AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಟುಂಬದವರ ಸುದ್ದಿಗೆ ಬಂದ ಶಮಂತ್​ಗೆ ಸರಿಯಾಗೇ ತಿರುಗೇಟು ನೀಡಿದ ವೈಷ್ಣವಿ ಗೌಡ

ಅಲ್ಲಿಯೇ ಇದ್ದ ರಘು ಅವರು, ವೈಷ್ಣವಿ ಅವರನ್ನು ಸಮಾಧಾನ ಮಾಡೋಕೆ ಬಂದರು. ಆದರೆ, ವೈಷ್ಣವಿ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ‘ದಯವಿಟ್ಟು ಇರಿಟೇಟ್​​ ಮಾಡಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದರು.

ಕುಟುಂಬದವರ ಸುದ್ದಿಗೆ ಬಂದ ಶಮಂತ್​ಗೆ ಸರಿಯಾಗೇ ತಿರುಗೇಟು ನೀಡಿದ ವೈಷ್ಣವಿ ಗೌಡ
ಬ್ರೋ ಗೌಡ- ವೈಷ್ಣವಿ ಗೌಡ
TV9 Web
| Edited By: |

Updated on:Jun 28, 2021 | 5:34 PM

Share

ವೈಷ್ಣವಿ ಗೌಡ ಬಿಗ್​ ಬಾಸ್ ಮನೆಯಲ್ಲಿ ಯಾರ ತಂಟೆಗೂ ತಾವಾಗಿಯೇ ಹೋಗುವುದಿಲ್ಲ. ಅವರು ಕೋಪ ಮಾಡಿಕೊಂಡು ಜಗಳ ಮಾಡಿದ್ದು ತುಂಬಾನೇ ಕಡಿಮೆ. ಬಿಗ್​ ಬಾಸ್​ ಸೀಸನ್​ 8 ಮೊದಲ ಇನ್ನಿಂಗ್ಸ್​ನಲ್ಲಿ ವೈಷ್ಣವಿ ತಮಗೆ ಬೇರೆಯವರಿಂದ ನೋವಾದರೂ ಅದನ್ನು ತಾವೇ ನುಂಗಿಕೊಳ್ಳುತ್ತಿದ್ದರು. ಆದರೆ, ಈಗ ಅವರು ಹಾಗಿಲ್ಲ. ಬದಲಾಗಿದ್ದಾರೆ. ನೋವಾದರೆ ಆ ಬಗ್ಗೆ ನೇರವಾಗಿಯ ಹೇಳುತ್ತಿದ್ದಾರೆ. ಪರಿಣಾಮ ಶಮಂತ್​ ಹಾಗೂ ವೈಷ್ಣವಿ ನಡುವೆ ಜಗಳ ನಡೆದಿದೆ. ‘ಯೆಷ್ಟು ಚಂದ ಇವಳು, ಯಾವ ರಾಣಿ ಮಗಳು..’ ಎಂದು ವೈಷ್ಣವಿ ಮಧುರವಾಗಿ ಹಾಡುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ಶಮಂತ್​, ಪ್ರಾಸ ಕೂಡುತ್ತದೆ ಎಂದು ‘ಡವ್​ರಾಣಿ ಮಗಳು’ ಎಂದರು. ಇದು ವೈಷ್ಣವಿಗೆ ಬೇಸರ ತರಿಸಿದೆ. ಇದಕ್ಕೆ ನಾನಾ ಅರ್ಥ ಕಲ್ಪಿಸಿಕೊಂಡು ಅವರು ಶಮಂತ್​ ವಿರುದ್ಧ ವಾದಕ್ಕೆ ಇಳಿದರು.

‘ನೀವು ನನಗೆ ಏನು ಬೇಕಿದ್ದರೂ ಹೇಳಿ. ನನ್ನ ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದು ಎಚ್ಚರಿಕೆ ನೀಡಿದರು. ಆಗ ಶಮಂತ್​, ನಾನೆಲ್ಲಿ ನಿಮ್ಮ ಕುಟುಂಬದ ಬಗ್ಗೆ ಮಾತನಾಡಿದೆ? ಎನೋ ಪ್ರಾಸ ಕೂಡುತ್ತದೆ ಎನ್ನುವ ಕಾರಣಕ್ಕೆ ಆ ರೀತಿ ಹೇಳಿದೆ ಅಷ್ಟೆ. ಅದನ್ನು ನಾನು ಹೇಳಿದ್ದು ರಘು ಅವರಿಗೆ’ ಎಂದರು. ಆದರೆ ವೈಷ್ಣವಿ ತಣ್ಣಗಾಗಲಿಲ್ಲ. ಇಬ್ಬರ ನಡುವೆ ವಾಗ್ವಾದ ಜೋರಾಗುತ್ತಾ ಹೋಯಿತು.

ಅಲ್ಲಿಯೇ ಇದ್ದ ರಘು ಅವರು, ವೈಷ್ಣವಿ ಅವರನ್ನು ಸಮಾಧಾನ ಮಾಡೋಕೆ ಬಂದರು. ಆದರೆ, ವೈಷ್ಣವಿ ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ. ‘ದಯವಿಟ್ಟು ಇರಿಟೇಟ್​​ ಮಾಡಬೇಡಿ. ನನ್ನನ್ನು ನನ್ನಷ್ಟಕ್ಕೆ ಬಿಟ್ಟುಬಿಡಿ’ ಎಂದರು. ಈ ಮಾತನ್ನು ಕೇಳಿದ ನಂತರದಲ್ಲಿ ವೈಷ್ಣವಿ ಎಷ್ಟು ಸಿಟ್ಟಾಗಿದ್ದಾರೆ ಎಂಬುದು ಮನೆಯವರೆಲ್ಲರಿಗೂ ಗೊತ್ತಾಯಿತು.

ಕೆಲ ಸಮಯ ಬಿಟ್ಟು ವೈಷ್ಣವಿ ಬಳಿ ತೆರಳಿದ ಶಮಂತ್ ಸಮಾಧಾನ ಮಾಡೋಕೆ ಮುಂದಾದರು. ಆಗಲೂ ವೈಷ್ಣವಿ ‘ನನ್ನ ಬಗ್ಗೆ ಮಾತನಾಡಿ, ಕುಟುಂಬದ ಬಗ್ಗೆ ಮಾತ್ರ ಮಾತನಾಡಬೇಡಿ’ ಎಂದರು. ‘ನನ್ನ ಮಾತಿನ ಅರ್ಥ ಆ ರೀತಿ ಅಲ್ಲವಾಗಿತ್ತು’ ಎಂದು ಪರಿಪರಿಯಾಗಿ ಹೇಳಿಕೊಳ್ಳೋಕೆ ಶಮಂತ್​ ಪ್ರಯತ್ನಿಸಿದರು. ಆದರೂ ಪ್ರಯೋಜನವಾಗಿಲ್ಲ.

ಇದನ್ನೂ ಓದಿ:

ನಟಿಯರ ಜೊತೆ ಬಿಗ್​ ಬಾಸ್​ ಸ್ಪರ್ಧಿಯ ಡ್ರಗ್ಸ್​ ಪಾರ್ಟಿ; ಪೊಲೀಸರ ಬಲೆಗೆ ಬಿದ್ದ 22 ಮಂದಿ

ಚಂದ್ರಚೂಡ್​ ಮಾಜಿ ಪತ್ನಿ ಶ್ರುತಿ ವಿಚಾರ ಕೆದಕಿದ ಮಂಜು; ಬಿಗ್​ ಬಾಸ್​ನಲ್ಲಿ ನಡೆಯಿತು ಯುದ್ಧ

Published On - 4:24 pm, Mon, 28 June 21

Follow Us
Web contact
Web contact

TV9 Kannada

Read More
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು
ನರ್ಮದಾ-ಕ್ಷಿಪ್ರ ಪೈಪ್​ಲೈನ್ ಸ್ಫೋಟ, ಮುಗಿಲೆತ್ತರಕ್ಕೆ ಚಿಮ್ಮಿದ ನೀರು