Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ

ರಿತ್ವಿಕ್ ನಿಜಜೀವನದಲ್ಲಿ ಆ ರೀತಿ ಅಲ್ಲ. ಅವರು ಮುಖವನ್ನು ಒಂದೇ ತೆರನಾಗಿ ಇಟ್ಟುಕೊಳ್ಳುತ್ತಾರೆ. ಭಾವನೆಗಳನ್ನು ಅವರು ಹೆಚ್ಚು ಹೊರ ಹಾಕುವುದಿಲ್ಲ.

‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ
‘ಗಿಣಿರಾಮ’ ಸೀರಿಯಲ್​ ನಟ ರಿತ್ವಿಕ್​ಗೆ ಜಿಮ್​ನಲ್ಲಿ ಎದುರಾಗಿತ್ತು ವಿಚಿತ್ರ ಪ್ರಶ್ನೆ
Follow us
TV9 Web
| Updated By: ಮದನ್​ ಕುಮಾರ್​

Updated on: Aug 17, 2021 | 7:18 AM

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಗಿಣಿರಾಮ’ ಧಾರಾವಾಹಿ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ರಿತ್ವಿಕ್​ ಮಠದ್​. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಈಗ ಅವರು ಬಿಗ್​ ಬಾಸ್​ ಮಿನಿ ಸೀಸನ್​ಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಎಲ್ಲರ ಜತೆ ಹಾಯಾಗಿ ಸಮಯ ಕಳೆಯುತ್ತಿದ್ದಾರೆ ಅವರು. ಈ ಮಧ್ಯೆ ಅವರು ಅಚ್ಚರಿಯ ವಿಚಾರವೊಂದನ್ನು ಹೇಳಿಕೊಂಡಿದ್ದಾರೆ.

ಧಾರಾವಾಹಿಯಲ್ಲಿ ತಾವು ನಿರ್ವಹಿಸುತ್ತಿರುವ ಪಾತ್ರಕ್ಕೆ ರಿತ್ವಿಕ್​ ಅವರು ಸೂಕ್ತ ನ್ಯಾಯ ಒದಗಿಸುತ್ತಿದ್ದಾರೆ. ಖಡಕ್​ ಆಗಿ ಕಾಣಿಸಿಕೊಳ್ಳುವಲ್ಲಿ ಖಡಕ್​, ನಗುವ ಕಡೆಯಲ್ಲಿ ನಗು ಹೀಗೆ, ಎಲ್ಲೆಲ್ಲಿ ಯಾವ ಮುಖಭಾವನೆ ತೋರಬೇಕೋ ಅದನ್ನು ತೋರುತ್ತಿದ್ದಾರೆ. ಆದರೆ, ಅವರು ನಿಜಜೀವನದಲ್ಲಿ ಆ ರೀತಿ ಅಲ್ಲ. ಅವರು ಮುಖವನ್ನು ಒಂದೇ ತೆರನಾಗಿ ಇಟ್ಟುಕೊಳ್ಳುತ್ತಾರೆ. ಭಾವನೆಗಳನ್ನು ಅವರು ಹೆಚ್ಚು ಹೊರ ಹಾಕುವುದಿಲ್ಲ. ಇದನ್ನು ಅವರು ಬಿಗ್​ ಬಾಸ್​ ಮನೆಯಲ್ಲಿ ಹೇಳಿಕೊಂಡಿದ್ದಾರೆ. ಈ ವಿಚಾರ ಮನೆ ಮಂದಿಗೆ ಹಾಗೂ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.

ಬಿಗ್​ ಬಾಸ್​ ಮನೆಯಲ್ಲಿ ಈ ಬಗ್ಗೆ ಉದಾಹರಣೆ ಸಮೇತವಾಗಿ ವಿವರಿಸಿದ್ದಾರೆ ರಿತ್ವಿಕ್. ನಿಮ್ಮ ಮುಖ ನೋಡಿದರೆ ಸ್ಯಾಡ್​ ಲೈಫ್​ ರೀತಿಯಲ್ಲಿ ಕಾಣುತ್ತದೆ ಎಂದು ರಿತ್ವಿಕ್​ಗೆ ಮನೆಯ ಸ್ಪರ್ಧಿಯೊಬ್ಬರು ಹೇಳಿದರು. ಇದಕ್ಕೆ ಉತ್ತರಿಸಿದ ರಿತ್ವಿಕ್​, ಒಂದು ಹಳೇ ಘಟನೆಯನ್ನು ಮೆಲುಕು ಹಾಕಿದ್ದಾರೆ.

‘ಇಬ್ಬರು ಹುಡುಗಿಯರು ಜಿಮ್​ನಲ್ಲಿ ಎರಡು ತಿಂಗಳು ನನ್ನನ್ನು ಗಮನಿಸಿದ್ದರು. ನಾನು ಆ ಬಗ್ಗೆ ಗಮನ ಹರಿಸಿರಲಿಲ್ಲ. ಹೋಗಿ ವರ್ಕೌಟ್​ ಮಾಡಿ ಬರುತ್ತಿದ್ದೆ. ನಾನು ಅಷ್ಟಾಗಿ ರಿಯಾಕ್ಟ್​ ಕೂಡ ಮಾಡಲ್ಲ. ಒಂದು ದಿನ ಆ ಹುಡುಗಿ ಬಂದು ಹಾಯ್​ ಸರ್​ ಅಂದ್ಲು. ನಾನೊಂದುಕೊಂಡೆ ಈಗ ಸೆಲ್ಫಿ ಕೇಳ್ತಾಳೆ ಅಂತ. ಆದ್ರೆ ಅಲ್ಲಾಗಿದ್ದೇ ಬೇರೆ. ನಿಮ್ಮನ್ನು ಏನೋ ಕೇಳಬೇಕು ಎಂದಳು. ಕೇಳಿ ಅಂದೆ. ನಿಮ್ಮ ಜೀವನದಲ್ಲಿ ಆಗಬಾರದ ಘಟನೆ ಏನಾದರೂ ನಡೆದಿದೆಯಾ? ಅದಕ್ಕೆ ಈ ರೀತಿ ಮುಖ ಮಾಡಿಕೊಂಡಿದೀರಾ? ಎಂದು ಪ್ರಶ್ನಿಸಿದಳು. ನನ್ನ ಮುಖ ಇರೋದೇ ಹೀಗೆ. ನಾನು ತುಂಬಾನೇ ಆರಾಮಾಗಿದೀನಿ ಅಂತ ಅವರಿಗೆ ಹೇಳಿದೆ’ ಎಂದಿದ್ದಾರೆ ರಿತ್ವಿಕ್​.

ಇದನ್ನೂ ಓದಿ:

ಬಿಗ್​ ಬಾಸ್​ ಬಗ್ಗೆ ಕಿರಣ್​ ರಾಜ್​ಗಿದೆ ಒಂದು ಭಯ; ದೊಡ್ಮನೆ ಆಫರ್​ ತಿರಸ್ಕರಿಸೋಕೆ ಕಾರಣವಾಯ್ತು ಈ ಅಂಶ

ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಪಂಬನ್ ಸೇತುವೆ ಮೇಲೆ ಮೊದಲ ರೈಲು ಸಂಚಾರ; ಬಾವುಟ ಬೀಸಿ ಪ್ರಯಾಣಿಕರ ಸಂತಸ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಬಿಜೆಪಿ ನಾಯಕರೊಂದಿಗೆ ಯಾತ್ರೆಯಲ್ಲಿ ಕಾಣಿಸಿದ ಪ್ರತಾಪ್ ಸಿಂಹ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಮಂತ್ರಿಯೊಬ್ಬರು ಮಾಡಿರುವ ಆರೋಪಗಳ ಬಗ್ಗೆ ಗೃಹ ಸಚಿವ ಮೌನ ಯಾಕೆ? ಹೆಚ್ಡಿಕೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಪಿಸಿಸಿಗಳಿಗೆ ನೇಮಕಾತಿ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸುತ್ತೇವೆ: ಖರ್ಗೆ
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯತ್ನಾಳ್​ಗೆ ರೇಣುಕಾ ಯಲ್ಲಮ್ಮನ ದರ್ಶನ ಮಾಡಿಸಿದ ಯಡಿಯೂರಪ್ಪ!
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಯುವತಿಯ ಖಾಸಗಿ ಅಂಗ ಸ್ಪರ್ಶ ಕೇಸ್: ಉಡಾಫೆ ಉತ್ತರ ಕೊಟ್ಟ ಗೃಹ ಸಚಿವ
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ಪೊಲೀಸ್ ಭದ್ರತೆ ಮಧ್ಯೆ ಪ್ರವೀಣ್ ನೆಟ್ಟರು ಹಂತಕನಿಗೆ ಮುತ್ತಿಕ್ಕಿದ ಯುವಕ!
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ರಿಷಬ್ ಶೆಟ್ಟಿ ಭೇಟಿ ನೀಡಿದ ವಾರಾಹಿ ಪಂಜುರ್ಲಿ ಕ್ಷೇತ್ರ ಹೇಗಿದೆ ನೋಡಿ..
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನಡುವೆ ಅಸಮಾಧಾನಗಳಿವೆಯಾ?
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಕೆಟ್ಟ ಐಸಿಯು ಎಸಿ: ರೋಗಿಗಳು ಬೇರೆಡೆ ಶಿಫ್ಟ್