‘ಉಳಿದವರೆಲ್ಲ ಒಂದು, ನಾವಿಬ್ಬರು ಒಂದು’; ಪ್ರತಾಪ್ ಎದುರು ಸಂಗೀತಾ ಬೇಸರ

|

Updated on: Dec 20, 2023 | 7:32 AM

ಕಾರ್ತಿಕ್ ಅವರು ವಿನಯ್ ಅವರತ್ತ ಹೆಚ್ಚು ವಾಲಿದ್ದಾರೆ. ಈ ಕಾರಣದಿಂದಲೇ ಸಂಗೀತಾಗೆ ಹಿನ್ನಡೆ ಆಗಿದೆ. ಅವರು ಮನೆಯಲ್ಲಿ ಏಕಾಂಗಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಉಳಿದವರೆಲ್ಲ ಒಂದು, ನಾವಿಬ್ಬರು ಒಂದು’; ಪ್ರತಾಪ್ ಎದುರು ಸಂಗೀತಾ ಬೇಸರ
ಸಂಗೀತಾ
Follow us on

ಸಂಗೀತಾ ಶೃಂಗೇರಿಗೆ (Sangeetha Sringeri)  ಬಿಗ್ ಬಾಸ್ ಮನೆಯಲ್ಲಿ ಒಂಟಿತನ ಅತಿಯಾಗಿ ಕಾಡಿದೆ. ಇತ್ತೀಚೆಗೆ ನಡೆದ ಬೆಳವಣಿಗೆಗಳು ಇದಕ್ಕೆ ಕಾರಣ. ಈ ಬಗ್ಗೆ ಸಂಗೀತಾ ಸಾಕಷ್ಟು ಬೇಸರು ಮಾಡಿಕೊಂಡಿದ್ದಾರೆ. ‘ಈಗ ನನ್ನ ಸೈಡ್​ನಲ್ಲಿ ಇರೋದು ನೀನು ಮಾತ್ರ’ ಎಂದು ಪ್ರತಾಪ್​ಗೆ ಹೇಳಿದ್ದಾರೆ. ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಈ ಎಪಿಸೋಡ್ ಡಿಸೆಂಬರ್ 19ರಂದು ಪ್ರಸಾರ ಕಂಡಿದೆ. ‘ನಿಮ್ಮ ಕಡೆ ನಾವಿದ್ದೇವೆ’ ಎಂದು ಸಂಗೀತಾ ಶೃಂಗೇರಿ ಅಭಿಮಾನಿಗಳು ಹೇಳಿದ್ದಾರೆ.

ಬಿಗ್ ಬಾಸ್​ನಲ್ಲಿ ಸಂಗೀತಾ, ತನಿಷಾ, ಕಾರ್ತಿಕ್, ಪ್ರತಾಪ್ ಸಾಮಾನ್ಯವಾಗಿ ಒಟ್ಟಾಗಿ ಇರುತ್ತಿದ್ದರು. ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಅವರು ತಮ್ಮದೇ ಗ್ಯಾಂಗ್ ಮಾಡಿಕೊಂಡಿದ್ದಾರೆ. ಈಗ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಜಗಳ ಆಗಿದೆ. ಕಾರ್ತಿಕ್ ಅವರು ವಿನಯ್ ಅವರತ್ತ ಹೆಚ್ಚು ವಾಲಿದ್ದಾರೆ. ಈ ಕಾರಣದಿಂದಲೇ ಸಂಗೀತಾಗೆ ಹಿನ್ನಡೆ ಆಗಿದೆ. ಅವರು ಮನೆಯಲ್ಲಿ ಏಕಾಂಗಿ ಆಗಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ವಿನಯ್​ಗೆ ಕಾರ್ತಿಕ್ ಬಕೆಟ್ ಹಿಡಿಯುತ್ತಿದ್ದಾನೆ’ ಎಂದು ಹೇಳಿದ್ದರು ಸಂಗೀತಾ. ಇದಾದ ಬಳಿಕ ಸಂಗೀತಾ ಹಾಗೂ ಕಾರ್ತಿಕ್ ಮಧ್ಯೆ ಕಿರಿಕ್ ಆಗಿದೆ. ವಿನಯ್​ನಿಂದ ಮೊದಲೇ ದ್ವೇಷ ಕಟ್ಟಿಕೊಂಡಿದ್ದ ಅವರು ಈಗ ಕಾರ್ತಿಕ್​ನಿಂದಲೂ ದೂರ ಆಗಿದ್ದಾರೆ. ತನಿಷಾ ಕೂಡ ಸಂಗೀತಾ ಅವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದು ಸಂಗೀತಾ ಬೇಸರಕ್ಕೆ ಕಾರಣ ಆಗಿದೆ.

ಇದನ್ನೂ ಓದಿ: ‘ಮೂರೇ ದಿನದಲ್ಲಿ ಹಳೆಯ ಪಿಕ್ಚರ್ ಬರುತ್ತೆ’; ಕಾರ್ತಿಕ್-ಸಂಗೀತಾ ಜಗಳದ ಬಗ್ಗೆ ವರ್ತೂರು ಸಂತೋಷ್ ಮಾತು

ವಾಶ್​ರೂಂ ಏರಿಯಾದಲ್ಲಿ ಸಂಗೀತಾ ಕುಳಿತಿದ್ದರು. ಈ ವೇಳೆ ಅವರು ಪ್ರತಾಪ್ ಜೊತೆ ಮಾತನಾಡಿದ್ದಾರೆ. ‘ಬಿಗ್ ಬಾಸ್ ಮನೆಯಲ್ಲಿ ನಾವಿಬ್ಬರೇ ಒಂದು, ಉಳಿದವರೆಲ್ಲ ಒಂದು. ಇನ್ನು ಎಲ್ಲರೂ ನಮ್ಮನ್ನೇ ಟಾರ್ಗೆಟ್ ಮಾಡುತ್ತಾರೆ’ ಎಂದು ಬೇಸರ ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:32 am, Wed, 20 December 23