AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಮ ಪಾತ್ರಧಾರಿ ಅರುಣ್​ ಗೋವಿಲ್​ಗೆ 64ನೇ ಜನ್ಮದಿನ; ‘ರಾಮಾಯಣ’ದ ಅವಕಾಶಕ್ಕೆ ನಗುವೇ ಕಾರಣ

Arun Govil Birthday: ಮೊದಲ ಬಾರಿಗೆ ಅರುಣ್​ ಗೋವಿಲ್​ ಅವರು ರಾಮನ ಪಾತ್ರಕ್ಕೆ ಆಡಿಷನ್​ ನೀಡಿದಾಗ ರಿಜೆಕ್ಟ್​ ಆಗಿದ್ದರು. ಹಾಗಾದ್ರೆ ನಂತರ ಅವರಿಗೆ ಈ ಪಾತ್ರ ಸಿಕ್ಕಿದ್ದು ಹೇಗೆ?

ರಾಮ ಪಾತ್ರಧಾರಿ ಅರುಣ್​ ಗೋವಿಲ್​ಗೆ 64ನೇ ಜನ್ಮದಿನ; ‘ರಾಮಾಯಣ’ದ ಅವಕಾಶಕ್ಕೆ ನಗುವೇ ಕಾರಣ
ಅರುಣ್ ಗೋವಿಲ್
TV9 Web
| Edited By: |

Updated on: Jan 12, 2022 | 12:09 PM

Share

1980ರ ದಶಕದಲ್ಲಿ ‘ರಾಮಾಯಣ’ ಧಾರಾವಾಹಿ (Ramayan Serial) ಮಾಡಿದ ಮೋಡಿ ಅಷ್ಟಿಷ್ಟಲ್ಲ. ಕಲಾವಿದರ ಅದ್ಭುತ ನಟನೆಯಿಂದಾಗಿ ಆ ಸೀರಿಯಲ್​ (Doordarshan TV Serial) ಸಿಕ್ಕಾಪಟ್ಟೆ ಫೇಮಸ್​ ಆಗಿತ್ತು. ಮೊದಲ ಲಾಕ್​ಡೌನ್​ ಸಂದರ್ಭದಲ್ಲಿ ‘ರಾಮಾಯಣ’ ಧಾರಾವಾಹಿ ಮರುಪ್ರಸಾರ ಆದಾಗಲೂ ಜನರು ಮುಗಿಬಿದ್ದು ನೋಡಿದ್ದರು. ಅಷ್ಟರಮಟ್ಟಿಗೆ ಕ್ರೇಜ್​ ಸೃಷ್ಟಿ ಮಾಡಿದ್ದ ಸೀರಿಯಲ್​ ಅದು. ಅದರಲ್ಲಿ ರಾಮನ (Lord Rama) ಪಾತ್ರ ಮಾಡಿದ ನಟ ಅರುಣ್​ ಗೋವಿಲ್​ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿತ್ತು. ಇಂದು (ಜ.12) ಅವರು 64ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಜನ್ಮದಿನದ ಪ್ರಯುಕ್ತ ಅವರಿಗೆ ಅಭಿಮಾನಿಗಳಿಂದ ಮತ್ತು ಸ್ನೇಹಿತರಿಂದ ಶುಭಾಶಯಗಳು ಹರಿದುಬರುತ್ತಿವೆ. ಅರುಣ್​ ಗೋವಿಲ್​ (Arun Govil) ಕುರಿತ ಅನೇಕ ಘಟನೆಗಳನ್ನು ಜನರು ಮೆಲುಕು ಹಾಕುತ್ತಿದ್ದಾರೆ.

ಧಾರಾವಾಹಿಯಲ್ಲಿ ಕಲಾವಿದರು ಮಾಡುವ ಪಾತ್ರಗಳನ್ನು ಜನರು ತುಂಬ ಹತ್ತಿರದಿಂದ ಗಮನಿಸುತ್ತಾರೆ. ಕಲಾವಿದರ ನಿಜವಾದ ಹೆಸರಿಗಿಂತಲೂ ಪಾತ್ರದ ಹೆಸರಿನಿಂದಲೇ ಅವರನ್ನು ಗುರುತಿಸುತ್ತಾರೆ. ಅರುಣ್​ ಗೋವಿಲ್​ ಅವರನ್ನು ನಿಜವಾದ ರಾಮ ಎಂದೇ ಎಷ್ಟೋ ಪ್ರೇಕ್ಷಕರು ಭಾವಿಸಿದ್ದರು! ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆಯುತ್ತಿದ್ದರು ಎಂಬುದು ನಿಜಕ್ಕೂ ಅಚ್ಚರಿ.

ಅರುಣ್​ ಗೋವಿಲ್​ ಅವರಿಗೆ ಈ ಪಾತ್ರ ಸಿಕ್ಕಿದ್ದು ಹೇಗೆ? ಅದರ ಹಿಂದೊಂದು ಇಂಟರೆಸ್ಟಿಂಗ್​ ಕಹಾನಿ ಇದೆ. ಮೊದಲ ಬಾರಿಗೆ ಅವರು ರಾಮನ ಪಾತ್ರಕ್ಕೆ ಆಡಿಷನ್​ ನೀಡಿದಾಗ ರಿಜೆಕ್ಟ್​ ಆಗಿದ್ದರು. ನಂತರ ನಿರ್ದೇಶಕ ಸೂರಜ್​ ಬರ್ಜಾತ್ಯ ಅವರು ಅರುಣ್​ ಗೋವಿಲ್​ಗೆ ಒಂದು ಸಲಹೆ ನೀಡಿದರು. ‘ಲುಕ್​ಟೆಸ್ಟ್​ ಸಮಯದಲ್ಲಿ ನಿಮ್ಮ ನಗುವನ್ನು ಸೂಕ್ತವಾಗಿ ಬಳಸಿಕೊಳ್ಳಿ’ ಎಂದು ಅವರು ನೀಡಿದ ಸಲಹೆಯನ್ನು ಅರುಣ್​ ಗೋವಿಲ್​ ಪಾಲಿಸಿದರು. ಅದರ ಪರಿಣಾಮವಾಗಿ ಅವರಿಗೆ ರಾಮನ ಪಾತ್ರ ಸಿಕ್ಕಿತು.

‘ರಾಮಾಯಣ’ ಧಾರಾವಾಹಿ ಮಾಡುವುದಕ್ಕೂ ಮುನ್ನ ಅನೇಕ ಸಿನಿಮಾ ಮತ್ತು ಸೀರಿಯಲ್​ಗಳಲ್ಲಿ ಅರುಣ್​ ಗೋವಿಲ್​ ನಟಿಸಿದ್ದರು. ಆದರೆ ಅವರಿಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ತಂದುಕೊಟ್ಟಿದ್ದು ಮಾತ್ರ ‘ರಾಮಾಯಣ’ ಸೀರಿಯಲ್​. ಈ ಧಾರಾವಾಹಿಗೆ ರಮಾನಂದ್​ ಸಾಗರ್​ ನಿರ್ದೇಶನ ಮಾಡಿದ್ದರು. ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆ ಕಂಡ ಪೌರಾಣಿಕ ಧಾರಾವಾಹಿ ಎಂಬ ಖ್ಯಾತಿ ‘ರಾಮಾಯಣ’ಕ್ಕಿದೆ.​

ರಾಮನ ಪಾತ್ರದಿಂದ ಫೇಮಸ್​ ಆದ ಅರುಣ್​ ಗೋವಿಲ್​ ಅವರು ಜನಿಸಿದ್ದು 1958ರ ಜ.12ರಂದು. ಹಿಂದಿ, ಭೋಜ್​ಪುರಿ, ಒಡಿಯಾ, ತೆಲುಗು ಸೇರಿ ಅನೇಕ ಭಾಷೆಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ:

ಬಾಲಿವುಡ್ ಹಿರಿಯ ನಟ, ರಾಮಾಯಣ ಧಾರಾವಾಹಿಯಲ್ಲಿ ಸುಮಂತನ ಪಾತ್ರದ ಮೂಲಕ ಜನಮನ ಗೆದ್ದಿದ್ದ ಚಂದ್ರಶೇಖರ್​ ಇನ್ನಿಲ್ಲ

ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ನಿರ್ವಹಿಸಿದ್ದ ನಟ ಅರುಣ್ ಗೋವಿಲ್ ಬಿಜೆಪಿಗೆ ಸೇರ್ಪಡೆ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್