AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇವಳು ಡೇಂಜರ್​, ಕೆಟ್ಟ ಮೇಲೆ ನನಗೆ ಬುದ್ಧಿ ಬಂತು’; ತನಿಷಾ ಬಗ್ಗೆ ಫಿಲ್ಟರ್​ ಇಲ್ಲದೇ ಮಾತಾಡಿದ ವರ್ತೂರು

ವರ್ತೂರು ಸಂತೋಷ್​ ಹೇಳಿದ ಮಾತನ್ನು ತನಿಷಾ ಕುಪ್ಪಂಡ ಒಪ್ಪಿಕೊಂಡಿಲ್ಲ. ‘ನೀನು ಬಾಯಿಗೆ ಬಂದಂತೆ ಮಾತನಾಡಬೇಡ. ಇಷ್ಟ ಆಗಿಲ್ಲ ಎಂದರೆ ಅದನ್ನು ಮಾತ್ರ ಹೇಳು. ನನ್ನ ಕ್ಯಾರೆಕ್ಟರ್​ ಬಗ್ಗೆ ನೀನು ಸರ್ಟಿಫಿಕೇಟ್​ ಕೊಡಬೇಡ’ ಎಂದು ತನಿಷಾ ಹೇಳಿದ್ದಾರೆ. ಇಬ್ಬರ ನಡುವೆ ಜೋರು ಜಗಳ ನಡೆದಿದೆ.

‘ಇವಳು ಡೇಂಜರ್​, ಕೆಟ್ಟ ಮೇಲೆ ನನಗೆ ಬುದ್ಧಿ ಬಂತು’; ತನಿಷಾ ಬಗ್ಗೆ ಫಿಲ್ಟರ್​ ಇಲ್ಲದೇ ಮಾತಾಡಿದ ವರ್ತೂರು
ತನಿಷಾ ಕುಪ್ಪಂಡ, ವರ್ತೂರು ಸಂತೋಷ್​
ಮದನ್​ ಕುಮಾರ್​
|

Updated on: Jan 14, 2024 | 7:52 AM

Share

ಬಿಗ್​ ಬಾಸ್​ (Bigg Boss Kannada) ಆರಂಭ ಆಗಿ ಕೆಲವು ದಿನಗಳು ಕಳೆದಾಗಿನಿಂದ ವರ್ತೂರು ಸಂತೋಷ್​ ಮತ್ತು ತನಿಷಾ ಕುಪ್ಪಂಡ (Tanisha Kuppanda) ಅವರು ಸ್ನೇಹಿತರಾಗಿದ್ದರು. ಅನೇಕ ಸಂದರ್ಭಗಳಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದರು. ಬಿಗ್​ ಬಾಸ್​ ಮನೆಯಲ್ಲಿ ಅವರಿಬ್ಬರು ಜೊತೆಯಾಗಿ ಸಾಕಷ್ಟು ಸಮಯ ಕಳೆದಿದ್ದಾರೆ. ಇಷ್ಟು ದಿನ ಆಪ್ತವಾಗಿದ್ದ ತನಿಷಾ ಕುಪ್ಪಂಡ ಮತ್ತು ವರ್ತೂರು ಸಂತೋಷ್​ ನಡುವೆ ಈಗ ಬಿರುಕು ಮೂಡಿದೆ. ಅದಕ್ಕೆ ಕಾರಣ ಆಗಿರುವುದು ವರ್ತೂರು ಸಂತೋಷ್​ (Varthur Santhosh) ಅವರ ಫಿಲ್ಟರ್ ಇಲ್ಲದ ಮಾತು. ಯಾವುದೇ ಮುಚ್ಚುಮರೆ ಇಲ್ಲದೇ ಅವರು ತನಿಷಾ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ‘ಇವಳು ತುಂಬ ಡೇಂಜರ್​’ ಎಂದು ಅವರು ಹೇಳಿದ್ದಾರೆ. ಈ ವಿಚಾರವಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ.

ಈ ವಾರ ಸಂಗೀತಾ ಶೃಂಗೇರಿ ಅವರು ಮನೆಯ ಕ್ಯಾಪ್ಟನ್​ ಆಗಿದ್ದಾರೆ. ಮನೆಯಲ್ಲಿ ಯಾರಿಗೆ ಯಾವ ಕೆಲಸ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿತ್ತು. ಆಗ ಕಾರ್ತಿಕ್​ ಮಹೇಶ್​ ಅವರು ತನಿಷಾಗೆ ಸಹಾಯ ಮಾಡುತ್ತಾರೋ ಇಲ್ಲವೋ ಎಂಬ ಬಗ್ಗೆ ಚರ್ಚೆ ಆಯಿತು. ಸ್ವಲ್ಪ ಸಮಯದ ನಂತರ ಇದೇ ವಿಚಾರವನ್ನು ಇಟ್ಟುಕೊಂಡು ವರ್ತೂರು ಸಂತೋಷ್​, ತುಕಾಲಿ ಸಂತೋಷ್​ ಮತ್ತು ತನಿಷಾ ಕುಪ್ಪಂಡ ಚರ್ಚೆ ಮಾಡಿದರು.

ಇದನ್ನೂ ಓದಿ: ಆಪ್ತ ಗೆಳೆಯ ವರ್ತೂರು ಸಂತು ಬೆನ್ನಿಗೆ ಚೂರಿ ಹಾಕಿದರೇ ತುಕಾಲಿ ಸಂತೋಷ್?

‘ಕಾರ್ತಿಕ್​ ನನಗೆ ಸಹಾಯ ಮಾಡಿದ್ದಾನೆ’ ಎಂದು ತನಿಷಾ ಹೇಳಿದ್ದನ್ನು ವರ್ತೂರು ಸಂತೋಷ್​ ಒಪ್ಪಿಕೊಳ್ಳಲಿಲ್ಲ. ‘ಅದು ಯಾವ ಮಾಯೆಯಲ್ಲಿ ಬಂದು ಹೆಲ್ಪ್​ ಮಾಡಿದ್ದಾನೋ ಗೊತ್ತಿಲ್ಲ. ಬೆಳಗ್ಗೆ ಕ್ಯಾಪ್ಟನ್​ ಕೇಳಿದಾಗ ಇದೇ ಮಾತನ್ನು ಇವಳು ಯಾಕೆ ಹೇಳಲಿಲ್ಲ’ ಎಂದು ವರ್ತೂರು ಸಂತೋಷ್​ ಪ್ರಶ್ನಿಸಿದರು. ಬಳಿಕ ತುಕಾಲಿ ಕಡೆ ತಿರುಗಿ, ‘ಅಣ್ಣ.. ಇವಳು ಎಂಥಾ ಓಳ್​ ಗೊತ್ತಾ? ಇವಳನ್ನು ಎಲ್ಲಾದರೂ ಸಾಕ್ಷಿಗೆ ಕರೆದುಕೊಂಡು ಹೋದರೆ ನಮಗೆ ಸರಿಯಾದ ಮರ್ಯಾದೆ ಸಿಗುತ್ತೆ. ಇವಳು ಸಖತ್​ ಡೇಂಜರ್​. ಇವಳ ಎದುರೇ ಹೇಳುತ್ತಿದ್ದೇನೆ. ಇವಳ ಜೊತೆ ಮಾತನಾಡುವಾಗ ಹುಷಾರು. ಕೆಟ್ಟ ಮೇಲೆ ನನಗೆ ಬುದ್ಧಿ ಬಂತು. ಕೊನೆಯಲ್ಲಿ ನನಗೆ ಜ್ಞಾನೋದಯ ಆಯಿತು. ನಮ್ಮ ಮುಂದೆಯೇ ರೊಟ್ಟಿ ತಿರುವಿ ಹಾಕಿದ್ದಾಳೆ’ ಎಂದು ವರ್ತೂರು ಸಂತೋಷ್​ ಹೇಳಿದರು.

ಇದನ್ನೂ ಓದಿ: ವರ್ತೂರು ಸಂತು ಮೇಲೆ ಸುಳ್ಳು ಆರೋಪ ಮಾಡಿದ ಕಾರ್ತಿಕ್​ ಕಿಚ್ಚನ ಕ್ಲಾಸ್

ವರ್ತೂರು ಸಂತೋಷ್​ ಹೇಳಿದ ಮಾತನ್ನು ತನಿಷಾ ಕುಪ್ಪಂಡ ಒಪ್ಪಿಕೊಂಡಿಲ್ಲ. ‘ನನಗೆ ಕಾರ್ತಿಕ್​ ಮೇಲೆ ಕೋಪ ಇದೆ ನಿಜ. ಹಾಗಂತ ಅವನು ಮಾಡಿದ್ದನ್ನು ಮಾಡಿಲ್ಲ ಅಂತ ಹೇಳೋಕೆ ಆಗಲ್ಲ. ನೀನು ಬಾಯಿಗೆ ಬಂದಂತೆ ಮಾತನಾಡಬೇಡ. ಇಷ್ಟ ಆಗಿಲ್ಲ ಎಂದರೆ ಅದನ್ನು ಮಾತ್ರ ಹೇಳು. ನನ್ನ ಕ್ಯಾರೆಕ್ಟರ್​ ಬಗ್ಗೆ ನೀನು ಸರ್ಟಿಫಿಕೇಟ್​ ಕೊಡಬೇಡ’ ಎಂದು ತನಿಷಾ ಹೇಳಿದ್ದಾರೆ. ಇಬ್ಬರನ್ನೂ ಸಮಾಧಾನ ಮಾಡಲು ತುಕಾಲಿ ಸಂತೋಷ್​ ಪ್ರಯತ್ನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬದಿಂದ ನ್ಯಾಯಾಲಯದೆದುರು ಪ್ರತಿಭಟನೆ
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಚಿತ್ರದುರ್ಗ ಬಸ್ ದುರಂತಕ್ಕೆ ಬಿಗ್​​​ ಟ್ವಿಸ್ಟ್
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಶಾಲೆ ಮಕ್ಕಳಿಗೆ ವಿಮಾನದಲ್ಲಿ ಪ್ರವಾಸ: ಮುಖ್ಯ ಶಿಕ್ಷಕರದ್ದೇ ಎಲ್ಲ ಖರ್ಚು!
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಮೆಟ್ರೋನಲ್ಲಿ ಮೈಮುಟ್ಟಿ ಅಸಭ್ಯ ವರ್ತನೆ: ಕಾಮುಕನ ಕಿರುಕುಳ ಬಿಚ್ಚಿಟ್ಟ ಯುವತಿ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
ಹನಿಮೂನ್ ಟ್ರಿಪ್ ಅರ್ಧದಲ್ಲೇ ವಾಪಸ್ಸಾಗಿ ನವವಧು ಆತ್ಮಹತ್ಯೆ
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
'ಫಸ್ಟ್​​ ನೈಟ್​​ ದಿನ ಗೊತ್ತಾಯಿತು ಅವನು ಗಂಡಸೇ ಅಲ್ಲ'
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ! ವಿಡಿಯೋ ನೋಡಿ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಬಣ ಬಡಿದಾಟದ ನಡುವೆಯೂ ಒಂದೇ ಹೆಲಿಕಾಪ್ಟರ್​ನಲ್ಲಿ ಸಿಎಂ-ಡಿಸಿಎಂ ಪ್ರಯಾಣ
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
ಮೈಸೂರು ಅರಮನೆ ಬಳಿ ವ್ಯಾಪಾರಿಗಳ ಮೇಲೆ ನಿಗಾ ಇಡಲಾಗುತ್ತಾ?
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'
‘ಮದುವೆಯಾಗಿ ಒಂದು ತಿಂಗಳಾದ್ರೂ ಹೆಂಡ್ತಿ ಜತೆಗೆ ಮಲಗಿಲ್ಲ ಅವನು!'