AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು

‘ಬೆಳಗ್ಗೆ ಯಾಕೆ ಮಾತನಾಡೋಕೆ ಬರಲಿಲ್ಲ’ ಎಂದು ರೂಪೇಶ್ ಶೆಟ್ಟಿ ಕೇಳಿದರು. ಇದಕ್ಕೆ ಸಾನ್ಯಾ ಬೇಸರದಲ್ಲಿಯೇ ಉತ್ತರ ನೀಡಿದರು. ಈ ವೇಳೆ ಅವಳ ಕಣ್ಣಲ್ಲಿ ನೀರಿತ್ತು.

ರೂಪೇಶ್ ಶೆಟ್ಟಿ-ಸಾನ್ಯಾ ಮಧ್ಯೆ ಬಂದ ಕಾವ್ಯಶ್ರೀ ಗೌಡ; ಐಯ್ಯರ್ ಕಣ್ಣಲ್ಲಿ ತುಂಬಿತು ನೀರು
ಸಾನ್ಯಾ-ಕಾವ್ಯಾಶ್ರೀ-ರೂಪೇಶ್
TV9 Web
| Edited By: |

Updated on: Oct 01, 2022 | 6:30 AM

Share

‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss Kannada OTT) ಸ್ವರೂಪಕ್ಕೂ ‘ಬಿಗ್ ಬಾಸ್​ ಕನ್ನಡ ಸೀಸನ್ 9’ರ ಸ್ವರೂಪಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಒಟಿಟಿಯಲ್ಲಿ ಅನೇಕರು ಗಾಯಗೊಂಡಿದ್ದರಿಂದ ಸದಸ್ಯರ ಸಂಖ್ಯೆ ಬೇಗ ಕಡಿಮೆ ಆಯಿತು. ಆದರೆ, ಟಿವಿ ಸೀಸನ್​​ನಲ್ಲಿ ಸದ್ಯಕ್ಕೆ ಆರೀತಿ ಇಲ್ಲ. ಬರೋಬ್ಬರಿ 18 ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಇದೆ. ಒಟಿಟಿಯಲ್ಲಿ ರೂಪೇಶ್ (Roopesh Sheetty) ಹಾಗೂ ಸಾನ್ಯಾ ಕ್ಲೋಸ್ ಇದ್ದರು. ಆದರೆ, ಟಿವಿ ಸೀಸನ್​ನಲ್ಲಿ ಆ ರೀತಿ ಇಲ್ಲ. ಇವರ ಮಧ್ಯೆ ಕಾವ್ಯಶ್ರೀ ಗೌಡ ಎಂಟ್ರಿ ಆಗಿದೆ. ಇದಕ್ಕೆ ಸಾನ್ಯಾ ಬೇಸರಗೊಂಡಿದ್ದಾರೆ.

ಈ ವಾರ ಹೊಸ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಅದರ ಅನುಸಾರ ಜೋಡಿ ಮಾಡಬೇಕು. ಹೊಸಬರು ಹಾಗೂ ಹಳಬರು ಜೋಡಿ ಆಗಬೇಕು. ರೂಪೇಶ್ ಹಾಗೂ ಕಾವ್ರಶ್ರೀ ಗೌಡ ಅವರು ಜೋಡಿ ಆದರು. ಇಬ್ಬರ ನಡುವೆ ಆಪ್ತತೆ ಬೆಳೆದಿದೆ. ರೂಪೇಶ್ ಅವರು ತಾಯಿ ಕಳೆದುಕೊಂಡ ವಿಚಾರ ಹೇಳಿಕೊಂಡು ಅತ್ತಿದ್ದಾರೆ. ಈ ವೇಳೆ ಕಾವ್ಯಶ್ರೀ ಗೌಡ ಸಮಾಧಾನ ಮಾಡಿದ್ದರು. ಇಬ್ಬರು ಒಂದು ವಾರಗಳ ಕಾಲ ಸಾಕಷ್ಟು ಸಮಯ ಕಳೆದಿದ್ದಾರೆ.

ಕಾವ್ಯಶ್ರೀ ಜತೆ ರೂಪೇಶ್ ಕ್ಲೋಸ್ ಆಗುತ್ತಿದ್ದಂತೆ ಸಾನ್ಯಾ ಐಯ್ಯರ್​ಗೆ ಬೇಸರ ಆಗಿದೆ. ಅನೇಕ ಸಂದರ್ಭದಲ್ಲಿ ಸಾನ್ಯಾ ಹಾಗೂ ರೂಪೇಶ್​ ಒಟ್ಟಾಗಿ ಇರಬೇಕು ಅಂದುಕೊಂಡರೂ ಅದು ಸಾಧ್ಯವಾಗುತ್ತಿರಲಿಲ್ಲ. ಇದು ಸಾನ್ಯಾಗೆ ಸಾಕಷ್ಟು ಬೇಸರ ಮೂಡಿಸಿದೆ. ಶುಕ್ರವಾರದ (ಸೆಪ್ಟೆಂಬರ್ 30) ಎಪಿಸೋಡ್​ನಲ್ಲಿ ಜೋಡಿ ಟಾಸ್ಕ್ ಮುಗಿದಿದೆ. ಸಾನ್ಯಾ ಹಾಗೂ ರೂಪೇಶ್ ಈ ವಿಚಾರವಾಗಿ ಮಾತನಾಡಿದ್ದಾರೆ.

‘ಬೆಳಗ್ಗೆ ಯಾಕೆ ಮಾತನಾಡೋಕೆ ಬರಲಿಲ್ಲ’ ಎಂದು ರೂಪೇಶ್ ಶೆಟ್ಟಿ ಕೇಳಿದರು. ಇದಕ್ಕೆ ಸಾನ್ಯಾ ಬೇಸರದಲ್ಲಿಯೇ ಉತ್ತರ ನೀಡಿದರು. ಈ ವೇಳೆ ಅವಳ ಕಣ್ಣಲ್ಲಿ ನೀರಿತ್ತು. ‘ನೀನು ಅವಳ ಜೊತೆ ಇದ್ದೆ. ಹೀಗಾಗಿ ನಾನು ಅಲ್ಲಿಗೆ ಬರೋಕೆ ಹೋಗಿಲ್ಲ’ ಎಂಬ ಮಾತನ್ನು ಹೇಳಿದ್ದಾರೆ ಸಾನ್ಯಾ. ‘ಆ ರೀತಿ ಏನು ಇಲ್ಲ. ಅದು ಜೋಡಿ ಟಾಸ್ಕ್​ ಆಗಿತ್ತು. ಹೀಗಾಗಿ ಅವಳ ಜೊತೆ ಇದ್ದೆ ಅಷ್ಟೇ’ ಎಂಬ ಮಾತನ್ನು ರೂಪೇಶ್ ಹೇಳಿದರು.

ಇದನ್ನೂ ಓದಿ: BBK 9: ‘ರೂಪೇಶ್ ಶೆಟ್ಟಿ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್’; ಏನಿದು ಸಮಾಚಾರ?

ನೀವಿಬ್ಬರೂ ಕ್ಲೋಸ್ ಆದರೆ ನನ್ನ ಕಥೆ ಏನು ಎಂಬರ್ಥ ಬರುವ ರೀತಿಯಲ್ಲಿ ಸಾನ್ಯಾ ಮಾತನಾಡಿದರು. ಇದಕ್ಕೆ ರೂಪೇಶ್​ ನೇರವಾಗಿ ಉತ್ತರಿಸಿದರು. ‘ನಾನು ಯಾರು ಹೇಳು, ರೂಪೇಶ್ ಶೆಟ್ಟಿ. ನೀನು ಯಾರು ಹೇಳು’ ಎಂದು ರೂಪೇಶ್ ಕೇಳಿದರು. ‘ನಾನು ರೂಪೇಶ್ ಐಯ್ಯರ್’ ಎಂದರು ಸಾನ್ಯಾ. ಅಮ್ಮ ಹೇಳಿದ ಮಾತು ನೆನಪಿದೆಯೇ ಎಂದು ಕೇಳಿದರು ರೂಪೇಶ್​. ‘ಅಮ್ಮ ಸಾನ್ಯಾ ಐಯ್ಯರ್ ಶೆಟ್ಟಿ’ ಎಂದು ಕರೆಯೋಕೆ ಓಕೆ ಎಂದಿದ್ದರು ಎಂದರು ಸಾನ್ಯಾ. ಇಬ್ಬರೂ ನಕ್ಕರು.

Follow Us
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಕುಡಿಯುವ ನೀರಿನ ಯೋಜನೆ ಕಾಮಗಾರಿ ವಿಳಂಬಕ್ಕೆ ಸಚಿವ ಯತೀಂದ್ರ ಗರಂ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
ಬಿಡದಿ ಟೌನ್​ಶಿಪ್ ವಿವಾದ: ಶಾಂತಿಯುತವಾಗಿ ಪ್ರತಿಭಟಿಸಿ; ಹೆಚ್​ಡಿಕೆ ಮನವಿ
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
GBA ಅಸ್ತಿತ್ವಕ್ಕೆ ಬಂದರೂ ನಗರದಲ್ಲಿ ರಾರಾಜಿಸುತ್ತಿವೆ  BBMP ನಾಮಫಲಕಗಳು!
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
ವಿಪಕ್ಷ ನಾಯಕ ಆರ್​. ಅಶೋಕ್​​ಗೆ ರೈತರಿಂದ ಘೇರಾವ್​​
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
5 ದಿನ ಕಳೆದ್ರೂ ಸೆರೆಯಾಗದ ಚಿರತೆ! ರಸ್ತೆಯಲ್ಲಿ ಓಡಾಡಲೂ ಜನ ಹಿಂದೇಟು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ‌ ಕಡಿದ ಆರೋಪ; FIR ದಾಖಲು
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ಹುಲಿ ಹಿಡಿಯದಿದ್ರೆ ನಿಮ್ಮನ್ನೇ ಬೋನಿಗೆ ಹಾಕುತ್ತೇವೆ: ರೈತರ ಎಚ್ಚರಿಕೆ
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ರಾಮ ಮಂದಿರ ಟ್ರಸ್ಟ್, ಕೇಂದ್ರ ಮತ್ತು ಯುಪಿ ಸರ್ಕಾರಗಳಿಗೆ ಸುಪ್ರೀಂ ನೋಟಿಸ್
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಧಾರ್ಮಿಕ ದತ್ತಿ ಇಲಾಖೆ ದೇಗುಲಗಳಿಗೆ ಹೊಸ ಮಾರ್ಗಸೂಚಿ
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!
ಚಲಿಸುವ ರೈಲಿನಿಂದ ಬೀಳುತ್ತಿದ್ದ ಯುವಕನನ್ನು ರಕ್ಷಿಸಿದ ಸಿಬ್ಬಂದಿ!