೂಡ ಕಣ್ಣೀರು ಹಾಕಿದರು. ಅವರಿಗೂ ನೀವು ಹೊರ ಹೋಗುತ್ತಿಲ್ಲ ಎಂದು ಬಿಗ್ ಬಾಸ್ ಘೋಷಿಸಿದರು. ‘ನಂಗೆ ಯಾಕೆ ಹೀಗೆ ಮಾಡುತ್ತೀರಾ ಬಿಗ್ ಬಾಸ್’ ಎಂದು ಭವ್ಯಾ ಗಳಗಳನೆ ಅತ್ತರು. ಈ ಮೊದಲು ಕೂಡ ಭವ್ಯಾಗೆ ಈ ರೀತಿಯ ಪ್ರ್ಯಾಂಕ್ ಮಾಡಲಾಗಿತ್ತು.

ಇದನ್ನೂ ಓದಿ: ತಮಗಿಂತ ಕೆಳಗಿದ್ದಾರೆ ಎಂದು ನಕ್ಕಿದ್ದ ತ್ರಿವಿಕ್ರಂ-ರಜತ್​ಗೆ ಸುತ್ತಿ ಬಂತು ಕರ್ಮ

‘ಮಕರ ಸಂಕ್ರಾಂತಿ ಹಬ್ಬದ ಈ ಶುಭ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರ ಹೋಗುತ್ತಿಲ್ಲ. ಆದರೆ, ನಡುವಾರದ ಎಲಿಮಿನೇಷನ್ ನಡೆಯಲೇಬೇಕು. ಅಲ್ಲಿಯವರೆಗೆ ಮುಖ್ಯದ್ವಾರ ತೆಗೆದೇ ಇರುತ್ತದೆ’ ಎಂದು ಬಿಗ್ ಬಾಸ್ ಘೋಷಿಸಿದರು. ಸದ್ಯ ಗೌತಮಿ ಹೊರ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಪಿಸೋಡ್ ಇಂದು (ಜನವರಿ 16) ಪ್ರಸಾರ ಕಾಣಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Thu, 16 January 25

ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು