AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸ್ನೇಹಿತ್​ ಅಲ್ಲ ಕಾರ್ತಿಕ್ ಅಣ್ಣ ಅನ್ನೋದು ನಮ್ರತಾಗೆ ಗೊತ್ತಾಗಿದೆ’; ಎಲ್ಲರ ಎದುರು ಹೇಳಿದ ಸುದೀಪ್

ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಜಗಳ ಆಗಲು ಕಾರಣ ಏನು ಎನ್ನುವ ವಿಚಾರ ಚರ್ಚೆಗೆ ಬಂತು. ಈ ಬಗ್ಗೆ ಸುದೀಪ್ ಅವರು ಎಲ್ಲರ ಅಭಿಪ್ರಾಯ ಕೇಳುತ್ತಿದ್ದರು. ಆಗ ತುಕಾಲಿ ಸಂತೋಷ್ ಅವರು ನಮ್ರತಾ ವಿಚಾರ ಎಳೆದು ತಂದರು. ‘ಕಾರ್ತಿಕ್ ಮೊದಲಿನಂತೆ ಸಂಗೀತಾ ಜೊತೆ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು’ ಎಂದರು ತುಕಾಲಿ ಸಂತೋಷ್.

‘ಸ್ನೇಹಿತ್​ ಅಲ್ಲ ಕಾರ್ತಿಕ್ ಅಣ್ಣ ಅನ್ನೋದು ನಮ್ರತಾಗೆ ಗೊತ್ತಾಗಿದೆ’; ಎಲ್ಲರ ಎದುರು ಹೇಳಿದ ಸುದೀಪ್
ಬಿಗ್​ ಬಾಸ್ ಕನ್ನಡ
 ಶ್ರೀಲಕ್ಷ್ಮೀ ಎಚ್
| Edited By: |

Updated on: Jan 14, 2024 | 11:56 AM

Share

ಇತ್ತೀಚೆಗೆ ಕಾರ್ತಿಕ್ ಮಹೇಶ್ (Karthik Mahesh) ಹಾಗೂ ನಮ್ರತಾ (Namratha Gowda) ಅವರು ಆಪ್ತವಾಗಿದ್ದಾರೆ. ಇವರ ಮಧ್ಯೆ ಇರೋ ಬಂಧ ಬಿಗಿಯಾಗಿದೆ. ಇದು ಎಲ್ಲರಿಗೂ ತಿಳಿಯುತ್ತಿದೆ. ಆದರೆ, ಫಿನಾಲೆ ಟಿಕೆಟ್ ವಿಚಾರದಲ್ಲಿ ಹಾಗಾಗಿಲ್ಲ. ಅವರು ನಮ್ರತಾ ಬದಲು ಸಂಗೀತಾ ಶೃಂಗೇರಿಗೆ ವೋಟ್ ಹಾಕಿದ್ದರು. ಇದರಿಂದ ನಮ್ರತಾ ಸಾಕಷ್ಟು ಬೇಸರಗೊಂಡಿದ್ದಾರೆ. ಇದನ್ನು ಕಾರ್ತಿಕ್ ಎದುರೇ ಹೇಳಿಕೊಂಡಿದ್ದರು. ಈಗ ವೀಕೆಂಡ್​ನಲ್ಲಿ ಈ ವಿಚಾರ ಚರ್ಚೆಗೆ ಬಂದಿದೆ. ‘ಕಾರ್ತಿಕ್ ಅಸಲಿ ಮುಖ ನಮ್ರತಾಗೆ ಗೊತ್ತಾಗಿದೆ’ ಎಂದು ಸುದೀಪ್ (Sudeep) ಹೇಳಿದ್ದಾರೆ.

ಕಾರ್ತಿಕ್ ಹಾಗೂ ಸಂಗೀತಾ ಮಧ್ಯೆ ಜಗಳ ಆಗಲು ಕಾರಣ ಏನು ಎನ್ನುವ ವಿಚಾರ ಚರ್ಚೆಗೆ ಬಂತು. ಈ ಬಗ್ಗೆ ಸುದೀಪ್ ಅವರು ಎಲ್ಲರ ಅಭಿಪ್ರಾಯ ಕೇಳುತ್ತಿದ್ದರು. ಆಗ ತುಕಾಲಿ ಸಂತೋಷ್ ಅವರು ನಮ್ರತಾ ವಿಚಾರ ಎಳೆದು ತಂದರು. ‘ಕಾರ್ತಿಕ್ ಮೊದಲಿನಂತೆ ಸಂಗೀತಾ ಜೊತೆ ಇದ್ದಿದ್ದರೆ ಉತ್ತಮವಾಗಿರುತ್ತಿತ್ತು. ಈಗ ಸೈಡ್ ಬಿ (ನಮ್ರತಾ) ಕಡೆ ಅವರು ಉತ್ತಮವಾಗಿದ್ದಾರೆ’ ಎಂದರು ತುಕಾಲಿ ಸಂತೋಷ್.

‘ಇಂಡಿಯಾ-ಪಾಕ್ ಮ್ಯಾಚ್ ಬಗ್ಗೆ ಹೇಳಿ ಅಂದ್ರೆ ಆಸ್ಟ್ರೇಲಿಯಾನ ಎಳೆದು ತರುತ್ತಿದ್ದೀರಲ್ಲ. ನಮ್ರತಾಗೆ ಫಿನಾಲೆ ಟಿಕೆಟ್​ ವಿಚಾರದಲ್ಲಿ ಕಾರ್ತಿಕ್ ಬಗ್ಗೆ ಸರಿಯಾದ ಕ್ಲಾರಿಟಿ ಸಿಕ್ಕಿದೆ. ಅವರು ಅದನ್ನು ಬಹಳ ಉತ್ತಮವಾಗಿ ವ್ಯಕ್ತಪಡಿಸಿದ್ದಾರೆ. ಕಾರ್ತಿಕ್ ಅವರು ಮಾತು ಬಾರದೆ ನಿಂತಿದ್ದರು. ಹೊರಗಡೆ ಹೋದವನು ನನ್ನ ಅಣ್ಣ ಅಲ್ಲ, ಪಕ್ಕದಲ್ಲಿ ಕುಳಿತವನು ಎಂಬುದು ಗೊತ್ತಾಗಿದೆ. ಅಣ್ಣನೋ, ಅಪ್ಪನೋ ಅನ್ನೋ ಗೊಂದಲ ಅವರಿಗಿದೆ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ‘ಫಿನಾಲೆಗೆ ವಿನಯ್​ ಬರಬಾರದು’: ಸುದೀಪ್​ ಮುಂದೆ ಪೂರ್ತಿ ಅಸಮಾಧಾನ ಹೊರಹಾಕಿದ ಸಂಗೀತಾ

ಈ ವಾರ ಫಿನಾಲೆ ಟಿಕೆಟ್ ಪಡೆಯೋ ವಿಚಾರದಲ್ಲಿ ಸಾಕಷ್ಟು ಸ್ಪರ್ಧೆ ಇತ್ತು. ಅತಿ ಹೆಚ್ಚು ಅಂಕ ಪಡೆದ ಮೂವರಿಗೆ ವೋಟ್ ಮಾಡಬೇಕಿತ್ತು. ಈ ರೇಸ್​ನಲ್ಲಿ ನಮ್ರತಾ, ಸಂಗೀತಾ ಹಾಗೂ ಪ್ರತಾಪ್ ಇದ್ದರು. ಎಲ್ಲರೂ ಕಾರ್ತಿಕ್ ಅವರು ನಮ್ರತಾಗೆ ವೋಟ್ ಮಾಡಬಹುದು ಎಂದು ಭಾವಿಸಿದ್ದರು. ಆದರೆ, ಆ ರೀತಿ ಆಗಿಲ್ಲ. ಅವರು ಅಚ್ಚರಿ ಎಂಬಂತೆ ಸಂಗೀತಾಗೆ ವೋಟ್​ ಮಾಡಿದರು. ಆ ಬಳಿಕ ನಮ್ರತಾ ಹಾಗೂ ಕಾರ್ತಿಕ್ ಕುಳಿತು ಚರ್ಚೆ ಮಾಡಿದ್ದರು. ‘ನನಗೆ ಹರ್ಟ್ ಮಾಡಿ ನನ್ನ ಬಳಿಯೇ ಬಂದು ಮಾತಾಡ್ತಾ ಇದೀಯಲ್ಲ’ ಎಂದು ಕಾರ್ತಿಕ್​ಗೆ ನಮ್ರತಾ ಹೇಳಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ವೀಕೆಂಡ್ ಎಪಿಸೋಡ್ ರಾತ್ರಿ 9ಕ್ಕೆ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಜಿಯೋ ಸಿನಿಮಾದಲ್ಲಿ ಎಪಿಸೋಡ್ ಜೊತೆ 24 ಗಂಟೆ ಲೈವ್ ಕೂಡ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಡಿಕೆ ಶಿವಕುಮಾರ್ ಸಿಎಂ ಆಗುತ್ತಿದ್ದಂತೆಯೇ ಹಲವು ಅಧಿಕಾರಿಗಳಿಗೆ ಗೇಟ್ ಪಾಸ್
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಟೆಸ್ಟ್ ಪಂದ್ಯಕ್ಕಾಗಿ ಅಭ್ಯಾಸ ಆರಂಭಿಸಿದ ಟೀಂ ಇಂಡಿಯಾ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ವಿಧಾನಸೌಧದ ಮೆಟ್ಟಿಲುಗಳಿಗೆ ಸಿಎಂ ಡಿಕೆಶಿಯಿಂದ ದೀರ್ಘದಂಡ ನಮಸ್ಕಾರ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಡಿಕೆ ಶಿವಕುಮಾರ್ ಪದಗ್ರಹಣದ ಬಗ್ಗೆ ಶಿವರಾಜ್ ಕುಮಾರ್ ಮಾತು: ವಿಡಿಯೋ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಸಚಿವರಾಗಿ ಪ್ರಮಾಣದ ಬೆನ್ನಲ್ಲೇ ತಂದೆ ಸಿದ್ದರಾಮಯ್ಯ ಆಶೀರ್ವಾದ ಪಡೆದ ಯತೀಂದ್ರ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆ ಶಿವಕುಮಾರ್ ಸಿಎಂ ಆಗಿದ್ದಕ್ಕೆ ತುಂಬಾ ಖುಷಿ ಆಗುತ್ತಿದೆ: ನಟಿ ರಮ್ಯಾ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಕೆಶಿ ಪದಗ್ರಹಣದ ಬೆನ್ನಲ್ಲೇ ವಿಧಾನಸೌಧದಲ್ಲಿ ಬದಲಾದ ಸಿಎಂ ಕಚೇರಿ ನಾಮಫಲಕ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಡಿಸಿಎಂ ಆಗಿ ಪರಮೇಶ್ವರ್ ಪ್ರಮಾಣವಚನ, ಇಲ್ಲಿದೆ ಇವರ ರಾಜಕೀಯ ಜರ್ನಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ
ಸಂವಿಧಾನ ಹಿಡಿದು, ಅಜ್ಜಯ್ಯನ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿಕೆಶಿ