AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿನಾಲೆ ಹಿಂದಿನ ವಾರದಲ್ಲಿ ಪ್ರಶಾಂತ್​ ಕಮ್​ಬ್ಯಾಕ್​; ಮಂಜು, ಅರವಿಂದ್​ ಹಿಂದಿಕ್ಕಿದ ಸಂಬರಗಿ

ಮನೆಯಲ್ಲಿ ಗುಂಪುಗಾರಿಕೆ ಇದೆ, ಅನ್ಯಾಯ ಇದೆ ಎಂದೆಲ್ಲ ಧ್ವನಿ ಎತ್ತಿದವರು ಪ್ರಶಾಂತ್​. ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರಿಂದ ಅವರಿಗೆ ಮನೆಯಲ್ಲಿ ಕೆಲವರು ಹೆದರಿದ್ದೂ ಇದೆ.

ಫಿನಾಲೆ ಹಿಂದಿನ ವಾರದಲ್ಲಿ ಪ್ರಶಾಂತ್​ ಕಮ್​ಬ್ಯಾಕ್​; ಮಂಜು, ಅರವಿಂದ್​ ಹಿಂದಿಕ್ಕಿದ ಸಂಬರಗಿ
ಅರವಿಂದ್​-ಪ್ರಶಾಂತ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 31, 2021 | 3:33 PM

Share

ಬಿಗ್​ ಬಾಸ್​ ಮನೆ ಸೇರಿದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಖ್ಯಾತಿ ತುಂಬಾನೇ ಹೆಚ್ಚಿದೆ. ಸಾಮಾಜಿಕ ಕಾರ್ಯಕರ್ತರಾಗಿ ಕೆಲಸ ಮಾಡಿದ ಅವರು, ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡರು. ಫಿನಾಲೆ ಸಮೀಪಿಸುತ್ತಿದ್ದಂತೆ ಪ್ರಶಾಂತ್ ಕಮ್​ಬ್ಯಾಕ್​ ಮಾಡಿದ್ದಾರೆ. ಅವರ ಆಟ ನೋಡಿ ನಿಜಕ್ಕೂ ವೀಕ್ಷಕರು ಅಚ್ಚರಿಗೊಂಡಿದ್ದಾರೆ.

ಮನೆಯಲ್ಲಿ ಗುಂಪುಗಾರಿಕೆ ಇದೆ, ಅನ್ಯಾಯ ಇದೆ ಎಂದೆಲ್ಲ ಧ್ವನಿ ಎತ್ತಿದವರು ಪ್ರಶಾಂತ್​. ಏರು ಧ್ವನಿಯಲ್ಲಿ ಮಾತನಾಡುತ್ತಿದ್ದರಿಂದ ಅವರಿಗೆ ಮನೆಯಲ್ಲಿ ಕೆಲವರು ಹೆದರಿದ್ದೂ ಇದೆ. ವೈಲ್ಡ್​ ಕಾರ್ಡ್​ ಮೂಲಕ ಎಂಟ್ರಿ ಕೊಟ್ಟ ಚಕ್ರವರ್ತಿ ಚಂದ್ರಚೂಡ್ ಜತೆ ಸೇರಿದ ನಂತರದಲ್ಲಿ ಪ್ರಶಾಂತ್​ ಸಂಬರಗಿ ಯೋಚನಾ ಲಹರಿ ಬದಲಾಯಿತು. ಸದಾ ಮನೆಯವರ ಬಗ್ಗೆ ಮಾತನಾಡಿಕೊಂಡು ಇಬ್ಬರೂ ಕಾಲ ಕಳೆಯುತ್ತಿದ್ದರು.

ಪ್ರಶಾಂತ್​ ಸಂಬರಗಿ ಮುಂದೊಂದು ಮಾತನಾಡುತ್ತಾರೆ, ಹಿಂದೊಂದು ರೀತಿ ನಡೆದುಕೊಳ್ಳುತ್ತಾರೆ ಅನ್ನೋದು ಎಲ್ಲರ ಆರೋಪವಾಗಿತ್ತು. ಈ ಬಗ್ಗೆ ಸುದೀಪ್​ ಅವರಿಂದಲೂ ಪ್ರಶಾಂತ್​ ಕಿವಿಮಾತು ಹೇಳಿಸಿಕೊಂಡಿದ್ದಾರೆ. ನಂತರದಲ್ಲಿ ಪ್ರಶಾಂತ್​ ಕೊಂಚ ಬದಲಾಗಿದ್ದಾರೆ. ಈ ವಾರ ಅವರ ಪ್ರದರ್ಶನ ಅದ್ಭುತವಾಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ಈ ವಾರ ವೈಯಕ್ತಿಕ ಟಾಸ್ಕ್​ಗಳನ್ನು ನೀಡಲಾಯಿತು. ಪ್ರಶಾಂತ್​ ಎಲ್ಲರಿಗೂ ಟಫ್​ ಕಾಂಪಿಟೇಷನ್​ ನೀಡಿದರು. ಕಳೆದ ವಾರದ ಟಾಸ್ಕ್​ನಲ್ಲಿ ಪ್ರಶಾಂತ್​ ಸಾಕಷ್ಟು ಬಾರಿ ಎಡವಿದ್ದರು. ಇದಕ್ಕೆ ಅವರು ದೇಹ ಸಹಕರಿಸುತ್ತಿಲ್ಲ ಎನ್ನುವ ಕಾರಣ ನೀಡಿದ್ದರು. ಆದರೆ, ಈ ಬಾರಿ ಅವರು ದೊಡ್ಡ ಮಟ್ಟದಲ್ಲಿ ಕಮ್​ಬ್ಯಾಕ್​ ಮಾಡಿದ್ದಾರೆ.

ಪ್ರತಿ ವಾರ ಅತ್ಯುತ್ತಮ ಹಾಗೂ ಕಳಪೆ ಯಾರು ಎಂಬುದನ್ನು ಸ್ಪರ್ಧಿಗಳು ನಿರ್ಧರಿಸುತ್ತಾರೆ. ಈ ವೇಳೆ ಪ್ರಶಾಂತ್​ ಅವರಿಗೆ ಅತ್ಯುತ್ತಮ ಕಿರೀಟ ಸಿಕ್ಕಿದೆ. ಅಚ್ಚರಿ ಎಂದರೆ, ಕಳೆದ ವಾರ ಟಾಸ್ಕ್​ ಅತ್ಯುತ್ತಮವಾಗಿ ಆಡಿಲ್ಲ ಎನ್ನುವ ಕಾರಣಕ್ಕೆ ಅವರಿಗೆ ಕಳಪೆ ನೀಡಲಾಗಿತ್ತು. ಅದರ ಮರುವಾರವೇ ಟಾಸ್ಕ್​ಗಳನ್ನು ಅತ್ಯುತ್ತಮವಾಗಿ ಆಡಿ ಪ್ರಶಾಂತ್​ ಅತ್ಯುತ್ತಮ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಕೊನೆಯ ವಾರದಲ್ಲಿ ಮಂಜು ಪಾವಗಡ ಹಾಗೂ ಅರವಿಂದ್ ಅವರನ್ನೂ ಪ್ರಶಾಂತ್​ ಹಿಂದಿಕ್ಕಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಲ್ಲಿದ್ದಾರೆ. ಆಗಸ್ಟ್​ 8ರಂದು ಫಿನಾಲೆ ನಡೆಯುತ್ತಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿರುವ ಎಂಟು ಸ್ಪರ್ಧಿಗಳ ಪೈಕಿ ಹೊರ ಹೋಗುವ ಆ ಮೂವರು ಯಾರು?

ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ಪಿಕ್​ಅಪ್ ವ್ಯಾನ್ ಮೇಲೆ ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆಯ ಗ್ರಿಡರ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ದಾರಿಯಲ್ಲಿ ಸಿಕ್ಕ ಹಣ ರೈತನಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೊಲೀಸ್
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ