ಹಗಲಿನಲ್ಲಿ ನಿದ್ದೆ ಮಾಡೋಕೆ ಮುಂದಾದ ಮಂಜು-ವೈಷ್ಣವಿಗೆ ಕಠಿಣ ಶಿಕ್ಷೆ; ಉಳಿದ ಸ್ಪರ್ಧಿಗಳಿಗೆ ಎಚ್ಚರಿಕೆ ಗಂಟೆ

ಜುಲೈ 30ರ ಎಪಿಸೋಡ್​ನಲ್ಲಿ ವೈಷ್ಣವಿ ಹಾಗೂ ಮಂಜು ಒಂದು ಕಡೆ ಕೂತಿದ್ದರು. ಅವರಿಗೆ ನಿದ್ದೆ ಬರುತ್ತಿದೆ ಅನ್ನೋದು ಅವರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು.

ಹಗಲಿನಲ್ಲಿ ನಿದ್ದೆ ಮಾಡೋಕೆ ಮುಂದಾದ ಮಂಜು-ವೈಷ್ಣವಿಗೆ ಕಠಿಣ ಶಿಕ್ಷೆ; ಉಳಿದ ಸ್ಪರ್ಧಿಗಳಿಗೆ ಎಚ್ಚರಿಕೆ ಗಂಟೆ
ವೈಷ್ಣವಿ -ಮಂಜು
Follow us
| Updated By: ಮದನ್​ ಕುಮಾರ್​

Updated on: Jul 31, 2021 | 7:17 AM

ಬಿಗ್​ ಬಾಸ್​ ಸೀಸನ್​ 8 ಫಿನಾಲೆ ಹಂತಕ್ಕೆ ಬಂದು ನಿಂತಿದೆ. ಈ ವಾರ ಯಾವುದೇ ಟಾಸ್ಕ್​ ಇಲ್ಲದ ಕಾರಣ ಸ್ಪರ್ಧಿಗಳು ಮನೆಯಲ್ಲಿ ಹಾಯಾಗಿ ಸಮಯ ಕಳೆಯುತ್ತಿದ್ದಾರೆ. ಈ ಮಧ್ಯೆ ಟಾಸ್ಕ್​ ಇಲ್ಲದ ಕಾರಣ ಸ್ಪರ್ಧಿಗಳು ಮನೆಯಲ್ಲಿ ಟೈಮ್​ ಪಾಸ್​ಗೆ ದಾರಿ ಸಿಗುತ್ತಿಲ್ಲ. ಹೀಗಾಗಿ, ಕೆಲ ಸ್ಪರ್ಧಿಗಳಿಗೆ ತೂಕಡಿಕೆ ಬರುತ್ತಿದೆ. ಮನೆಯಲ್ಲಿ ನಿದ್ದೆ ಮಾಡೋಕೆ ಹೋದ ವೈಷ್ಣವಿ ಹಾಗೂ ಮಂಜುಗೆ ಬಿಗ್​ ಬಾಸ್​ ಶಿಕ್ಷೆ ನೀಡಿದ್ದಾರೆ!

ಜುಲೈ 30ರ ಎಪಿಸೋಡ್​ನಲ್ಲಿ ವೈಷ್ಣವಿ ಹಾಗೂ ಮಂಜು ಒಂದು ಕಡೆ ಕೂತಿದ್ದರು. ಅವರಿಗೆ ನಿದ್ದೆ ಬರುತ್ತಿದೆ ಅನ್ನೋದು ಅವರು ನಡೆದುಕೊಳ್ಳುತ್ತಿದ್ದ ರೀತಿಯಲ್ಲೇ ಗೊತ್ತಾಗುತ್ತಿತ್ತು. ಈ ವೇಳೆ ಬಿಗ್​ ಬಾಸ್​ ಕಡೆಯಿಂದ ಕರೆ ಬಂದಿದೆ. ಮಂಜು ಪಾವಗಡ ಹೋಗಿ ಕಾಲ್​ ಎತ್ತಿದ್ದಾರೆ.

‘ಮಂಜು ನಿಮಗೆ ನಿದ್ದೆ ಬರ್ತಿದೆಯಾ?’ ಎಂದು ಬಿಗ್​ ಬಾಸ್​ ಪ್ರಶ್ನೆ ಮಾಡಿದರು. ಇದಕ್ಕೆ ಹೌದು ಎನ್ನುವ ಉತ್ತರ ಮಂಜು ಕಡೆಯಿಂದ ಬಂತು. ಅಲ್ಲದೆ, ನಿದ್ರೆ ಮಾಡೋಕೆ ಏನಾದರೂ ಅವಕಾಶ ಕೊಡ್ತೀರಾ ಎಂದು ಬಿಗ್​ ಬಾಸ್​ಗೆ ಮಂಜು ಕೇಳಿದರು. ಆಗ ಬಿಗ್​ ಬಾಸ್​ ‘ಇಲ್ಲ, ನಿಮಗೊಂದು ಟಾಸ್ಕ್​ ಕೊಡ್ತೀವಿ, ನಿದ್ದೆ ಹೋಗಲಿದೆ’ ಎಂದರು.

ಅಂತೆಯೇ ಬಿಗ್​ ಬಾಸ್​ ಮಂಜು ಹಾಗೂ ವೈಷ್ಣವಿಗೆ ಟಾಸ್ಕ್​ ಒಂದನ್ನು ನೀಡಿದರು. ಇದರ ಪ್ರಕಾರ ಅಕ್ಕಿ ಹಾಗೂ ಜೀರಿಗೆ ಸೇರಿಕೊಂಡಿರುತ್ತದೆ. ಇದನ್ನು ಬೇರ್ಪಡಿಸಬೇಕು. ಇದನ್ನು ನೋಡಿ ಮಂಜು ಶಾಕ್​ ಆಗಿದ್ದಾರೆ. ‘ಬಿಗ್​ ಬಾಸ್​ ಯಾಕಿಷ್ಟು ಕಠಿಣ ಶಿಕ್ಷೆ ನೀಡಿದ್ದೀರ’ ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನು, ‘ನನಗೆ ನಿದ್ದೆಯಲ್ಲಿ, ಹೋಯಿತು. ಇನ್ನೂ ಯಾವಾಗೂ ಬರಲ್ಲ ಎಂದಿದ್ದಾರೆ’ ವೈಷ್ಣವಿ.

ಬಿಗ್​ ಬಾಸ್​ ಮನೆಯಲ್ಲಿ ಮಂಜು ಪಾವಗಡ, ಅರವಿಂದ್ ಕೆ.ಪಿ, ಶಮಂತ್​ ಬ್ರೋ ಗೌಡ, ಪ್ರಶಾಂತ್​ ಸಂಬರಗಿ, ವೈಷ್ಣವಿ ಗೌಡ, ಶುಭಾ ಪೂಂಜಾ, ದಿವ್ಯಾ ಸುರೇಶ್​ ಹಾಗೂ ದಿವ್ಯಾ ಉರುಡುಗ ಇದ್ದಾರೆ. ಈ ಪೈಕಿ ದಿವ್ಯಾ ಉರುಡುಗ ಕ್ಯಾಪ್ಟನ್​ ಆಗಿ ನಾಮಿನೇಷನ್​ನಿಂದ ಬಚಾವ್​ ಆಗಿದ್ದಾರೆ. ಉಳಿದಂತೆ ಏಳು ಜನರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಇದನ್ನೂ ಓದಿ:

ಶಮಂತ್​ಗೆ ಬಿಗ್​ ಬಾಸ್​ ನೀಡಿದ್ರು ಸರ್​ಪ್ರೈಸ್​ ಗಿಫ್ಟ್​; ಭಾವುಕರಾದ ಬ್ರೋ ಗೌಡ

ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ