AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ನಿಯಮ ಉಲ್ಲಂಘನೆ? ಇದೇ ಮೊದಲ ಬಾರಿಗೆ ಫೋನ್​ ಬಳಕೆ ಮಾಡಿದ ಶಮಂತ್​

Bigg Boss Kannada 8: ಬಿಗ್​ ಬಾಸ್​ ಮನೆಯಲ್ಲಿ ಸ್ಥಾಪನೆಯಾಗಿರುವ ಫೋನ್​ ಬೂತ್ ​ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಚರ್ಚೆ ಮಾಡಿದ್ದಾರೆ. ಶಮಂತ್​ ಬಿಗ್​ ಬಾಸ್​ ನಿಯಮ ಮೀರಿದ್ದಾರೆ ಎಂದು ಕೆಲವರು ನಗೆಚಟಾಕಿ ಹಾರಿಸಿದ್ದಾರೆ.

ಬಿಗ್​ ಬಾಸ್​ ನಿಯಮ ಉಲ್ಲಂಘನೆ? ಇದೇ ಮೊದಲ ಬಾರಿಗೆ ಫೋನ್​ ಬಳಕೆ ಮಾಡಿದ ಶಮಂತ್​
ಶಮಂತ್​ ಬ್ರೋ ಗೌಡ
TV9 Web
| Updated By: Digi Tech Desk|

Updated on:Jul 27, 2021 | 10:48 AM

Share

ಬಿಗ್​ ಬಾಸ್​ ಸೇರಿದ ಮೇಲೆ ಹೊರ ಜಗತ್ತಿನ ಸಂಪರ್ಕ ಇರುವುದಿಲ್ಲ. ಅಲ್ಲಿ ಮೊಬೈಲ್​ ಬಳಕೆ ಮಾಡುವಂತಿಲ್ಲ. ಮನೆಯವರ ಸಂಪರ್ಕಕ್ಕೆ ಒಳಪಡುತ್ತೀರಿ ಎಂದರೂ ಅದು ಸಾಧ್ಯವಿಲ್ಲ. ಆದರೆ, ಇದೇ ಮೊದಲ ಬಾರಿಗೆ ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ಫೋನ್​ನಲ್ಲಿ ಮಾತನಾಡಿದ್ದಾರೆ. ಇದನ್ನು ನೋಡಿದ ಮನೆ ಮಂದಿ ಅಚ್ಚರಿಗೊಂಡಿದ್ದಾರೆ.

ಹಾಗಾದರೆ ಶಮಂತ್​ ಕದ್ದುಮುಚ್ಚಿ ಏನಾದರೂ ಮೊಬೈಲ್​ ಬಳಕೆ ಮಾಡಿದ್ರಾ? ಖಂಡಿತವಾಗಿಯೂ ಇಲ್ಲ. ಬಿಗ್​ ಬಾಸ್​ ಮನೆಯ ಗಾರ್ಡನ್​ ಏರಿಯಾದಲ್ಲಿ ಫೋನ್​ಬೂತ್​ ಒಂದನ್ನು ಸ್ಥಾಪನೆ ಮಾಡಲಾಗಿದೆ. ಸೋಮವಾರದ (ಜುಲೈ 26) ಮುಂಜಾನೆ ಎಲ್ಲಾ ಸ್ಪರ್ಧಿಗಳು ನಿದ್ರೆ ಮಾಡುತ್ತಾ ಇದ್ದರು. ಈ ವೇಳೆ ಫೋನ್​ ರಿಂಗ್​ ಆಗಿದೆ.

ಎಲ್ಲಾ ಸ್ಪರ್ಧಿಗಳು ಮನೆ ಹೊರಗೆ ಹೋಗಿ ನೋಡಿದ್ದಾರೆ. ಈ ವೇಳೆ ಅಲ್ಲಿ ಟೆಲಿಫೋನ್​ಬೂತ್​ ಇರೋದು ಕಂಡು ಬಂದಿದೆ. ಈ ಟೆಲಿಫೋನ್​ ಬೂತ್​ನಲ್ಲಿ ಮೊದಲು ಪ್ರಶಾಂತ್​ ಹೋಗಿ ಮಾತನಾಡಿದ್ದಾರೆ. ಆದರೆ, ಆಗಲೇ ಕಟ್​ ಆಗಿತ್ತು. ನಂತರ ಶಮಂತ್​ ಹೋದಾಗ ಅಲ್ಲಿಂದ ಒಂದು ಪುರುಷ ಧ್ವನಿ ಕೇಳಿಸಿತು.

‘ಬಿಗ್​ ಬಾಸ್​ನಲ್ಲಿ ಇದೇ ಮೊದಲ ಬಾರಿಗೆ ನೀವು ಫೋನ್​ನಲ್ಲಿ ಮಾತಾಡ್ತಾ ಇದೀರಾ. ಹೇಗನಿಸ್ತಿದೆ’ ಎಂದು ಫೋನ್​ನಲ್ಲಿ ಮಾತನಾಡಿದ ವ್ಯಕ್ತಿ ಕೇಳಿದರು. ಶಮಂತ್​ ಇದಕ್ಕೆ ಸಾಕಷ್ಟು ಖುಷಿಪಟ್ಟರು. ಅಲ್ಲದೆ, ನೀವು ಬಿಗ್​ ಬಾಸ್​ ಅಲ್ವಾ ಎಂದು ಪ್ರಶ್ನೆ ಮಾಡಿದರು. ಆದರೆ, ಆ ಕಡೆಯಿಂದ ಉತ್ತರ ಬಂದಿಲ್ಲ. ನಂತರ ಬೆಳಗ್ಗೆ ಶುಭಾ ಹೋಗಿ ಕರೆ ಸ್ವೀಕರಿಸಿದರು. ಈ ವೇಳೆ ‘ಯಾವುದೇ ಸಂದೇಶ ಬರೋದಾದ್ರೂ ಈ ಫೋನ್​ ಮೂಲಕವೇ ಬರಲಿದೆ’ ಎಂದರು ಬಿಗ್​ ಬಾಸ್.

ಬಿಗ್​ ಬಾಸ್​ ಮನೆಯಲ್ಲಿ ಸ್ಥಾಪನೆಯಾಗಿರುವ ಫೋನ್​ ಬೂತ್​ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಚರ್ಚೆ ಮಾಡಿದ್ದಾರೆ. ಶಮಂತ್​ ಬಿಗ್​ ಬಾಸ್​ ನಿಯಮ ಮೀರಿದ್ದಾರೆ ಎಂದು ಕೆಲವರು ನಗೆಚಟಾಕಿ ಹಾರಿಸಿದ್ದಾರೆ.

ಇದನ್ನೂ ಓದಿ:

‘ಆ ಕೈಸನ್ನೆ ತೋರಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ’; ಪ್ರಿಯಾಂಕಾ ತಿಮ್ಮೇಶ್​ ಬಳಿ ಶಿರಬಾಗಿ ಕ್ಷಮೆ ಕೇಳಿದ ಚಕ್ರವರ್ತಿ ಚಂದ್ರಚೂಡ್​

ಕುಟುಂಬದವರ ಸುದ್ದಿಗೆ ಬಂದ ಶಮಂತ್​ಗೆ ಸರಿಯಾಗೇ ತಿರುಗೇಟು ನೀಡಿದ ವೈಷ್ಣವಿ ಗೌಡ

Published On - 7:19 am, Tue, 27 July 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ