AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರು ಗಂಟೆಗಳ ಅನಿಯಮಿತ ಮನರಂಜನೆ

Colors Kannada: ಫೆಬ್ರವರಿ 22 ಹಾಗೂ 23 ರಂದು ರಾತ್ರಿ 7.30ಕ್ಕೆ ಈ ‘ಮಹಾಮಿಲನ’ ಮಹಾ ಎಪಿಸೋಡ್​ ಪ್ರಸಾರವಾಗಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮನೊರಂಜನೆ ಮತ್ತು ಅಪರಿಮಿತ ನಗುವನ್ನು ಈ ಶೋ ನೀಡಲಿದೆ. ಭರ್ಜರಿ ಮನೊರಂಜನೆ ಒದಗಿಸಲಿರುವ ಈ ಮಹಾಮಿಲನದಲ್ಲಿ ಹಲವು ವಿಶೇಷತೆಗಳು ಇರಲಿವೆ. ಈ ಶೋಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಜಂಟಿ ಜಡ್ಜ್ ಆಗಿರಲಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಆರು ಗಂಟೆಗಳ ಅನಿಯಮಿತ ಮನರಂಜನೆ
Manaranjane
ಮಂಜುನಾಥ ಸಿ.
|

Updated on: Feb 22, 2025 | 10:26 AM

Share

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎರಡು ದೊಡ್ಡ ದೊಡ್ಡ ಶೋಗಳ ಮಹಾ ಮಿಲನ ನಡೆಯಲಿದೆ. ಈ ವಾರಾಂತ್ಯ ಆರು ಗಂಟೆಗಳ ಅಪರಿಮಿತ ಮನೊರಂಜನೇ ಟಿವಿ ವೀಕ್ಷಕರಿಗೆ ದೊರಕಲಿದೆ. ‘ಬಾಯ್ಸ್ vs ಗರ್ಲ್ಸ್’ ಮತ್ತು ಮಜಾ ಟಾಕೀಸ್’ ಶೋಗಳ ಮಹಾಮಿಲನ ನಡೆಯಲಿದ್ದು, ಫೆಬ್ರವರಿ 22 ಮತ್ತು 23 ರಂದು ಈ ಮಹಾ ಮಿಲನ ಶೋ ನಡೆಯಲಿದೆ. ಸೃಜನ್ ಲೋಕೇಶ್, ಯೋಗರಾಜ್ ಭಟ್ ಅವರು ಜಂಟಿಯಾಗಿ ಈ ಮಹಾಮಿಲನ ಕಾರ್ಯಕ್ರಮದ ಸಾರಥ್ಯ ವಹಿಸಲಿದ್ದಾರೆ.

ಫೆಬ್ರವರಿ 22 ಹಾಗೂ 23 ರಂದು ರಾತ್ರಿ 7.30ಕ್ಕೆ ಈ ‘ಮಹಾಮಿಲನ’ ಮಹಾ ಎಪಿಸೋಡ್​ ಪ್ರಸಾರವಾಗಲಿದೆ. ವಾರಾಂತ್ಯದಲ್ಲಿ ಒಟ್ಟು ಆರು ಗಂಟೆಗಳ ಕಾಲ ಅಪರಿಮಿತ ಮನೊರಂಜನೆ ಮತ್ತು ಅಪರಿಮಿತ ನಗುವನ್ನು ಈ ಶೋ ನೀಡಲಿದೆ. ಭರ್ಜರಿ ಮನೊರಂಜನೆ ಒದಗಿಸಲಿರುವ ಈ ಮಹಾಮಿಲನದಲ್ಲಿ ಹಲವು ವಿಶೇಷತೆಗಳು ಇರಲಿವೆ. ಈ ಶೋಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಜಂಟಿ ಜಡ್ಜ್ ಆಗಿರಲಿದ್ದಾರೆ. ಮಾತ್ರವಲ್ಲದೆ ಭಿನ್ನ ರೀತಿಯ ಜಡ್ಜ್​ಮೆಂಟ್​ಗಳನ್ನು ಅವರು ಬರೆಯಲಿದ್ದಾರೆ.

ಇದನ್ನೂ ಓದಿ:ಕಲರ್ಸ್ ಕನ್ನಡದ ಹೊಸ ರಿಯಾಲಿಟಿ ಶೋನಿಂದಲೂ ಔಟ್ ಆದ್ರಾ ಜಗದೀಶ್?

ಇತ್ತೀಚೆಗಷ್ಟೆ ನಟನೆಗೆ ರಾಜ್ಯ ಪ್ರಶಸ್ತಿ ಪಡೆದ ಹರಳು ಹುರಿದಂತೆ ಮಾತನಾಡುವ ಅನಪಮಾ ಗೌಡ ಅವರು ಈ ಸುದೀರ್ಘ ಶೋ ನ ನಿರೂಪಣೆ ಮಾಡಲಿದ್ದಾರೆ. ಎರಡೂ ಶೋಗಳ ಪ್ರತಿಭೆಗಳು ತಮ್ಮ ಪ್ರತಿಭೆಯನ್ನು ಸ್ಕಿಟ್, ಡ್ಯಾನ್ಸ್, ಹಾಡು ಇನ್ನತರೆ ರೂಪಗಳಲ್ಲಿ ಪ್ರದರ್ಶನ ಮಾಡಲಿದ್ದಾರೆ. ಕುರಿ ಪ್ರತಾಪ್‌ ಸಖತ್ ಕಾಮಿಡಿ ಮಾಡಲಿದ್ದಾರೆ. ‘ಮಹಾ ಶಿವರಾತ್ರಿ’ ವಿಶೇಷವಾಗಿ ಚಂದನಾ, ಐಶ್ವರ್ಯಾ ಸಿಂಧೋಗಿ ಮತ್ತು ಪ್ರಿಯಾಂಕಾ ಕಾಮತ್ ಇವರು ಕ್ರಮವಾಗಿ ಸತಿ, ಪಾರ್ವತಿ, ಕಾಳಿಯಾಗಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

‘ಅಣ್ಣಯ್ಯ’ ಸಿನಿಮಾದ ಕಾಮಿಡಿ ಅಣಕವನ್ನು ಹಾಲಿವುಡ್‌ನ ‘ಅವತಾರ್’ ಚಿತ್ರದ ಮಾದರಿಯಲ್ಲಿ ತೋರಿಸಲಿದ್ದಾರೆ ಚಂದ್ರಪ್ರಭ, ಪ್ರಶಾಂತ್, ವಿವೇಕ್ ಹಾಗೂ ಮಿಮಿಕ್ರಿ ಗೋಪಿ. ‘ನೊಂದ ಗಂಡಂದಿರ ಸಂಘ’ ಎಂಬ ಸ್ಕಿಟ್​ನಲ್ಲಿ ತುಕಾಲಿ ಸಂತು – ಪತ್ನಿ ಮಾನಸಾ, ಪಾವಗಡ ಮಂಜು – ಪತ್ನಿ ನಂದಿನಿ ಮತ್ತು ಕುರಿ ಪ್ರತಾಪ್ ಪ್ರೇಕ್ಷಕರಿಗೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ